NEWSಲೇಖನಗಳು

ಸಾರಿಗೆ ಅಧಿಕಾರಿಗಳ ಕೈಗೊಂಬೆಯಾದ್ರಾ ನೌಕರರ ಪಾಲಿನ ದೈವ ಶ್ರೀರಾಮುಲು…!?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೌದು! ಬಿಎಂಟಿಸಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ. ಸಾರಿಗೆ ಸಚಿವ ಶ್ರೀರಾಮುಲು ಅವರಂತು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇವರ ಮಾತಿಗೆ ಅಧಿಕಾರಿಗಳು ಕ್ಯಾರೆ ಎನ್ನೋದು ಇಲ್ಲ. ಇಲ್ಲಿ ಸಚಿವರ ಮಾತಿಗೂ ಡೊಂಟ್‌ಕೇರ್. ಹೀಗಾಗಿ ಅಧಿಕಾರಿಗಳು ಆಡಿದ್ದೆ ಆಟ ಹೇಳಿದ್ದೆ ರೂಲ್ಸ್, ರಜೆ ಬೇಕು ಅಂದ್ರು ಕೊಡಿ ದುಡ್ಡು ಡ್ಯೂಟಿ ಬೇಕು ಅಂದ್ರು ಕೊಡಿ ದುಡ್ಡು. ದುಡ್ಡಿಲ್ಲದೆ ಏನು ಮಾಡೋಲ್ಲ ಬಹುತೇಕ ಎಲ್ಲ ಡಿಪೋಗಳಲ್ಲಿರುವ ಅಧಿಕಾರಿಗಳು.

ಈ ಸಂಸ್ಥೆಯಲ್ಲಿ ಬಹುತೇಕ ಲಂಚಬಾಕರೆ ಸೇರಿಕೊಂಡಿದ್ದು ಒಂಥರ ಭ್ರಷ್ಟರ ಸಂತೆಯಾಗಿ ಮಾರ್ಪಡಿಸಿ ಬಿಟ್ಟಿದ್ದಾರೆ. ಹೀಗಾಗಿ ಈ ಸಂಸ್ಥೆಯಲ್ಲಿ ಅನಾದಿಕಾಲದಿಂದ ಈವರೆಗೂ ಒಂದು ರೂಪಾಯಿ ಕೂಡ ಲಾಭ ತೋರಿಸಿಲ್ಲ. ಪ್ರತಿವರ್ಷ ಕೋಟ್ಯಂತರ ರೂಪಾಯಿ ನಷ್ಟ ತೋರಿಸುವ ಮೂಲಕ ಆಸ್ತಿ ಅಡವಿಟ್ಟು ಸಾಲ ಮಾಡಿ ಅದನ್ನು ನುಂಗಿ ನೀರುಕುಡಿದಾಯ್ತು. ಸರ್ಕಾರದಿಂದ ಅನುದಾನ ಪಡೆದಿದ್ದೂ ಆಯ್ತು.

ಇಷ್ಟೆಲ್ಲ ಆದರೂ ಪ್ರತಿ ವರ್ಷ ಸಂಸ್ಥೆ ಲಾಸ್ ಲಾಸ್‌. ಇದಕ್ಕೆಲ್ಲ ಕಾರಣ ಇಲ್ಲಿರುವ ಭ್ರಷ್ಟ ಅಧಿಕಾರಿಗಳ ಕೂಟ. ಬಿಎಂಟಿಸಿಯಲ್ಲಿ ಸುಮಾರು 7ಸಾವಿರ ಬಸ್‌ಗಳಿವೆ. ಸುಮಾರು 35 ಸಾವಿರ ಚಾಲನಾ ಸಿಬ್ಬಂದಿಗಳಿದ್ದಾರೆ. ಕೊರೊನಾ ನಂತರ ಅಂದರೆ ಈಗ ಬಿಎಂಟಿಸಿಯಲ್ಲಿ ಹೊಸ ರೂಲ್ಸ್ ತಂದಿದ್ದಾರೆ ಡ್ಯೂಟಿ ಎಷ್ಟು ದಿನಗಳು ‌ಮಾಡುತ್ತಾರೋ ಅಷ್ಟು ದಿನಗಳದ್ದು ಮಾತ್ರ ವೇತನ ಕೋಡೋದು. ಡ್ಯೂಟಿ ಮಾಡಿಲ್ಲ ಅಂದರೆ ವೇತನ ಕೊಡಲ್ಲ.

ಇನ್ನು ಡ್ಯೂಟಿ ಮಾಡಲು ಚಾಲಕರು ಮತ್ತು ನಿರ್ವಾಹಕರು ಘಟಕಗಳಿಗೆ ಪ್ರತಿದಿನ ಬಂದರೂ ಘಟಕ ವ್ಯವಸ್ಥಾಪಕರು ಮತ್ತು ಎಟಿಎಸ್‌, ಟಿಐಗಳು ಡ್ಯೂಟಿ ಕೊಡಲ್ಲ. ಕಾರಣ ಕುರುಡು ಕಾಂಚಾಣ. ಹಣ ಕೊಟ್ಟವರಿಗೆ ಮಾತ್ರ ಇಲ್ಲಿ ಡ್ಯೂಟಿ. ಇಲ್ಲಾಂದ್ರೆ ಬೆಳಗ್ಗೆಯಿಂದ ಸಂಜೆವರೆಗೂ ಘಟಕದಲ್ಲೇ ಕಾದುಕಾದು ಕುಳಿತು ಮನಗೆ ಹೋಗಬೇಕು. ಅದು ಅಂದು ಗೈರುಹಾಜರಿ.

ಹೀಗಾಗಿ ರಜೆ ಸಿಗಬೇಕು, ಡ್ಯೂಟಿ ಸಿಗಬೇಕು ಎಂದರೆ ಪ್ರತಿ ತಿಂಗಳು 2-3 ಸಾವಿರ ರೂ.ಗಳನ್ನು ಭ್ರಷ್ಟ ಅಧಿಕಾರಿಗಳಿಗೆ ಕಾಣಿಕೆಯಾಗಿ ನೀಡಲೇಬೇಕು. ಇಲ್ಲ ನಾವು ಏಕೆ ಹಣ ಕೊಡುಬೇಕು ಎಂದು ಹಣ ಕೊಡಲು ಒಪ್ಪದೇ ಹೋದವರಿಗೆ ಡ್ಯೂಟಿ ನೀಡದೆ ಮಾನಸಿಕವಾಗಿ ಹಿಂಸೆ ನೀಡುತ್ತಾರೆ.

ಇದಕ್ಕೆ ತಾಜಾ ನಿದರ್ಶನವಾಗಿ ಈಗಾಗಲೇ 4-5ಮಂದಿ ನೌಕರರು ಪ್ರಾಣ ಕಳೆದುಕೊಂಡಿರುವುದು. ನಾಲ್ಕುದಿನದಿಂದ ಈಚೆಗೆ ಚನ್ನಸಂದ್ರ ಘಟಕದ ನಿರ್ವಾಹಕ ಜೆ. ರಂಗನಾಥ್‌ ಮತ್ತು ಕೆಂಗೇರಿ ಘಟಕ 37ರ ನಿರ್ವಾಹಕ ಶ್ರೀನಿವಾಸ್‌ ಎಂಬುವರು ಡಿಪೋದಲ್ಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ಮಾಡಿರುವುದು.

ಇನ್ನು ಆತ್ಮಹತ್ಯೆಗೆ ಯತ್ನಿಸಿದ ನೌಕರರನ್ನು ಭೇಟಿ ಮಾಡುವುದಕ್ಕೂ ಹೋಗದ ಸಚಿವರು ಈ ನೌಕರರ ಪಾಲಿಗೆ ಇದ್ದು ಅಗಲಿದಂತೆಯೇ ಸರಿ. ಇಂಥವರು ಸಂಸ್ಥೆಯ ಅಧಿಕಾರಿಗಳು ಹಾಕುವ ತಾಳಕ್ಕೆ ಹೆಜ್ಜೆಹಾಕಿ ನಟಿಸೋದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ.

ಯಾರೋ ಒಬ್ಬ ರೌಡಿಶೀಟರ್‌ ಕೊಲೆಯಾದರೆ ಅವರ ಮನೆಗೆ ಹೋಗಿ ಸಾರ್ವಜನಿಕರ ತೆರಿಗೆ ಹಣದವನ್ನು ಲಕ್ಷ ಲಕ್ಷವಾಗಿ ಕೊಡುವ ಸರ್ಕಾರ ಮತ್ತು ಸಚಿವರಿಗೆ ತಮ್ಮದೇ ಸಂಸ್ಥೆಯ ನೌಕರರು ಭ್ರಷ್ಟ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದರೂ ಅವರಿಗೆ ಸಮಾಧಾನದ ಮಾತುಗಳನ್ನಾಡಿ ಧೈರ್ಯ ತುಂಬುವ ಕೆಲಸವನ್ನೇಕೆ ಮಾಡುತ್ತಿಲ್ಲ?

ಇನ್ನಾದರೂ ಸಾರಿಗೆ ಸಚಿವರು ನೌಕರರ ಪರವಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಅದನ್ನು ಕಾರ್ಯರೂಪಕ್ಕೆ ತಂದು ಸಂಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವತ್ತಾ ಮುಂದಾಗಲಿ. ಜತೆಗೆ ನೊಂದ ನೌಕರರು ಸಾವಿನ ಕದತಟ್ಟಿದಾಗ ಅವರನ್ನು ಭೇಟಿ ಮಾಡಿ ಧೈರ್ಯತುಂಬಿ. ಇಲ್ಲ ನಾನುಕೂಡ ಅಧಿಕಾರಿಗಳ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿಕೊಳ್ಳುತ್ತೇನೆ ಎಂದರೆ ಈಗ ಇರುವಂತೆಯೇ ಇದ್ದುಬಿಡಲಿ ಎಂದು ನೌಕರರು ಕಿಡಿಕಾರುತ್ತಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ