ಇಂಡಿ ಘಟದ ಡಿಎಂ ಕರ್ಮಕಾಂಡ: 1ರಿಂದ5 ದಿನ ರಜೆಗೆ ₹6K ಕೊಡಿ ಇಲ್ಲ ಗೈರು ತೋರಿಸುವೆ ಅಂತ ಬೆದರಿಸಿ ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ

ಇಂಡಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗ ವಿಜಯಪುರ ವಿಭಾಗದ ಇಂಡಿ ಘಟಕದ ಘಟಕ ವ್ಯವಸ್ಥಾಪಕರ ಭ್ರಷ್ಟಾಚಾರ ಮತ್ತು ನೌಕರರಿಗೆ ಕಿರುಕುಳ ನೀಡುತ್ತಿರುವುದು ಹೆಚ್ಚಾಗಿದೆ ಎಂದು ಆರೋಪಿಸಿ ಇಂಡಿ ಘಟಕದ ನೌಕರರು ಬೆಂಗಳೂರು ಕೇಂದ್ರ ಕಚೇರಿಗೆ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಭದ್ರಾತಾ ಮತ್ತು ಜಾಗ್ರತಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇಂಡಿ ಘಟಕದಲ್ಲಿ ಘಟಕದ ನೌಕರರು ಅನುಭವಿಸುತ್ತಿರುವ ಯಾತನೆ ಬಗ್ಗೆ ಸಾಮೂಹಿಕವಾಗಿ ಲಿಖಿತ ದೂರು ನೀಡಿದ್ದು, ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಬೆಂಗಳೂರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಭದ್ರಾತಾ ಮತ್ತು ಜಾಗ್ರತಾಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಕಲಬುರಗಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ದೂರು ಏನು? ನಾವು ಇಂಡಿ ಘಟಕದ ನೌಕರರು ತಮಗೆ ಮನವಿ ಮಾಡಿಕೊಳ್ಳುವುದೇನೆಂದರೆ ಇಂಡಿ ಘಟಕದ ವ್ಯವಸ್ಥಾಪಕರಾದ ಸಂಗನಗೌಡ ಬಿರದಾರ ಅವರು ಘಟಕಕ್ಕೆ ಬಂದು 1 ವರ್ಷವಾಗಿದೆ. ಬಂದ 1-2 ತಿಂಗಳು ಸರಿಯಾಗಿದ್ದರು ನಂತರ ನೌಕರರಿಗೆ ತೊಂದರೆ ಕೊಡಲು ಶುರುಮಾಡಿದ್ದಾರೆ.
ಅದು ಹೇಗೆ ಎಂದರೆ..
1.ಅನ್ಸೆನ್ನಲ್ಲಿ ಘಟಕ ವ್ಯವಸ್ಥಾಪಕ ಕೋಟಾದಡಿ ನೌಕರರಿಗೆ ರಜೆ ಬೇಕಾದರೆ 1-2 ದಿನಕ್ಕೆ 2000 ರೂಪಾಯಿ 4-5 ದಿನಕ್ಕೆ 5000 ರಿಂದ 6000 ರೂಪಾಯಿಗಳು ಘಟಕ ವ್ಯವಸ್ಥಾಪಕರಿಗೆ ಕೊಡಬೇಕು. ಇಲ್ಲದಿದ್ದರೆ ರಜೆ ಬದಲು ಅಬ್ಸೆಂಟ್(A) ಹಾಕುತ್ತಾರೆ.
2. ನೌಕರರು 7-8 ದಿಗಳವರೆಗೆ ಗೈರಾಗಿ ಘಟಕ್ಕೆ ಬಂದು ಘಟಕದ ವ್ಯವಸ್ಥಾಪಕರನ್ನು ಭೇಟಿಮಾಡಿ ಸರ್ ನಮಗೆ ವಿಭಾಗೀಯ ಕಚೇರಿಗೆ ಕಳಿಸಬೇಡಿ ಇಲ್ಲೆ ನಮಗೆ ಡ್ಯೂಟಿಕೊಡಿ ಅಂತ ಕೇಳಿಕೊಂಡರೆ 4-5 ಸಾವಿರವರೆಗೆ ಹಣ ಪಡೆದುಕೊಂಡು ಅವರಿಗೆ ಅಬ್ಸೆಂಟ್ (A) ಇದ್ದುದ್ದನ್ನು ಮಾಸ್ಟರ್ನಲ್ಲಿ ತಿದ್ದಿ ಪ್ರೆಸೆಂಟ್ ಮಾಡಿ ಡಿಸಿ ಸಾಹೇಬರ ಕಡೆ ಕಳುಹಿಸದೆ ಘಟಕದಲ್ಲೇ ಕರ್ತವ್ಯಕ್ಕೆ ಹೋಗಲು ಅನುಮತಿ ಕೊಡುತ್ತಾರೆ.
3. ಘಟಕದ ಆವರಣವನ್ನು ಸ್ವಚ್ಛ ಗೊಳಿಸುವ ನೇಪದಲ್ಲಿ ಘಟಕದಲ್ಲಿ ಇದ್ದ ಗುಜರಿ ಸಾಮಗ್ರಿಗಳನ್ನು ಮಾರಿಕೊಂಡಿರುತ್ತಾರೆ (ಸ್ಕ್ಯ್ರಾಪ್ ಸಾಮಗ್ರಿಗಳು). 4. ರೂಟ್ಗೆ ಹೊಸ ವಾಹನವನ್ನು ಫಿಕ್ಸ್ ಮಾಡಲು ಚಾಲಕರ ಕಡೆಯಿಂದ 3 ರಿಂದ 5 ಸಾವಿರದವರೆಗೆ ಹಣವನ್ನು ಪಡೆದುಕೊಂಡಿರುತ್ತಾರೆ.
4. ಚಾಲಕ, ಚಾಲಕ ಕಂ. ನಿರ್ವಾಹಕರು ಮತ್ತು ನಿರ್ವಾಹಕರು ಸೇವಾ ಹಿರಿತನದ ಪ್ರಕಾರ ರೂಟೇಷನ್ನಲ್ಲಿ ರೂಟ್ ಫಿಕ್ಸ್ ಮಾಡಿಕೊಂಡರೂ ಕೂಡ ವಾಸ್ಕೊ ಬೆಂಗಳೂರ, ಪೂಣಾ, ಧರ್ಮಸ್ಥಳ, ದಾವಣಗೆರೆ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವವರು ಅಡ್ವಾನ್ಸ್ ಘಟಕ ವ್ಯವಸ್ಥಾಪಕರಿಗೆ 5000 ಕೊಡಬೇಕಾಗಿದೆ.
5.ಅಲ್ಲದೆ ಪ್ರತಿ ತಿಂಗಳು 500 ರಿಂದ 1000 ರೂ.ಗಳವರಿಗೆ ಹಣವನ್ನು ಕೊಡಬೇಕು ಇಲ್ಲದಿದ್ದರೆ ಅವರಿಗೆ ಎಕ್ಸಪ್ರೆಸ್ ಮಾಡುವವರಿಗೆ ಆರ್ಡಿನರಿ ರೂಟ್ ಕೊಡುತ್ತಾರೆ ಮತ್ತು ಇಲ್ಲಸಲ್ಲದ ನೆಪಹೇಳಿ ಸಂಜೆವರೆಗೆ ಘಟಕದಲ್ಲಿ ಕೂರಿಸಿಕೊಂಡು ಆ ರೂಟ್ಗೆ ಬೇರೆಯವರನ್ನು ಕಳಹಿಸಿ ಇವರಿಗೆ ಅಬ್ಸೆಂಟ್ (A) ಹಾಕಿ ನಿನಗೆ ಇವತ್ತು ಕರ್ತವ್ಯ ಇಲ್ಲ, ನೀನು ಮನೆಗೆ ಹೋಗು ನಾಳೆ ಬಾ ಎಂದು ಕಳುಹಿಸುತ್ತಾರೆ.
6. ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನಮ್ಮ ಕರ್ನಾಟಕ ಸರ್ಕಾರವು ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಸ್ಗಳನ್ನು ಟೂರ್ಗೆ ತೆಗೆದುಕೊಂಡು ಹೋಗಲು ಮಹಿಳೆಯರಿಗೆ ಫ್ರೀ ಅವಕಾಶ ಇರುವುದಿಲ್ಲ. ಆದರೆ ನಮ್ಮ ಇಂಡಿ ಘಟಕದಲ್ಲಿ ಮಹಿಳೆಯರಿಗೆ ಬಸ್ ಉಚಿತ ತೆಗೆದುಕೊಂಡುಹೋಗಲು ನಮ್ಮ ಘಟಕದ ವ್ಯವಸ್ಥಾಪಕರು ಧರ್ಮಸ್ಥಳಕ್ಕೆ ಹೋಗಲು ಮಾನ್ಯತೆ ಕೊಟ್ಟಿದ್ದಾರೆ.
ಅದು ಹೇಗೆ ಎಂದರೆ ಆ ಹಳ್ಳಿಯಿಂದ ಒಬ್ಬರು ಮಹಿಳೆ ಮುಖಂಡತ್ವ ವಹಿಸಿಕೊಂಡು ಒಬ್ಬೊಬ್ಬಬ್ಬರ ಕಡೆಯಿಂದ 200 ರೂಪಾಯಿ ವಸೂಲಿ ಮಾಡಿಕೊಂಡ ಒಟ್ಟು 40 ರಿಂದ 50 ಜನ ಮಹಿಳೆಯರಿಗೆ 10 ರಿಂದ 12 ಸಾವಿರದ ವರೆಗೆ ಹಣ ವಸೂಲಿಯಾಗುತ್ತದೆ. ಅದರಲ್ಲಿ 6 ರಿಂದ 7 ಸಾವಿರ ಘಟಕ ವ್ಯವಸ್ಥಾಪಕರಿಗೆ ಕೊಡಬೇಕು. ಉಳಿದ ಹಣದಲ್ಲಿ ಆ ಮಹಳಾ ಲೀಡರ್ ಸ್ವಲ್ಪ ಹಣವನ್ನು ತೆಗೆದುಕೊಂಡು ಉಳಿದಿರುವ ಹಣದಲ್ಲಿ ಚಾಲಕರಿಗೆ ಸ್ವಲ್ಪ ಹಣವನ್ನು ಕೊಡುತ್ತಾರೆ. ಇದೇ ರೀತಿ ಪ್ರತಿ ಹಳ್ಳಿ ಇಂದ ಧರ್ಮಸ್ಥಳಕ್ಕೆ ಸುಮಾರು ವಾಹನಗಳು ಹೋಗಿವೆ. ಅದನ್ನು ಸೂಕ್ತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು.
7. ನೌಕರರ ಪರ ಸಂಘಟನೆಯವರ ಜತೆಗೆ ಪ್ರತಿತಿಂಗಳು ಘಟಕದಲ್ಲಿ ಸಭೆಮಾಡಬೇಕು ಎಂಬ ಆದೇಶವಿದೆ. ಆದರೆ ಘಟಕ ವ್ಯವಸ್ಥಾಪಕರು ಮಾಡುತ್ತಿರುವ ಅವ್ಯವಹಾರದ ಬಗ್ಗೆ ಸಂಘಟನೆಯವರು ಕೇಳುತ್ತಾರೆ ಎಂದು ತಿಳಿದು ಘಟಕ ವ್ಯವಸ್ಥಾಪಕರು ಮೀಟಿಂಗ್ ಮಾಡುವುದಿಲ್ಲ.
8. ಯಾರಾದರೂ ನೌಕರರು ಘಟಕ ವ್ಯವಸ್ಥಾಪಕರಿಗೆ ಹೀಗೇಕೆ ಮಾಡುತ್ತದ್ದಿರಿ ಸರ್ ಎಂದು ಕೇಳಿದರೆ, ನಾನು ಹೀಗೇ ಇರೊದು ನಿಮಗೆ ನನ್ನ ಬಗ್ಗೆ ಗುರುತಿಲ್ಲ. ನಾನು ಸಿಟಿಎಂ ಸಾಹೇಬರ ಆತ್ಮೀಯ ಗೆಳೆಯನಿದ್ದೇನೆ ಅವರಿಗೆ ಹೇಳಿ ನಿಮಗೆ ಅಮಾನತು ಮಾಡುತ್ತೇನೆ ಎಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಾನು ಭಿಮಾತೀರದವನು ನನಗೆ ಭೀಮಾತೀರದ ಎಲ್ಲ ರೌಡಿಗಳು ಪರಿಚಯವಿದ್ದಾರೆ, ನೀವು ಏನಾದರೂ ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ಜೀವ ಬೇದರಿಕೆ ಹಾಕುತ್ತಾನೆ.
9. ಘಟಕದಲ್ಲಿ ವಾಶಿಂಗ್ ಮತ್ತು ಸ್ವಚ್ಛತೆಯ ಸಲುವಾಗಿ ತಿಂಗಳಿಗೆ 30,000 ರಿಂದ 35.000 ವರೆಗೆ ಬಿಲ್ಬರುತ್ತದೆ. ಕೆಲಸ ಮಾಡುವವರಿಗೆ 9000 ಪ್ರತಿ ತಿಂಗಳಿಗೆ ಕೊಡಬೇಕಾಗಿದ್ದರೆ ಅವರಿಗೆ 3000 ರಿಂದ 4000 ಸಾವಿರಸದವರೆಗೆ ಕೊಡುತ್ತಾರೆ. ಇನ್ನೂ ನಮಗೆ ಹೆಚ್ಚಿನ ಹಣ ಬರಬೇಕು ಸರ್ ಎಂದು ಕೆಲಸಗಾರರು ಕೇಳಿದಾಗ ಮೇಲಿನಿಂದ ಇಷ್ಟೇ ಹಣ ಬರುತ್ತದೆ ಕೆಲಸ ಮಾಡುದಿದ್ದರೆ ಮಾಡಿ ಇಲ್ಲದಿದ್ದರೆ ಬಿಟ್ಟುಬಿಡಿ ಎಂದು ಬೇದರಿಕೆ ಹಾಕುತ್ತಾರೆ.
ಪ್ರತಿ ತಿಂಗಳ ನೌಕರರ ಮುಖಂಡರ ಕಡೆಯಿಂದ ಬಿಲ್ ಮೇಲೆ ಸಹಿ ಮಾಡಿಸಿಕೊಳ್ಳಬೇಕೆಂದು ರೂಲ್ಸ್ ಇದೆ. ಆದರೆ ಇವರು ಸಹಿ ಮಾಡಿಸಿಕೊಳ್ಳದೆ ನೌಕರರ ಮುಖಂಡರ ಸಹಿ ತಾವೆ ಮಾಡಿ ಬಿಲ್ ಮಂಜೂರು ಮಾಡಿಸಿಕೊಂಡು ಸಂಸ್ಥೆಯ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ಶಿಸ್ತು ಕ್ರಮ ಜರುಗಿಸಬೇಕು.
10. ಇಂಡಿ ಘಟಕದಲ್ಲಿ ಘಟಕ ವ್ಯವಸ್ಥಾಪಕರ ಚೇಲಾಗಳಿದ್ದಾರೆ (ಬಂಟರು) ಅವರಿಗೆ ಚಾಲಕ, ಚಾಲಕ ಕಂ ನಿರ್ವಾಹಕ ಮತ್ತು ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿ ಇವರ ಕಡೆಯಿಂದ ಹಣ ವಸೂಲಿ ಮಾಡಲು ಹೇಳುತ್ತಾರೆ. ಹಣವನ್ನು ವಸೂಲಿ ಮಾಡಿ ಘಟಕ ವ್ಯವಸ್ಥಾಪಕರಿಗೆ ಮುಟ್ಟಿಸುತ್ತಾರೆ.
ಇದೇ ರೀತಿ ಒಂದು ವರ್ಷದಿಂದ ನೌಕರರಿಗೆ ತೊಂದರೆಯಾಗುತ್ತಿದ್ದು, ಕೆಲಸವನ್ನು ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮೇಲಧಿಕಾರಿಗಳಾದ ತಾವುಗಳು ಇದನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಇವರಿಗೆ ಬೇರೆಕಡೆಗೆ ವರ್ಗಾವಣೆ ಮಾಡಿ ನೌಕರರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಿರಿ ಎಂದು ನಂಬಿರುತ್ತವೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿಗರು ಇಂಡಿ ಘಟಕದ ನೌಕರರು ಎಂದು 54ಕ್ಕೂ ಹೆಚ್ಚು ನೌಕರರು ತಮ್ಮತಮ್ಮ ಫೋನ್ ನಂಬರ್ ಸಹಿತ ಸಹಿ ಮಾಡಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನು ಇಂಥ ನೀಚರನ್ನು ಅಧಿಕಾರಿಗಳು ಹೇಗೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಈ ರೀತಿ ಒಬ್ಬಿಬ್ಬರು ಆರೋಪ ಮಾಡಿದರೆ ಅದು ಸುಳ್ಳು ಎನ್ನಬಹುದು. ಆದರೆ ಸಾಮೂಹಿಕವಾಗಿ ಘಟಕದ ನೌಕರರೆಲ್ಲರೂ ಸೇರಿ ಆರೋಪ ಮಾಡುತ್ತಿದ್ದಾರೆ ಎಂದರೆ ನೌಕರರು ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂಬುವುದು ತಿಳಿಯುತ್ತಿದೆ.
ಹೀಗಾಗಿ ಈತನನ್ನು ಕೂಡಲೇ ಅಮಾನತು ಮಾಡಿ ವಿಚಾರಣೆಗೊಳಪಡಿಸಬೇಕು ಎಂದು ನೌಕರರ ಕೂಟದ ವಿಜಯಪುರ ವಿಭಾಗದ ಗೌರವ ಅಧ್ಯಕ್ಷ ಯಾಕೂಬ ನಾಟಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಒತ್ತಾಯ ಮಾಡಿದ್ದಾರೆ.
Related

You Might Also Like
ಕರ್ತವ್ಯ ಲೋಪವೆಸಗಿದ ಮೂವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್...
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಜಿಲ್ಲಾಧಿಕಾರಿ ಬಸವರಾಜು
10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ...
ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕ್ರಮ: KSRTC ಎಂಡಿ ಅಕ್ರಮ್ ಪಾಷ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಿರುವುದರಿಂದ ನೌಕರರು...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ನಾಳೆ ಖಾಸಗಿ ಬಸ್ ಮಾಲೀಕರ ಸಭೆ ಕರೆದ ಸಾರಿಗೆ ಆಯುಕ್ತರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಆಯುಕ್ತರ...
ಮೊಂಡುತನ ಬಿಟ್ಟು ಸಾರಿಗೆ ನೌಕರರಿಗೆ ಕೊಡಬೇಕಿರುವುದ ಕೊಡಿ: ಅಧಿಕಾರವಿದೆ ಎಂಬ ದರ್ಪ ಬಿಡಿ ಸಿದ್ದುಜೀ- ಇದು ಶಾಶ್ವತವಲ್ಲ!
ಸಿಎಂ ಸಿದ್ದರಾಮಯ್ಯ ಸಾಹೇಬರೆ ನೀವು ಈಗ ವಕೀಲರಲ್ಲ ಸರ್ಕಾರದ ಸಂಬಳ ಪಡೆಯುವವರಲ್ಲಿ ನೀವು ಒಬ್ಬರು ಈಗ ನಿಮಗೆ ವಕೀಲ ವೃತ್ತಿ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಮರೆತಿರ...
ಆ.5ರಿಂದ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...
KSRTC ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2027ರ ನಂತರ ಮಾಡಲು ಮಾತ್ರ ಸಾಧ್ಯ: ಪ್ರತಿಪಾದಿಸುತ್ತಿರುವ ಸಾರಿಗೆ ಇಲಾಖೆ
ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಪರಿಷ್ಕರಣೆ 2023ರ ಮಾರ್ಚ್ನಲ್ಲಿ ಶೇ.15ರಷ್ಟು ಹೆಚ್ಚಳ ಮಾಡಿರುವುದರಿಂದ ಮುಂದಿನ ಪರಿಷ್ಕರಣೆಯನ್ನು 2027ರ ನಂತರ ಮಾಡಲು ಮಾತ್ರ ಸಾಧ್ಯ ಎಂದು...
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...