ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಏಪ್ರಿಲ್ ತಿಂಗಳ ವೇತನದೊಂದಿಗೆ ಮಾರ್ಚ್ 2023ರ ಬಾಕಿ 1 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಸಲು ಸೂಕ್ತಾಧಿಕಾರಿಗಳು ಇಂದು ಆದೇಶ ಹೊರಡಿಸಿದ್ದಾರೆ.
ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಪಾವತಿಸುವ ಕುರಿತು ಆದೇಶ ಹೊರಡಿಸಿರುವ ನಿಗಮದ ಮುಖ್ಯಲೆಕ್ಕಾಧಿಕಾರಿಗಳು, ತುಟ್ಟಿಭತ್ಯೆ ಹಿಂಬಾಕಿ ಪಾವತಿಯನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆದೇಶಿಸಿ ಕಾಯ್ದಿರಿಸಲಾಗಿತ್ತು.
ಅದರಂತೆ ಇಂದು ಅಂದರೆ ಮೇ 2ರಂದು ಸಮಸ್ತ ಸಿಬ್ಬಂದಿಗಳ ಹಿತದೃಷ್ಠಿಯಿಂದ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾರ್ಚ್-2023ರ ಮಾಹೆಯ ಒಂದು ತಿಂಗಳ ಶೇ.4 ತುಟ್ಟಿಭತ್ಯ ಹಿಂಬಾಕಿ ಮೊತ್ತ ಏಪ್ರಿಲ್ -2025ರ ವೇತನದೊಂದಿಗೆ ಸೇರಿಸಿ ಪಾವತಿಸಲಯ ಸೂಕ್ತಾಧಿಕಾರಿಗಳು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಹಿಂದೆ ಅಂದರೆ ಕಳೆದ 2024ರ ಡಿಸೆಂಬರ್ 24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯನ್ನು ಪಾವತಿಸಲಾಗಿತ್ತು. ಅಂದು ಜುಲೈ-2022 ರಿಂದ ನವೆಂಬರ್-2022 ನೇ ಮಾಹೆಯವರೆಗಿನ 05 ತಿಂಗಳಿನ 3.75% ತುಟ್ಟಿಭತ್ಯೆ ಹಿಂಬಾಕಿ ಮೊತ್ತ ಹಾಗೂ ಜನವರಿ- 2023 ರಿಂದ ಜುಲೈ-2023 ರ ವರೆಗಿನ 07 ತಿಂಗಳು ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ 4% ತುಟ್ಟಿಭತ್ಯೆ ಹಿಂಬಾಕಿ ಮಾತ್ರ (ಒಟ್ಟಾರೆ 07 ತಿಂಗಳಿನ ತುಟ್ಟಿಭತ್ಯೆ ಹಿಂಬಾಕಿ ಮಾತ್ರ) 24.12.2024 ರಂದು ಇ.ಸಿ.ಎಸ್ ಮೂಲಕ ಪಾವತಿಸಲಾಗಿತ್ತು.
ಇನ್ನು ಜನವರಿ- 2023 ರಿಂದ ಜೂನ್ -2023 ರ ವರೆಗಿನ 06 ತಿಂಗಳ ಶೇ.4 ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ ಹಿಂಬಾಕಿ ಮಾತ್ರ ಪಾವತಿಸಲು ಆದೇಶ ಹೊರಡಿಸಿದ್ದರು. ಉಳಿದ 4 ತಿಂಗಳ ಹಿಂಬಾಕಿ ಪಾವತಿ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.
ಇನ್ನು ಈಗ ಏಪ್ರಿಲ್ ತಿಂಗಳಿನ ವೇತನದೊಂದಿಗೆ 2023ರ ಮಾರ್ಚ್ ತಿಂಗಳ ಹಿಂಬಾಕಿಯನ್ನಷ್ಟೇ ಪಾವತಿಸಲು ಆದೇಶ ಹೊರಡಿಸಿದ್ದು ಉಳಿದ ಏಪ್ರಿಲ್, ಮೇ ಹಾಗೂ ಜೂನ್ -2023ರ ತುಟ್ಟಿಭತ್ಯ ಹಿಂಬಾಕಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಆದರೆ ಏಪ್ರಿಲ್ ತಿಂಗಳ ವೇತನದೊಂದಿಗೆ 2023ರ ಮಾರ್ಚ್ ತಿಂಗಳ ಡಿಎ ಪಾವತಿ ಮಾಡಲು ಆದೇಶಿಸಿದ್ದು, ಈ ಸಂಬಂಧ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ನಿಲ್ದಾಣಾಧಿಕಾರಿಗಳು, ಹಿರಿಯ/ ಘಟಕ ವ್ಯವಸ್ಥಾಪಕರು. ಆಪ್ತ ಕಾರ್ಯದರ್ಶಿ, ನಿರ್ದೇಶಕರು, ಆಪ್ತ ಕಾರ್ಯದರ್ಶಿ, ನಿರ್ದೇಶಕರು(ಭ&ಜಾ), ಎಲ್ಲ ಇಲಾಖಾ ಮುಖ್ಯಸ್ಥರಿಗೆ ಮಾಹಿತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Related

You Might Also Like
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...
ನಟ ದರ್ಶನ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ
ಬೆಂಗಳೂರು: ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್...
NWKRTC: 2024-25ನೇ ಸಾಲಿನ ಐಚ್ಛಿಕ ಭ.ನಿ. ಚೀಟಿಗಳ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ: ನೌಕರರಿಗೆ CAO ಆದೇಶ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಅಧಿಕಾರಿಗಳ- ನೌಕರರ 2024-25ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯನಿಧಿ ಚೀಟಿಗಳನ್ನು ಆನ್ಲೈನ್ ಮೂಲಕ...
ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುತ್ತಿರುವವರ ಸರ್ಕಾರ ಮಟ್ಟಹಾಕದೆ ಬಿಡೆದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ವಾಗ್ದಾನವನ್ನು ನಾಡಿನ ಜನತೆಗೆ ನಾವು ಚುನಾವಣಾ ಪೂರ್ವದಲ್ಲೇ ನೀಡಿದ್ದೆವು, ಅದರಂತೆ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತದ ಸರ್ಕಾರ ರಚನೆಗೆ...
KKRTC ಯಾದಗಿರಿ: ಇಬ್ಬರು ವಿಭಾಗಮಟ್ಟದ ಅಧಿಕಾರಗಳ ವಿರುದ್ಧ ಜಾತಿ ನಿಂದನೆ, ಲೈಂಗಿಕ ಕಿರುಕುಳ-2ಪ್ರತ್ಯೇಕ ಪ್ರಕಣಗಳು ದಾಖಲು
ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಇಬ್ಬರು ಪ್ರಮುಖ ಅಧಿಕಾರಿಗಳ ವಿರುದ್ಧ ವಿಭಾಗದ ಸಿಬ್ಬಂದಿಗಳೇ ಪ್ರತ್ಯೇಕವಾಗಿ ದೂರು ನೀಡಿದ್ದು, ವಾರದೊಳಗೆ ಅಧಿಕಾರಿಗಳ ಮೇಲೆ ಪ್ರತ್ಯೇಕ ಎರಡು...
KSRTC: 2006ರಲ್ಲಿ ಡ್ಯೂಟಿಗೆ ಸೇರಿ ಹಲವರು ನಿವೃತ್ತರಾಗುತ್ತಿದ್ದಾರೆ- ಅಚ್ಚರಿ ಎಂದರೆ ಬೇಸಿಕ್ ಪೇ 27 ಸಾವಿರ ದಾಟಲೇ ಇಲ್ಲಆದರೆ..!
ಸರ್ಕಾರಿ ಡಿ ಗ್ರೂಪ್ ನೌಕರರ ಮೂಲ ವೇತನ ಸೇರಿದ ಕೂಡಲೇ 27 ಸಾವಿರ ಬೇಸಿಕ್ ಪೇ ನಮ್ಮ ಈ ದುರಂತ ಕತೆಗೆ ನಾಯಕರು ಯಾರು? ಜಂಟಿ ಸಂಘಟನೆಗಳ...
ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿಕೆಶಿ ಅವರೇ: ಕೇಂದ್ರ ಸಚಿವ ಎಚ್ಡಿಕೆ ಪ್ರಶ್ನೆ
ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಆದರೆ, ಅವರ ಭೇಟಿ...