ಕಡಿಮೆ ಖರ್ಚು ಹೆಚ್ಚು ಇಳುವರಿ ಬಗ್ಗೆ ಜಾಗೃತಿಗಾಗಿ ಕಾರ್ಯಾಗಾರ ನಡೆಸಿ: ಜಂಟಿ ಕೃಷಿ ನಿರ್ದೇಶಕರಿಗೆ ರೈತರ ಆಗ್ರಹ

ಮೈಸೂರು: ತಾಲೂಕು ಮಟ್ಟದಲ್ಲಿ ರೈತರಿಗೆ, ಮಣ್ಣು ಪರೀಕ್ಷೆ, ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಹಾಗೂ ನೀರು ಬಳಕೆ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ಇಂದು ನಗರದ ಕಾಡಾ ಕಚೇರಿಗೆ ಭೇಟಿ ನೀಡಿ ರೈತ ಸಂಘಸ ಪದಾಧಿಕಾರಿಗಳು ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಅವರಿಗೆ ಸಂಘದ ವತಿಯಿಂದ ಒತ್ತಾಯ ಪತ್ರ ನೀಡಿ, ರೈತರಿಗೆ ಆಧುನಿಕ ಕೃಷಿ ಮಾಡುವ ಬಗ್ಗೆ ಮಾಹಿತಿ ಕೊರತೆಯಿದ್ದು, ಕಡಿಮೆ ಖರ್ಚು ಮಾಡಿ ಅಧಿಕ ಇಳುವರಿ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸಬೇಕು ಎಂದು ಮನವಿ ಮಾಡಿದರು.
ಇನ್ನು ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಹಾಗೂ ಸ್ವಕ್ಷೇತ್ರವಾದ್ದರಿಂದ ಮೊದಲಿಗೆ ಮೈಸೂರಿನಲ್ಲಿ ತಾಲೂಕು ಮಟ್ಟದ ಕಾರ್ಯಾಗಾರ ಪ್ರಾರಂಭ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು. ಕೃಷಿ ಪರಿಕರಗಳಾದ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಹಾಗೂ ನೀರು ಅತಿಯಾದ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡಿದ್ದು ಮಣ್ಣಿನ ಆರೋಗ್ಯ ರಕ್ಷಣೆ ಮಾಡಿ ಉತ್ತಮ ಬೆಳೆ ಬೆಳೆಯಲು ಜಾಗೃತಿಗೊಳಿಸಬೇಕು.
ನಕಲಿ-ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ನರ್ಸರಿ ಸಸಿಗಳು ಕೀಟ ನಾಶಕಗಳನ್ನು ನಕಲಿ-ಕಳಪೆ ಮಾರಾಟ ಮಾಡುವವರಿಗೆ ಜಾಮೀನು ರಹಿತ ಕಠಿಣ ಜೈಲು ಶಿಕ್ಷೆ ವಿಧಿಸಬೇಕು. ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು, ಟ್ರ್ಯಾಕ್ಟರ್, ಪವರ್ ಟಿಲ್ಲರ್ ಬಿಡಿಭಾಗಗಳ ಬೆಲೆಗಳು ಗಗನಕ್ಕೇರಿದ್ದು ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳ ಮೇಲಿನ ಜಿ.ಎಸ್.ಟಿ ತೆರಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಸಿಗುವಂತಾಗಬೇಕು. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಕೃಷಿ ಯಂತ್ರಗಳ ಮಾರಾಟ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ಬಹಿರಂಗವಾಗಿ ನಾಮಫಲಕ ಹಾಕಬೇಕು. ರಸಗೊಬ್ಬರಗಳ ಜೊತೆ ಮೈಕ್ರೋ ಫುಡ್ ಲಿಂಕ್ ಮಾರಾಟಕ್ಕೆ ಒತ್ತಡ ಹೇರದಂತೆ ಕ್ರಮ ಕೈಗೊಳ್ಳಬೇಕು.
ಕೃಷಿ ಪರಿಕರಗಳ ಅಂಗಡಿಗಳಲ್ಲಿ ನರ್ಸರಿ ಸಸಿಗಳನ್ನು ಮಾರಾಟ ಮಾಡಬಾರದು. ರಸಗೊಬ್ಬರ ಮಾರಾಟದ ಅಂಗಡಿ ಮುಂದೆ ಬೆಲೆಗಳ ನಾಮಫಲಕ ಕಡ್ಡಾಯವಾಗಿ ಹಾಕಲು ಕ್ರಮ ಕೈಗೊಳ್ಳಬೇಕು. ಪರಿಕರಗಳನ್ನು ಖರೀದಿ ಮಾಡಿದ ರೈತನಿಗೆ ಅಧಿಕೃತ ಬಿಲ್ ಕೊಡಬೇಕು ಹಾಗೂ ಬಿಲ್ನಲ್ಲಿ ಇಬ್ಬರು ಸಹಿ ಹಾಕಿರಬೇಕು.
ಇದಕ್ಕಾಗಿ ಪ್ರತಿ 3 ತಿಂಗಳಿಗೊಮ್ಮೆ ರೈತರ ಕುಂದು ಕೊರತೆಗಳ ಸಭೆ ನಡೆಸಿ ಸಮಸ್ಯೆಗೆಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ರೈತರ ಕುಂದು ಕೊರತೆಗಳ ಸಭೆ ನಡೆಸಿ ರೈತರು ಅಲೆದಾಡುವುದನ್ನು ತಪ್ಪಿಸಬೇಕು ಎಂದು ರೈತರು ಜಂಟಿ ಕೃಷಿ ನಿರ್ದೇಶಕರಿಗೆ ಒತ್ತಾಯ ಪತ್ರ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಮಂಜುಳಾ, ಬನ್ನೂರು ಸೂರಿ, ವಾಜಮಂಗಳ ಮಹದೇವು, ಕೆಂಡಗಣ್ಣಪ್ಪ ಸ್ವಾಮಿ, ಪ್ರಭುಸ್ವಾಮಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ್, ಸಾತಗಳ್ಳಿ ಮಹೇಶ್, ಮಾರ್ಬಳ್ಳಿ ಬಸವರಾಜ್, ಶಿವಣ್ಣ, ಪಿ.ನಾಗೇಂದ್ರ ವಾಜಮಂಗಳ, ಜಯರಾಮ ವರಕೋಡು, ಶಿವಕುಮಾರ್, ಪ್ರಕಾಶ್, ಎನ್.ನಾಗೇಂದ್ರ, ಪ್ರಭಾಕರ್, ಮೂರ್ತಿ ಇನ್ನೂ 50ಕ್ಕೂ ಹೆಚ್ಚು ರೈತರು ಇದ್ದರು.
Related

You Might Also Like
ಹೆಂಡತಿ, ಮಕ್ಕಳಿದ್ದರೂ ಅಜ್ಜಿಯ ಮೊಮ್ಮಳ ಮೋಹಿಸಿ ಮನೆ ಬಿಟ್ಟು ಬಂದ- ಜೈಲು ಸೇರಿದ ಪ್ರೇಮಿಗಳು
ಚಿಕ್ಕಬಳ್ಳಾಪುರ: ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿ ಜೊತೆ ರಹಸ್ಯವಾಗಿ ಲೈಂಗಿಕ ಕ್ರಿಯೆ ನಡೆಸಿ ಆಕೆಯ ಗರ್ಭಿಣಿ ಮಾಡಿದ ಗೃಹಸ್ಥನ ವಿಷಯ ಊರಿಗೆ ಜನರಿಗೆ ಗೊತ್ತಾದ ಮೇಲೆ ಆಕೆಯೊಂದಿಗೆ...
ಮಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟ ಆರೋಪ- ಪಾಲಕರು ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಅಸುನೀಗಿದ ಪ್ರಕರಣ ಮಾಸುವ ಮುನ್ನವೇ ಮಂಡ್ಯದಲ್ಲಿ 7 ವರ್ಷದ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ....
ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು...
KSRTC: ಪ್ರಯಾಣಿಕ ಟಿಕೆಟ್ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ-ಎಂಡಿ ಆದೇಶ
2020 ಫೆಬ್ರವರಿ 20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸುತ್ತೋಲೆ ಹೊರಡಿಸಿದ್ದಾರೆ ಬೆಂಗಳೂರು: ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಪಕ್ಷದಲ್ಲಿ ತನಿಖಾದಿಕಾರಿಗಳು ವಾಹನವೂ ತಪಾಸಣಾ ಗೋಳಪಡಿಸಿದಾಗ...
ವಿಧಾನಸೌಧ ಈಗ ಪ್ರವಾಸಿ ತಾಣ: ಸಾರ್ವಜನಿಕ ವೀಕ್ಷಣೆಗೆ ಮುಕ್ತ- ಯಾರಿಗೆ ಟಿಕೆಟ್ ಮತ್ತ್ಯಾರಿಗೆ ಉಚಿತ!
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಒಮ್ಮೆಯಾದರೂ ನೋಡಬೇಕು ಎಂದು ರಾಜ್ಯದ ಅದೆಷ್ಟು ಮಂದಿ ಆಸೆಪಡುತ್ತಿದ್ದರು. ಅಲ್ಲಿಗೆ ನಾವು ಹೋಗುವುದು ಹೇಗೆ ಎಂದು ಹಲವರು ಹಳ್ಳಿಗಳ್ಳಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ...
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...