KSRTC: ನೌಕರರ ವೇತನ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಾದ ಸಂಘಟನೆಗಳು-ಸಿಎಂ ಭೇಟಿಗೆ ನಿರ್ಧಾರ

- ಮಂಗಳವಾರದ ಸಭೆಯಲ್ಲಿ ಒಕ್ಕೋರಲಿನ ತೀರ್ಮಾನ
- ಬಣಗಳಾಗದೆ ಒಂದೇ ವೇದಿಕೆಯಡಿ ಸಿಎಂ, ಸಾರಿಗೆ ಸಚಿವರ, ಎಂಡಿಗಳ ಭೇಟಿಗೆ ನಿರ್ಧಾರ
ಬೆಂಗಳೂರು: ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ವೇತನ, 1-1-2024ರ ವೇತನ ಹೆಚ್ಚಳದ ವಿಳಂಬ ಹಾಗೂ 7-4-2021ರಲ್ಲಿ ವಜಾಗೊಂಡಿರುವ ನೌಕರರನ್ನು ಯಥಾವತ್ತಾಗಿ ಯಾವುದೇ ಶಿಕ್ಷೆ ಇಲ್ಲದೇ ಡ್ಯೂಟಿ ಕೊಡಬೇಕು ಎಂದು ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ಒತ್ತಾಯಿಸುವ ಬಗ್ಗೆ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಒಕ್ಕೋರಲಿನ ತೀರ್ಮಾನ ತೆಗೆದುಕೊಂಡವು.
ಮಂಗಳವಾರ ಮೇ 6ರ ಮಧ್ಯಾಹ್ನ ನಗರದ ಜೈಭೀಮ್ ಭವನದಲ್ಲಿ ನಡೆದ ಸರ್ವ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳೆಂದರೆ, ಒಂದೇ ವೇದಿಕೆಯಲ್ಲಿ ಸಂಘಟಿತರಾಗಿ ನೌಕರರಿಗೆ ಬರಬೇಕಿರುವ 38 ತಿಂಗಳ ಹಿಂಬಾಕಿ ವೇತನ, 1-1-2024ರ ವೇತನ ಹೆಚ್ಚಳ ಹಾಗೂ 7-4-2021ರಲ್ಲಿ ನಡೆದ ಮುಷ್ಕರದಲ್ಲಿ ವಜಾಗೊಂಡಿರುವ ನೌಕರರನ್ನು ಯಥಾವತ್ತಾಗಿ ಯಾವುದೇ ಶಿಕ್ಷೆ ಇಲ್ಲದೇ ಡ್ಯೂಟಿಗೆ ತೆಗೆದುಕೊಳ್ಳಬೇಕು.
ಇನ್ನು ಈಗಿನ ಪರಿಸ್ಥಿತಿಯಲ್ಲಿ ನೌಕರರು ತುಂಬಾ ಗಂಭೀರ ಸ್ಥಿತಿಯಲ್ಲಿ ಕರ್ತವ್ಯ ಮಾಡುತ್ತಿದ್ದು ಸಂಸ್ಥೆಯ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಘಟಕಗಳ ಮಟ್ಟದಲ್ಲಿ ಕಿರುಕುಳ ಕೂಡ ಹೆಚ್ಚಾಗಿದೆ. ಜತೆಗೆ ಅಧಿಕಾರಿಗಳ ದೌರ್ಜನ್ಯ ಎಲ್ಲೆಮೀರಿದೆ. ಇಂತಹ ಸಂದರ್ಭಗಳಲ್ಲಿ 38 ತಿಂಗಳ ವೇತನದ ಹಿಂಬಾಕಿಯೂ ಇಲ್ಲ, ದುಡಿಮೆಗೆ ತಕ್ಕ ವೇತನವೂ ಇಲ್ಲದೆ ನೌಕರರು ಪರಿತಪಿಸುತ್ತಿದ್ದಾರೆ.
ಈಗಿರುವ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ದಿನಮಾನದಲ್ಲಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಸಂದರ್ಭವು ಬಂದಿದೆ. ಬೆಲೆ ಏರಿಕೆ ಗಗನಕ್ಕೆ ಏರುತ್ತೀರುವಂತೆ ಶಾಲೆಗಳ ಶುಲ್ಕವು ಕೂಡ ಹೆಚ್ಚಳವಾಗಿದೆ. ಈ ಎಲ್ಲದರಿಂದ ನೌಕರರು ಹೀನಾಯ ಪರಿಸ್ಥಿತಿಯಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಎಲ್ಲವೂ ನೂರಕ್ಕೆ ನೂರರಷ್ಟು ಸತ್ಯ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ಇಂತಹ ಕಷ್ಟದ ದಿನಗಳಲ್ಲಿ ಸಂಘಟನೆಗಳು ನೌಕರರ ಪಾಲಿಗೆ ಸಂಜೀವಿನಿ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಬಣಗಳಾಗದೆ ಒಂದಾಗಿ ಒಗ್ಗಟ್ಟಿನಿಂದ ಸರ್ಕಾರದ ಮುಂದೆ ಹೋಗಿ ಈ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರುದ್ರೇಶ್ ಎಸ್. ನಾಯಕ ತಮ್ಮ ಅಭಿಪ್ರಾಯ ಮಂಡಿಸಿದರು.
ಎಲ್ಲ ಸಂಘಟನೆಗಳು ಜತೆಯಲ್ಲಿ ಹೋಗಿದ್ದೆ ಆದರೆ ನಮ್ಮ ಸಮಸ್ಯೆ ಯಾವುದು ಸಮಸ್ಯೆಯೇ ಅಲ್ಲ. ಆದರೆ ಎತ್ತು ಏರಿಗೆ ಕೋಣ ನೀರಿಗೆ ಎಂಬ ನಿಲುವು ಸಂಘಟನೆಗಳದ್ದಾಗಿದೆ. ಹಾಗಾಗಿ ಇನ್ನು ಮುಂದಾದರೂ ಬದಲಾಗಿ ಎಲ್ಲ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಹೋಗಿ ನೌಕರರಿಗೆ ನ್ಯಾಯ ಕೊಡಿಸುವಂತ ಕೆಲಸ ಮಾಡೋಣ ಎಂದರು. ಅದಕ್ಕೆ ಸಭೆಯಲ್ಲಿದ್ದವರು ಒಕ್ಕೋರಲಿನಲ್ಲಿ ಇದೇ ಸರಿ ಎಂದು ನಿರ್ಧರಿಸಿದರು.
ಇನ್ನು ನೌಕರರ ಪಾಲಿನ ವಿಲನ್ಗಳಂತೆ ವರ್ತಿಸದೆ ಇನ್ನು ಮುಂದಾದರೂ ನಾವು ಅವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಂಘಟನೆಗಳಾಗಿ ಅವರಿಗೆ ಸಂಸ್ಥೆಯಲ್ಲಿ ಸಿಗಬೇಕಿರುವ ಸೌಲಭ್ಯಗಳನ್ನು ಸಂಘಭೇದ ಮರೆತು ಒಂದಾಗಿ ಕೊಡಿಸಬೇಕು. ಎಲ್ಲ ಸಂಘಟನೆಗಳು ಒಂದಾಗಿ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡೋಣ ಎಂದು ಒಕ್ಕೋರಲಿನಿಂದ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಟ್ಟಾರೆ ಸರಿ ಸಮಾನವ ವೇತನವನ್ನಾದರೂ ಕೊಡಲಿ ಇಲ್ಲ ಅಗ್ರಿಮೆಂಟ್ ಆದರೂ ಮಾಡಲಿ ನಮ್ಮ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ವೇತನ ಸೌಲಭ್ಯಗಳು ಸಿಗಲೇಬೇಕು ಎಂದು ಸಭೆಯಲ್ಲಿದ್ದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಂದೇ ಧ್ವನಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ರುದ್ರೇಶ್ ಎಸ್. ನಾಯಕ ತಿಳಿಸಿದ್ದಾರೆ.
ಸಭೆಯಲ್ಲಿ ಕಾರ್ಯಕ್ರಮದ ಆಯೋಜಕ ನೌಕರರ ಸಂಘದ ಅಧ್ಯಕ್ಷ ಎಚ್ಆರ್. ಜಗದೀಶ್, ನೌಕರ ಕೂಟದ ಖಜಾಂಚಿ ಎನ್.ಸತೀಶ್, ವೆಂಕಟರಮಣಪ್ಪ, ತುಮಕೂರು ಪುಟ್ಟಣ್ಣ, ಗುತ್ತಲೇಗೌಡ, ಕೃಷ್ಣ, ಮಹೇಂದ್ರ ಅಪ್ಪಾಜಿ, ಕುಮಾರ್, ನವೀನ್, ಸುಣಗಾರ, ಕೂಟದ ಅನಿಲ್ ಕುಮಾರ್, ಶ್ರೀಧರ್ ತಹಶೀಲ್ದಾರ್, ಕುದರೆ ಜಗದೀಶ್, ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಿ.ಎಂ.ಪ್ರಕಾಶ್ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು.
Related

You Might Also Like
ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು...
KSRTC: ಪ್ರಯಾಣಿಕ ಟಿಕೆಟ್ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ-ಎಂಡಿ ಆದೇಶ
2020 ಫೆಬ್ರವರಿ 20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸುತ್ತೋಲೆ ಹೊರಡಿಸಿದ್ದಾರೆ ಬೆಂಗಳೂರು: ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಪಕ್ಷದಲ್ಲಿ ತನಿಖಾದಿಕಾರಿಗಳು ವಾಹನವೂ ತಪಾಸಣಾ ಗೋಳಪಡಿಸಿದಾಗ...
ವಿಧಾನಸೌಧ ಈಗ ಪ್ರವಾಸಿ ತಾಣ: ಸಾರ್ವಜನಿಕ ವೀಕ್ಷಣೆಗೆ ಮುಕ್ತ- ಯಾರಿಗೆ ಟಿಕೆಟ್ ಮತ್ತ್ಯಾರಿಗೆ ಉಚಿತ!
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಒಮ್ಮೆಯಾದರೂ ನೋಡಬೇಕು ಎಂದು ರಾಜ್ಯದ ಅದೆಷ್ಟು ಮಂದಿ ಆಸೆಪಡುತ್ತಿದ್ದರು. ಅಲ್ಲಿಗೆ ನಾವು ಹೋಗುವುದು ಹೇಗೆ ಎಂದು ಹಲವರು ಹಳ್ಳಿಗಳ್ಳಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ...
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...
ನಟ ದರ್ಶನ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ
ಬೆಂಗಳೂರು: ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್...
NWKRTC: 2024-25ನೇ ಸಾಲಿನ ಐಚ್ಛಿಕ ಭ.ನಿ. ಚೀಟಿಗಳ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ: ನೌಕರರಿಗೆ CAO ಆದೇಶ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಅಧಿಕಾರಿಗಳ- ನೌಕರರ 2024-25ನೇ ಸಾಲಿನ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯನಿಧಿ ಚೀಟಿಗಳನ್ನು ಆನ್ಲೈನ್ ಮೂಲಕ...
ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುತ್ತಿರುವವರ ಸರ್ಕಾರ ಮಟ್ಟಹಾಕದೆ ಬಿಡೆದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವ ವಾಗ್ದಾನವನ್ನು ನಾಡಿನ ಜನತೆಗೆ ನಾವು ಚುನಾವಣಾ ಪೂರ್ವದಲ್ಲೇ ನೀಡಿದ್ದೆವು, ಅದರಂತೆ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತದ ಸರ್ಕಾರ ರಚನೆಗೆ...