CrimeNEWSಶಿಕ್ಷಣ-

ಒಬ್ಬನಿಗಾಗಿ ಹಾಸ್ಟೆಲ್‌ನ ಯುವತಿಯರಿಬ್ಬರ ಕಿತ್ತಾಟ – ಅತಿರೇಕಕ್ಕೆ ಹೋಗಿ ವಾರ್ಡನ್ ಬುಡಕ್ಕೆ ಬಂತು

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಒಬ್ಬ ಹುಡುಗನ ಜತೆ ಯುವತಿಯರಿಬ್ಬರು ಚಾಟಿಂಗ್ ಮಾಡುತ್ತಿದ್ದು. ಬಳಿಕ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದ ಡಿ.ದೇವರಾಜ ಅರಸ್ ವೃತ್ತಿಪರ ಹಾಸ್ಟೆಲ್​ನಲ್ಲಿ ಜರುಗಿದೆ.

ನಾನು ಚಾಟ್ ಮಾಡೋ ಹುಡುಗನಿಗೆ ನೀನು ಚಾಟ್ ಮಾಡಬೇಡ ಎಂದು ಒಂದೇ ರೂಮಿನಲ್ಲಿ ಇದ್ದ ಇಬ್ಬರು ಯುವತಿಯರ ನಡುವೆ ಕಿರಿಕ್ ಶುರುವಾಗಿದೆ. ಅಲ್ಲದೆ ಒಬ್ಬಾಕೆ ಬಟ್ಟೆ ಬದಲಿಸುವ ವೇಳೆ ಮತ್ತೊಬ್ಬಾಕೆ ತನ್ನ ಬಾಯ್ ಫ್ರೆಂಡ್‌ಗೆ ವಿಡಿಯೋ ಕಾಲ್ ಮಾಡಿ ಆಕೆಯ ಮೈ ಪ್ರದರ್ಶನ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ರಾತ್ರಿ ಬಾಯ್ ಫ್ರೆಂಡ್‌ಅನ್ನು ಹಾಸ್ಟೆಲ್ ಆಚೆ ಕರೆಯಿಸಿ ಬಹಳ ಸಮಯದವರೆಗೆ ಟೈಂ ಪಾಸ್ ಮಾಡಿದ್ದಾರೆ ಎಂಬುವುದು ಸಹ ಬೆಳಕಿಗೆ ಬಂದಿದೆ.

ಈ ವಿಚಾರಗಳನ್ನೆಲ್ಲ ತಿಳಿದು ಅದಕ್ಕೆ ಬ್ರೇಕ್ ಹಾಕಲು ಹೊರಟ ವಾರ್ಡನ್​​ ಅವರನ್ನೇ ಈ ವಿದ್ಯಾರ್ಥಿನಿಯರು ಈಗ ಟಾರ್ಗೆಟ್ ಮಾಡಿದ್ದು, ಸಣ್ಣಪುಟ್ಟ ಲೋಪವನ್ನೇ ದೊಡ್ಡದಾಗಿ ಸೃಷ್ಟಿಸಿ ವಾರ್ಡನ್ ಎತ್ತಂಗಡಿ ಮಾಡಬೇಕು ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ.

ವೃತ್ತಿಪರ ಹಾಸ್ಟೆಲ್ ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ವಿದ್ಯಾರ್ಥಿನಿಯರ ಈ ನಡೆಯಿಂದ ಅಸಮಾಧಾನಗೊಂಡಿದ್ದು, ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್‌ನಲ್ಲಿ ಯಾವಾಗಲೂ ಗಲಾಟೆ, ಪರಸ್ಪರ ಕಿತ್ತಾಟ ನಡೆಯುತ್ತಿದೆ. ನೀರಿನ ವಿಚಾರವಾಗಿ ಸದಾಕಾಲ ಹಾಸ್ಟೆಲ್ ವಿದ್ಯಾರ್ಥಿನಿಯರು ನನಗೆ ಕಿರುಕುಳ ನೀಡುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಈ ಜಗಳ ಅತಿರೇಕಕ್ಕೆ ತಲುಪಿದ್ದು, ವಾರ್ಡನ್ ಎತ್ತಂಗಡಿಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಇಲ್ಲಿ ಸತ್ಯ ಯಾವುದು ಸುಳ್ಳಾವುದು ಎಂಬುದನ್ನು ಮೊದಲು ಸಂಬಂಧಪಟ್ಟ ಅಧಿಕಾರಿಗಳು ತಿಳಿದುಕೊಂಡು ನಂತರ ಕ್ರಮ ಕೈಗೊಳ್ಳಬೇಕು ಎಂದುವುದು ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ಹೇಳುತ್ತಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ