NEWSಕೃಷಿನಮ್ಮರಾಜ್ಯ

ನಿಮ್ಮ ಹೊಲಕ್ಕೆ ಹೋಗುವುದು ನಿಮ್ಮ ಹಕ್ಕು: ಅಕ್ಕ-ಪಕ್ಕ ಜಮೀನವರು ದಾರಿ ಕೊಡ್ತಿಲ್ವಾ? ಭಯಬೇಡ ಹೀಗೆ ಮಾಡಿ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಹೀಗಾಗದರೆ ಏನು ಮಾಡೋದು ಎಂದು ಎಷ್ಟೋ ಜನ ರೈತರು ಕಾನೂನುನ ಅರಿವಿಲ್ಲದೆ ವ್ಯವಸಾಯ ಮಾಡುವುದನ್ನೇ ನಿಲ್ಲಿಸಿದ್ದಾರೆ.

ಆದರೆ, ನಮ್ಮ ರೈತ ಬಾಂಧವರೇ (Farmers), ಬೆಳ್ಳಂಬೆಳಗ್ಗೆ ಎದ್ದು ಹೊಲದ ಕಡೆ ಮುಖ ಮಾಡೋದೆ ನಿಮ್ಮ ಜೀವನ. ಹೊಲವೇ ದೇವರು, ಅದೇ ಅನ್ನ ನೀಡೋ ತಾಯಿ. ಹಗಲು ರಾತ್ರಿ ಬೆವರಿಳಿಸಿ ದುಡಿಯೋ ಅನ್ನದಾತನಿಗೆ ಕೆಲವೊಮ್ಮೆ ತನ್ನ ಜಮೀನಿಗೆ (Property) ಹೋಗೋಕೆ ಒಂದು ದಾರಿನೇ ಇರಲ್ಲ. ಇದು ಎಂಥಾ ವಿಪರ್ಯಾಸ ಅಲ್ವಾ? ಹಲವು ಹಳ್ಳಿಗಳಲ್ಲಿ ಇವತ್ತಿಗೂ ಈ ಸಮಸ್ಯೆ ಜೀವಂತವಾಗಿದೆ. ಸ್ವಂತ ಜಮೀನು ಇರುತ್ತೆ, ಇಲ್ಲ ಬಾಡಿಗೆಗೆ ಪಡೆದು ವ್ಯವಸಾಯ ಮಾಡ್ತಿರ್ತಾರೆ.

ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನು ಆ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಇದರಿಂದಾಗಿ ಎಷ್ಟೋ ರೈತರು ಕಂಗಾಲಾಗಿ, ವ್ಯವಸಾಯವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೀಗಾದರೆ ನಾವು ಏನ್ ಮಾಡೋದು? ದಾರಿ ಕೊಡಲ್ಲ ಅಂದ್ರೆ ಸುಮ್ಮನೆ ಕೂರಬೇಕಾ ಎಂದು ಯೋಚನೆ ಮಾಡಬೇಡಿ. ನೀವು ಖಂಡಿತ ಸುಮ್ಮನೆ ಕೂರಬೇಕಾಗಿಲ್ಲ. ನಿಮಗೂ ಒಂದು ಹಕ್ಕಿದೆ, ನಿಮ್ಮ ಪರವಾಗಿ ನಿಲ್ಲೋಕೆ ಕಾನೂನಿದೆ. ಈ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು.

ಏನಿದು ದಾರಿಯ ಹಕ್ಕಿನ ಕಾನೂನು?: ಭಾರತೀಯ ಕಾನೂನಿನಲ್ಲಿ “ಸರಾಗಗೊಳಿಸುವ ಕಾಯ್ದೆ, 1882” (Indian Easements Act, 1882) ಇದೆ. ಇದರಲ್ಲಿ ಜಮೀನಿನ ದಾರಿಯ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ, ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲದಿದ್ದರೆ, ಪಕ್ಕದ ಜಮೀನಿನವರು ನಿಮಗೆ ದಾರಿ ಮಾಡಿಕೊಡಲೇಬೇಕು. ಇದಕ್ಕೆ ಅವಶ್ಯಕತೆಯ ಸುಲಭಾನುಭೋಗ (Easement of Necessity) ಎನ್ನುತ್ತಾರೆ.

ಸರಳವಾಗಿ ಹೇಳಬೇಕೆಂದರೆ, ಒಂದು ಜಮೀನಿನ ಹಿಂದೆ ಇನ್ನೊಂದು ಜಮೀನು ಇದ್ದರೆ, ಮುಂದಿರುವ ಜಮೀನಿನ ಮಾಲೀಕ ಹಿಂದಿನ ಜಮೀನಿಗೆ ದಾರಿ ಬಿಟ್ಟುಕೊಡಲೇಬೇಕು. ಇದು ಅವರು ನಿಮಗೆ ಕೊಡುವ ಔದಾರ್ಯವಲ್ಲ, ಅದು ನಿಮ್ಮ ಕಾನೂನಾತ್ಮಕ ಹಕ್ಕು. ಒಂದು ವೇಳೆ ಅವರು ನಿರಾಕರಿಸಿದರೆ, ನೀವು ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬಹುದು.

ಹಿಂದೆ ದಾರಿ ಇದ್ದು ಈಗ ಮುಚ್ಚಿದ್ರೆ?: ಇನ್ನೊಂದು ಪ್ರಮುಖ ವಿಚಾರವೆಂದರೆ, ಈ ಹಿಂದೆ ನಿಮ್ಮ ಜಮೀನಿಗೆ ಹೋಗಲು ಒಂದು ದಾರಿ ಇತ್ತು, ಆದರೆ ಈಗ ಪಕ್ಕದವರು ಅದನ್ನು ಮುಚ್ಚಿಹಾಕಿದ್ದಾರೆ ಅಥವಾ ಬೇಲಿ ಹಾಕಿದ್ದಾರೆ ಎಂದಾದರೆ, ನೀವು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗಬಹುದು. ಹಿಂದಿನಿಂದಲೂ ಇದೇ ದಾರಿಯನ್ನು ಬಳಸುತ್ತಿದ್ದೆವು, ಈಗ ತೊಂದರೆಯಾಗಿದೆ ಎಂದು ನೀವು ಸಾಬೀತುಪಡಿಸಿದರೆ, ನ್ಯಾಯಾಲಯವು ದಾರಿಯನ್ನು ಪುನಃ ತೆರವುಗೊಳಿಸಲು ಆದೇಶ ನೀಡುತ್ತದೆ.

ಹೊಸ ದಾರಿ ನಿರ್ಮಿಸಿಕೊಳ್ಳುವ ಹಕ್ಕು!: ಅಷ್ಟೇ ಅಲ್ಲ, ನಿಮ್ಮ ಜಮೀನಿಗೆ ದಾರಿಯೇ ಇಲ್ಲದಿದ್ದಾಗ, ಹೊಸ ದಾರಿಯನ್ನು ನಿರ್ಮಿಸಿಕೊಳ್ಳಲು ಕೂಡ ಕಾನೂನಿನಲ್ಲಿ ಅವಕಾಶವಿದೆ. ಟೆನೆನ್ಸಿ ಆಕ್ಟ್‌ನ ಸೆಕ್ಷನ್ 251ರ ಅಡಿಯಲ್ಲಿ, ನೀವು ನಿಮ್ಮ ಕೃಷಿ ಚಟುವಟಿಕೆಗಳಿಗಾಗಿ ಹೊಸ ರಸ್ತೆಯನ್ನು ನಿರ್ಮಿಸಿಕೊಳ್ಳಲು ಅನುಮತಿ ಕೋರಬಹುದು. ಹೀಗೆ ರೈತರಿಗೆ ಕಿರಿಕಿರಿ ಮಾಡುವ ಕೆಲವರಿಂದ ರಕ್ಷಣೆ ನೀಡುವುದಕ್ಕೆ 1882 ಕಾಯ್ದೆ ಇರುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.

ಇನ್ನು ತಾಜಾ ನಿದರ್ಶನವಾಗಿ ತಿಳಿಸಬೇಕು ಎಂದರೆ, ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಹಿಳೆಯೊಬ್ಬರಿಗೆ ಅವರ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡದಿದ್ದಕ್ಕೆ ಆಕೆ 3 ವರ್ಷಗಳಿಂದ ವ್ಯವಸಾಯ ಮಾಡಲಾಗಲ್ಲಿ. ಆದರೆ ಕೆಲ ಸಂಘಟನೆಗಳ ನಾಯಕರ ಜತೆಗೂಡಿ ಆಕೆ ತಹಸೀಲ್ದಾರ್‌ ಹಾಗೂ ಎಸಿ ಅವರಿಗೆ ದೂರು ನೀಡಿ ಪ್ರಸ್ತುತ ಖುದ್ದು ತಹಸೀಲ್ದಾರ್‌ ಹಾಗೂ ಎಸಿ ಅವರೆ ಸ್ಥಳಕ್ಕೆ ಬಂದು ದಾರಿ ಬಿಡಿಸಿಕೊಟ್ಟಿದ್ದಾರೆ.

Megha
the authorMegha

Leave a Reply

error: Content is protected !!
Latest news
ನೌಕರರ 18 ತಿಂಗಳ ಬಾಕಿ ಹಣ 6 ಕಂತುಗಳಲ್ಲಿ ನೀಡಲಾಗುವುದು: ವಿತ್ತ ಸಚಿವರ ಭರವಸೆ KSRTC ಕೋಲಾರ ವಿಭಾಗದ ಅಧಿಕಾರಿಗಳ ದರ್ಪ- ಚಾಲಕರ ಹೆದರಿಸಿ ವಿಶ್ರಾಂತಿ ರಹಿತ ಡಬಲ್‌ ಡ್ಯೂಟಿ, ಸಿಂಗಲ್‌ ಪೇಮೆಂಟ್‌, ಒಟಿ ... BMTC: ಕರ್ತವ್ಯದಲಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಾವು- ಪರಿಹಾರಕ್ಕೆ ಆಗ್ರಹಿಸಿ ಚಾಲಕರಿಂದ ಡಿಪೋ ಬಳಿ ಪ್ರತಿಭಟನೆ ಮಾತುಕತೆ ಯಶಸ್ವಿ: ಆರ್‌ಟಿಸಿ ಮುಷ್ಕರ ಅಂತ್ಯ-ಇಂದಿನಿಂದ ಬಸ್ ಸೇವೆ ಪುನಾರಂಭ ಏ.27ರಂದು ಪಿಎಫ್ ಕಚೇರಿ ಮುಂದೆ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ : ನಂಜುಂಡೇಗೌಡ BMS ಸಂಘಟನೆಯ ಹೋರಾಟ: ನೌಕರರ ಧ್ವನಿಗೆ ಸ್ಪಂದಿಸಿದ ಸರ್ಕಾರ- ಸೂಕ್ತ ವ್ಯವಸ್ಥೆ ಮಾಡದೆ ಬಿಟ್ಟಿ ಸಲಹೆ ಕೊಟ್ಟ ಎಂಡಿ ಅಕ್ರಮ... NWKRTC: ಬ್ಯಾಡಗಿ ಬಸ್‌ ನಿಲ್ದಾಣದಲ್ಲಿ ಎರಡು ಬಸ್‌ಗಳ ಮಧ್ಯೆ ಸಿಲುಕಿದ ಕಾಲೇಜು ವಿದ್ಯಾರ್ಥಿ- ಚಿಂತಾಜನಕ ಸ್ಥಿತಿ ಸಾರಿಗೆ ನೌಕರರ ಮುಷ್ಕರ: ಆತ್ಮಹತ್ಯೆಗೆ ಯತ್ನಿಸಿದ ನರಸಂಪೇಟೆ ಡಿಪೋ ಚಾಲಕ ಶಂಕರ್ ಗೌಡ್ ಚಿಕಿತ್ಸೆ ಫಲಿಸದೆ ಮೃತ ಬೇಡಿಕೆ ಈಡೇರಿಸದ ಸರ್ಕಾರ: ಸಾರಿಗೆ ನೌಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ- ಸಾವು ಬದುಕಿನ ನಡುವೆ ಹೋರಾಟ KSRTC ನೌಕರರ ಏಪ್ರಿಲ್‌ ತಿಂಗಳ ವೇತನ ಏ.30ರಂದೆ ಪಾವತಿಸಲು ಎಂಡಿ ಆದೇಶ