KSRTC ಅಧಿಕಾರಿಗಳು-ನೌಕರರಿಗೆ 7ನೇ ವೇತನ ಆಯೋಗ ಘೋಷಿಸಿ: ಸಂಸ್ಥೆಯ ನೂತನ ಎಂಡಿಗೆ ಅಧಿಕಾರಿಗಳ ಸಂಘ ಮನವಿ

ಬೆಂಗಳೂರು: ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ನೌಕರರಿಗೆ 7ನೇ ವೇತನ ಅಯೋಗವನ್ನು ಘೋಷಿಸುವಂತೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನು ಕೆಎಸ್ಆರ್ಟಿಸಿ ಆಫೀರ್ಸ್ ವೆಲ್ಫೇರ್ ಅಸೋಸಿಯೇಶನ್ ಗೌರವಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ಮನವಿ ಮಾಡಿದ್ದಾರೆ.
ನಗರದ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಎಂಡಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಅಸೋಸಿಯೇಶನ್ ಪದಾಧಿಕಾರಿಗಳು ಅವರನ್ನು ಗೌರವಿಸಿ ಮನವಿ ಪತ್ರ ಸಲ್ಲಿಸಿ ಡಾ.ಎಂ.ಪಿ.ನಾಡಗೌಡ ಮಾತನಾಡಿದರು.
ಕರ್ನಾಟಕದ ಜನರ ಜೀವನಾಡಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 1.30 ಲಕ್ಷ ನೌಕರರನ್ನು ಹೊಂದಿದ್ದು, ಅದರಲ್ಲಿ ಅಧಿಕಾರಿಗಳ ಸಂಖ್ಯೆಯು 799 ಇದೆ. ಅಧಿಕಾರಿಗಳ ಸಂಖ್ಯೆಯು ಸಿಬ್ಬಂದಿಗಳಿಗೆ ಹೊಲಿಸಿದಲ್ಲಿ ಶೇ.1.45 ಇದ್ದು, ಇದು ಅತೀ ಕಡಿಮೆ ಪ್ರಮಾಣದಲ್ಲಿದೆ ಹಾಗೂ ಅಕ್ಕ ಪಕ್ಕ ರಾಜ್ಯದ ಅಧಿಕಾರಿಗಳ ಅನುಪಾತಕ್ಕೆ ಹೊಲಿಸಿದಾಗ ಇದು ಅತೀ ಕಡಿಮೆ ಅನುಪಾತವಾಗಿದೆ. ಕಾರಣ ಕೊರತೆ ಇರುವ ಅಧಿಕಾರಿಗಳ ನೇಮಕಾತಿಯಾಗುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಇನ್ನು ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಅಸ್ತಿತ್ವಗೊಂಡಿರುವ ಈ ಸಾರಿಗೆ ನಿಗಮ, ಇದು ಒಂದು ವಾಣಿಜ್ಯ ಸಂಸ್ಥೆಯಾಗಿರದೇ, ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡುವುದು ಮೊದಲ ಆದ್ಯತೆಯಾಗಿದೆ. ಭಾರತ ದೇಶದಲ್ಲಿ ಯಾವುದೇ ಸಾರಿಗೆ ಸಂಸ್ಥೆ ಲಾಭದಾಯಕವಾಗಿಲ್ಲ. ಸಂಸ್ಥೆಯ ಆಡಳಿತದಲ್ಲಿ ನಿಯಂತ್ರಣ ಸಾಧಿಸಲು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗನರ ಸಾರಿಗೆ ಸಂಸ್ಥೆ ಈ ನಾಲ್ಕು ಸಂಸ್ಥೆಗಳು ಸ್ವತಂತ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಸರಕಾರದ ಶಕ್ತಿಯೋಜನೆಯಿಂದ ಸಂಸ್ಥೆಗೆ ಸ್ವಲ್ಪ ಶಕ್ತಿ ಬಂದಂತಾಗಿ ಚೇತರಿಸಿಕೊಳ್ಳುತ್ತಿವೆ.
ಆದರೇ ಸಂಸ್ಥೆಗಳನ್ನು ಇನ್ನೂ ಉತ್ತಮವಾಗಿ, ಆರ್ಥಿಕವಾಗಿ, ಸ್ವಾವಲಂಬಿವಾಗಿ ಹಾಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹಾಗೂ ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅನುಭವಿ ಹಾಗೂ ಹಿರಿಯ ಅಧಿಕಾರಿಗಳಿಂದ ಸಮಾಲೋಚನೆ ಮಾಡಿ ಸಂಸ್ಥೆಯ ಪುನರ್ಜ್ಜೀವನಕ್ಕೆ ಹಾಗೂ ಅವರ ಪ್ರಸ್ತುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳಿಗೂ ಇಂದಿನ ದಿನಕ್ಕೆ ತಕ್ಕಂತೆ ವೇತನ ಪರಿಷ್ಕರಿಸುವುದು ಅಗತ್ಯವಿದೆ. ಈಗಾಗಲೇ ಕರ್ನಾಟಕ ರಾಜ್ಯ ಸರಕಾರ ಸರಕಾರಿ ನೌಕರರಿಗೆ 7ನೇ ವೇತನ ಅನುಷ್ಠಾನಗೊಳಿಸಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು Trade Union ವ್ಯಾಪ್ತಿಗೆ ಒಳಪಟ್ಟಿಲ್ಲ. ಹಾಗೂ Management ನಿರ್ದೇಶನಗಳನ್ನು ಚಾಚು ತಪ್ಪದೇ ಅನುಷ್ಟಾನಗೊಳಿಸುವಲ್ಲಿ ವಿಶೇಷ ಪಾತ್ರವಹಿಸಿರುವ ಕಾರಣ ಅಧಿಕಾರಿಗಳು ಒಚಿಟಿಚಿgemeಟಿಣನ ಭಾಗವಾಗಿರುವುದರಿಂದ ಅವರಿಗೆ ಸರಕಾರಿ ನೌಕರರಿಗೆ ನೀಡುತ್ತಿರುವ ವೇತವನ್ನು ನಿಗದಿಪಡಿಸುವುದು ವೈಜ್ಞಾನಿಕ ಕ್ರಮವಾಗಿರುತ್ತದೆ. ಇಷ್ಟು ವರ್ಷಗಳ ಕಾಲTrade Union ನೌಕರರಿಗೆ ವೇತನ ಪರಿಷ್ಕರಿಸಲಾಗಿದ್ದರೂ ಇದು ಅಧಿಕಾರಿಗಳಿಗೆ ವೈಜ್ಞಾನಿಕ ವೇತನ ನಿಗದಿಪಡಿಸಿಲ್ಲ ಹಾಗೂ ಸಮಂಜಸವಾಗಿರುವುದಿಲ್ಲ. ಕಾರಣ ದಯಾಳುಗಳಾದ ಎಲ್ಲಾ ಅಧಿಕಾರಿಗಳು Management ಭಾಗವಾಗಿರುವುದರಿಂದ ಸರಕಾರಿ ನೌಕರರಿಗೆ 7ನೇ ವೇತನವನ್ನು ಅಧಿಕಾರಿಗಳಿಗೆ ಅನುಷ್ಟಾನಗೊಳಿಸುವುದರಿಂದ ಅಧಿಕಾರಿಗಳು ಕೇವಲ 799 ಇದ್ದು. ಇದು ಒಟ್ಟು ನೌಕರರ ಅನುಪಾತಕ್ಕೆ 1.45% ಇರುವುದರಿಂದ ಸಂಸ್ಥೆಗೆ ಹೇಳಿಕೊಳ್ಳುವಂತಹ ಆರ್ಥಿಕ ಹೊರೆ ಸಹ ಆಗುವುದಿಲ್ಲ.
ಕ್ರ.ಸಂ. ಹುದ್ದೆ ಒಟ್ಟು ಸಿಬ್ಬಂದಿಗಳು ಸಿಬ್ಬಂದಿ ಪಾಲು
1 ದರ್ಜೆ-1/2(ಹಿರಿಯ/ ಕಿರಿಯಶ್ರೇಣಿ 799 1.45
2 ದರ್ಜೆ-3/4 ಸಿಬ್ಬಂದಿಗಳು 107565 99.27
ಸಂಸ್ಥೆಯ ಅಧಿಕಾರಿಗಳ ಪ್ರಸ್ತುತ ವೇತನಕ್ಕೂ ಹೆಸ್ಕಾಂ, ಸರ್ಕಾರಿ ನೌಕರರಿಗೂ ಹೋಲಿಸಿದಾಗ ಇರುವ ವ್ಯತ್ಯಾಸದ ವಿವರ
SL.NO GRADE SLAB
(01-01-2020 GOVT-7TH PAY HESCOM DIFF B/W
7THPAY BEFORE BDA% AFTER 31% BDA
1) OFFICER CLASS-II 42600-1300-47800-1510-52330-1750-59330-1960-75010 69250-134200 46050-114450 -26650 -63.00 -32.00
2) OFFICER CLASS-I (JUNIOR) 56380-1510-59400-1750-64650-1960-78370-2260-98300 83700-155200 47500-114450 -27320 -48.53 -17.53
3) OFFICER CLASS-I (SINIOR) 60190-1510-63210-1750-68460-1960-80220-2260-98300 107500-167200 72300-128350 -47310 -78.71 -30.41
4) OFFICER CLASS-I (SINIOR) SELECTION GRADE 69070-1960-78870-2260-94690-2550-104890 131100-188200 – -62030 -89.39 -32.52
ಸಂಸ್ಥೆಯ ಆಧಾರ ಸ್ತಂಭಗಳಾದ ಘಟಕ ವ್ಯವಸ್ಥಾಪಕರ ಹುದ್ದೆಯನ್ನು ಪರಿಣಾಮಕಾರಿಯಾಗಿಸುವುದು ಮತ್ತು ಕೆಲಸದ ಅವಧಿಯನ್ನು ನಿಗದಿಪಡಿಸುವ ಕುರಿತು ಸಂಸ್ಥೆಯಲ್ಲಿ ಆದಾಯಗಳಿಸುವ ಪ್ರಮುಖ ಕೇಂದ್ರ ಘಟಕಗಳು. ಆದರೆ ಇತ್ತೀಚಿನ ದಿನಗಳಲ್ಲಿ ಘಟಕ ವ್ಯವಸ್ಥಾಪಕರ ಹುದ್ದೆ ಅತೀ ನಿರ್ಲಕ್ಷತನಕ್ಕೆ ಒಳಗಾಗಿದೆ. ಇದರಿಂದಾಗಿ ಘಟಕ ವ್ಯವಸ್ಥಾಪಕರ ಸಾಧನೆ ಕಳಪೆಯಾಗುತ್ತಿದೆ. ಆದಕಾರಣ ಈ ಹಿಂದೆ ಘಟಕಗಳನ್ನು ಎ ಬಿ ಸಿ ಎಂದು ವರ್ಗಿಕರಣ ಮಾಡಿ ಉತ್ತಮ/ ಅತ್ಯುತ್ತಮ ಘಟಕ ವ್ಯವಸ್ಥಾಪಕರನ್ನು ಗುರುತಿಸಿ ಎ ಮತ್ತು ಬಿ ಘಟಕ ವ್ಯವಸ್ಥಾಪಕರನ್ನು ನಿಯೋಜಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ ಇದರಿಂದ ಸಂಸ್ಥೆಯ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ಇದನ್ನು ಸರಿಪಡಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ. ವಾ.ಕ.ರ.ಸಾ ಸಂಸ್ಥೆಯಲ್ಲಿ ಘಟಕ ವ್ಯವಸ್ಥಾಪಕರಿಗೆ ಕೆಲಸದ ಅವಧಿಯನ್ನು ನಿಗದಿಪಡಿಸುವುದು ಹಾಗೂ ಅವರನ್ನು ಮನೋಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಾಗಿದೆ.
ತಾತ್ಕಾಲಿಕವಾಗಿ ಉನ್ನತ ವಿದ್ಯಾಭ್ಯಾಸ ಹಾಗೂ ವಿದ್ಯಾರ್ಜನೆಗಾಗಿ ಬೇರೆ ಬೇರೆ ಉದ್ಯೋಗಳಲ್ಲಿ ಆಸಕ್ತಿ ಇರುವ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ರಹಿತ ರಜೆಯ ಮೇಲೆ ಒಂದು ವರ್ಷದಿಂದ 5 ವರ್ಷದ ವರೆಗೆ ಅನುಮತಿ ನೀಡುವ ಪದ್ದತಿ ಜಾರಿಯಲ್ಲಿತ್ತು. ಆದರೆ ಪ್ರಸ್ತುತ ಸದರಿ ಪದ್ದತಿಯನ್ನು ಸ್ಥಗಿತಗೊಳಿಸಲಾಗಿದೆ. ಕಾರಣ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ ಸುತ್ತೋಲೆ ಸಂಖ್ಯೆ:1192 ರನ್ನು ತಡೆಹಿಡಿಯಲಾಗಿದ್ದು, ಈ ಸುತ್ತೋಲೆಯನ್ನು ಮರು ಪ್ರಾರಂಭಿಸಬೇಕು. ಇದರಿಂದಾಗಿ ಅಧಿಕಾರಿಗಳ ಗುಣಮಟ್ಟ ಸುಧಾರಿಸುವುದಲ್ಲದೇ, ಸಂಸ್ಥೆಯ ಹೊರೆಯು ಸಹ ಕಡಿಮೆಗೊಳಿಸಿದಂತಾಗುತ್ತದೆ.
ಶಕ್ತಿಯೋಜನೆ ಪ್ರಾರಂಭವಾದಗಿನಿಂದಲೂ ನಾಲ್ಕು ಸಂಸ್ಥೆಗಳನ್ನು ಸೇರಿ ಇಲ್ಲಿಯವರೆಗೂ ಸುಮಾರು 2000 ಕೋಟಿ ರೂ. ಮೊತ್ತ ಬಾಕಿ ಇದ್ದು, ಸರಕಾರದಿಂದ ಬಾಕಿಯಿರುವ ಮೊತ್ತವನ್ನು ಪಡೆಯಲು ಅಗತ್ಯ ಕ್ರಮವಹಿಸಬೇಕಿದೆ. ಸಂಸ್ಥೆಗಳು ತನ್ನ ಕಾರ್ಯಾಚರಣೆಯ ಶೇ.50 ಕ್ಕಿಂತ ಹೆಚ್ಚು ಭಾಗವನ್ನು ಗ್ರಾಮೀಣ ಪ್ರದೇಶದಲ್ಲಿ ಕಾರ್ಯಚರಣೆಗೊಳಿಸುತ್ತಿವೆ, ಈ ಕಾರ್ಯಾಚರಣೆಯಿಂದ 3 ಸಂಸ್ಥೆಗಳಿಗೆ ವಾರ್ಷಿಕವಾಗಿ ಸುಮಾರು 250 ರಿಂದ 300 ಕೋಟಿ ರೂ.ನಷ್ಟ ಉಂಟಾಗುತ್ತಿದೆ. ಕಾರಣ ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿರುವಂತೆ, ಈ ಮೊತ್ತವನ್ನು ಸರ್ಕಾರವು ಮರು ಪಾವತಿಸುವಂತೆ ಕೋರಲಾಗಿದೆ.
ಸಂಸ್ಥೆಯಲ್ಲಿ ನೇಮಕಗೊಂಡ ಕೆಲವು ಅಧಿಕಾರಿಗಳು 10 ರಿಂದ 15 ವರ್ಷ ಒಂದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಅವರಿಗೆ ಮುಂಬಡ್ತಿ ನೀಡಿರುವುದಿಲ್ಲ. ಇದರಿಂದ ಅಧಿಕಾರಿಗಳು ಮಾನಸಿಕವಾಗಿ ಕುಂದಿರುತ್ತಾರೆ. ಕಾರಣ ಅಧಿಕಾರಿಗಳಿಗೆ ಕೆ.ಎ.ಎಸ್. ಅಧಿಕಾರಿಗಳಿಗೆ ಬಡ್ತಿ ನೀಡುವ ಮಾದರಿಯಲ್ಲಿ ಕಾಲಮಿತಿಯಲ್ಲಿ ಮುಂಬಡ್ತಿ ನೀಡಬೇಕು.
ನಾಲ್ಕು ಸಾರಿಗೆ ನಿಗಮಗಳಲ್ಲಿ ಸಂಸ್ಥೆಯ ಮಂಡಳಿಗಳಿದ್ದು, ಈ ಮಂಡಳಿಗಳಿಗೆ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ/ ಅಧಿಕಾರೇತರ ನಿರ್ದೇಶಕರು ಇದ್ದು, ಸಂಸ್ಥೆಯ ನಿಲುವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ ಸಂಸ್ಥೆಯ ನಿಲುವುಗಳನ್ನು ಪರಿಣಾಮಕಾರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ, ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದಿಂದ ನಾಮ ನಿರ್ದೇಶನಗೊಂಡ ಒಬ್ಬ ಅಧಿಕಾರಿಯನ್ನ ಹಾಗೂ ನೌಕರರ ವರ್ಗದವರಿಂದ ನಾಮ ನಿರ್ದೇಶನಗೊಂಡ ಒಬ್ಬ ನೌಕರನನ್ನ ಸಂಸ್ಥೆಯ ನಿರ್ದೇಶಕ ಮಂಡಳಿಗೆ ನಾಮನಿರ್ದೇಶನ ಮಾಡುವುದರಿಂದ ಅಧಿಕಾರಿಗಳ ಹಾಗೂ ನೌಕರರ ಹಿತಕಾಪಾಡಲು ಸಾಧ್ಯವಾಗುತ್ತದೆ.
ಸಂಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಪದೋನ್ನತಿ ಮತ್ತು ರಜೆ ನೀಡುವಲ್ಲಿ ಸಾಕಷ್ಟು ತಾರತಮ್ಯಗಳಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪಾರದರ್ಶಕತೆ ತರುವುದು ಹಾಗೂ ತಾರತಮ್ಯ ನೀತಿಯನ್ನು ತಗೆದುಹಾಕುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳ ಅವಶ್ಯಕತೆ ಇದೆ. ಪ್ರಸ್ತುತ ಈ ಕಾರಣಗಳಿಂದಾಗಿ ಅಧಿಕಾರಿಗಳ ಮನೋಸ್ಥೈರ್ಯ ಕಳೆದುಕೊಳ್ಳುವಂತಾಗಿದೆ. ಪ್ರಸ್ತುತ ಜರುಗಿರುತ್ತಿರುವ ಲೋಪದೋಷಗಳನ್ನು ಸರಿಪಡಿಸಿ ಅಧಿಕಾರಿಗಳ ಮನೋಸ್ಥೈರ್ಯ ಹೆಚ್ಚಿಸಬೇಕಿದೆ.
ಸಂಸ್ಥೆಯಲ್ಲಿ ಅಧಿಕಾರಿಗಳ ಜೇಷ್ಠತೆ ನಿಗದಿಪಡಿಸುವಲ್ಲಿ ಸರಿಯಾದ ಹಾಗೂ ನ್ಯಾಯಯುತವಾದ ನಿಯಮಾವಳಿಗಳಿರುವುದಿಲ್ಲ. ಇದರಿಂದಾಗಿ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳ ಕೆಳಗಡೆ ಕೆಲಸ ಮಾಡುವಂತಾಗಿ, ಅಧಿಕಾರಿಗಳು ನೈತಿಕವಾಗಿ ಕುಸಿದಿರುತ್ತಾರೆ. ಕಾರಣ ಸಾಮಾನ್ಯ ಜೇಷ್ಠತೆ ನಿಗದಿಪಡಿಸಿ, ಈಗಾಗಿರುವ ಜೇಷ್ಠತೆಯ ನ್ಯೂನ್ಯತೆಗಳನ್ನು ಸರಿಪಡಿಸುವ ಅವಶ್ಯವಿದೆ.
KSRTC CADRE AND REGULATIONS 1982 ಪರಿಚ್ಚೇದ17/1 ರ ಮೇಲೆ ಸಾಕಷ್ಟು ಅಧಿಕಾರಿಗಳನ್ನು ಮೂಲ ಹುದ್ದೆಯಿಂದ ಬೇರೆ ಹುದ್ದೆಗೆ ನಿಯೋಜಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಅಧಿಕಾರಿಗಳ ಸೇವೆಯು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಾನಿರ್ವಹಿಸಲು ಸಾಧ್ಯವಾಗದೇ, ಇದು ಸಂಸ್ಥೆಯ ಪ್ರಗತಿಗೆ ಕುಂಠಿತವಾಗಿದೆ. ಅಲ್ಲದೇ ಹಗರಣಗಳು ಆಗುವ ಸಾಧ್ಯತೆ ಇದೆ. ಆದ್ದರಿಂದ ಅತೀ ಅವಶ್ಯಕವಿದ್ದಲ್ಲಿ ಮಾತ್ರ ನಿಯೋಜಿಸಬೇಕು.
ಸಂಸ್ಥೆಯ ಅಧಿಕಾರಿಗಳ ವಿರುದ್ಧ ದಾಖಲಾದ ಶಿಸ್ತು ಪ್ರಕರಣಗಳನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಲು ಈಗಾಗಲೇ ಸಾಕಷ್ಟು ನಿಯಮಾವಳಿ/ ಸುತ್ತೋಲೆಗಳು ಜಾರಿಯಲ್ಲಿರುತ್ತವೆ. ಆದಾಗ್ಯೂ 5 ರಿಂದ 10 ವರ್ಷ ಅಪರಾಧ ಪ್ರಕರಣ ವಿಲೇವಾರಿ ಮಾಡದೇ ಹೆಚ್ಚಿನ ಅಧಿಕಾರಿಗಳಿಗೆ ಅನ್ಯಾಯವಾಗಿದೆ. ಅದರಂತೆ ಕಾಲಮಿತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲು ಕೋರಿದೆ. ಕಾಲಮಿತಿಯಲ್ಲಿ ವಿಲೇವಾರಿ ಆಗದೇ ಇರುವುದರಿಂದ ಅನೇಕ ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗಿದ್ದಾರೆ.
ಸಂಸ್ಥೆಯಲ್ಲಿ ದಾಖಲಾಗಿರುವ ಮೇಲ್ಮನವಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸದೇ 5 ರಿಂದ 10 ವರ್ಷಗಳವರೆಗೆ ಹಾಗೆಯೇ ಬಾಕಿಯಿವೆ. ಇದರಿಂದಾಗಿ ಮೇಲ್ಮನವಿ ಸಲ್ಲಿಸಿದ ಕಾಲಮಿತಿಯಲ್ಲಿ ಇತ್ಯರ್ಥವಾಗದೇ ಇರುವುದರಿಂದ ನಿಗದಿತ ಸಮಯದಲ್ಲಿ ನ್ಯಾಯ ಸಿಗದೇ ಅಧಿಕಾರಿ/ಸಿಬ್ಬಂದಿಗಳು ಪರದಾಡುವಂತಾಗುತ್ತದೆ. ಆದ್ದರಿಂದ ಮೇಲ್ಮನವಿಗಳನ್ನು ಸಲ್ಲಿಸಿದ ದಿನಾಂಕದಿಂದ 1 ವರ್ಷದ ಅವಧಿಯೊಳಗಾಗಿ ಇತ್ಯರ್ಥಗೊಳಿಸುವುದು ಅವಶ್ಯಕವಾಗಿದೆ. ಮೇಲ್ಮನವಿ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ನಿಯಮಾವಳಿ/ಸುತ್ತೋಲೆ ಜಾರಿಗೆ ತರುವುದು ಅನಿವಾರ್ಯವಾಗಿದೆ.
ಈಗಾಗಲೇ ನಿವೃತ್ತ ಅಧಿಕಾರಿಗಳಿಗೆ ಅವರ ಪತಿ/ ಪತ್ನಿಯವರೊಂದಿಗೆ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತ ಹಾಗೂ ಪ್ರತಿಷ್ಟಿತ ಸಾರಿಗೆಗಳಲ್ಲಿ ಪ್ರಯಾಣದರದಲ್ಲಿ 50% ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ. ಆದರೆ ಸೇವೆಯಲ್ಲಿ ಮರಣ ಹೊಂದಿರುವ ಸಿಬ್ಬಂದಿ/ ಅಧಿಕಾರಿಗಳ ಪತಿ/ಪತ್ನಿಗೆ ಈ ಸೌಲಭ್ಯ ಒದಗಿಸಿಲ್ಲ ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ಅವರ ಪತಿ/ಪತ್ನಿಯವರೊಂದಿಗೆ ಪ್ರತಿಷ್ಟಿತ ಸಾರಿಗೆಗಳು ಸೇರಿದಂತೆ ಎಲ್ಲ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವುದು ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ಹಾಗೂ ಪಾಲಕರಿಗೂ ಸಹ ಉಚಿತ ಪಾಸ್ ನೀಡಲು ಕ್ರಮಕೈಗೊಳ್ಳಬೇಕು.
ಸಂಸ್ಥೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ಯಾಗೂ, ಕರ್ತವ್ಯ ಮೇಲೆ ಇರುವಾಗ ಸೇವೆಯಲ್ಲಿ ಮರಣ ಹೊಂದಿರುವ ಸಿಬ್ಬಂದಿ/ಅಧಿಕಾರಿಗಳ ಅವಲಂಬಿತರು ಅನುಕಂಪದ ಆಧಾರದ ನೌಕರಿ ಪಡೆದುಕೊಳ್ಳಲು ಅರ್ಹತೆ ಹೊಂದಿದ್ದರೂ ಕೂಡಾ 05 ರಿಂದ 10 ವರ್ಷಗಳವರೆಗೆ ಕಾಯಬೇಕಾಗಿದೆ. ಆದ್ದರಿಂದ ಅವಲಂಬಿತರು ಅನುಕಂಪದ ಆಧಾರದ ನೌಕರಿಯನ್ನು ಸಿಬ್ಬಂದಿ/ಅಧಿಕಾರಿಗಳು ಮರಣ ಹೊಂದಿದ 3 ರಿಂದ 6 ತಿಂಗಳೊಳಗಾಗಿ ನೀಡಲು ಕ್ರಮಕೈಗೊಳ್ಳವುದು ಅವಶ್ಯಕವಾಗಿದೆ.
ಕೆ.ಎಸ್.ಆರ್.ಟಿ.ಸಿ ಆಫೀರ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಘದ ಕಾರ್ಯಚಟುವಟಿಕೆಗಳಿಗೆ ಸ್ಥಳದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರ್ಗಿ ಕೇಂದ್ರ ಸ್ಥಾನದಲ್ಲಿ ಲಭ್ಯವಿರುವ ಸಂಸ್ಥೆಯ ಆಸ್ತಿಯಲ್ಲಿ ಸುಮಾರು 50*80 ಅಡಿ ಸ್ಥಳಾವಕಾಶ ನೀಡಬೇಕು.
ಒಟ್ಟಾರೆಯಾಗಿ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸರಕಾರದ ಹಾಗೂ ನೌಕರರ ಪಾತ್ರ ಅಪಾರವಾಗಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಲು, ಇದರಲ್ಲಿ ಕೇವಲ ಒಂದು ವರ್ಗದ ಹಿತಾಸಕ್ತಿ ಇರುವುದಿಲ್ಲ. ಎಲ್ಲ ವರ್ಗದ ಅಧಿಕಾರಿ/ ಸಿಬ್ಬಂದಿ/ ನೌಕರರ ಹಾಗೂ ಅವರ ಕುಟುಂಬದವರ ಜೀವನದ ಪ್ರಶ್ನೆಯಾಗಿರುವುದಲ್ಲದೇ ನಾಡಿನ ಜನತೆಯ ಜೀವನಾಡಿಯಾದ ಸಾರಿಗೆ ಸಂಸ್ಥೆಯ ಉಳಿವಿನ ಪ್ರಶ್ನೆಯೂ ಇದಾಗಿದೆ. ಸರಕಾರ ಈ ಇಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ, ಈ ಮುಳಗುತ್ತಿರುವ ಹಡಗು ಮತ್ತೆ ಪ್ರಯಾಣಿಸಲು ಸಾಧ್ಯ. ಕಾರಣ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಹಾಗೂ ಅಧಿಕಾರಿಗಳ/ನೌಕರರ ಬೇಡಿಕೆ ಈಡೇರಿಸಿ ಅವರ ಮನೋಸ್ಥೈರ್ಯ ಹೆಚ್ಚಿಸಬೇಕು ಎಂದು ಎಂಡಿ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
Related

You Might Also Like
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...
KSRTC ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯವಾಗಿರುವ ಘಟನೆ ತಾಲೂಕಿನ...
ಜಗತ್ತಿನ ಒತ್ತಡ ಪರಿಸ್ಥಿತಿ ನಿವಾರಣೆಗೆ ಯೋಗ ಒಂದೇ ಮಾರ್ಗ: ಪ್ರಧಾನಿ ನರೇಂದ್ರ ಮೋದಿ
ನ್ಯೂಡೆಲ್ಲಿ: ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಿ ಅಶಾಂತಿ ಮತ್ತು ಅಸ್ಥಿರತೆ, ಜಾಗತಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಇಂತಹ ಪ್ರಕ್ಷುಬ್ದ ಪರಿಸ್ಥಿತಿ ನಿವಾರಣೆ ಆಗಬೇಕು. ಯೋಗ ಒಂದೆ...
ಕೆ.ಆರ್.ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ: ಅಧಿಕಾರಿಗಳಿಗೆ ಸುರಳ್ಕರ್ ಸೂಚನೆ
ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಎಂದು ಬಿಬಿಎಂಪಿ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ....