KSRTC ಕೋಲಾರ: ನೌಕರರ ದುಡಿಮೆಗೆ ತಕ್ಕ ವೇತನಕೊಡದೆ ಕಾಡುತ್ತಿರುವ ಡಿಸಿ, ಡಿಟಿಒಗಳ ಅಮಾನತು ಮಾಡಿ- ಸಾರಿಗೆ ಸಚಿವರಿಗೆ ಸೈಕಲ್ ರೆಡ್ಡಿ ಪತ್ರ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ನಿಯಂತ್ರಣಾಧಿಕಾರಿಗಳ ಅಧಿಕಾರ ದುರ್ಬಳಕೆ, ನೌಕರರಿಗೆ ಕಿರುಕುಳ ಮತ್ತು ಲಂಚಾವತಾರ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಜಾಗೊಂಡ ನೌಕರ ರಾಮಚಂದ್ರರೆಡ್ಡಿ (ಸೈಕಲ್ ರೆಡ್ಡಿ) ಪತ್ರ ಬರೆದು ಮಮನವಿ ಮಾಡಿದ್ದಾರೆ.
ಸೈಕಲ್ ರೆಡ್ಡಿ ಅವರ ಪತ್ರದಲ್ಲೇನಿದೆ: ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ ಮತ್ತು ಸಂಚಲನಾಧಿಕಾರಿ ಮಂಜುನಾಥ ಅವರ ದಬ್ಬಾಳಿಕೆಗೆ ಸಿಲುಕಿರುವ ನೌಕರರಲ್ಲಿ ನಿಷ್ಠಾವಂತ ನೌಕರನಾದ ರಾಮಚಂದ್ರರೆಡ್ಡಿ (ಸೈಕಲ್ ರೆಡ್ಡಿ) ಆದ ನನಗೆ ಇವರು ಹೇಳಲಾಗದಷ್ಟು ಅನ್ಯಾಯ ಮಾಡಿದ್ದಾರೆ.
ಅಧಿಕಾರ ದರ್ಪ ಮೆರೆದಿದ್ದು ಇವರ ಬದುಕು ನೌಕರರ ಮೇಲೆ ಅವಲಂಬಿತವಾಗಿದ್ದರೂ ಸಹ ಇವರು ಮಾಡುವ ಖ*ಚಡ ಕೆಲಸಗಳನ್ನು ಮುಚ್ಚಿಕ್ಕಿ ಅಂದರೆ ನೌಕರರ ರಕ್ತ ಹೀರುವ ಒಂದು ರೀತಿ ಹೇಳಬೇಕೆಂದರೆ ದಿನನಿತ್ಯ ಯಾರಿಗೂ ಗೊತ್ತಾಗದಂತೆ ನೌಕರರಿಗೆ ವಿಷ ಪ್ರಯೋಗ ಮಾಡಿ ಬದುಕಿದ್ದರೂ ಮನಶಾಂತಿಯಿಲ್ಲದೆ ನೌಕರರು ನಿತ್ಯ ನರಳುವಂತೆ ಮಾಡುತ್ತಿದ್ದಾರೆ.
ಇನ್ನು ಸಂಸ್ಥೆಯ ಕಾನೂನುಗಳನ್ನು ಬದಿಗಿಟ್ಟು ಕೋಲಾರ ವಿಭಾಗವನ್ನು ಸ್ವಂತ ಖಾಸಗಿ ಸಂಸ್ಥೆಯಾಗಿ ಪರಿವರ್ತನೆ ಮಾಡಿಕೊಂಡು ವಿಭಾಗದಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ವಿಭಾಗಗಳಿಗೂ ದುಡಿಮೆಗೆ ತಕ್ಕ ಸಂಬಳ ಅಂದರೆ ಹೆಚ್ಚುವರಿ ಡ್ಯೂಟಿಗೆ ಹೆಚ್ಚುವರಿ (OT) ಕೊಡುತ್ತಿದ್ದು ಈ ಕೋಲಾರ ವಿಭಾಗವನ್ನು ಮಾತ್ರ ಕೇಂದ್ರ ಕಚೇರಿಯಿಂದ ದತ್ತುಪಡೆದ ರೀತಿ ಸುಮಾರು 2019ರಿಂದ ಘಟಕಗಳ ಎಲ್ಲ ಮಾರ್ಗಗಳನ್ನೂ 3 ರೀತಿಯ ಕಾರ್ಯಾಚರಣೆ ಮಾಡಿ ಒಟಿ ನಿಲ್ಲಿಸಿದ್ದಾರೆ.
ಅಂದರೆ ಒಂದನೆಯದಾಗಿ ರಿಟರ್ನ್ ಮಾರ್ಗ, ಎರಡನೆಯದಾಗಿ ಎ-ಬಿ ಮಾರ್ಗ ಮತ್ತು ಮೂರನೆಯದಾಗಿ ರಾತ್ರಿ ಪಾಳಿ ಮಾರ್ಗಗಳಾಗಿದ್ದು ಕಾನೂನು ರೀತ್ಯಾ RTOದ MTW act ಪ್ರಕಾರ 8 ಗಂಟೆ ಕೆಲಸದ ಅವಧಿಯ ನಂತರ ಹೆಚ್ಚುವರಿ ಕೆಲಸವೆಂದು ಪರಿಗಣಿಸದೆ ಅದಕ್ಕೆ ವಿರುದ್ಧವಾಗಿ ರಿಟರ್ನ್ 12 ಗಂಟೆ ಡ್ಯೂಟಿಗೆ ಒಂದೂವರೆ ಎರಡು ಗಂಟೆ ಒಟಿ ಕೊಟ್ಟು ಸುಮಾರು ಒಬ್ಬ ನೌಕರನಿಂದ 2 ಗಂಟೆ ಕಸಿಯುತ್ತಾರೆ.
ಎಬಿ ಮಾರ್ಗದಲ್ಲೂ ಕಾನೂನು ಬಾಹಿರವಾಗಿ ಹೆಚ್ಚುವರಿ ಕಿಲೋ ಮೀಟರ್ ಅಳವಡಿಸಿ ನೌಕರರ ರಕ್ತ ಹೀರುತ್ತಿದ್ದಾರೆ. ಇನ್ನು ರಾತ್ರಿ ಪಾಳಿ ಮಾರ್ಗಗಳಲ್ಲಿ ಸುಳ್ಳು ಸಿಬ್ಬಂದಿ ಬದಲಾವಣೆ (crew change) ಅಂದರೆ ಕಾನೂನು ರೀತ್ಯಾ 8ಗಂಟೆ ಡ್ಯೂಟಿ ಮುಗಿದ ಬಳಿಕ ಬದಲಿ ಸಿಬ್ಬಂದಿಯನ್ನು ಕೊಡುವ ರೀತಿ form-4ಗಳನ್ನು ಸೃಷ್ಟಿಸಿ ಬದಲಿ ಸಿಬ್ಬಂದಿಯನ್ನು ಕೊಡದೆ ಒಂದು ಡ್ಯೂಟಿನಲ್ಲಿ ಸುಮಾರು 6 ರಿಂದ 7 ಗಂಟೆ ಹೆಚ್ಚುವರಿ ಕೆಲಸವನ್ನು ತೆಗೆದುಕೊಂಡು ನೌಕರಿಗೆ ಮೋಸಮಾಡುತ್ತಿದ್ದಾರೆ.
ಇನ್ನು ನೌಕರರಿಗೆ ಕೊಡಬೇಕಾದ ಹೆಚ್ಚುವರಿ ವೇತನ ಒಟಿ ಕೊಡದೆ ಕೋಲಾರ ವಿಭಾಗಕ್ಕೆ ಲಾಭ ತೋರಿಸಿ ಕೇಂದ್ರ ಕಚೇರಿಯಿಂದ ಪ್ರಶಸ್ತಿ ಪಡೆಯುವುದು ಇವರ ಕುತಂತ್ರ ಬುದ್ದಿಗೆ ಸಾಕ್ಷಿಯಾಗಿದೆ. ಇವರ ಮೋಸದ ಕೃತ್ಯವನ್ನು ನಾನು ಸುಮಾರು 3 ವರ್ಷದ ನನ್ನಿಂದ ಹೆಚ್ಚುವರಿ ಶ್ರಮ ಸುಮಾರು 1400 ಗಂಟೆಗಳು (ಸುಮಾರು 6 ಲಕ್ಷ ರೂ ಒಟಿ ಹಣ) ನ್ಯಾಯಬದ್ಧವಾಗಿ ಕೊಡದಿದ್ದಕ್ಕೆ ನಾನು ಕಾನೂನು ರೀತ್ಯಾ ಕಾರ್ಮಿಕ ಇಲಾಖೆಯಲ್ಲಿ ನ್ಯಾಯ ಕೇಳಿದ್ದು ಇದರ ವಿಚಾರವಾಗಿ ಜಿಲ್ಲಾಧಿಕಾರಿಗಳು ಇಲ್ಲಿನ ಮೋಸದ ಕೃತ್ಯದ ಬಗ್ಗೆ ನಿಯಂತ್ರಣಾಧಿಕಾರಿಗಳಿಗೆ ಕೇಳಿದ್ದಾರೆ.
ಅವರು ಕೇಳಿದ್ದರಿಂದ ಎಲ್ಲಿ ನಮ್ಮ ಕಪಟ ಬಯಲಾಗಿ ನೌಕರರು, ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಗೊತ್ತಾಗುತ್ತದೋ ಎಂದು ನಮ್ಮ ಡ್ಯೂಟಿಗೆ ಕಂಟಕವಾಗಬಹುದೆಂದು ಗ್ರಹಿಸಿ ಸಂಸ್ಥೆಯ ಹೆಗ್ಗಳಿಕೆಗೆ 30 ವರ್ಷಗಳು ದುಡಿದು ನನ್ನನ್ನು ಹೀನಾಯವಾಗಿ ವಜಾ ಮಾಡಿದ್ದಾರೆ. ಇವರ ಮಣ್ಣು ತಿನ್ನುವ ಕೆಲಸಗಳು ಆಧಾರಗಳ ಸಹಿತ. ಇನ್ನು ನನ್ನ ಬಳಿ ಇವರ ಎಲ್ಲ ಕಪಡಗಳಿಗೂ ದಾಖಲೆಗಳಿವೆ.
ನನ್ನನ್ನು ವಜಾ ಮಾಡಿದರೆ ಇವರ ಸುಲಿಗೆ ಬದಲಾಗುವುದಿಲ್ಲವೆಂದು ಕೆಟ್ಟ ಆಲೋಚನೆಯಿಂದ ನನ್ನನ್ನು ವಜಾ ಮಾಡಿದ್ದಾರೆ. ಆದರೆ ಇವರು ನಿಷ್ಠಾವಂತರಾದರೆ ನನ್ನ ಮೇಲೆಸಗಿರುವ ಸುಳ್ಳು ಆರೋಪಗಳನ್ನು ಸಾಬೀತು ಪಡಿಸುವವರೆಗೂ ನಾನು ಹೋರಾಟವನ್ನು ನಿಲ್ಲಿಸದೆ ಕರ್ನಾಟಕದ ಎಲ್ಲ ಸಾರ್ವಜನಿಕರಿಗೂ ನೌಕರರ ಜೀವನದ ಮೇಲೆ ಚೆಲ್ಲಾಟವಾಡುವ ಈ ದರ್ಪ ಅಧಿಕಾರಿಗಳ ನಾಟಕವನ್ನು ಬಯಲು ಮಾಡುವವರೆಗೂ ಬಿಡುವುದಿಲ್ಲ.
ಇವರು ತಿಳಿದಂತೆ ನಾನು ಮಾನಸಿಕವಾಗಿ ಕುಂದು ಅವಮಾನವಾಗಿ ಯಾರಿಗೂ ಮುಖತೋರಸದೆ ಇರುತ್ತೇನೆಂದು ಇವರು ಭ್ರಮಿಸಿರಬಹುದು. ಆದರೆ ನಾನು ಕಾನೂನು ರೀತ್ಯಾ ಹೋರಾಟ ಮಾಡುವುದು ನನ್ನ ನಿಲುವಾಗಿದೆ. ನೌಕರರನ್ನು ಬದುಕಿರುವಾಗಲೇ ಕಿತ್ತು ತಿನ್ನುವ ಅಧಿಕಾರಿಗಳು (ನಿಯಂತ್ರಣಾಧಿಕಾರಿ, ಸಂಚಲನಾಧಿಕಾರಿ ಮತ್ತು ಕಾರ್ಮಿಕ ಕಲ್ಯಾಣಾಧಿಕಾರಿ) ನಮ್ಮ ಕೋಲಾರ ವಿಭಾಗಕ್ಕೆ ಬೇಕಾ? ನಮಗೆ ಖಂಡಿತ ಬೇಡ ಇವರನ್ನು ಕೂಡಲೇ ಅಮಾನತು ಮಾಡಿ ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
Related

You Might Also Like
KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕನಿಗೆ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ನೌಕರ ಸುರೇಶ್ ಬಾಬು, ಮತ್ತೊಬ್ಬ ಸಿಬ್ಬಂದಿ ಕಿರುಕುಳ: ಆರೋಪ
ದೊಡ್ಡಬಳ್ಳಾಪುರ: KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕ ಹನುಮಂತರಾಯ ಜಳಕಿ ಎಂಬುವರಿಗೆ ಡೀಸೆಲ್ ವಿಭಾಗದ ನೌಕರ ಸುರೇಶ್ ಬಾಬು ಮತ್ತು ಇನ್ನೊಬ್ಬ ಸಿಬ್ಬಂದಿ ಲಂಚಕ್ಕೆ ಬೇಡಿಕೆ...
ನಿವೃತ್ತಿಗೆ ಮುನ್ನವೇ ನೌಕರರ ವಿಚಾರಣೆ ಮುಗಿದಿರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮದ ಖಡಕ್ ಎಚ್ಚರಿಕೆ
ಬೆಂಗಳೂರು: ವೃತ್ತಿಯಲ್ಲಿರುವ ಸಂದರ್ಭದಲ್ಲಿ ದುರ್ನಡತೆ, ಕರ್ತವ್ಯಲೋಪದಂತಹ ಆರೋಪಗಳನ್ನು ಎದುರಿಸುವ ಸರ್ಕಾರಿ ನೌಕರರು, ಅವರು ನಿವೃತ್ತರಾಗುವ ಮುನ್ನವೇ ಅವರ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ...
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...
KSRTC ಬಸ್- ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ: 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯವಾಗಿರುವ ಘಟನೆ ತಾಲೂಕಿನ...