NWKRTC-ಬ್ರೇಕ್ ಹಿಡಿಯದ ಬಸ್ಕೊಟ್ಟು ತಪ್ಪುಮಾಡಿದ ನಾಲಾಯಕ್ ಡಿಸಿ, ಡಿಎಂಇ: ತಪ್ಪಿನಿಂದ ಪಾರಾಗಲು ಹಾರಹಾಕಿ ಚಾಲಕರ ಅವಮಾನಿಸಿ ದರ್ಪ ಮೆರೆದ ದುರಹಂಕಾರಿಗಳು

- ಅಧಿಕಾರ ಮದದಲ್ಲಿ ತೇಲುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ
- ಅಮಾನತು ಮಾಡದಿದ್ದರೆ ಕೇಂದ್ರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕೂಟ
ಧಾರವಾಡ: ಬ್ರೇಕ್ ಹಿಡಿಯದ ಬಸ್ಗಳನ್ನು ಚಾಲಕರಿಗೆ ಕೊಟ್ಟಿದ್ದ ಪರಿಣಾಮ ಬಸ್ ಹಿಂದಿನಿಂದ ಮುಂದೆ ಹೋಗುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಆದರೆ, ಇದನ್ನು ಬೇಕಂತಲೇ ಇಬ್ಬರೂ ಚಾಲಕರು ಮಾಡಿದ್ದಾರೆ ಎಂದು ಅವರಿಗೆ ಹೂವಿನ ಹಾರ ಹಾಕಿ ಅಧಿಕಾರಿಗಳು ಭಾರಿ ಅವಮಾನ ಮಾಡಿರುವ ಘಟನೆ ಧಾರವಾಡದಲ್ಲಿ ನಿನ್ನೆ ನಡೆದಿದೆ.
ನಿನ್ನೆ ಅಂದರೆ ಬುಧವಾರ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ BRTS ಹುಬ್ಬಳ್ಳಿ ಘಟಕಕ್ಕೆ ಸೇರಿದ ಬಸ್ಗಳು ಬ್ರೇಕ್ ಸರಿಯಾಗಿ ಹಿಡಿಯದ ಕಾರಣ ಧಾರವಾಡ ನಗರದ ಟೋಲ್ ನಾಕಾ ಹತ್ತಿರ ಸಣ್ಣ ಮಟ್ಟದ ಅಪಘಾತವಾಗಿದೆ.
ಇನ್ನು ಈ ಟೋಲ್ ನಾಕಾಭಾಗದಲ್ಲಿ ಅವೈಜ್ಞಾನಿಕವಾಗಿ BRTS ಸಂಸ್ಥೆ ರಸ್ತೆ ನಿರ್ಮಿಸಿದ್ದರಿಂದ ಈ ಜಾಗದಲ್ಲಿ ಮಳೆ ಬಿದ್ದ ಸಂದರ್ಭದಲ್ಲಿ ನೀರು ನಿಲ್ಲುತ್ತದೆ. ಅದೇ ಜಾಗದಲ್ಲಿ ಚಾಲಕ ಜಗದೀಶ್ ಹೊಸಮನಿ 20 ಅಡಿ ಹಿಂದಿನಿಂದ (ವಾಹನ ಸಂಖ್ಯೆ KA 25 F 3475) ಬಸ್ ಬ್ರೇಕ್ ಹಾಕಿದ್ದಾರೆ. ಆದರೆ ಅದು ನಿಲ್ಲದೆ ಮುಂದೆ ಹೋಗಿ ನಾಗಪ್ಪ ಮಾದರ ಅವರು ಚಲಾಯಿಸುತ್ತಿದ್ದ ವಾಹನಕ್ಕೆ ಗುದ್ದಿದೆ.
ಈ ವೇಳೆ ಒಂದು ವಾಹನದ ಹಿಂದಿನ ಹಾಗೂ ಮತ್ತೊಂದು ಬಸ್ನ ಮುಂದಿನ ಗಾಜುಗಳು ಜಖಂ ಆಗಿದ್ದು ಚಾಲಕರ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಈ ವಿಷಯವನ್ನು ತಿಳಿದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ್ ಹಾಗೂ ಡಿಎಂಇ ಪ್ರವೀಣ್ ಆ ಚಾಲನಾ ಸಿಬ್ಬಂದಿಗಳನ್ನು ಧಾರವಾಡ ಘಟಕಕ್ಕೆ ಕರೆಸಿಕೊಂಡು ಘಟನೆಯ ವಿವರವನ್ನು ಪಡೆಯದೆ ಅವರಿಗೆ ತಿಳಿವಳಿಕೆಯನ್ನೂ ಸಹ ನೀಡದೆ ಧಾರವಾಡ ಘಟಕದ ಘಟಕ ವ್ಯವಸ್ಥಾಪಕ ಹಟ್ಟಿ ಯವರಿಂದ ಹೂವಿನ ಹಾರ ಹಾಕಿಸಿ ಅವಮಾನ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.
ಆ ಸಮಯದಲ್ಲಿ ಡಿಸಿ ಸಿದ್ದಲಿಂಗೇಶ ಧಾರವಾಡದಲ್ಲಿ ಇದ್ದು ಈ ಅಮಾನವೀಯ ಘಟನೆ ಜರುಗುವಂತೆ ಮಾಡಿದ್ದಾರೆ. ಇದನ್ನು ನೌಕರರ ಕೂಟವು ಬಲವಾಗಿ ಖಂಡಿಸಿದ್ದು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ, DME ಹಾಗೂ ಘಟಕ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಅವರನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಕೇಂದ್ರ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ಚಂದ್ರಶೇಖರ್, ವಲಯ ಮಟ್ಟದ ಕಾರ್ಯಾಧ್ಯಕ್ಷರಾದ V.G ಪೂಜಾರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಡಿಸಿ ಮತ್ತು ಡಿಎಂಇ ಇಬ್ಬರಿಗೂ ವಯಸ್ಸಾಗಿದೆ ಆದರೆ, ನೌಕರರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಪರಿಜ್ಞಾನ ಮಾತ್ರ ಇಲ್ಲ. ಜತೆಗೆ ಅಧಿಕಾರ ದರ್ಪದಿಂದ ನೌಕರರನ್ನು ಈರೀತಿ ಅವಮಾನ ಮಾಡಿದ್ದಾರಲ್ಲ, ಮೊದಲು ಇವರಿಗೆ ಹೂವಿನ ಹಾರ ಹಾಕಬೇಕು. ಕಾರಣ ಬ್ರೇಕ್ ಹಿಡಿಯದ ಬಸ್ಸನ್ನು ಕೊಟ್ಟು ಓಡಿಸುವುದಕ್ಕೆ ಹೇಳಿರುವುದು ಇವರೆ ಅಲ್ಲವಾ?
ಇನ್ನು ತಾವು ಮಾಡಿದ ತಪ್ಪನ್ನು ಮುಚ್ಚಿಕೊಂಡು ತಮ್ಮ ಕೈಯಲ್ಲಿ ಅಧಿಕಾರವಿದೆ ಎಂದು ನೌಕರರ ಮೇಲೆ ನಿಯಮ ಬಾಹಿರವಾಗಿ ಅವಮಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮೊದಲು ಇಂಥ ಕೆಲಸಕ್ಕೆ ಬಾರದ ದುರಹಂಕಾರದ ಅಧಿಕಾರಿಗಳನ್ನು ವಜಾ ಮಾಡಬೇಕು. ಇವರು ಫಿಟ್ನೆಸ್ ಬಸ್ಗಳನ್ನು ಕೊಟ್ಟರೆ ಅಪಘಾತಗಳು ಏಕಾಗುತ್ತವೆ. ಚಾಲಕರಿಗೆ ಬಸ್ಗಳ ಡ್ರೈವಿಂಗ್ ಬರುವುದಿಲ್ಲವೇ?
ಫಿಟ್ಆಗಿರುವ ಬಸ್ಗಳನ್ನು ಚಾಲಕರಿಗೆ ಕೊಡದೆ ಈ ರೀತಿ ಅಪಘಾತವಾದಾಗ ಅವರನ್ನು ಅವಮಾನ ಮಾಡುವುದು ಜತೆಗೆ ಬಸ್ಗೆ ಆಗಿರುವ ಹಾನಿಗೆ ಚಾಲಕರ ವೇತನದಲ್ಲಿ ಕಡಿತಮಾಡಿಕೊಳ್ಳುವುದು. ಇದು ಯಾವ ನ್ಯಾಯಸ್ವಾಮಿ? ನಿಜ ಹೇಳಬೇಕು ಎಂದರೆ ಇದಕ್ಕೆಲ್ಲ ನಿಮ್ಮ ಬೇಜವಾಬ್ದಾರಿತನ ಹಾಗೂ ಬಸ್ಗಳನ್ನು ಸರಿಯಾಗಿ ರಿಪೇರಿ ಮಾಡದಿರುವುದೇ ಕಾರಣ. ಅಂದಮೇಲೆ ಈಗ ಹೇಳಿ ಹೂವಿನ ಹಾರವನ್ನು ಯಾರ ಕೊರಳಿಗೆ ಹಾಕಬೇಕು? ನಿಮ್ಮಂತಹ ಕೆಲಸಕ್ಕೆ ಬಾರದ ಅಧಿಕಾರಿಗಳಿಗೆ ಅಲ್ಲವೇ ಎಂದು ನೌಕರರು ಪ್ರಶ್ನಿಸಿದ್ದಾರೆ.
ಅಲ್ಲದೆ, ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ತಾವು ಮಾಡಿದ ತಪ್ಪಿಗೆ ಚಾಲಕರಿಗೆ ಶಿಕ್ಷೆ ಕೊಟ್ಟುಬಿಡುತ್ತೀರಿ. ಇದನ್ನು ಈ ಹಿಂದೆ ಇದ್ದ ಸಂಘಟನೆಗಳು ಕೇಳುತ್ತಿರಲಿಲ್ಲ. ಆದರೆ ನಾವು ಇಂಥ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದು, ಈ ರೀತಿ ಕೃತ್ಯ ಎಸಗಿ ಚಾಲನಾ ಸಿಬ್ಬಂದಿಗೆ ಅವಮಾನ ಮಾಡಿರುವ ಈ ಮೂವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಎಂಡಿ ಪ್ರಿಯಾಂಗಾ ಅವರಲ್ಲಿ ಮನವಿ ಮಾಡಿದ್ದಾರೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...