NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಆ.28ಕ್ಕೆ ಸಂಧಾನ ಸಭೆ ವಿಫಲವಾದರೆ ಸೆ.3ರಂದು ಹೈ ಕೋರ್ಟ್‌ನಲ್ಲಿ ಪ್ರಕರಣಕ್ಕೆ ಮರುಜೀವ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿರುವ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಆ ಪ್ರಕರಣದ ವಿಚಾರಣೆ ಸೆ.3ರಂದು ಹೈ ಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ಮುಂದೆ ಬರಲಿದೆ.

ಇದೇ ಆ.6ರಂದು ಹೈ ಕೋರ್ಟ್‌ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯರೂರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸಾರಿಗೆ ನಿಗಮದ ವಕೀಲರನ್ನು ಈ ಪ್ರಕರಣ ಸಂಬಂಧ ಆಕ್ಷೇಪಣೆ (Objection) ಸಲ್ಲಿಸಿದ್ದೀರಾ ಎಂದು ಕೇಳಿತು. ಅದಕ್ಕೆ ಇನ್ನು ಹಾಕಿಲ್ಲ ಎಂದು ಹೇಳಿದ್ದರು.

ಆಗ ಇಲ್ಲ ಆ.5ರಂದು ಈ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದ್ದು ಅದು ನಾಳೆ (ಆ.7) ವಿಚಾರಣೆಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಈ ವೇಳೆ ಆ ಪ್ರಕರಣ ಬೇರೆ ಈ ಪ್ರಕರಣ ಬೇರೆ ಅದು ಪಿಐಎಲ್‌  ಹಾಕಿರುವುದು ನಾವು ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಅರ್ಜಿ ಹಾಕಿರುವುದು ಎಂದು ನೌಕರರ ಪರ ವಕೀಲ ಎಚ್‌.ಬಿ.ಶಿವರಾಜು ಹೇಳಿದ್ದರು.

ಅದಕ್ಕೆ ಆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ ನೀವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ (Objection) ಇದ್ದರೆ ಹಾಕಿ ಎಂದು ಹೇಳಿ ಪ್ರಕರಣವನ್ನು ಸೆ.3ಕ್ಕೆ ಮುಂದೂಡಿದ್ದಾರೆ.‌

ಈ ನಡುವೆ ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ಆಡಳಿತ ಮಂಡಳಿ ಜತೆ ಕಾರ್ಮಿಕ ಇಲಾಖೆಯ ಆಯುಕ್ತರು ಆ.7ರಂದು ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲಗೊಂಡಿದ್ದು ಈಗ ಆ.28ಕ್ಕೆ ಮುಂದೂಡಲ್ಪಟ್ಟಿದೆ.

ಆ.28ರಂದು ಕೂಡ ಸಭೆ ವಿಫಲವಾದರೆ ಹೈಕೋರ್ಟ್‌ನಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಹೆಚ್ಚಳವಾಗಿರುವ ಶೇ.15ರಷ್ಟು ವೇತನದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿರುವ ಸಂಬಂಧ ಮಾರ್ಚ್‌ನಲ್ಲಿ ಹಾಕಿರುವ ಪ್ರಕರಣದ ವಿಚಾರಣೆ ಸೆ.3ರಂದು ಬರಲಿದ್ದು, ಅಲ್ಲಿ ಸಭೆ ವಿಫಲವಾಗಿರುವ ಬಗ್ಗೆಯೂ ನೌಕರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತರಲಿದ್ದಾರೆ.

ಈ ವೇಳೆ ಹೈ ಕೋರ್ಟ್‌ ಕೂಡ ಪಿಐಎಲ್‌ ಸಂಬಂಧದ ಆ.7ರಂದು ಅರ್ಜಿ ವಿಚಾರಣೆ ಮಾಡಿ ಇತ್ಯರ್ಥಪಡಿಸಿದ ವೇಳೆ ಸಾರಿಗೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಸರ್ಕಾರ ಮತ್ತು ಜಂಟಿ ಕ್ರಿಯಾ ಸಮಿತಿ ಚರ್ಚಿಸಿ ಪರಿಹಾರ ಕಂಡುಕೊಳ್ಳಿ ಎಂದು ಹೇಳಿರುವುದು ಮಹತ್ವ ಪಡೆಯಲಿದೆ.

ಹೀಗಾಗಿ ಸೆ.3ರಂದು ನೌಕರರ ಪರ ವಕೀಲರಾದ ಶಿವರಾಜು ಅವರು ಸರ್ಕಾರ ನೌಕರರಿಗೆ ಕೊಡಬೇಕಿರುವುದನ್ನು ಕೊಡದೆ ಮೀನಮೇಷ ಎಣಿಸುತ್ತಿದೆ ಆದ್ದರಿಂದ ತಾವು ಸರ್ಕಾರಕ್ಕೆ ಸೂಕ್ತ ನಿರ್ದೇಶ ನೀಡಿ ನೌಕರರಿಗೆ ಸೌಲಭ್ಯ ಕೊಡಿಸಬೇಕು ಎಂದು ಮನವಿ ಮಾಡಲಿದ್ದಾರೆ.

ಈ ವಾದ ಪ್ರತಿವಾದ ಆಲಿಸಿದ ಬಳಿಕ ಹೈ ಕೋರ್ಟ್‌ ನ್ಯಾಯಪೀಠ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಸರ್ಕಾರಕ್ಕೆ ಏನು ನಿರ್ದೇಶನ ಕೊಡಲಿದೆ ಎಂಬುದರ ಬಗ್ಗೆ ನೌಕರರ ಚಿತ್ತನೆಟ್ಟಿದೆ.

Megha
the authorMegha

Leave a Reply

error: Content is protected !!