NEWSಲೇಖನಗಳು

ಸ್ವಾತಂತ್ರ್ಯ ದಿನಾಚರಣೆ  ಸನಿಹದಲ್ಲೇ ಈ ದುಷ್ಕೃತ್ಯ-ಮುಂದಿನ ಭಯಾನಕ ವಾತಾವರಣದ ಮುನ್ಸೂಚನೆಯೇ ?

ವಿಜಯಪಥ ಸಮಗ್ರ ಸುದ್ದಿ

ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರೆ ಅದು ತಪ್ಪು. ರಾಮ ಹೇಗೋ ರಹಿಮನು ಹಾಗೆ. ಆದರೆ ವಾತಾವರಣದ ಲಾಭ ಪಡೆದು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದ ಮಾತ್ರ ಖಂಡನಾರ್ಹ !.

ಸ್ವಾತಂತ್ರ್ಯ ನಂತರ ಬಂದ ಆಳುವ ಸರ್ಕಾರಗಳು, ಮಹಮ್ಮದೀಯರು ಅಲ್ಪಸಂಖ್ಯಾತರು, ನಿರಕ್ಷರಕುಕ್ಷಿಗಳು ಎಂಬ ರಿಯಾಯಿತಿಯನ್ನು ಕೊಟ್ಟುಕೊಂಡು ಬಂದಿದ್ದರ ಪರಿಣಾಮ ಇಂದು ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ !.

ಹಿಂದೊಮ್ಮೆ ಎಂಎಫ್ ಹುಸೇನ್ ಅವರಂತಹ ಕಲಾವಿದರು ಒಳ ಉಡುಪುಗಳ ಮೇಲೆ ಹಿಂದೂ ದೇವರುಗಳ ಚಿತ್ರವನ್ನು ರಚಿಸಿದ್ದರು. ಆಗ ಇದರ ಪರ-ವಿರೋಧ ಇದ್ದ ಮಂದಿ, ಬೌದ್ಧಿಕವಾಗಿ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರೆ ಹೊರತು ವಿಧ್ವಂಸಕ ಕೃತ್ಯಕ್ಕೆ ಕೈಹಾಕಿರಲಿಲ್ಲ !

ಬರಿ ಪೊಲೀಸು ಅರೆಮಿಲಿಟರಿ ಗಳಿಂದಲೇ ವಾತಾವರಣ ತಿಳಿಗೊಳಿಸಲು ಪ್ರಯತ್ನ ಮಾಡುತ್ತಿರುವ ರಾಜಕೀಯ ವ್ಯವಸ್ಥೆಯು ಪಕ್ಷಾತೀತವಾಗಿ ಆಡಳಿತ ನಡೆಸುವ ಆತ್ಮಬಲ ಕಳೆದುಕೊಂಡಿದೆ ಅಲ್ಲವೇ?

ಭಾರತ ಸ್ವಾತಂತ್ರ್ಯ ದಿನಾಚರಣೆಯ ಸನಿಹದಲ್ಲೇ ಈ ರೀತಿಯ ದುಷ್ಕೃತ್ಯ ಗಲಭೆ ಬೆಂಗಳೂರಿನಲ್ಲಿ ನಡೆದದ್ದು ಮುಂದಿನ ದಿನಗಳ ಭಯಾನಕ ವಾತಾವರಣದ ಮುನ್ಸೂಚನೆ ಇದ್ದಂತೆ ತೋರುತ್ತಿಲ್ಲ ವೇ?

ಜಾತೀಯತೆ ನಾಶವಾಗಲಿ ಎಂದು ಜನರಿಗೆ ಉಪದೇಶ ಕೊಟ್ಟು ಜಾತಿ ಮನೋಭಾವವನ್ನು ಹೆಚ್ಚು ಮಾಡುತ್ತಿರುವ ರಾಜಕೀಯ ವ್ಯವಸ್ಥೆಯು ಕೇವಲ ವೋಟು ಸೀಟುಗಳಿಗಾಗಿ ಸಮಸ್ಯೆಯನ್ನು ಬ್ಲೋ ಅಪ್ ಮಾಡುತ್ತಿದೆ.

ಜಾತ್ಯತೀತತೆ ಎಂಬ ಪದವೇ ಈಗ ಕ್ಲೀಷೆಯಾಗಿದೆ. ಇದನ್ನರಿತೇ ನಮ್ಮ ಬಸವಣ್ಣನವರು ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ, ಸಿಹಿ ಆಗಬಲ್ಲದೇ? ಕಹಿ ಯಹುದಲ್ಲದೆ? ಎಂಬ ಮಾತಿನ ತಾತ್ಪರ್ಯವನ್ನು ಗ್ರಹಿಸಿ ಪ್ರೀತಿ ಸಾಮರಸ್ಯ ವಿಶ್ವಾಸಗಳು ಮನಸ್ಸಿನಾಳದಿಂದ ಸ್ವಯಂಪ್ರೇರಣೆಯಿಂದ ಕಾರಂಜಿಯಂತೆ ಹೊರಹೊಮ್ಮಿ ಪುಟಿಯುವ ಮೌಲ್ಯಗಳನ್ನು ಆಗಿ ರೂಪಿಸಬೇಕಾಗಿದೆ.

l ಆರ್. ವೆಂಕಟರಾಜು,  ಮಾಜಿ ಸದಸ್ಯರು  ಕರ್ನಾಟಕ ನಾಟಕ  ಅಕಾಡೆಮಿ ಬೆಂಗಳೂರು

1 Comment

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ