CrimeNEWSನಮ್ಮರಾಜ್ಯ

ವಂಚಕರ ನಂಬಿ ಹಣ ದುಪ್ಪಟ್ಟು ಆಸೆಗೆ ಬಿದ್ದ ಮಹಿಳೆ ಕೋಟಿ ರೂ. ಕಳೆದುಕೊಂಡರು!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯೂಟ್ಯೂಬ್​ ಹಾಗೂ ಇನ್​ಸ್ಟಾಗ್ರಾಮ್​​​ ಬಳಕೆದಾರರೇ​​ ಬಿ ಅಲರ್ಟ್​. ಹಣ ಸಿಗುತ್ತೆ ಅಂತ ನೀವೇನಾದ್ರೂ ಬಿಟ್ಟಿ ದುಡ್ಡಿಗೆ ಆಸೆ ಪಟ್ರೆ ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್ ಕೂಡ ಇಲ್ಲವಾಗುವುದು ಎಚ್ಚರ..! ಹೌದು! ಬಿಟ್ಟಿ ಹಣ ಸಿಗುತ್ತೆ ಅಂತ ಮಹಿಳೆಯೊಬ್ಬಳು ಕಳೆದೊಕೊಂಡಿರೋದು ಬರೋಬ್ಬರಿ ಎರಡೂವರೆ ಕೋಟಿ.

ಈ ನಡುವೆಯೂ ತುಸು ಖುಷಿಯ ವಿಯ ಎಂದರೆ ಮಹಿಳೆ ಮಾಡಿದ ಅದೊಂದು ಚಾಲಾಕಿತನದಿಂದ ಇಲ್ಲಿ ಕಳೆದುಕೊಂಡಿದ್ದ ಎರಡೂವರೆ ಕೋಟಿ ರೂ.ಗಳಲ್ಲಿ ಒಂದೂವರೆ ಕೋಟಿ ವಾಪಸ್​​ ಪಡೆದಿದ್ದಾರೆ.

ಯೂಟ್ಯೂಬ್​​ ಲಿಂಕ್​ ಲೈಕ್​ ಮಾಡಿ ಹಣ ಗೆಲ್ಲಿ ಅಂತಾ ಮೆಸೇಜ್​​ ಬಂದಿದೆ. ಇದನ್ನು ನೋಡಿದ ಕೂಡಲೇ ಮಹಿಳೆ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾಳೆ. ಅದಕ್ಕೆ ವಂಚಕರು ಥ್ಯಾಂಕ್ಯೂ ಅಂತಾ ಮೆಸೇಜ್​ ಕಳುಹಿಸಿದ್ದಾರೆ. ಬಳಿಕ ಇದೇ ರೀತಿ ಹಣ ಇನ್ವೆಸ್ಟ್​​​ ಮಾಡಿ ಡಬಲ್​ ಆಗುತ್ತೆ ಅಂತಾ ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಡಬಲ್​ ಆಗುತ್ತದೆ ಎಂಬುವುದನ್ನು ನಂಬಿ ಇನ್ವೆಸ್ಟ್​ ಮಾಡ್ತೀನಿ ಅಂತಾ ಹೇಳಿದ್ದಾಳೆ.

ಹೀಗೆ ಶುರುವಾಗಿದ್ದ ವಂಚಕರ ಜಾಲಕ್ಕೆ ಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆಂಟ್ರಪ್ರನ್ಯೂವರ್​ ಆಗಿ ಕೆಲಸ ಮಾಡ್ತಿದ್ದ 52 ವರ್ಷದ ಮಹಿಳೆ. ಹಂತ ಹಂತವಾಗಿ ಬರೋಬ್ಬರಿ 2.7 ಕೋಟಿ ಹಣ ಇನ್ವೆಸ್ಟ್​​ ಮಾಡಿದ್ರು. ಆದ್ರೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ಹಣವನ್ನ ಮಹಿಳೆ ವಾಪಸ್​ ಪಡೆಯೋದರಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ? ಏಪ್ರಿಲ್​ನಲ್ಲಿ ಖದೀಮರಿಂದ ಮಹಿಳೆಗೆ ಒಂದು ಮೆಸೇಜ್​ ಬಂದಿತ್ತು. ಆ ಮೆಸೇಜ್​ನಲ್ಲಿ ಯೂಟ್ಯೂಬ್​ ಲಿಂಕ್​ ಲೈಕ್​ ಮಾಡುವಂತೆ ಆಮೀಶ ಒಡ್ಡಿದ್ರು. ಈ ಮೆಸೇಜ್​​ಗೆ ಮಹಿಳೆ ರಿಪ್ಲೆ ಮಾಡಿ ಬಳಿಕ ಯೂಟ್ಯೂಬ್​ ಚಾನೆಲ್​ಗೆ ಲೈಕ್ ಮಾಡಿದ್ರು. ಹೀಗೆ ಲೈಕ್​ ಮಾಡಿದ್ರಿಂದ ಮಹಿಳೆಗೆ 10 ಸಾವಿರ ಅಮೌಂಟ್‌ಗೆ​ ಬಂದಿತ್ತು. ಬಳಿಕ ಮಹಿಳೆ ಜಾಲಕ್ಕೆ ಬಿದ್ದಿದ್ದು, ಕನ್ಫರ್ಮ್​​ ಆದ ಮೇಲೆ ಇನ್ವೆಸ್ಟ್​​ ಮಾಡುವಂತೆ ಹಾಗೂ ಹಣ ಡಬಲ್​ ಆಗುತ್ತದೆ ಎಂದು ವಂಚಕರು ಆಫರ್ ಕೊಟ್ಟಿದ್ದರು.

ಅದಕ್ಕೆ ಮಹಿಳೆ ಯೆಸ್​ ಎಂದಿದ್ರು, ಬಳಿಕ ಮಹಿಳೆಯನ್ನ ಟೆಲಿಗ್ರಾಂ ಗ್ರೂಪ್​ಗೆ ಸೇರಿಸಿಕೊಂಡರು. ಈ ​ಗ್ರೂಪ್​ನಲ್ಲಿದ್ದ ನೂರಾರು ಮಂದಿ ಹಣ ಡಬಲ್​ ಆದ ಬಗ್ಗೆ ಮೆಸೇಜ್​ ಹಾಕ್ತಿದ್ರು. ಇದನ್ನು ನಂಬಿದ್ದ ಮಹಿಳೆ ಹಣವನ್ನು ಹಂತಹಣತವಾಗಿ ಅಂದರೆ 2.7 ಕೋಟಿ ಹಣ ಇನ್ವೆಸ್ಟ್​ ಮಾಡಿದ್ರು.

ಬಳಿಕ ಪದೇಪದೆ ಬರ್ತಿದ್ದ ಮೆಸೇಜ್​ನಿಂದ ಅನುಮಾನ ಬಂದಿದ್ದ ಮಹಿಳೆ ಮನೆಯವರಿಗೆ ವಿಚಾರ ತಿಳಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೊಟ್ಟ ದೂರಿನಿಂದ ಖದೀಮರ ಬ್ಯಾಂಕ್​​ ಅಕೌಂಟ್​ ಟ್ರೇಸ್​ ಮಾಡಿ ಫ್ರೀಜ್​ ಮಾಡಿದ್ರಿಂದ ಮಹಿಳೆ ಕಳೆದುಕೊಂಡಿದ್ದ 2.7 ಕೋಟಿ ಹಣದಲ್ಲಿ 1.7 ಕೋಟಿ ವಾಪಸ್ಸಾಗಿದೆ. ಅದೇನೆ ಇರಲಿ ಪೊಲೀಸ್​​ ಇಲಾಖೆ ಹಾಗೂ ಸರ್ಕಾರ ಎಷ್ಟೇ ಎಚ್ಚರವಹಿಸಿದ್ರೂ ಖದೀಮರ ಆಟಕ್ಕಂತೂ ಕಡಿವಾಣ ಬೀಳುತ್ತಿಲ್ಲ. ಇನ್ಮುಂದೆ ಗೊತ್ತಿಲ್ಲದ ಲಿಂಕ್​ ಕ್ಲಿಕ್​ ಮಾಡೋ ಮುನ್ನ ಹುಷಾರಾಗಿರಿ.

ಇನ್ನು ಆ ಮಹಿಳೆ ಒಂದು ಕೋಟಿ ಕಳೆದುಕೊಂಡಿದ್ದು ಅದನ್ನು ಸಂಪಾದಿಸಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಅದರೆ ಕಳೆದುಕೊಂಡಿರುವುದು ಮಾತ್ರ ಸಣ್ಣ ಅಮೌಂಟ್‌ ಅಲ್ಲ…!?

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?