ನಿಮ್ಮ ಹೊಲಕ್ಕೆ ಹೋಗುವುದು ನಿಮ್ಮ ಹಕ್ಕು: ಅಕ್ಕ-ಪಕ್ಕ ಜಮೀನವರು ದಾರಿ ಕೊಡ್ತಿಲ್ವಾ? ಭಯಬೇಡ ಹೀಗೆ ಮಾಡಿ!

ಬೆಂಗಳೂರು: ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಹೀಗಾಗದರೆ ಏನು ಮಾಡೋದು ಎಂದು ಎಷ್ಟೋ ಜನ ರೈತರು ಕಾನೂನುನ ಅರಿವಿಲ್ಲದೆ ವ್ಯವಸಾಯ ಮಾಡುವುದನ್ನೇ ನಿಲ್ಲಿಸಿದ್ದಾರೆ.
ಆದರೆ, ನಮ್ಮ ರೈತ ಬಾಂಧವರೇ (Farmers), ಬೆಳ್ಳಂಬೆಳಗ್ಗೆ ಎದ್ದು ಹೊಲದ ಕಡೆ ಮುಖ ಮಾಡೋದೆ ನಿಮ್ಮ ಜೀವನ. ಹೊಲವೇ ದೇವರು, ಅದೇ ಅನ್ನ ನೀಡೋ ತಾಯಿ. ಹಗಲು ರಾತ್ರಿ ಬೆವರಿಳಿಸಿ ದುಡಿಯೋ ಅನ್ನದಾತನಿಗೆ ಕೆಲವೊಮ್ಮೆ ತನ್ನ ಜಮೀನಿಗೆ (Property) ಹೋಗೋಕೆ ಒಂದು ದಾರಿನೇ ಇರಲ್ಲ. ಇದು ಎಂಥಾ ವಿಪರ್ಯಾಸ ಅಲ್ವಾ? ಹಲವು ಹಳ್ಳಿಗಳಲ್ಲಿ ಇವತ್ತಿಗೂ ಈ ಸಮಸ್ಯೆ ಜೀವಂತವಾಗಿದೆ. ಸ್ವಂತ ಜಮೀನು ಇರುತ್ತೆ, ಇಲ್ಲ ಬಾಡಿಗೆಗೆ ಪಡೆದು ವ್ಯವಸಾಯ ಮಾಡ್ತಿರ್ತಾರೆ.
ಟ್ರ್ಯಾಕ್ಟರ್, ಎತ್ತು, ಗೊಬ್ಬರ, ಕೃಷಿ ಉಪಕರಣಗಳನ್ನು ಆ ಹೊಲಕ್ಕೆ ತಗೊಂಡು ಹೋಗಬೇಕು. ಆದರೆ ಅಕ್ಕಪಕ್ಕದ ಜಮೀನಿನ ಮಾಲೀಕರು, “ನಮ್ಮ ಜಮೀನಿನಲ್ಲಿ ಓಡಾಡಂಗಿಲ್ಲ, ದಾರಿ ಬಿಡಲ್ಲ,” ಅಂತ ಕಾಲು ಕೆರೆದು ಜಗಳಕ್ಕೆ ಬರ್ತಾರೆ. ಇದರಿಂದಾಗಿ ಎಷ್ಟೋ ರೈತರು ಕಂಗಾಲಾಗಿ, ವ್ಯವಸಾಯವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಹೀಗಾದರೆ ನಾವು ಏನ್ ಮಾಡೋದು? ದಾರಿ ಕೊಡಲ್ಲ ಅಂದ್ರೆ ಸುಮ್ಮನೆ ಕೂರಬೇಕಾ ಎಂದು ಯೋಚನೆ ಮಾಡಬೇಡಿ. ನೀವು ಖಂಡಿತ ಸುಮ್ಮನೆ ಕೂರಬೇಕಾಗಿಲ್ಲ. ನಿಮಗೂ ಒಂದು ಹಕ್ಕಿದೆ, ನಿಮ್ಮ ಪರವಾಗಿ ನಿಲ್ಲೋಕೆ ಕಾನೂನಿದೆ. ಈ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕು.
ಏನಿದು ದಾರಿಯ ಹಕ್ಕಿನ ಕಾನೂನು?: ಭಾರತೀಯ ಕಾನೂನಿನಲ್ಲಿ “ಸರಾಗಗೊಳಿಸುವ ಕಾಯ್ದೆ, 1882” (Indian Easements Act, 1882) ಇದೆ. ಇದರಲ್ಲಿ ಜಮೀನಿನ ದಾರಿಯ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ, ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲದಿದ್ದರೆ, ಪಕ್ಕದ ಜಮೀನಿನವರು ನಿಮಗೆ ದಾರಿ ಮಾಡಿಕೊಡಲೇಬೇಕು. ಇದಕ್ಕೆ ಅವಶ್ಯಕತೆಯ ಸುಲಭಾನುಭೋಗ (Easement of Necessity) ಎನ್ನುತ್ತಾರೆ.
ಸರಳವಾಗಿ ಹೇಳಬೇಕೆಂದರೆ, ಒಂದು ಜಮೀನಿನ ಹಿಂದೆ ಇನ್ನೊಂದು ಜಮೀನು ಇದ್ದರೆ, ಮುಂದಿರುವ ಜಮೀನಿನ ಮಾಲೀಕ ಹಿಂದಿನ ಜಮೀನಿಗೆ ದಾರಿ ಬಿಟ್ಟುಕೊಡಲೇಬೇಕು. ಇದು ಅವರು ನಿಮಗೆ ಕೊಡುವ ಔದಾರ್ಯವಲ್ಲ, ಅದು ನಿಮ್ಮ ಕಾನೂನಾತ್ಮಕ ಹಕ್ಕು. ಒಂದು ವೇಳೆ ಅವರು ನಿರಾಕರಿಸಿದರೆ, ನೀವು ಅವರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಬಹುದು.
ಹಿಂದೆ ದಾರಿ ಇದ್ದು ಈಗ ಮುಚ್ಚಿದ್ರೆ?: ಇನ್ನೊಂದು ಪ್ರಮುಖ ವಿಚಾರವೆಂದರೆ, ಈ ಹಿಂದೆ ನಿಮ್ಮ ಜಮೀನಿಗೆ ಹೋಗಲು ಒಂದು ದಾರಿ ಇತ್ತು, ಆದರೆ ಈಗ ಪಕ್ಕದವರು ಅದನ್ನು ಮುಚ್ಚಿಹಾಕಿದ್ದಾರೆ ಅಥವಾ ಬೇಲಿ ಹಾಕಿದ್ದಾರೆ ಎಂದಾದರೆ, ನೀವು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗಬಹುದು. ಹಿಂದಿನಿಂದಲೂ ಇದೇ ದಾರಿಯನ್ನು ಬಳಸುತ್ತಿದ್ದೆವು, ಈಗ ತೊಂದರೆಯಾಗಿದೆ ಎಂದು ನೀವು ಸಾಬೀತುಪಡಿಸಿದರೆ, ನ್ಯಾಯಾಲಯವು ದಾರಿಯನ್ನು ಪುನಃ ತೆರವುಗೊಳಿಸಲು ಆದೇಶ ನೀಡುತ್ತದೆ.
ಹೊಸ ದಾರಿ ನಿರ್ಮಿಸಿಕೊಳ್ಳುವ ಹಕ್ಕು!: ಅಷ್ಟೇ ಅಲ್ಲ, ನಿಮ್ಮ ಜಮೀನಿಗೆ ದಾರಿಯೇ ಇಲ್ಲದಿದ್ದಾಗ, ಹೊಸ ದಾರಿಯನ್ನು ನಿರ್ಮಿಸಿಕೊಳ್ಳಲು ಕೂಡ ಕಾನೂನಿನಲ್ಲಿ ಅವಕಾಶವಿದೆ. ಟೆನೆನ್ಸಿ ಆಕ್ಟ್ನ ಸೆಕ್ಷನ್ 251ರ ಅಡಿಯಲ್ಲಿ, ನೀವು ನಿಮ್ಮ ಕೃಷಿ ಚಟುವಟಿಕೆಗಳಿಗಾಗಿ ಹೊಸ ರಸ್ತೆಯನ್ನು ನಿರ್ಮಿಸಿಕೊಳ್ಳಲು ಅನುಮತಿ ಕೋರಬಹುದು. ಹೀಗೆ ರೈತರಿಗೆ ಕಿರಿಕಿರಿ ಮಾಡುವ ಕೆಲವರಿಂದ ರಕ್ಷಣೆ ನೀಡುವುದಕ್ಕೆ 1882 ಕಾಯ್ದೆ ಇರುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ.
ಇನ್ನು ತಾಜಾ ನಿದರ್ಶನವಾಗಿ ತಿಳಿಸಬೇಕು ಎಂದರೆ, ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಹಿಳೆಯೊಬ್ಬರಿಗೆ ಅವರ ಜಮೀನಿಗೆ ಹೋಗಲು ಅಕ್ಕಪಕ್ಕದವರು ದಾರಿ ಬಿಡದಿದ್ದಕ್ಕೆ ಆಕೆ 3 ವರ್ಷಗಳಿಂದ ವ್ಯವಸಾಯ ಮಾಡಲಾಗಲ್ಲಿ. ಆದರೆ ಕೆಲ ಸಂಘಟನೆಗಳ ನಾಯಕರ ಜತೆಗೂಡಿ ಆಕೆ ತಹಸೀಲ್ದಾರ್ ಹಾಗೂ ಎಸಿ ಅವರಿಗೆ ದೂರು ನೀಡಿ ಪ್ರಸ್ತುತ ಖುದ್ದು ತಹಸೀಲ್ದಾರ್ ಹಾಗೂ ಎಸಿ ಅವರೆ ಸ್ಥಳಕ್ಕೆ ಬಂದು ದಾರಿ ಬಿಡಿಸಿಕೊಟ್ಟಿದ್ದಾರೆ.
Related

You Might Also Like
KSRTC: ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಗುಜರಿ, ತಾಂತ್ರಿಕ ದೋಷವಿರುವ ಬಸ್ಗಳ ರಸ್ತೆಗಿಳಿಸಿ ಜೀವದ ಜತೆ ಚೆಲ್ಲಾಟ
ಕನಕಪುರ: ಗುಜರಿ ಬಸ್, ತಾಂತ್ರಿಕ ದೋಷವಿರುವ ಬಸ್ಗಳನ್ನು ರಸ್ತೆಗಿಳಿಸಬಾರದೆಂದು ಹೈಕೋರ್ಟ್ ತಾಕೀತು ಮಾಡಿದ್ದರೂ ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಎಲ್ಲ ವಿಭಾಗಗಳ ಅಧಿಕಾರಿಗಳು...
11 ವರ್ಷಗಳಲ್ಲಿ ಮಹತ್ವದ ಪರಿವರ್ತನೆ ಹೊಂದಿದ ದೇಶದ ಆರೋಗ್ಯ ಕ್ಷೇತ್ರ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅಭಿಮತ
ಆದಿಚುಚನಗಿರಿ ವಿವಿ ಕ್ಯಾಂಪಸ್ ಉದ್ಘಾಟನೆ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11...
ಲಿವಿಂಗ್ ಟು ಗೆದರ್ನಲ್ಲಿದ್ದ ಯುವತಿ ಗರ್ಭಿಣಿ- ಮಗುವಿಗೆ ಜನ್ಮನೀಡಿದ ಕೆಲವೇ ನಿಮಿಷಗಳಲ್ಲಿ ಆಕೆ ಮೃತ: ಯುವಕ ಪರಾರಿ
ಬೆಂಗಳೂರು: ಲಿವಿಂಗ್ ಟು ಗೆದರ್ನಲ್ಲಿದ್ದ ಯುವತಿ ಗರ್ಭಿಣಿಯಾದ ನಂತರ ಯುವಕ ಕೈಕೊಟ್ಟಿದ್ದು, ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಆಕೆ ಮೃತಪಟ್ಟಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ...
BMTC: 87 ನಿರ್ವಾಹಕರಿಗೆ TC ಹುದ್ದೆಗೆ ಮುಂಬಡ್ತಿ- ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಸಿಪಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 87 ನಿರ್ವಾಹಕರನ್ನು ಸಂಚಾರಿ ನಿಯಂತ್ರಕ (TC) ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು...
ಬೆಂ.ಗ್ರಾಮಾಂತರ: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮ- ವಾಹನ, ಸಾರ್ವಜನಿಕರ ಪ್ರವೇಶ ನಿಷೇಧ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಳೆ (ಜೂ.20) ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದಲ್ಲಿನ ಬಿ.ಜಿ.ಎಸ್ ಆಸ್ಪತ್ರೆಯ ನೂತನ ಘಟಕದ ಕಟ್ಟಡ...
ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯು ಆರು ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ ಪ್ರವೇಶಕ್ಕೆ ಅರ್ಜಿ...
ಮಾವಿನ ಬೆಂಬಲ ಬೆಲೆ ನಿಗದಿಗೆ ಆಹಾರ ಸಚಿವ ಮುನಿಯಪ್ಪ ಒತ್ತಾಯ
ಬೆಂಗಳೂರು: ಮಾವಿಗೆ ಬೆಂಬಲ ಬೆಲೆ ಷೋಷಣೆ ಮಾಡಲು ಸರ್ಕಾರವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟದ...
ವಿವೇಚನಾತ್ಮಕವಾಗಿ ನೈಸರ್ಗಿಕ ಸಂಪತ್ ಬಳಸಿದರಷ್ಟೇ ಉಳಿಗಾಲ: ಸಚಿವ ಈಶ್ವರ ಖಂಡ್ರೆ
ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿ ನವೀಕೃತ ಮತ್ತು ಜೈವಿಕ ಇಂಧನ ಬಳಕೆಗೆ ಕರೆ ಬೆಂಗಳೂರು: ಪರಿಸರ ಸ್ನೇಹಿಯಾದ ನವೀಕರಿಸಬಹುದಾದ ಮತ್ತು ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ...