NEWSನಮ್ಮರಾಜ್ಯಬೆಂಗಳೂರು

BMTC: ಇಂದು ಬೆಳಗ್ಗೆ 6ರಿಂದ ರಾತ್ರಿ 10ಗಂಟೆ ವರೆಗೂ ಟಿಕೆಟ್‌ ಚೆಕಿಂಗ್‌ಗೆ 120 ಸಿಬ್ಬಂದಿಗಳ ನಿಯೋಜನೆ 

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗ ತನಿಖಾಧಿಕಾರಿಗಳನ್ನು ಇಂದು ಎರಡೂ ಪಾಳಿಗಳಲ್ಲಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ನಿಯೋಜಿಸಿದ್ದಾರೆ.

ಇಂದು (ಜುಲೈ 9ರಂದು) ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ವರೆಗೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ವರೆಗೆ ವಿಶೇಷ ಮಾರ್ಗ ತನಿಖಾ ಕಾರ್ಯಕ್ಕಾಗಿ ತಲಾ 60 ಸಂಚಾರ ಸಿಬ್ಬಂದಿಗಳ ನಿಯೋಜನೆ ಮಾಡಿ ಕಾರ್ಯಚರಣೆಗೆ ಇಳಿಸಲಾಗಿದೆ.

ಸಂಸ್ಥೆಯ ಆದಾಯ ಕುಂಠಿತಗೊಂಡಿದ್ದು, ಸಂಸ್ಥೆಯ ವಾಹನಗಳಲ್ಲಿ ಸಾರಿಗೆ ಆದಾಯ ಸೋರಿಕೆ ತಡೆಗಟ್ಟಿ ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸುವಂತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಸಾರಿಗೆ ಆದಾಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಜುಲೈ 9ರಂದು ಮಂಗಳವಾರ, ಮೊದಲನೇ ಪಾಳಿ (06.00 ರಿಂದ 14.00) ಹಾಗೂ ಎರಡನೇ ಪಾಳಿ (14.00 ರಿಂದ 22.00ರವರೆಗೆ) ವಿಶೇಷ ಮಾರ್ಗ ತನಿಖೆ ನಡೆಯಲಿದೆ.

ಇನ್ನು ಮಾರ್ಗ ಪತ್ರಗಳ ತಿದ್ದುಪಡಿ, ಕಡಿಮೆ/ ಹೆಚ್ಚುವರಿ ದರದ ಚೀಟಿಗಳನ್ನು ವಿತರಿಸುವುದು, ಅನಧಿಕೃತ ಚೀಟಿಗಳನ್ನು ಹೊಂದಿರುವುದು, ಚೀಟಿಗಳನ್ನು ಮರುವಿತರಣೆ, ಪಾಸುಗಳ ಮರು ಮಾರಾಟ, ಶಕ್ತಿ ಯೋಜನೆ ಉಚಿತ ಚೀಟಿಗಳ ದುರುಪಯೋಗ ಪ್ರಕರಣಗಳ ನಿಗಾವಹಿಸಲು ಈ ವಿಶೇಷ ಮಾರ್ಗ ತನಿಖಾ ಕಾರ್ಯವನ್ನು ಘಟಕ/ ಬಸ್ ನಿಲ್ದಾಣ/ ವಲಯ/ ಕೇಂದ್ರ ಕಚೇರಿ ಮತ್ತು ಸಾರಥಿ/ ಭದ್ರತಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹೀಗಾಗಿ ಅಧಿಕಾರಿಗಳ ಕಚೇರಿ ವಾಹನ, ಸಾರಥಿ/ ಘಟಕ ವಾಹನಗಳನ್ನು ಉಪಯೋಗಿಸಿ, ಹೆಚ್ಚು ತಂಡಗಳನ್ನು ನಿಯೋಜಿಸಿ ಎಲ್ಲ ವರ್ಗದ ಸಾರಿಗೆಗಳಲ್ಲಿ ತನಿಖೆಗೆ ಒಳಪಡಿಸಲು ಪರಿಣಾಮಕಾರಿ ಮಾರ್ಗ ತನಿಖಾ ಕಾರ್ಯ ಕೈಗೊಳ್ಳಲು ವಿಶೇಷ ತನಿಖೆ ಮಾಡಲಾಗುತ್ತಿದೆ.

ಇಂದು ಈ ವಿಶೇಷ ತನಿಖಾ ಕಾರ್ಯದ ಅವಧಿಯಲ್ಲಿ ಯಾವುದೇ ಅನುಸೂಚಿ ವಾಹನ ರದ್ದಾಗದೇ ನಿಗದಿತ ಸಮಯಕ್ಕೆ ಸರಿಯಾಗಿ ಮಾರ್ಗದ ಮೇಲೆ ಕಾರ್ಯಾಚರಣೆ ಮಾಡಲು ಎಲ್ಲ ಘಟಕ ವ್ಯವಸ್ಥಾಪಕರು/ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಈ ವಿಶೇಷ ತನಿಖಾ ಕಾರ್ಯಕ್ಕಾಗಿ ನಿಯೋಜಿಸಿರುವ ಸಿಬ್ಬಂದಿಗಳ ವಿವರದ ಪಟ್ಟಿಯನ್ನು ಸಹ ನೀಡಲಾಗಿದ್ದು, ಬಹುತೇಕ ಸಂಸ್ಥೆಯ ಎಲ್ಲ ಘಟಕ ವ್ಯವಸ್ಥಾಪಕರು, ATS, TI, TC ಹೀಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ತಪ್ಪದೇ ವಿಶೇಷ ತನಿಖಾ ಕಾರ್ಯಕ್ಕೆ ನಿಗದಿಪಡಿಲಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ