CrimeNEWSನಮ್ಮರಾಜ್ಯ

ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪೊಲೀಸ್‌ ಪ್ರಕರಣವನ್ನು ಸರ್ಕಾರ ವಾಪಸ್‌ ಪಡೆಯಲು ಅವಕಾಶವಿದೆಯೇ..?

ಸುಪ್ರೀಂ ಕೋರ್ಟ್‌ ವಕೀಲರು ಏನು ಹೇಳುತ್ತಾರೆ l ಡ್ಯೂಟಿಗೆ ಹೋಗಲು ನೌಕರರು ಏನು ಮಾಡಬೇಕು?

H B Shivaraju, Advocate.
ವಿಜಯಪಥ ಸಮಗ್ರ ಸುದ್ದಿ

“ಯಾವುದೇ ಒಂದು ಕ್ರಿಮಿನಲ್‌ ಪ್ರಕರಣವನ್ನು ಸರ್ಕಾರ ವಾಪಸ್‌ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಅದರದ್ದೇ ಆದ ಕೆಲವು ನಿಯಮಗಳು ಇರುತ್ತವೆ. ಆ ನಿಯಮದ ಪ್ರಕಾರವೆ ಕೇಸ್‌ಗಳನ್ನು ವಾಪಸ್‌ ಪಡೆಯಬೇಕು. ಹಾಗಂದ ಮಾತ್ರಕ್ಕೆ ಅದು ತುಂಬ ಜಟಿಲವಾದ ಸಮಸ್ಯೆ ಎಂದು ಭಾವಿಸಬೇಕಿಲ್ಲ. ಆದರೆ ಸರ್ಕಾರ ಮನಸ್ಸು ಮಾಡಬೇಕು ಅಷ್ಟೆ. ಇನ್ನು ಸಾರಿಗೆ ನೌಕರರ ವಿಷಯದಲ್ಲೂ ಇದೆ ನಡೆಯುತ್ತಿದೆ. ಕಳೆದ ಸುಮಾರು 2 ವರ್ಷಗಳಿಂದಲೂ ನೌಕರರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿ ಅವರನ್ನು ಇನ್ನು ಅಲೆಸಲಾಗುತ್ತಿದೆ. ಈ ಬಗ್ಗೆ ವಿಜಯಪಥದೊಂದಿಗೆ ಮಾತನಾಡಿರುವ ಸುಪ್ರೀಂ ಕೋರ್ಟ್‌ ಹಾಗೂ ಹೈ ಕೋರ್ಟ್‌ ವಕೀಲರಾದ ಶಿವರಾಜು ಎಚ್‌.ಬಿ. ಅವರು ಏನು ಹೇಳಿದ್ದಾರೆ” …

ಬೆಂಗಳೂರು: ಯಾವುದೇ ಒಂದು ಕ್ರಿಮಿನಲ್‌ ಪ್ರಕರಣವನ್ನು ಸರ್ಕಾರ ವಾಪಸ್‌ ತೆಗೆದುಕೊಳ್ಳಬೇಕು ಅಂದರೆ ಅದಕ್ಕೆ ಅದರದ್ದೇ ಆದಂತಹ ಕೆಲವು ನಿಯಮಗಳಿವೆ. ಭಾರತ ದಂಡ ಸಂಹಿತೆ ಹಾಗೂ ದಂಡ ಪ್ರಕ್ರಿಯೆಯಡಿಯಲ್ಲಿ ಬರುವಂತಹ ಸಕ್ಷನ್‌ಗಳನ್ನು ಉಲ್ಲೇಖಿಸಿ ನಂತರದಲ್ಲಿ ಸರ್ಕಾರ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ.

ಅಂದರೆ ಮೊದಲಿಗೆ ಗೃಹ ಇಲಾಖೆಯ ಕಾರ್ಯದರ್ಶಿಯವರ ಜತೆ ಚರ್ಚೆಯನ್ನು ನಡೆಸಬೇಕು. ಆ ನಂತರ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗಳು ಒಟ್ಟಿಗೆ ಸಭೆಯನ್ನು ಸೇರಿ ತದನಂತರದಲ್ಲಿ ಆ ರಾಜ್ಯದ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಬೇಕು.

ಇನ್ನು ಮುಖ್ಯಮಂತ್ರಿಯವರ ವಿವೇಚನಾನುಸಾರ ಮತ್ತೆ ಗೃಹ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವರದಿಯೊಳಗೊಂಡತೆ ಮತ್ತೊಂದು ಸಭೆ ಸೇರಿ ಚರ್ಚಿಸಬೇಕು. ಆ ನಂತರದಲ್ಲಿ ಸರ್ಕಾರಿ ಅಭಿಯೋಜನಾಲಯದ ಮುಖ್ಯಸ್ಥರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಬೇಕು. ಆ ನಂತರದಲ್ಲಿ ಸರ್ಕಾರಿ ಅಭಿಯೋಜಕರಿಂದ ಯಾವ ನ್ಯಾಯಾಲಯದಲ್ಲಿ ಪ್ರಕರಣವಿದೆ. ಅದು ಯಾವ ಹಂತದಲ್ಲಿದೆ ಎಂಬುದನ್ನು ಅಭಿಯೋಜನಾಲಯದ ಮುಖ್ಯಸ್ಥರು ತಿಳಿದುಕೊಳ್ಳಲು ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚೆ ನಡೆಸುತ್ತಾರೆ.

ಬಳಿಕ ಪ್ರಕರಣಗಳ ವಿವರ ಪಡೆದುಕೊಂಡು ಮತ್ತೆ ಗೃಹ ಕಾರ್ಯದರ್ಶಿ ಅವರೊಂದಿಗೆ ಅಭಿಯೋಜನಾಲಯದ ಮುಖ್ಯಸ್ಥರು ಸಭೆಸೇರಿ ಅದನ್ನು ನೋಟಿಫಿಕೇಷನ್‌ ಮಾಡಿ ತದನಂತರದಲ್ಲಿ ಆ ಪ್ರಕರಣಗಳನ್ನು ವಾಪಸ್‌ ಪಡೆಯಲು ಅವಕಾಶವಿರುತ್ತದೆ.

7 ವರ್ಷದೊಳಗಿನ ಶಿಕ್ಷೆಯೊಳಗೊಂಡ ಪ್ರಕರಣವೇ? ಇಲ್ಲಿ ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಒಂದು ಪ್ರಕರಣವನ್ನು ವಾಪಸ್‌ ಪಡೆಯಲು ಆ ಪ್ರಕರಣ ಪ್ರಮುಖವಾದಂತಹ ಪ್ರಕರಣವೇ ಅಥವಾ ಪ್ರಮುಖವಾದಂತಹ ಪ್ರಕರಣವಲ್ಲವೇ ಮತ್ತು 7 ವರ್ಷದೊಳಗಿನ ಶಿಕ್ಷೆಯೊಳಗೊಂಡ ಪ್ರಕರಣವೇ ಅಥವಾ 7 ವರ್ಷಕ್ಕೂ ಮೇಲ್ಪಟ್ಟ ಶಿಕ್ಷೆ ಪ್ರಮಾಣವನ್ನು ಹೊಂದಿರುವಂತಹ ಪ್ರಕರಣವೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಅಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪ್ರಕರಣಗಳಲ್ಲೂ ಈ ಎಲ್ಲ ದೃಷ್ಟಿ ಕೋನದಡಿ ನೋಡಬೇಕಾಗುತ್ತದೆ. ಆದರೆ ಇಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಎಫಿಡೆಮಿಕ್‌ ಆಕ್ಟ್‌ಗೆ ಸಂಬಂಧಪಟ್ಟಂತಹ ಪ್ರಕರಣಗಳು ಮತ್ತು ಸೆಕ್ಷನ್‌ 353, 504,506ಗೆ ಸಂಬಂಧಪಟ್ಟಂತಹ ಪ್ರಕರಣಗಳು. ಇಂಥ ಪ್ರಕರಣಗಳೆಲ್ಲ ಕೇವಲ 2-3 ವರ್ಷದೊಳಗಿನ ಶಿಕ್ಷೆ ವ್ಯಾಪ್ತಿಗೆ ಬರುವಂಥವುಗಳು. ಅಲ್ಲದೆ ಈ ಎಲ್ಲವುಗಳು ಈಗ ಕೆಳಹಂತದ ನ್ಯಾಯಾಲಯದಲ್ಲೇ ಇರುವುದರಿಂದ ಸರ್ಕಾರ ಮನಸ್ಸು ಮಾಡಿದರೆ ಗೃಹ ಇಲಾಖೆಯ ಕಾರ್ಯದರ್ಶಿಯವರ ಜತೆ ಚರ್ಚಿಸಿ ವಾಪಸ್‌ ಪಡೆಯಬಹುದಾಗಿದೆ.

ಆದರೆ ಇಂಥ ಪ್ರಕರಣಗಳನ್ನು ವಾಪಸ್‌ ಪಡೆಯಲು ಈ ಮೇಲೆ ತಿಳಿಸಿದಂತೆ ಎಲ್ಲ ಚರ್ಚೆಗಳನ್ನು ನಡೆಸಿ ಒಂದು ಅಂತಿಮ ನಿರ್ಧಾರಕ್ಕೆ ಬರಲು ಕನಿಷ್ಠ ಅಂದರೂ 3ರಿಂದ 4 ತಿಂಗಳುಗಳ ಕಾಲ ತೆಗೆದುಕೊಳ್ಳಲಿದೆ.

ಪ್ರಕರಣ ದಾಖಲಾದ ಕೂಡಲೇ ಹೈ ಕೋರ್ಟ್‌ನಿಂದ ತಡೆಯಾಜ್ಞೆ ತರಬಹುದಿತ್ತು: ಹಾಗೆಯೇ ಇದಲ್ಲದೆ ಸಾರಿಗೆ ನೌಕರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಆ ಪ್ರಕರಣ ಸಂಬಂಧ ತಡೆಯಾಜ್ಞೆಯನ್ನು ತರಲು ಕೂಡ ನೌಕರರಿಗೆ ಅವಕಾಶವಿತ್ತು. ಈಗಲೂ ಕೂಡ ಸರ್ಕಾರ ನೌಕರರ ವಿರುದ್ಧ ಪ್ರಕರಣಗಳನ್ನು ವಾಪಸ್‌ ಪಡೆಯಲು ಮುಂದಾಗದಿದ್ದರೆ ನೌಕರರ ಎಲ್ಲ ಪ್ರಕರಣಗಳಿಗೂ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಕ್ಕೆ ಅವಕಾಶವಿದೆ.

ಅಂದು ಪ್ರಕರಣಗಳು ಸಾರಿಗೆಯ ಕೆಲ ನೌಕರರ ವಿರುದ್ಧ ಉದಾ: ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆ, ಹಲಸೂರು ಗೇಟ್‌ ಪೊಲೀಸ್‌ ಠಾಣೆ, ಯಶವಂತಪುರ, ಕೊತ್ತನೂರು, ಅಮೃತಹಳ್ಳಿ, ಕೆ.ಆರ್‌.ಪುರ ಹೀಗೆ ಹತ್ತಾರು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳು ದಾಖಲಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಎಲ್ಲ ಜಾಮೀನನ್ನು ನಗರದ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸುವ ಮೂಲಕ ನಾವು ಯಾವುದೇ ಅರ್ಜಿ ಶುಲ್ಕ ಪಡೆಯದೆ ಉಚಿತವಾಗಿಯೇ ಸುಮಾರು 150 ನೌಕರರಿಗೆ ಮಂಜೂರು ಮಾಡಿಸಿಕೊಟ್ಟಿದ್ದೇವೆ.

ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈ ಕೋರ್ಟ್‌ನಲ್ಲಿ ಅಂದೇ ನಾವು ತಿಳಿಸಿದಂತೆಯೇ ತಡಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರೆ  ತಡೆಯಾಜ್ಞಾ ಸಿಗುತ್ತಿತ್ತೇನೋ. ಒಂದು ವೇಳೆ ತಡೆಯಾಜ್ಞೆ ಸಿಕ್ಕಿದ್ದೆ ಆದಲ್ಲಿ ಆ ನ್ಯಾಯಾಲಯದ ಆದೇಶದ ಪ್ರತಿಯನ್ನು  ಸಂಬಂಧ ಪಟ್ಟ ನಿಗಮದ ಅಧಿಕಾರಿಗಳಿಗೆ ಕೊಟ್ಟಿದ್ದರೆ ಅಧಿಕಾರಿಗಳು ಏನು ಕ್ರಮ ಜರುಗಿಸುತ್ತಿದ್ದರು ಎಂಬುದನ್ನು ಕಾದು ನೋಡ ಬಹುದಿತ್ತು. ಆದರೆ, ಅಂದು ಗೊಂದಲಕ್ಕೆ ಸಿಲುಕಿಕೊಂಡ ನೌಕರರು ಅದಾವುದನ್ನು ಮಾಡದೇ ಸುಮಾರು 2 ವರ್ಷಗಳಿಂದ ವಜಾದಂತಹ ಶಿಕ್ಷೆ ಅನುಭವಿಸುತ್ತಿದ್ದಾರೆ.

ಕಾನೂನಿನ ಅರಿವಿಲ್ಲದ ನೌಕರರು: ಇನ್ನು ಈ ಪ್ರಕರಣಗಳಿಗೆ ತಡೆಯಾಜ್ಞೆ ತರುವ ಸಂಬಂಧ ನೌಕರರಿಗೆ ಅಂದೆ ವಕೀಲರು ತಿಳಿಸಿದ್ದರು. ಆದರೆ ಕಾನೂನಿನ ಅರಿವಿಲ್ಲದ ನೌಕರರು ಈವರೆಗೂ ಸರ್ಕಾರ ಮತ್ತು ಸಾರಿಗೆಯ ನಾಲ್ಕೂ ನಿಗಮಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ.

ಆದರೆ, ವಕೀಲ ಶಿವರಾಜು ಅವರ ಬಳಿ ಜಾಮೀನು ಮಂಜೂರು ಮಾಡಿಸಿಕೊಂಡ ಬಳಿಕ ಅವರನ್ನು ಸಂಪರ್ಕಿಸದೆ ಅಂತರ ಕಾಯ್ದುಕೊಂಡಿದ್ದು, ಹೀಗಾಗಿ ಈವರೆಗೂ ಆ ಎಲ್ಲ ನೌಕರರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ