NEWSನಮ್ಮಜಿಲ್ಲೆನಮ್ಮರಾಜ್ಯ

KKRTC ಹೊಸಪೇಟೆ: ನೌಕರರಿಗೆ ಪ್ರತಿನಿತ್ಯ ಡಿಎಂ ಕಿರುಕುಳ – ಮಹಿಳಾ ಕಂಡಕ್ಟರ್‌ಗಳ ಮೇಲೂ ದೌರ್ಜನ್ಯ

ವಿಜಯಪಥ ಸಮಗ್ರ ಸುದ್ದಿ

ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದ ಹೊಸಪೇಟೆ ಘಟಕದಲ್ಲಿ ಡಿಪೋ ಮ್ಯಾನೇಜರ್ ರಾತ್ರಿ 9 ಗಂಟೆ ಆದರೂ ಬೆಳಗ್ಗೆಯಿಂದ ಡ್ಯೂಟಿ ಮಾಡಿ ಸುಸ್ತಾಗಿ ಬರುವ ನೌಕರರನ್ನು ನಿಲ್ಲಿಸಿಕೊಂಡುKMPL ಬರುತ್ತಿಲ್ಲ ಮತ್ತು EPKM ಬರುತ್ತಿಲ್ಲ ಎಂದು ಕಿರುಕುಳ ನೀಡುತ್ತಿದ್ದಾರೆ.

ಬೆಳಗ್ಗೆಯಿಂದ ದುಡಿದು ರಾತ್ರಿ ಘಟಕಕ್ಕೆ ಬರುವ ನೌಕರರು ಡ್ಯೂಟಿ ಮುಗಿಸಿ ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಬಿಡದೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಘಟಕದ ನೌಕರರು ಅಳಲು ತೋಡಿಕೊಂಡಿದ್ದಾರೆ.

ಇನ್ನು ಬಸ್‌ ಏನಾದ್ರೂ ಪ್ರಾಬ್ಲಮ್ ಇದ್ದರೆ ಲಾಗ್‌ಶೀಟ್‌ನಲ್ಲಿ ಲೋಪದೋಷಗಳನ್ನು ಬರೆಯಿರಿ ಎಂದು ಮೇಲಧಿಕಾರಿಗಳು ಆದೇಶ ಮಾಡುತ್ತಾರೆ. ಆದರೆ ಇಲ್ಲಿರುವ ಚಾರ್ಜ್‌ಮ್ಯಾನ್‌ಗಳು ಬರಿಯಬೇಡಿ ಎಂದು ಹೇಳುತ್ತಾರೆ.  ಜತೆಗೆ ಏಕೆ ಹೀಗೆ ಹೇಳುತ್ತೀರಿ ಎಂದು ಏನಾದ್ರೂ ಡ್ರೈವರ್‌ಗಳು ಚಾರ್ಜ್‌ಮ್ಯಾನ್‌ಗಳನ್ನು ಪ್ರಶ್ನಿಸಿದರೆ  ಹಾಗೂ ಬಸ್‌ನಲ್ಲಿ ಇರುವ ಪ್ರಾಬ್ಲಮ್‌ ಸರಿ ಮಾಡಿಕೊಡಿ ಎಂದು ಕೇಳಿದರೂ ಅಂಥ ಚಾಲಕರಿಗೇ ಮೆಮೊ ಕೊಡುತ್ತಾರೆ.

ಈ ತರ ಕಿರುಕುಳ ಇದ್ದರೆ ನೌಕರರು ಹೇಗೆತಾನೆ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯ? ಇನ್ನು ಘಟಕದಲ್ಲಿ ವ್ಯವಸ್ಥಾಪಕರೇ ಸರಿ ಇಲ್ಲ ಎಂದ ಮೇಲೆ ನೌಕರರಿಗೆ ಘಟಕದ ಇತರ ಅಧಿಕಾರಿಗಳು/ ಸಿಬ್ಬಂದಿಗಳು ತೊಂದರೆ ಕೊಡದೆ ಬಿಡುತ್ತಾರೆಯೇ?

ಈ ಎಲ್ಲದರಿಂದ ನೌಕರರು ಇಂದು ಘಟಕದಲ್ಲಿ ಉಸಿರಾಡುವುದಕ್ಕೂ ಕಷ್ಟ ಪಡುವಂತಾಗಿದೆ . ಇನ್ನು ಇಲ್ಲಿ ನಿರ್ವಾಹಕಿಯರು ಕೂಡ ಡ್ಯೂಟಿ ಮಾಡುವುದು ತುಂಬಾನೇ ಕಷ್ಟ ಆಗುತ್ತಿದೆ. ಲೇಡಿಸ್ ಕೋಟ ಎಂದು ರಿಟರ್ನ್ ಡ್ಯೂಟಿಗಳು ಲಾಂಗ್ ಒಂದು ಟ್ರಿಪ್ ಹೋಗಿ ಬಂದ ಬವಳಿಕ ಡ್ಯೂಟಿ ಮುಗಿದರೂ ಕೂಡ extra ಟ್ರಿಪ್ ಮಾಡಿಕೊಂಡೆ  ಬರಬೇಕು ಎಂದು ಕಿರುಕುಳ ಕೊಡುತ್ತಿದ್ದಾರೆ ಡಿಎಂ.

ಇನ್ನು ಶಕ್ತಿ ಯೋಜನೆ ಬಂದ ಮೇಲೆ ಫಾರಂ -4ನಲ್ಲಿ ಹೆಚ್ಚುವರಿ ಕಿಲೋಮೀಟರ್‌ ನಮೂದಿಸಿ ಅದನ್ನು ಪೂರ್ತಿ ಮಾಡಿ ಎಂದೂ  ಜತೆಗೆ extra ಟ್ರಿಪ್ ಮಾಡಲೇ ಬೇಕು ಎಂದು ಇಲ್ಲಿನ ನಿಲ್ದಾಣ ಉಸ್ತುವಾರಿ ಸಿಬ್ಬಂದಿಗಳು ಮತ್ತು ಕಂಟ್ರೋಲರ್‌ಗಳು ಮಹಿಳಾ ಕಂಡಕ್ಟರ್‌ಗಳಿಗೆ  ತುಂಬಾ ಟಾರ್ಚರ್ ಕೊಡುತ್ತಿದ್ದಾರೆ.

ಇನ್ನು ಫಾರಂ 4 ಏಕೆ ಬದಲಾಗಿದೆ ಎಂದು ಕೇಳಿದರೂ ನೌಕರರು ಅಮಾನತಿನ ಶಿಕ್ಷೆ ಅನುಭವಿಸಬೇಕು. ಏಕೆಂದರೆ ಕಿಲೋ ಮೀಟರ್‌ ಹೆಚ್ಚಿಸಿರುವುದು ಡಿಪೋಮಟ್ಟದ ಅಧಿಕಾರಿಗಳು ಅದನ್ನು ಮರು ಪ್ರಶ್ನಿಸದೆ ಕಣ್ಣುಮುಚ್ಚಿಕೊಂಡು  ಓಕೆ ಮಾಡಿರುವುದು ವಿಭಾಗೀಯ ನಿಯಂತ್ರಣಾಧಿಕಾರಿಗಳು. ಇದರಿಂದ ಡ್ಯೂಟಿ ಮಾಡುವುದಕ್ಕೆ ಭಾರಿ ಕಷ್ಟಪಡುತ್ತಿದ್ದಾರೆ ನಿಗಮದ ನೌಕರರು.

ಇನ್ನು ಹೆಚ್ಚಿಗೆ ಮಾತನಾಡಿದರೆ ರಿಪೋರ್ಟ್ ಹಾಕುತ್ತೇವೆ ಎಂದು ಘಟಕದಲ್ಲಿ ಮತ್ತು ನಿಲ್ದಾಣಗಳಲ್ಲಿ ಹೆದರಿಸುತ್ತಾರೆ. ಹೀಗೆ  ಹೊಸಪೇಟೆ ವಿಭಾಗ ಮತ್ತು ಘಟಕಗಳಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ನೌಕರರು ಅನುಭವಿಸುತ್ತಿದ್ದಾರೆ. ಇಷ್ಟೆಲ್ಲ ನೌಕರರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಈ ಬಗ್ಗೆ  ಧ್ವನಿ ಎತ್ತುವುದಕ್ಕೆ ಈವರೆಗೂ ಯಾವುದೇ ಸಂಘಟನೆಯ ನಾಯಕರೆನಿಸಿಕೊಂಡವರು ಬಂದಿಲ್ಲ.  ಈ ಕಾರಣ ಅಧಿಕಾರಿ ವರ್ಗದ ದರ್ಪ ದೌರ್ಜನ್ಯ, ಕಿರುಕುಳ, ದಬ್ಬಾಳಿಕೆ ಮಿತಿ ಮೀರಿದೆ.

ಹೀಗಾಗಿ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ಸಚಿವರು ಇತ್ತ ಗಮನ ಹರಿಸಿ ನೌಕರರಿಗೆ ಆಗುತ್ತಿರುವ ತೊಂದರರೆ ನಿವಾರಣೆ ಮಾಡಲು ಮುಂದಾಗಬೇಕು ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ