CrimeNEWSನಮ್ಮಜಿಲ್ಲೆ

KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ KKRTC ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಜೆ. ಮಹಮ್ಮದ್ ಫೈಜ್ ಅವರನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ.

ಬಳಿಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಸಂಬಂಧ ನಿಗಮದಿಂದ ಕಾರಣ ಕೇಳಿ ಸೂಚನಾ ಪತ್ರವನ್ನು ಫೈಜ್ ಅವರಿಗೆ ನೀಡಲಾಗಿದೆ. ಅದರಂತೆ ಸೂಚನಾ ಪತ್ರಕ್ಕೆ ಉತ್ತರ ನೀಡಿದ್ದಾರೆ. ಆದರೆ ಆ ಉತ್ತರಕ್ಕೆ ವಿಭಾಗದ ಕಿರಿಯ ಸಹಾಯಕ ಎಂ.ಎನ್.ಇಲಕಲ್ ಆದ ನನ್ನ ಡಿಫಾಲ್ಟ್ ಹಿಸ್ಟರಿ ಲಗತ್ತಿಸಿ ಕೊಟ್ಟಿದ್ದಾರೆ ಎಂದು ಇಲಕಲ್‌ ಆರೋಪಿಸಿದ್ದಾರೆ.

ಇನ್ನು ನನ್ನ ಡಿಫಾಲ್ಟ್ ಹಿಸ್ಟರಿಯನ್ನು ನನ್ನ ಅನುಮತಿ ಪಡೆಯದೇ ಕೊಡುವ ಮೂಲಕ ಶಿಸ್ತು ಶಾಖೆಯ ಮೇಲ್ವಿಚಾರಕ ಝಾಕೀರ್ ಜಮಾದಾರ್ ಅವರು ತಪ್ಪು ಎಸಗಿರುವುದು ಕಾಣಿಸುತ್ತಿದೆ. ಅಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಜಮಾದಾರ್ ಸಹಾಯ ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ.

ಇವರಷ್ಟೇ ಅಲ್ಲದೆ ಇನ್ನು ಸಿಬ್ಬಂದಿ ಮೇಲ್ವಿಚಾರಕ ಯಾಸೀನ್ ಮುಲ್ಲಾ , ಸಿಬ್ಬಂದಿ  ಸಹಾಯಕ ಎಂ.ವಿ.  ಬಿಜಾಪುರ್‌, ಪಿಎ  ಅಬ್ದುಲ್ ಮುತ್ತಲಿಬ ಪಾನ್‌ಫರೋಶ್ ಅವರು ಸೇರಿ ಜೆ. ಮಹಮ್ಮದ್ ಫೈಜ್ ಅವರ Show Causeಗೆ ವಿಭಾಗೀಯ ಕಚೇರಿ ಕರ್ತವ್ಯ ಸಮಯದಲ್ಲಿ ಉತ್ತರ ಬರೆದು ಕೊಟ್ಟು ಒಬ್ಬ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಸಹಾಯ ಮಾಡಿದ್ದಾರೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲದೆ ಸಿಬ್ಬಂದಿ ಮೇಲ್ವಿಚಾರಕ ಯಾಸೀನ್ ಮುಲ್ಲಾ ಕೇಂದ್ರ ಕಚೇರಿಗೆ ಹೋಗಿ ಜೆ.ಮಹಮ್ಮದ್ ಫೈಜ್ ಅವರಿಗೆ ಕಾರಣ ಕೇಳಿ ಕೊಟ್ಟಿದ್ದ ಸೂಚನಾ ಪತ್ರಕ್ಕೆ ಉತ್ತರ ನೀಡಿ ಬಂದಿದ್ದಾರೆ. ಹೀಗೆ ಒಬ್ಬ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಿಗೆ ಸಹಕರಿಸಿರುವುದರಿಂದ ಕಾನೂನಿನಡಿ ಎಂಡಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಎನ್.ಇಲಕಲ್ ಒತ್ತಾಯಿಸಿದ್ದಾರೆ.

ಅಲ್ಲದೆ ಈ ಮೂವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿ ಈ ಆರೂಪಿಗಳ ವಿರುದ್ಧ ಸೆಕ್ಷನ್ 107, IPC & other ಪ್ರಚೋದನೆ, ಪಿತೂರಿ, ನೆರವು ನೀಡಿರುವ ಆರೋಪದಡಿಯಲ್ಲಿ FIR ದಾಖಲು ಮಾಡುವಂತೆ ಚುನಾವಣೆ ಆಯುಕ್ತರಿಗೆ ಈಗಾಗಲೇ ದೂರು ನೀಡಲಾಗಿದೆ.

ಚುನಾವಣೆ ಆಯುಕ್ತರು ಈ ದೂರನ್ನು ಮುಂದಿನ ಕ್ರಮಕ್ಕಾಗಿ ನಿಗಮದ ಕೇಂದ್ರ ಕಚೇರಿ & ವಿಭಾಗೀಯ ಕಚೇರಿಗೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಿದ್ದಾರೆ. ಆದರೆ KKRTC ಕೇಂದ್ರ ಕಚೇರಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು/ ಮುಖ್ಯ ಭದ್ರತಾ ಮತ್ತು ಜಾಗ್ರತಾ ಅಧಿಕಾರಿ ಆನಂದ ಭದ್ರಕಳ್ಳಿ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ಇಲ್ಲಿಯವರೆಗೆ ಆರೋಪಿಗಳ ವಿಚಾರಣೆ ಮಾಡಿಸಿ ವರದಿ ನೀಡಿಲ್ಲ.

ಇದನ್ನು ಗಮನಿಸಿದರೆ ಈ ಆರೋಪಿಗಳನ್ನೂ ನೀತಿ ಸಂಹಿತೆ ಪ್ರಕರಣದಿಂದ ಬಚಾವ್ ಮಾಡಲು ಈ ಅಧಿಕಾರಿಗಳು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ ಈ ಅಧಿಕಾರಿಗಳು ಚುನಾವಣೆ ಆಯುಕ್ತರ ಆದೇಶಕ್ಕೆ ಕಿಂಚಿತ್ತು ಬೆಲೆ ಮತ್ತು ಕಿಮ್ಮತ್ತು ಕೊಟ್ಟಿಲ್ಲ ಎಂದು KPCC ಅಲ್ಪ ಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಯಾಕೂಬ ನಾಟಿಕಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಿಗದಿತ ಸಮಯದಲ್ಲಿ ಕ್ರಮ ಜರುಗಿಸದೆ ಹೋದರೆ ಮುಂದಿನ ಕಾನೂನು ಕ್ರಮಕ್ಕಾಗಿ ದೆಹಲಿಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು