NEWSನಮ್ಮಜಿಲ್ಲೆನಮ್ಮರಾಜ್ಯ

KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ

ವಿಜಯಪಥ ಸಮಗ್ರ ಸುದ್ದಿ
  •  ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬ ಹರಿದಿನ ಆಚರಿಸಲು ಅವಕಾಶ ಇಲ್ಲ
  •  ಸರಿಯಾದ ರೀತಿಯಲ್ಲಿ ವಾರದ ರಜೆ, ಹಬ್ಬದ ರಜೆ, ಸರ್ಕಾರಿ ರಜೆಗಳು ಇಲ್ಲ
  • ಜೇಷ್ಠತೆಗೆ ಅನುಸಾರವಾಗಿ ಡ್ಯೂಟಿ ನಿಯೋಜನೆ ಇಲ್ಲ
  • ಚಾಲನಾ ಮತ್ತು ನಿರ್ವಾಹಕರ ಜತೆ ಜತೆಗೆ ಅಧಿಕಾರಿಗಳು- ಸಿಬ್ಬಂದಿಗಳು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿದ ನೌಕರ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಕಚೇರಿಗಳು, ಘಟಕಗಳು, ಕಾರ್ಯಾಗಾರಗಳಲ್ಲೂ ಕನ್ನಡ ರಾಜ್ಯೋತ್ಸವ ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಮೂಲಕ ಸಮಸ್ತ ನೌಕರರು ರಾಜ್ಯಕ್ಕೆ ಗೌರವ ಅರ್ಪಿಸುವುದನ್ನು ಮರೆಯಲಿಲ್ಲ.

ಅದರಂತೆ ಪುತ್ತೂರು ಘಟಕದ ವತಿಯಿಂದಲೂ ಕನ್ನಡ ರಾಜ್ಯೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಮೂಲಕ ನಮ್ಮ ರಾಜ್ಯಕ್ಕೆ ಗೌರವ ಅರ್ಪಿಸುವ ಪುಣ್ಯದ ಕಾರ್ಯವು ನಡೆಯಿತು. ಇದು ನಮಗೆ ಹೆಮ್ಮೆಯ ಪ್ರತೀಕ.

ಆದರೆ, ನಾನು ಭಾಗವಹಿಸಿಲ್ಲ. ಏಕೆಂದರೆ ನಮ್ಮ ಚಾಲಕರು ಮತ್ತು ನಿರ್ವಾಹಕರು ಪಡುವ ಕಷ್ಟ ನೋಡಿ ತುಂಬಾ ಬೇಸರ ಆಗಿದೆ. ಜೇಷ್ಠತೆಗೆ ಅನುಸಾರವಾಗಿ ಡ್ಯೂಟಿ ನಿಯೋಜನೆ ಇಲ್ಲ. ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬ ಹರಿದಿನ ಆಚರಿಸಲು ಅವಕಾಶ ಇಲ್ಲ. ಸರಿಯಾದ ರೀತಿಯಲ್ಲಿ ವಾರದ ರಜೆ, ಹಬ್ಬದ ರಜೆ, ಸರ್ಕಾರಿ ರಜೆಗಳು ಇಲ್ಲ.

ಈ ಎಲ್ಲವೂ ಇಲ್ಲ ಎಂಬುದರ ನಡುವೆಯೂ‌ ಡಬಲ್ ಡ್ಯೂಟಿ ಮಾಡಲು ಒತ್ತಡ. ಎರಡು ವರ್ಷದ ರಜೆ ನಗದೀಕರಣ ಹಣ ಕೊಡಲು ಬಾಕಿ ಇದೆ. ಜತೆಗೆ 38 ತಿಂಗಳ ವೇತನದ ಅರಿಯರ್ಸ್ ಕೊಡಲು ಬಾಕಿ ಇದೆ. ಇನ್ನು ಇಷ್ಟೇ ಪ್ರಮುಖವಾದ 2024ರ ವೇತನ ಹೆಚ್ಚಳ ಆಗದೆ 10 ತಿಂಗಳೇ ಕಳೆದು ಹೋಗಿವೆ.

ಈ ಎಲ್ಲದರ ಬಗ್ಗೆ ಜತೆಗೆ ಸಾರ್ವಜನಿಕರ ಸೇವೆಯಲ್ಲಿ ಶ್ರಮದಾನದೊಂದಿಗೆ ದುಡಿಯುತ್ತಿದ್ದರೂ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂಬುವುದು ಸೇರಿದಂತೆ ತುಂಬಾ ಜನ ನೌಕರರು ‌ಸಮಸ್ಯೆಗಳ ಬಗ್ಗೆ ಬೇಸರದಿಂದ ಮಾತನಾಡುವುದನ್ನು ಕೇಳಿಸ್ಕೊಂಡ್ರೆ ನಿಜಕ್ಕೂ ಮನಸ್ಸು ತುಂಬ ಭಾರವಾಗುತ್ತಿದೆ.

ಇಷ್ಟೊಂದು ಸಮಸ್ಯೆಗಳು ಇದ್ದರೂ ಕೂಡ ನಾವು ವಿಜೃಂಭಣೆಯಿಂದ ಆಚರಿಸುವ ಕಾರ್ಯಕ್ರಮಗಳಿಗೆ ಅರ್ಥವೇ ಇಲ್ಲ ಎಂದು ಮಾನಸಿಕವಾಗಿ ತುಂಬಾ ನೋವಾಗುತ್ತಿದೆ. ಇನ್ನು ಇದು ನನ್ನ ವೈಯುಕ್ತಿಕ ಅನಿಸಿಕೆ ಅಷ್ಟೆ. ಯಾರೂ ಕೂಡ ಅನ್ಯತ ಭಾವಿಸುವುದು ಬೇಡ. ಯಾರಿಗೂ ಅವಮಾನ ಮಾಡುವ ಉದ್ದೇಶ ಇಲ್ಲ. ಯಾರೂ ಅಸಮಾಧಾನ ವ್ಯಕ್ತಪಡಿಸುವುದು ಬೇಡ.

  • ನಿಮ್ಮ ಜೀವನ್ ಮಾರ್ಟಿಸ್, ರಾಜ್ಯಾಧ್ಯಕ್ಷರು, ಕೆ.ಎಸ್.ಆರ್.ಟಿ.ಸಿ. ವಿಕಲಚೇತನರ ನೌಕರರ ಸಂಘ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು