NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ನಾಳೆ ನಡೆಯುವ ಸಮಾರಂಭದಲ್ಲಿ ಸಾರಿಗೆ ಸಂಘಟನೆಗಳ ಚುನಾವಣೆ ಮಾಡುವ ಭರವಸೆ ಕೊಡಿ: ಸಿಎಂಗೆ ನೌಕರರ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರು ಕಳೆದ ಹತ್ತಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳಿಂದ ಆದಷ್ಟು ಮುಕ್ತಿ ಪಡೆಯಬೇಕು. ಅದಕ್ಕಾಗಿ ನೌಕರರ ಸಂಘಟನೆಗಳ ಚುನಾವಣೆ ನಡೆಸಿ ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.

ನಾಳೆ ನಡೆಯುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಾರ್ಯಕ್ರಮದಲ್ಲಿ ಚುನಾವಣೆ ನಡೆಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿ ಅತೀ ಶೀಘ್ರದಲ್ಲೇ ನೌಕರರ ಸಂಘಟನೆಗಳ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ 1994ರಿಂದೀಚೆಗೆ ಸಾರಿಗೆ ಸಂಘಟನೆಗಳ ಚುನಾವಣೆ ನಡೆಸಲು ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರವು ಮನಸ್ಸು ಮಾಡಿಲ್ಲ. ಹೀಗಾಗಿ ಯಾವುದೇ ಸಂಘಟನೆಯ ಮುಖಂಡರಿಗೂ ಸರ್ಕಾರ ಮಟ್ಟದಲ್ಲಿ ಮತ್ತು ನಿಗಮಗಳ ಆಡಳಿತ ಮಂಡಳಿಯಲ್ಲಿ ತಮ್ಮ ಬೇಡಿಕೆಗಳನ್ನು ಕಟಿಬದ್ಧವಾಗಿ ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಇನ್ನಾದರೂ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುತ್ತೇವೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ತಾವು ಅಧಿಕಾರಕ್ಕೆ ಬಂದಿದ್ದು, ನೌಕರರಿಗೆ ಸರಿ ಸಮಾನ ವೇತನದ ಜತೆಗೆ ಪ್ರಮುಖವಾಗಿ ನೌಕರರ ಸಂಘಟನೆಗಳು ಚುನಾವಣೆ ನಡೆಸುವುದಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮಲ್ಲಿ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ ಆದರೆ ಅವುಗಳು ಪ್ರತಿಭಟನೆ, ಹೋರಾಟ ಮಾಡುತ್ತೇವೆ ಎಂದು ನೌಕರರಿಗೆ ಭರವಸೆ ಕೊಡುತ್ತವೆ. ಅದರಂತೆ ಪ್ರತಿಭಟನೆ ಮಾಡುವ ಸಂಬಂಧ ಸುದ್ದಿಗೋಷ್ಠಿಯನ್ನು ನಡೆಸಿ ಅಧಿಕೃತ ಘೋಷಣೆಯನ್ನು ಮಾಡುತ್ತವೆ. ಬಳಿಕ ಹಲ್ಲುಕಿತ್ತ ಹಾವಿನಂತೆ ವರ್ತಿಸಿ ಸುಮ್ಮನಾಗುತ್ತಿವೆ.

ಇದರಿಂದ ನೌಕರರಾದ ನಾವು ಯಾವ ಸಂಘಟನೆಯನ್ನು ಬೆಂಬಲಿಸಬೇಕು ಎಂಬುವುದು ತಿಳಿಯದೆ ಗೊಂದಲದಲ್ಲೇ ಕರ್ತವ್ಯ ಮಾಡುತ್ತಿದ್ದೇವೆ. ಹೀಗಾಗಿ ತಾವು ತಮ್ಮ ಅಧಿಕಾರವಧಿಯಲ್ಲಿಯೇ ನಮ್ಮ ಸಂಘಟನೆಗಳ ಚುನಾವಣೆ ನಡೆಸಿ ನಮಗೆ ಒಂದು ಸಂಘಟನೆಯಿಂದ ಸೌಲಭ್ಯ ದೊರಕುವುದಕ್ಕೆ ಅನುಕೂಲ ಮಾಡಿಕೊಡಿ.

ಇನ್ನು ಚುನಾವಣೆಯಲ್ಲಿ ಸೋತ ಸಂಘಟನೆಗಳು ವಿಪಕ್ಷ ಸ್ಥಾನದಲ್ಲಿ ಕುಳಿತು ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದಕ್ಕೆ ಮುಂದಾಗುತ್ತವೆ. ಇದರಿಂದ ಚುನಾಯಿತ ಸಂಘಟನೆಗೆ ನೌಕರರ ಸಮಸ್ಯೆ ಆಲಿಸುವ ಮತ್ತು ಅದನ್ನು ಸರ್ಕಾರ ಹಾಗೂ ಆಡಳಿತ ಮಂಡಳಿ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಅನುಕೂಲ ವಾಗುತ್ತದೆ ಎಂದು ನೌಕರರು ವಿವರಿಸಿದ್ದಾರೆ.

ಯಾವುದೇ ಸಂಘಟನೆ ಅಧಿಕೃತವಾಗಿ ಅಧಿಕಾರ ಪಡೆಯದಿರುವುದರಿಂದ ನೀವು ಆ ಸಂಘಟನೆಯ ಪರ ಇದ್ದೀರಿ ಅಲ್ಲಿ ಹೋಗಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ, ನೀವು ಈ ಸಂಘಟನೆಯ ಪರ ಇದ್ದೀರಿ ಅವರು ಏನು ಮಾಡಲಿಲ್ಲವೇ ಎಂದು ನಮ್ಮನ್ನು ಕಾಡುತ್ತಿದ್ದಾರೆ. ಇದಕ್ಕೆ ಮುಕ್ತಿ ದೊರಕಲು ತಾವು ಚುನಾವಣೆ ನಡೆಸುವ ಮನಸ್ಸು ಮಾಡಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

ತಾವು ನಾಳೆ ( ಜೂ.11) ನಡೆಯುವ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಲೇ ಬೇಕು ಎಂದು ಮನವಿ ಮಾಡಿರುವ ನೌಕರರು ನಮ್ಮ ಸಮಸ್ಯೆಯನ್ನು ನಿಮ್ಮ ಮನೆ ಮಕ್ಕಳ ಸಮಸ್ಯೆ ಎಂದು ಭಾವಿಸಿ ನಮಗೆ ಒಂದು ಪರಿಹಾರ ಮಾಡಿಕೊಡಿ ಎಂದು ವಿನಂತಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು