NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 15-20ದಿನ ಮುಂಚಿತವಾಗಿ HRMSನಲ್ಲಿ ಪಡೆದ ರಜೆ ಏಕಾಏಕಿ ರದ್ದು- ಡಿಎಂಗಳ ವಿರುದ್ಧ ಕಿಡಿ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ಎಲ್ಲ ಘಟಕಗಳಲ್ಲಿ ಚಾಲನಾ ಸಿಬ್ಬಂದಿಗಳ ಎಚ್‌ಆರ್‌ಎಂಎಸ್ ರಜೆಗಳನ್ನು ಘಟಕ ವ್ಯವಸ್ಥಾಪಕರು ಏಕಾಏಕಿ ರದ್ದು ಪಡಿಸುತ್ತಿದ್ದಾರೆ ಎಂದು ಆರೋಪಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ತುಮಕೂರು ವಿಭಾಗದ ಎಲ್ಲ ಘಟಕಗಳಲ್ಲಿಯೂ ಘಟಕ ವ್ಯವಸ್ಥಾಪಕರು ಅಥವಾ ಸಂಚಾರ ಶಾಖೆಯ ಸಿಬ್ಬಂದಿ ಚಾಲನಾ ಸಿಬ್ಬಂದಿಗಳು ಎಚ್‌ಆರ್‌ಎಂಎಸ್‌ನಲ್ಲಿ ತೆಗೆದುಕೊಂಡಿರುವ ರಜೆಗಳನ್ನು ಏಕಾಏಕಿ ಕೇವಲ ಒಂದು ದಿನ ಮುಂಚೆ ರದ್ದು ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಕೇಂದ್ರ ಕಚೇರಿಯ ಸಿಬ್ಬಂದಿಗಳ ಅನುಕೂಲಕ್ಕಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದರೂ ಕೆಲವು ಘಟಕಗಳ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆ ಸಿಬ್ಬಂದಿ ತಮ್ಮ ಇಚ್ಛೆಗನುಸಾರವಾಗಿ ಏಕಾಏಕಿ ರಜೆಗಳನ್ನು ರದ್ದುಗೊಳಿಸುತ್ತಾರೆ. ಅವರಿಗೆ ಬೇಕಾದವರಿಗೆ ಮಾತ್ರ ರಜೆ ಅರ್ಜಿ ಪಡೆದು ರಜೆ ಮಂಜೂರು ಮಾಡುತ್ತಾರೆ.

ಆದರೆ, ರಜೆ ಪಡೆದಿರುವ ಸಿಬ್ಬಂದಿ ಅವರ ವೈಯಕ್ತಿಕ ಕೆಲಸಗಳಿಗಾಗಿ 15-20 ದಿನಗಳ ಮುಂಚೆ ರಜೆ ಪಡೆದಿದ್ದರೂ ಆ ರಜೆಗಳನ್ನು ಏಕಾಏಕಿ ರದ್ದು ಪಡಿಸುತ್ತಿದ್ದಾರೆ. ಇದರಿಂದ ಕೆಲಸ ನಿರ್ವಹಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೊಳಗಾಗುತ್ತಿದ್ದಾರೆ.

ಇನ್ನು ಆಸ್ಪತ್ರೆಗೆ ಅಥವಾ ಯಾವುದೇ ಕೋರ್ಟ್ ಕಚೇರಿಯ ಕೆಲಸಗಳಿಗೆ ಹೋಗಬೇಕಾಗಿರುವ ಸಂದರ್ಭವಿದ್ದರೂ ರಜೆ ರದ್ದಾಗಿದೆ ಎಂದು ಹೇಳಿ ಕೆಲಸಕ್ಕೆ ಬರುವಂತೆ ಬಲವಂತಮಾಡುತ್ತಿದ್ದಾರೆ. ಈ ರೀತಿ ಏಕಾಏಕಿ ರಜೆಗಳನ್ನು ರದ್ದು ಮಾಡಿದರೆ ವೈದ್ಯರ ಭೇಟಿ ಸಾಧ್ಯವಾಗುವುದಿಲ್ಲ.

ಆದಕಾರಣ ತಾವು ಸಂಚಾರ ಶಾಖೆಯವರಿಗೆ ಹಾಗೂ ಘಟಕ ವ್ಯವಸ್ಥಾಪಕರಗಳಿಗೆ ಏಕಾಏಕಿ ರಜೆ ರದ್ದು ಮಾಡದಂತೆ ಸೂಚನೆ ನೀಡಬೇಕು ಎಂದು ಎಸ್.ಎಲ್.ಲೋಕೇಶ್ ಹುಳಿಯಾರ್ ಒತ್ತಾಯ ಪೂರ್ವಕವಾಗಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

1 Comment

  • ಈ ಹೆಚ್. ಆರ್.ಎಂ.ಎಸ್. ನಿಗಮದಲ್ಲಿ ಅಳವಡಿಸಲು ಕರಡು ತಯಾರಿಸಿದ ಅಧಿಕಾರಿ ವರ್ಗದವರು ತಮ್ಮ ಸಮೀಪದ ಆಡಳಿತ ಸಿಬ್ಬಂದಿಗಳ ಸೌಲಭ್ಯಕ್ಕಾಗಿ. ಆದರೆ ಸಂಸ್ಥೆಯ ಹಣವನ್ನು ಅವರಿಗೆ ಮೀಸಲಿಡಲು ಅಸಾಧ್ಯದ ಮಾತಾದ್ದರಿಂದ ಚಾಲನಾ ಸಿಬ್ಬಂದಿಗಳ ಹಾಜರಾತಿಯನ್ನೂ ಅದರಲ್ಲಿ ಒಳಪಡಿಸಿದರು. ಆದರೆ ಚಾಲನಾ ಸಿಬ್ಬಂದಿಗಳಿಗೆ ಆ ಸೌಲಭ್ಯ ವಿಸ್ತರಿಸಲು ಕೀಳರಿಮೆ ಉಳ್ಳವರಾಗಿರುವ ಕರಡು ತಯಾರಿಕರು ಅದರ ನಿಯಂತ್ರಣ ಕೊಂಡಿಯನ್ನು ಘಟಕ ವ್ಯವಸ್ಥಾಕರು, ಸಂಚಾರ ಅಧಿಕಾರಿಗಳಿಗೆ ನೀಡಿರುವರು.

    ಇದು ಒಂದೇ ಅಲ್ಲಾ ವಿಭಾಗ ಕಚೇರಿಯಲ್ಲಿ ಚಾಲನಾ ಸಿಬ್ಬಂದಿಗಳ ಸೇವಾ ವಿವರದ ಸೇವಾ ಪುಸ್ತಕದಲ್ಲಿನ ದಾಖಲಾತಿಗಳನ್ನು ಸೇವಾ ನಿಯಮಗಳ ನಿಯಮಬಾರದಲ್ಲಿ ಗೌಪ್ಯ ಎಂದು ಪ್ರತಿಪಾದಿಸಿದ್ದು ಈ ಸಮಯದಲ್ಲಿ ಅವರ ಸೇವಾ ವಿವರವನ್ನು ಯಥಾವತ್ತಾಗಿ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ದಾಖಲಿಸುವಾಗ ಹಲವಾರು ತಿದ್ದುಪಡಿ ಮಾಡಿ ದಾಖಲಿಸುತ್ತಿರುವುದು. ಚಾಲನಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ನಡೆಯುತ್ತಿರುವುದು. ಏಕೆಂದರೆ ಸಂಸ್ಥೆಯ ಆಡಳಿತ ಕಾರ್ಯ ವೈಖರಿಯನ್ನು ನಿಗಮದ ಹೊರಗಿನವರಿಂದ ಅವದಿವಾರು ಪರಿಶೀಲನೆಯ ವ್ಯವಸ್ಥೆಯ ಹೊರತಾಗಿರುವುದೇ ಮೂಲವಾಗಿರುವುದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು