NEWSನಮ್ಮಜಿಲ್ಲೆ

KSRTC ECCS ಚುನಾವಣೆ: ಕೂಟ ಲೀಡಲಿದೆ ಗೆದ್ದಿಲ್ಲ – ಆದರೂ ಗೆದ್ದೇಬಿಟ್ಟಿದ್ದೇವೆಂದು ಬೀಗುವುದು ಸಲ್ಲ- ಪ್ರಜ್ಞಾವಂತ ಸದಸ್ಯರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಇದೇ ಜುಲೈ 7ರಂದು ಬೆಂಗಳೂರಿನಲ್ಲಿ ನಡೆದಿದ್ದು, ಮತದಾರರ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣವಿರುವುದರಿಂದ ಜುಲೈ 18ರ ನಂತರ ಯಾರುಯಾರು ಜಯಗಳಿಸಿದ್ದಾರೆ ಎಂಬುವುದು ಸ್ಪಷ್ಟವಾಗಲಿದೆ.

ಈ ನಡುವೆ ಕೋರ್ಟ್ ಆದೇಶ ಪ್ರಕಾರ ಸಹಕಾರ ಸಂಘದ 7091 ಸದಸ್ಯರಿಗೆ ಮತದಾನ ಮಾಡಲು ಅವಕಾಶವಿತ್ತು. ಆದರೆ, ಕೆಲ ತಂತ್ರಕುತಂತ್ರದಿಂದ ಕೋರ್ಟ್‌ ಆದೇಶವನ್ನೆ ಉಲ್ಲಂಘಿಸಿ ಹಲವು ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ.

ಆದರೆ, ಇದರಿಂದ ಕುಪಿತಗೊಂಡು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ಪರಿಣಾಮ ಎಲ್ಲರಿಗೂ ಮತದಾನ ಮಾಡಲು ಅವಕಾಶ ಕೊಡಿಸಲಾಯಿತು. ಆದರೂ ಸಹ ಸಾವಿರಾರು ನೌಕರರು ಮತದಾನ ಮಾಡಲು ಮಅವಕಾಶದಿಂದ ವಂಚಿತರಾದರು. ಇದರಿಂದ ದೂರದ ಊರುಗಳಿಂದ ಬಂದಿದ್ದ ನೌಕರರೂ ಮತದಾನ ಮಾಡದೇ ವಾಪಸ್‌ ಹೋದರು.

ಶಾಪ ಮತ್ತು ಕಣ್ಣೀರು ಹಾಕಿ ಹೋದ ಅವರ ಶಾಪ ಮತ್ತು ಕಣ್ಣೀರಿಗೆ ಜಯ ಸಿಕ್ಕಿದೆ ಮತ್ತು ಸತ್ಯಕ್ಕೆ ಜಯವಾಗಿದೆ. ಟೋಟಲ್ 3059 ಮತದಾನ ನಡೆದಿದೆ. ಅದರಲ್ಲಿ 2000 ಮತಗಳ ಎಣಿಕೆ ನಡೆದಿದ್ದು, ಅದರಲ್ಲಿ ಸಾರಿಗೆ ನೌಕರರ ಕೂಟದ ತಂಡದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ನೌಕರರ ಕೂಟದ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇನ್ನು ಉಳಿದ 1059 ಮತಗಳ ಎಣಿಕೆಗೆ ನ್ಯಾಯಾಲಯ ಆದೇಶ ಮಾಡಬೇಕು. ಏಕೆಂದರೆ ಇವು ನ್ಯಾಯಾಲಯ ಆದೇಶದಿಂದ ಬಂದು ಮತ ಚಲಾಯಿಸಿದ ನೌಕರರ ಮತಗಳು. ಹೀಗಾಗಿ ಇದೇ ಜುಲೈ 18 ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದ್ದು ಅಂದು ಮತ ಎಣಿಕೆ ಯಾವಗ ಮಾಡಬೇಕು ಎಂಬ ದಿನಾಂಕವನ್ನು ನ್ಯಾಯಾಲಯವು ನಿಗದಿಪಡಿಸುತ್ತದೆ.

ಆ ಬಳಿಕ 1059 ಮತಗಳ ಎಣಿಕೆ ಕಾಋಯ ನಡೆಯಲಿದ್ದು ಅಂದು ಕೂಡ ಸಾರಿಗೆ ನೌಕರರ ಕೂಟ ಭರ್ಜರಿ ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಅನಿಲ್‌ ತಿಳಿಸಿದ್ದು, ಈಗಾಗಲೇ ಗೆದ್ದೆ ಬಿಟ್ಟಿದ್ದೇವೆ ಎಂಬ ಹುಮ್ಮಸ್ಸಿನಲ್ಲಿ ಕೂಟದ ಮುಖಂಡರು ಬೀಗುತ್ತಿದ್ದಾರೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಕೋರ್ಟ್‌ ಆದೇಶ ಮಾಡಿದ ಬಳಕಿ ಉಳಿತ ಮತ ಎಣಿಕೆ ಆದ ನಂತರ ಸ್ಪಷ್ಟ ಬಹುಮತ ಸಿಗಲಿದ್ದು ಅಂದು ಸಮಾನ ಮನಸ್ಕರ ಟೀಂ ಅಥವಾ ಕೂಟದ ಟೀಂ ಯಾವುದು ಜಯಗಳಿಸಿದೆ ಎಂಬುವುದು ಗೊತ್ತಾಗಲಿದೆ. ಹೀಗಾಗಿ ಮೂರು ಕಾಸಿಗೆ ಮಾನ ಮರ್ಯಾದೆ ಮಾರಿಕೊಂಡವರಂತೆ ಮನಸ್ಸಿಗೆ ಅನಿಸಿದ್ದೆಲ್ಲವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದೆ ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು ಎಂದು ಪತ್ತಿನ ಸಹಕಾರ ಸಂಘದ ಪ್ರಜ್ಞಾವಂತ ಸದಸ್ಯರು ಸಲಹೆ ನೀಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ