NEWSನಮ್ಮಜಿಲ್ಲೆನಮ್ಮರಾಜ್ಯ

KSRTC ದರ್ಜೆ-3 ಮತ್ತು ದರ್ಜೆ-4 ನೌಕರರು ಮುಕ್ತ ವೇತನ ಶ್ರೇಣಿಗೆ ಅರ್ಹರು: ನಿರ್ದೇಶಕರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕ್ರಮ ತೆಗೆದುಕೊಳ್ಳುವಂತೆ KSRTC ನಿರ್ದೇಶಕರು (ಸಿಬ್ಬಂದಿ & ಜಾಗೃತ) ಇಂದು ಆದೇಶ ಹೊರಡಿಸಿದ್ದಾರೆ.

ಇಂದು ಈ ಸಂಬಂಧ ಎಲ್ಲ ನಿಗಮಗಳಿಗೂ ಆದೇಶ ಹೊರಡಿಸಿದ್ದು, ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅಂದರೆ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿ ನೀಡುವ ಬಗ್ಗೆ KSRTC ವ್ಯವಸ್ಥಾಪಕ ನಿರ್ದೇಶಕರು ಇದೇ ಜುಲೈ 9 ಆದೇಶ ಹೊರಡಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, 1996 ರ ನಂತರ ಮತ್ತು 2002ರ ನಂತರ ನೇಮಕಗೊಂಡ ದರ್ಜೆ-3 ಮತ್ತು ದರ್ಜೆ-4 ರ ನೌಕರರ ನೇಮಕಾತಿ ಆದೇಶದಲ್ಲಿ ಮುಕ್ತ ವೇತನ ಶ್ರೇಣಿಗೆ ಅರ್ಹರಿರುವುದಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಆದರೆ, ಈ ನೌಕರರು ಗರಿಷ್ಠ ವೇತನ ಬಡ್ತಿ ಹಂತವನ್ನು ತಲುಪಿದ್ದು, ಅವರಿಗೆ ಸ್ಥಗಿತ ವೇತನ ಬಡ್ತಿ ನೀಡಲು ಯಾವುದೇ ನಿರ್ದೇಶನವಿಲ್ಲ. ಆದ್ದರಿಂದ, ಈ ನೌಕರರಿಗೆ ಸ್ಥಗಿತ ವೇತನ ಬಡ್ತಿ ನೀಡುವ ಅಥವಾ ಮುಕ್ತ ವೇತನ ಶ್ರೇಣಿ ನೀಡುವ ಕುರಿತು ಮಾರ್ಗದರ್ಶನ ನೀಡುವಂತೆ NWKRTC ಮತ್ತು KKRTC ವ್ಯವಸ್ಥಾಪಕ ನಿರ್ದೇಶಕರು ಕೋರಿರುವುದನ್ನು ಪರಿಶೀಲಿಸಲಾಯಿತು.

ಸ್ಥಗಿತ ವೇತನ ಬಡ್ತಿ ಸೌಲಭ್ಯ ನೀಡಲು ಅವಕಾಶ: 1. ಸರ್ಕಾರದಲ್ಲಿ ಕಾಲಿಕ ವೇತನದಲ್ಲಿ ಗರಿಷ್ಠ ವೇತನ ಹಂತವನ್ನು ತಲುಪಿದ ರಾಜ್ಯ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯ ನೀಡಲು ಅವಕಾಶವಿದೆ. ಅದರಂತೆ, ನಿಗಮದಲ್ಲಿ ಅಧಿಕಾರಿಗಳಿಗೆ ಮಾತ್ರ ಸುತ್ತೋಲೆ ಸಂಖ್ಯೆ: 743ರ 20.04.1989 ರನ್ವಯ ಸರ್ಕಾರದಲ್ಲಿರುವಂತೆ ಸ್ಥಗಿತವೇತನ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ದರ್ಜೆ-3 ಮತ್ತು 4 ನೌಕರರಿಗೆ ಸ್ಥಗಿತ ವೇತನ ಬಡ್ತಿ ಕುರಿತು ಯಾವುದೇ ನಿರ್ದೇಶನ ಇಲ್ಲ.

2. ಹೀಗಾಗಿ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕೈಗಾರಿಕಾ ಒಪ್ಪಂದ 1989ರ ಅಂಶ ಸಂಖ್ಯೆ 3 h (ii) ರನ್ವಯ ಈ ಕೆಳಗಿನಂತೆ ಅವಕಾಶವಿದೆ.

“In case an employee reaches the maximum in the revised pay scale at any time on or after 1-1-1988, he shall be granted increment at the last incremental rate annually from 01-01-1988 to 31-12-1991 or till the date of signing next settlement whichever is later.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಲ್ಲಿರುವ ನಿರ್ದೇಶನದಂತೆ ಸ್ಥಗಿತ ವೇತನ ಬಡ್ತಿಯನ್ನು ನಿಗಮದ ಅಧಿಕಾರಿಗಳಿಗೆ ಮಾತ್ರ ಅಳವಡಿಸಿಕೊಳ್ಳಲಾಗಿದೆ. ಉಳಿದ, ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಸ್ಥಗಿತ ವೇತನ ಬಡ್ತಿಯ ಕುರಿತಾಗಿ ಯಾವುದೇ ಆದೇಶ ಇಲ್ಲದೇ ಇರುವುದರಿಂದ ಈ ಹಿಂದೆ ನೀಡುತ್ತಿರುವಂತೆ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ