NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದಿದ್ದಾಗ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ ಸಿಗುತ್ತದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿ ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ ಅಂಥವರಿಗೆ ಹಾಜರಾತಿ (Attendance) ನೀಡಲಾಗುವುದು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಹೌದು! ಚಾಲನಾ ಸಿಬ್ಬಂದಿಗಳಾದ ಚಾಲಕರು ಮತ್ತು ನಿರ್ವಾಹಕರು ಘಟಕಕ್ಕೆ ಹಾಜರಾಗಿ ಡ್ಯೂಟಿ ಕೊಡುವಂತೆ ಕೇಳಿದರು ಕೆಲ ಸಂದರ್ಭದಲ್ಲಿ ಕೆಲ ಚಾಲನಾ ಸಿಬ್ಬಂದಿಯನ್ನು ಕೆಲಸಕ್ಕೆ ಕಳುಹಿಸುವುದಿಲ್ಲ. ಈ ಸಂದರ್ಭದಲ್ಲಿ ಡ್ಯೂಟಿ ಸಿಗದ ನೌಕರರು ಘಟಕದಲ್ಲೇ ಡ್ಯೂಟಿ ಸಮಯವನ್ನು ಕಳೆದರೆ ಅವರಿಗೆ ಹಾಜರಾತಿ (Attendance) ಕೊಡಗುವುದು ಎಂದು ಡಿಸಿ ತಿಳಿಸಿದ್ದಾರೆ.

ಡಿಪೋಗೆ ಹಾಜರಾದರೂ ಕೆಲ ನೌಕರರಿಗೆ ಡ್ಯೂಟಿ ಸಿಗದ ಸಂದರ್ಭದಲ್ಲಿ ಅಂಥ ನೌಕರರಿಂದ ರಜೆಕೊಟ್ಟು ಹೋಗಿ ಎಂದು ಡಿಪೋ ವ್ಯವಸ್ಥಾಪಕರೋ ಇಲ್ಲ ಟಿಐ, ಎಟಿಎಸ್‌, ಟಿಸಿ ಇವರಲ್ಲಿ ಯಾರಾದರೊಬ್ಬರು ಹೇಳುತ್ತಾರೆ. ಈ ವೇಳೆ ನಾನು ಡ್ಯೂಟಿಗೆ ಹೋಗುವುದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು ಆ ನೌಕರನ ಮಾತು ಕೇಳಿಸಿಕೊಳ್ಳುವುದಿಲ್ಲ.

ನಮಗೆ ಅದೆಲ್ಲ ಗೊತ್ತಿಲ್ಲ ಇಂದು ನಿನಗೆ ಡ್ಯೂಟಿ ಸಿಕ್ಕಿಲ್ಲ ಎಂದರೆ ರಜೆಚೀಟಿ ಕೊಟ್ಟುಹೋಗು ಇಲ್ಲ ಗೈರುಹಾಜರಿ ತೋರಿಸಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಈ ವೇಳೆ ವಿಧಿಯಿಲ್ಲದೆ ಡ್ಯೂಟಿ ಸಿಗದ ನೌಕರರು ಅವಶ್ಯವಿಲ್ಲದಿದ್ದರೂ ರಜೆಚೀಟಿ ಕೊಟ್ಟು ಹೋಗುತ್ತಾರೆ.

ಹೀಗಾಗಿ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವ ಸಲುವಾಗಿ ಗಣೇಶ ಚ.ಹಿತ್ತಲಮನಿ ಎಂಬುವರು ಕಳೆದ 29.12.2020ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ 2025ರಡಿ ಈ ಬಗ್ಗೆ ಮಾಹಿತಿ ಕೇಳಿದ್ದರು.

ಗಣೇಶ ಚ.ಹಿತ್ತಲಮನಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಹೋದಾಗ ಆ ದಿನದ ಹಾಜರಿಯನ್ನು ಹಾಜರಿ ಪುಸ್ತಕದಲ್ಲಿ ಏನೆಂದು ಪರಿಗಣಿಸುತ್ತೀರಿ ಎಂದು ಕೇಳಿದ್ದರು.

ಗಣೇಶ ಅವರು ಕೇಳಿದ ಮಾಹಿತಿಯನ್ನು ಕೊಟ್ಟಿರುವ ಡಿಸಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಇದ್ದಲ್ಲಿ ಅನುಸೂಚಿ ಪ್ರಾರಂಭವಾದಾಗಿನಿಂದ ಅನುಸೂಚಿ ಮುಗಿಯುವವರೆಗೂ ಘಟಕದಲ್ಲಿ ಹಾಜರಿದ್ದರೆ ಮಾತ್ರ ಹಾಜರಾತಿ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಹೀಗಾಗಿ ಯಾವುದೇ ಚಾಲನಾ ಸಿಬ್ಬಂದಿಗೆ ತಾವು ಘಟಕಕ್ಕೆ ಹೋದಾಗ ಕರ್ತವ್ಯ ಸಿಗದೆ ಹೋದರೆ ಅಂಥವರು ಘಟಕದಲ್ಲೆ ಇದ್ದರೆ ಹಾಜರಾತಿ ಪಡೆಯಬಹುದು. ಒಂದು ವೇಳೆ ನೀವು ಘಟದಲ್ಲಿ ಇಲ್ಲದಿದ್ದರೆ ಗೈರುಹಾಜರಿ ತೋರಿಸುವುದಕ್ಕೆ ಡಿಎಂಗೆ ಅಧಿಕಾರವಿದೆ.

ಇಲ್ಲ ತಾವು ಘಟಕದಲ್ಲಿ ಇದ್ದರೂ ಡಿಎಂ ಗೈರು ಹಾಜರಿ ತೋರಿಸಿದರೆ ಆ ವೇಳೆ ನೀವು ನಿಗಮದ ನಿಯಮಗಳನ್ವಯ ಡಿಎಂ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬಹುದು. ಒಂದು ವೇಳೆ ನೀವು ನೀಡಿದ ದೂರಿಗೆ ಮೇಲಧಿಕಾರಿಗಳು ಸ್ಪಂದಿಸದೆ ಹೋದರೆ ಕೋರ್ಟ್‌ ಮೆಟ್ಟಿಲೇರುವ ಮೂಲಕ ನೀವು ನ್ಯಾಯ ಪಡೆದುಕೊಳ್ಳಬಹುದು ಎಂದು ನಿಗಮದ ನಿವೃತ್ತ ಕಾನೂನು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಒಟ್ಟಾರೆ ನೌಕರರು ಕೆಲಸಕ್ಕೆ ಹಾಜರಾದ ವೇಳೆ ಡ್ಯೂಟಿ ಕೊಡದಿದ್ದರೆ ಇನ್ನು ಮುಂದೆ ಯಾವುದೇ ಚಾಲನಾ ಸಿಬ್ಬಂದಿ ರಜೆ ಚೀಟಿ ಕೊಡುವ ಅವಶ್ಯಕತೆಯಿಲ್ಲ, ಬದಲಿಗೆ ತಾವು ಕಾರ್ಯಾಚರಣೆ ಗೊಳಿಸುವ ಮಾರ್ಗದ ಸಮಯದವರೆಗೂ ಡಿಪೋದಲ್ಲೇ ಇದ್ದರೆ ನಿಮಗೆ ಹಾಜರಾತಿ ಸಿಗುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅಧಿಕಾರಿಯೇ ಸ್ಪಷ್ಟವಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ