NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕೊಳ್ಳೇಗಾಲ : ವಾರದ ರಜೆ ಸೇರಿ 3ದಿನ ನೌಕರರು ರಜೆ ಹಾಕಿಕೊಂಡರೆ 13ದಿನದ ವೇತನ ಕಟ್‌ !!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ವೇತನಕ್ಕೆ ನೇರವಾಗಿಯೇ ಕತ್ತರಿ ಹಾಕುವ ಕೆಲಸವನ್ನು ನಿಗಮಗಳ ಮೇಲಧಿಕಾರಿಗಳೇ ಶುರುವಿಟ್ಟುಕೊಂಡಿದ್ದಾರೆ.

ಈ ಮೂಲಕ ಬಹುತೇಕ ನೌಕರರಿಗೆ ತಿಂಗಳಿಗೆ ಸಿಗಬೇಕಿರುವ ವೇತನ ಸಿಗದೆ ಬೇಸತ್ತುಹೋಗುತ್ತಿದ್ದಾರೆ. ಇನ್ನು ವಿಷಯವನ್ನು ಯಾರ ಬಳಿ ಹೇಳಿಕೊಂಡರು ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮೂಲಗಳ ನಿಖರ ಮಾಹಿತಿ ಪ್ರಕಾರ ಹೇಳುವುದಾದರೆ ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಕೆಲಸ ಮಾಡುತ್ತಿರುವ ಚಾಲನಾ ಸಿಬ್ಬಂದಿಗಳು ವಾರದ ರಜೆ ಸೇರಿದಂತೆ ಎರಡು ದಿನ ರಜೆ ತೆಗೆದುಕೊಂಡರೆ ಆ ಎರಡು ದಿನಗಳ ರಜೆಯ ಜತೆಗೆ ವಾರದ ರಜೆಯನ್ನು ರದ್ದು ಮಾಡಿ ದರ್ಪ ಮೆರೆಯುತ್ತಿದ್ದಾರೆ.

ಅಲ್ಲದೆ ತಿಂಗಳ ವೇತನದ ಕೊನೆಯ ದಿನಗಳಲ್ಲಿ (ತಿಂಗಳ 21ನೇ ತಾರೀಖಿನಲ್ಲಿ) ಕಡ್ಡಾಯವಾಗಿ ಹಾಜರಾಗಬೇಕು ಇಲ್ಲದಿದ್ದರೆ ರಜೆ ಹಾಕಿಕೊಂಡಿರುವುದನ್ನು ರದ್ದು ಮಾಡಿ ಸುಮಾರು 13 ದಿನಗಳ ವೇತನವನ್ನು ಕಟ್ಟು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು, ಇದರಿಂದ ನೌಕರರು ಸರಿಯಾಗಿ ವೇತನ ಸಿಗದೆ ಪರದಾಡುವ ಸ್ಥಿತಿ ತಲುಪಿದ್ದಾರೆ. ಇನ್ನು ಈ ಬಗ್ಗೆ ಕೇಳಬೇಕಾದ ಡಿಸಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ನೌಕರರಿಗೆ ಸಹಿಸಲಾಗದ ತಲೆನೋವಾಗಿ ಪರಿಣಮಿಸುತ್ತಿದೆ.

ಇನ್ನು ಬಿಎಂಟಿಸಿಯಲ್ಲೂ ಇದೇ ಚಾಳಿಯನ್ನು ಅಧಿಕಾರಿಗಳು ಮುಂದುವರಿಸಿದ್ದು ವಾರದ ರಜೆಯ ಹಿಂದಿನ ಅಥವಾ ಮುಂದಿನ ದಿನಗಳಲ್ಲಿ ಕೆಲಸ ಮಾಡಿದ್ದರೆ ವಾರದ ರಜೆ ಕೊಡಬೇಕು ಆದರೆ, ಇಲ್ಲಿಯೂ ಕೂಡ ಅದನ್ನು ಗಾಳಿಗೆ ತೂರಿ ವಾರದ ರಜೆಯ ಹಿಂದೆ ಮುಂದೆ ರಜೆ ಹಾಕಿಕೊಂಡು ಆ ರಜೆ ರದ್ದಾದರೆ ವಾರದ ರಜೆಯನ್ನೂ ಕಟ್‌ ಮಾಡುತ್ತಾರೆ. ಇದರಿಂದ ಬಹುತೇಕ ನೌಕರರಿಗೆ ವಾರದ ರಜೆಯೂ ಸಿಗುತ್ತಿಲ್ಲ, ಜತೆಗೆ ಗೈರುಹಾಜರಿ ತೋರಿಸಲಾಗುತ್ತಿದೆ.

ಇನ್ನು ರಾಜ್ಯ ಸರ್ಕಾರ 21 ದಿನಗಳ ಸಾರ್ವತ್ರಿಕ ರಜೆ ನೀಡಿದ್ದರೂ ಈ ಸಾರಿಗೆ ಸಂಸ್ಥೆಗಳ ನೌಕರರಿಗೆ ಅದು ಅನ್ವಯವಾಗುತ್ತಿಲ್ಲ. ಆದರೆ ವರ್ಷದಲ್ಲಿ ಸರ್ಕಾರ ಘೋಷಣೆ ಮಾಡೋ ಈ 21ದಿನಗಳ ಸಾರ್ವತ್ರಿಕ ರಜಾ ದಿನಗಳನ್ನು ನಮಗೂ ಕೊಡಿ ಎಂದರೆ ನಿಮಗೆ ಅನ್ವಯವಾಗೋದಿಲ್ಲ. ನಾವು ಕೊಡೋ ರಜೆಯನ್ನು ತಗೊಬೇಕು ಅಷ್ಟೇ ಎಂದು ಕಾನೂನು ಬಾಹಿರ ನಿಯಮವನ್ನು ಅಳವಡಿಸಿಕೊಂಡಿದ್ದಾರೆ ಅಧಿಕಾರಿಗಳು.

ಸಾರ್ವತ್ರಿಕ ರಜಾ ದಿನಗಳನ್ನು ಬಿಟ್ಟು ನಿಗಮದಿಂದಲೇ ತಮಗೆ ಇಷ್ಟ ಬಂದ ಐದು ದಿನಗಳ ಸಾರ್ವತ್ರಿಕ ರಜಾ ದಿನಗಳನ್ನು ಮಾತ್ರ ನೌಕರರಿಗೆ ನೀಡಲಾಗುತ್ತಿದೆ. ಇದೂ ಕೂಡ ಹಿಂದೂಗಳಿಗೆ ಮುಸ್ಲಿಮರ ಹಬ್ಬಗಳಂದು, ಮುಸ್ಲಿಂ ಸಮುದಾಯದ ನೌಕರರಿಗೆ ಹಿಂದೂಗಳ ಹಬ್ಬದಂದು ರಜೆ ಕೊಡುವುದು ಅಧಿಕಾರಿಗಳ ನಡೆಯಾಗಿದೆ.

ಇನ್ನು ಈ ಮೋದಲೇ ಹೇಳಿದಂತೆ ಒಂದು ದಿನ ರಜೆ ಹಾಕಿದರೆ 2 ದಿನ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ. ಒಂದು ದಿನ ನೌಕರರು ರಜೆಯನ್ನು ಹಾಕಿದ್ರೆ 2 ದಿನದ ವೇತನ ಕಟ್ ಮಾಡುತ್ತಿದ್ದಾರೆ. ಹೀಗೆ ಮಾಡಿದ್ರೆ ಕೆಲಸ ಮಾಡೋದು ಹೇಗೆ ಎಂಬುವುದು ನೌಕರರ ಅಳಲಾಗಿದೆ.

8 ಗಂಟೆ ಒಟಿ ಮಾಡಿದರೆ 3-4 ಗಂಟೆ ಒಟಿ ಹಣ ಕೊಡುವುದು ಅದು ತಮ್ಮ ಜೇಬಿನಿಂದ ಕೊಡುತ್ತಿರುವರಂತೆ ಕೆಂಗಣ್ಣು ಬೀರಿ ಅಧಿಕಾರಿಗಳು ಮಂಜೂರು ಮಾಡುವರು ಎಂಬ ಆರೋಪ ದಶಕಗಳಿಂದಲೂ ಕೇಳಿ ಬರುತ್ತಿದೆ. ಆದರೆ ಈವರೆಗೂ ಈ ಬಗ್ಗೆ ಅಧಿಕಾರಿಗಳ ವಿರುದ್ಧ ಯಾವುದೇ ತನಿಖೆ ನಡೆಸದಿರುವುದು ಮಾತ್ರ ಸೋಜಿಗವಾಗಿದೆ.

ಇನ್ನು ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಇದ್ದಕ್ಕೆ ಈಗಾಗಲೇ ಅನೇಕ ಘಟನೆಗಳು ಸಾಕ್ಷಿಯಾಗಿವೆ. ನೌಕರರು ಒಂದು ಶಿಫ್ಟ್ ಮುಗಿಸಿ, ಮತ್ತೊಂದು ಶಿಫ್ಟ್ ಒಟಿಯಾಗಿ ಕೆಲಸ ಮಾಡಿದರೆ ಮಾಡೋದು 8 ಗಂಟೆ ಒಟಿಯಾದರೂ ನೌಕರರಿಗೆ ಸಂಪೂರ್ಣ ಒಟಿ ನೀಡದೇ, 4 ಗಂಟೆಗೆ ಒಟಿಯ ಹಣವನ್ನು ಮಾತ್ರ ವೇತನದಲ್ಲಿ ಸೇರಿಸುತ್ತಿದ್ದಾರೆ.

ಒಟಿಯನ್ನು ಇಂತಿಷ್ಟು ಸಮಯದವರೆಗೆ ಮಾತ್ರವೇ ಮಾಡಬೇಕು ಎಂಬುದು ಕಾರ್ಮಿಕ ನಿಯಮ ಹೇಳುತ್ತದೆ. ಆದರೆ ಅದನ್ನು ಮೀರಿ 8 ಗಂಟೆಯ ಒಟಿ ಮಾಡಿಸಿಕೊಳ್ಳುತ್ತಿರೋದು ಆಘಾತಕಾರಿ ಸಂಗತಿ. ಜತೆಗೆ ಇದೇ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಅಪಘಾತಕ್ಕೂ ಕಾರಣವಾಗುತ್ತಿದೆ ಎಂಬುದರ ಬಗ್ಗೆ ಇತ್ತೀಚೆಗೆ ನಡೆಸಿದ ತನಿಖೆಯೊಂದು ಬಹಿರಂಗ ಪಡಿಸಿದೆ.

ಹೀಗಾಗಿ ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಿ ಸಂಬಂಧಪಟ್ಟ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ಮಟ್ಟದ ಅಧಿಕಾರಿಗಳ ಜತೆ ತುರ್ತಾಗಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಂಡರೆ ಮುಂದಾಗುವ ಇನಷ್ಟು ಅಪಘಾತಗಳನ್ನು ತಪ್ಪಿಸುವ ಜತೆಗೆ ನೌಕರರು ಒತ್ತಡದಲ್ಲಿ ಕೆಲಸ ಮಾಡುವುದು ತಪ್ಪಿಸಬಹುದಾಗಿದೆ.

ಇದರ ಜತೆಗೆ ಪ್ರಮುಖವಾಗಿ ವಾರದ ರಜೆಯನ್ನು ಕಡ್ಡಾಯವಾಗಿ ಅಧಿಕಾರಿಗಳು ನೀಡಬೇಕು. ಈ ವೇಳೆ ಯಾವುದೆ ಗೈರು ಹಾಜರಿಯನ್ನು ತೋರಿಸದೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಕೆಲಸವಾಗಬೇಕು. ಈ ಬಗ್ಗೆ ಸಚಿವರು ಮತ್ತು ಎಂಡಿಗಳು ಗಮನ ಹರಿಸಬೇಕು ಎಂಬುವುದು ನೌಕರರ ಮನವಿಯಾಗಿದೆ.

1 Comment

  • ಸಾರಿಗೆ ನಿಗಮದ ಆ ನೌಕರರು ಈ ದೌರ್ಜನ್ಯ ಸಲುವಾಗಿ ಬಾದಿತರೆಲ್ಲರೂ ತಮ್ಮ ತಮ್ಮ ಹಂತದಲ್ಲಿ ಕಾರ್ಮಿಕ ಆಯುಕ್ತರರಿಗೆ ದೂರು ನೀಡಲು ಮುಂದಾಗಬೇಕು. ಈ ಮುಂದಾಗದಿರುವ ದೌರ್ಬಲ್ಯ ವೇ ಆಡಳಿತ ವರ್ಗದವರಿಗೆ ಮೇಲುಗೈ ಆಗಿರುವುದು.

    ಪ್ರಚಾರವನ್ನು ಬಿಟ್ಟು ತಮ್ಮ ತಮ್ಮ ಹಂತದ ಕಾನೂನು ಹೋರಾಟ ಕ್ಕೆ ಮೊದಲು ಮುಂದಾಗಿ. ಸರ್ಕಾರದ ಗಮನಕ್ಕೆ ಬರಲಿ.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ