NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಅವಕಾಶ ನೀಡುತ್ತಿದೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ಗಳನ್ನು ಹೆಚ್ಚಿಸುವ ನೆಪದಲ್ಲಿ ಸಾರಿಗೆ ನಿಗಮಗಳಿಗೆ ಖಾಸಗಿಯವರ ಪ್ರವೇಶಕ್ಕೆ ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವಾಲಯ ಅವಕಾಶ ಮಾಡಿಕೊಟ್ಟಿದೆ. ಇದರ ವಿರುದ್ಧ ಜನಪ್ರತಿನಿಧಿಗಳು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ಸಾರಿಗೆ ನಿಗಮಗಳ ನೌಕರರು ಮತ್ತು ಸಂಘಟನೆಗಳು ಆರೋಪಿಸುತ್ತಿವೆ.

ಬಿಎಂಟಿಸಿ ಸೇರಿ ಎಲ್ಲ ನಾಲ್ಕೂ ಸಾರಿಗೆ ನಿಗಮಗಳನ್ನು ಭಾಗಶಃ ಖಾಸಗಿಯವರಿಗೆ ನೀಡಲು ಒಂದೂವರೆ ದಶಕದ ಹಿಂದೆ ಆಗಿನ ರಾಜ್ಯ ಸರ್ಕಾರದ ಸಾರಿಗೆ ಸಚಿವರು ನಿರ್ಧರಿಸಿದ್ದರು. ಆಗ ನಿಗಮಗಳ ನೌಕರರು, ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಖಾಸಗಿಯವರಿಗೆ ಒಪ್ಪಿಸುವ ನಿರ್ಧಾರವನ್ನು ಕೈಬಿಡಲಾಗಿತ್ತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಆಗದ ಕೆಲಸವನ್ನು ಈಗಿನ ಕೇಂದ್ರ ಸರ್ಕಾರ ಮಾಡಲು ಹೊರಟಿದೆ.

ನಿಗಮಕ್ಕಿಲ್ಲ ಸಬ್ಸಿಡಿ: ಎಲೆಕ್ಟ್ರಿಕ್‌ ವಾಹನಗಳನ್ನು ಪ್ರೋತ್ಸಾಹಿಸಲು ಬೃಹತ್‌ ಕೈಗಾರಿಕಾ ಸಚಿವಾಲಯವು ಫೇಮ್‌-2 ಯೋಜನೆ ರೂಪಿಸಿತ್ತು. ಈ ಯೋಜನೆಯಡಿ ಬಸ್‌ಗಳಿಗೆ ₹ 39 ಲಕ್ಷದಿಂದ ₹ 50 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ. ಆದರೆ, ಈ ಸಬ್ಸಿಡಿ ಖಾಸಗಿ ಕಂಪನಿಗಳಿಗಷ್ಟೇ ಸಿಗಲಿದ್ದು, ಸಾರಿಗೆ ನಿಗಮಗಳಿಗೆ ಇಲ್ಲ. ಮಾತ್ರವಲ್ಲ, ಉತ್ಪಾದನಾ ಕಂಪನಿಗಳಿಗೇ ಮುಂದೆ ಬಸ್‌ಗಳನ್ನೂ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಈಗಾಗಲೇ ಬಿಎಂಟಿಸಿಯಲ್ಲಿ 513 ಇವಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಕೆಎಸ್‌ಆರ್‌ಟಿಸಿಗೆ 50 ಇವಿ ಬಸ್‌ಗಳು ಬಂದಿವೆ. ಮುಂದೆ 300 ಹವಾನಿಯಂತ್ರಣ ರಹಿತ, 200 ಹವಾನಿಯಂತ್ರಿತ ಬಸ್‌ಗಳು ಬರಲಿವೆ. ಈಗ ದೂರದ ಊರಿಗೆ ಎಸಿ ಬಸ್‌ಗಳಿವೆ. ಎಲೆಕ್ಟ್ರಿಕ್‌ ಬಸ್‌ಗಳು ಬಂದರೆ ಕೆಎಸ್‌ಆರ್‌ಟಿಸಿಯಿಂದಲೂ ಹತ್ತಿರದ ನಗರಗಳಿಗೆ ಎಸಿ ಬಸ್‌ಗಳು ಸಂಚರಿಸಲಿವೆ.

ಇನ್ನು ವಿಶೇಷ ಅಂದರೆ ಈ ಬಸ್‌ಗಳಲ್ಲಿ ನಿರ್ವಾಹಕರು ಮಾತ್ರ ನಿಗಮದವರಾಗಿರುತ್ತಾರೆ ಕಾರಣ ಹೊಸದಾಗಿ ಬರುವ ನಿರ್ವಾಹಕರಿಗೆ ಇದನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಚಾಲಕ, ತಾಂತ್ರಿಕ ಸಿಬ್ಬಂದಿ, ವಾಹನ ನಿರ್ವಹಣೆ ಎಲ್ಲವೂ ಖಾಸಗಿ ಕಂಪನಿಯದ್ದಾಗಿರುತ್ತದೆ. ಏಕೆಂದರೆ ಇದನ್ನು ಕಲಿತವರೆ ಬರುವುದರಿಂದ.

ಮುಚ್ಚಲಿವೆ ಕಾರ್ಯಾಗಾರಗಳು: ಹಿಂದೆ ಟಾಟಾ, ಲೈಲೆಂಡ್ ಸೇರಿದಂತೆ ಯಾವುದೇ ಕಂಪನಿಯಿಂದ ಬಸ್‌ ಚಾಸಿಗಳನ್ನು ಮಾತ್ರ ಖರೀದಿಸಲಾಗುತ್ತಿತ್ತು. ಆಯಾ ನಿಗಮಗಳ ಕಾರ್ಯಾಗಾರದಲ್ಲಿ ಅದಕ್ಕೆ ‘ಬಾಡಿ’ ಕಟ್ಟಲಾಗುತ್ತಿತ್ತು. ಕಾರ್ಯಾಚರಣೆ ಆರಂಭವಾದ ಮೇಲೆ ಏನೇ ತೊಂದರೆ ಕಾಣಿಸಿಕೊಂಡರೂ ಈ ಕಾರ್ಯಾಗಾರಗಳಲ್ಲಿಯೇ ರಿಪೇರಿ ಮಾಡಲಾಗುತ್ತಿತ್ತು.

ಆದರೆ, ಈಗ ಪೂರ್ಣ ತಯಾರಾದ ಎಲೆಕ್ಟ್ರಿಕ್‌ ಬಸ್‌ಗಳನ್ನು ಒಡಂಬಡಿಕೆಯ ಆಧಾರದಲ್ಲಿ ನಿಗಮಗಳಿಗೆ ತೆಗೆದುಕೊಳ್ಳಲಾಗುತ್ತಿದೆ. ನಿಗಮಗಳ ಕಾರ್ಯಾಗಾರಗಳಲ್ಲಿ ಈ ಬಸ್‌ಗಳಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆಯುವುದಿಲ್ಲ. ಇವಿ ಬಸ್‌ಗಳು ಹೆಚ್ಚಾದಂತೆ ಒಂದೊಂದೇ ಕಾರ್ಯಾಗಾರಗಳು ಮುಚ್ಚಲಿವೆ ಎಂದು ತಾಂತ್ರಿಕ ಸಿಬ್ಬಂದಿ ತಿಳಿಸಿದ್ದಾರೆ.

ಅಧಿಕ ಪಾವತಿ: ಒಂದು ಬಿಎಂಟಿಸಿ ಬಸ್‌ ಒಂದು ಕಿ.ಮೀ.ಗೆ ಸರಾಸರಿ ₹ 35ರಿಂದ ₹ 36 ಆದಾಯ ಗಳಿಸುತ್ತದೆ. ಎಲೆಕ್ಟ್ರಿಕ್‌ ಬಸ್‌ಗಳಿಗೆ ಈಗಿನ ಒಪ್ಪಂದದ ಪ್ರಕಾರ ಕಿ.ಮೀ.ಗೆ ₹ 51.5 ಪಾವತಿಸಬೇಕು. ಅಂದರೆ ಆದಾಯಕ್ಕಿಂತ ಕನಿಷ್ಠ ₹ 15 ಹೆಚ್ಚು ಪಾವತಿ ಮಾಡಬೇಕು. ‘ಹೀಗೆಯೇ ಮುಂದುವರಿದರೆ ನಿಗಮಗಳಲ್ಲಿ ಬಸ್‌ಗಳ ಕಾರ್ಯಾಚರಣೆ ನಷ್ಟದ ಕಾರ್ಯ ಎಂದು ಕೆಲವೇ ವರ್ಷಗಳಲ್ಲಿ ಬಿಂಬಿತವಾಗಲಿದೆ. ಇನ್ನು ಇದರಿಂದ ಖಾಸಗಿಯವರಿಗೆ ಹಸ್ತಾಂತರಿಸುವ ಕೆಲಸ ಸುಲಭವಾಗಲಿದೆ ಎಂಬುವುದು ಸರ್ಕಾರದ ಲೆಕ್ಕಾಚಾರ.

ಖಾಸಗಿ ಕೈಗೆ ಡಿಪೋಗಳು: ಬಿಎಂಟಿಸಿಗೆ ಇವಿ ಬಸ್‌ಗಳನ್ನು ಟಾಟಾ ಮೋಟಾರ್ಸ್‌ ಕಂಪನಿ ಪೂರೈಸುತ್ತಿದೆ. ಅವರಿಗೆ ಈಗಾಗಲೇ 10 ಡಿಪೊಗಳನ್ನು ಬಿಟ್ಟು ಕೊಡಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ ಈ ನಾಲ್ಕು ನಿಗಮಗಳು ದೇಶದಲ್ಲಿಯೇ ಉತ್ತಮ ನಿಗಮಗಳಾಗಿವೆ. ಹೀಗೆ ಖಾಸಗೀಕರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ಉತ್ತರ ಭಾರತದ ನಿಗಮಗಳಂತೆ ದುರ್ಬಲಗೊಳ್ಳಲಿವೆ ಎಂದು ನೌಕರರು ಹೇಳುತ್ತಿದ್ದಾರೆ.

ಒತ್ತಡ ಹೇರದ ರಾಜ್ಯ ಸರ್ಕಾರ: ವಿವಿಧ ಸಾರಿಗೆ ಒಕ್ಕೂಟಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿವೆ. ಎಲೆಕ್ಟ್ರಿಕ್ ಬಸ್‌ಗಳನ್ನು ನಿಗಮಗಳೇ ಖರೀದಿ ಮಾಡಬೇಕು ಎಂದು ಒಕ್ಕೂಟಗಳ ಸದಸ್ಯರು ಒತ್ತಾಯಿಸಿದ್ದಾರೆ. ಆ ಸಂದರ್ಭದಲ್ಲಿ ಖರೀದಿಗೆ ನಮಗೆ ಅವಕಾಶ ನೀಡಬೇಕು.

ಇನ್ನು ಸಬ್ಸಿಡಿಯನ್ನು ನಮಗೆ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂಬುವುದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆಯಾಗಿದೆ. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸಲು ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಲ್ಲ ಇದು ಹಲವು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.

Leave a Reply

error: Content is protected !!
LATEST
ಬರ ಪರಿಹಾರ ವಿತರಣೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯ: ಕುರುಬೂರ್ ಶಾಂತಕುಮಾರ್ ಬೇಸರ KSRTC ನೌಕರರ ಮೇಲೆ ತಿಪಟೂರು ಘಟಕ ವ್ಯವಸ್ಥಾಪಕರ ದರ್ಪ, ಏಕ ವಚನ ಪ್ರಯೋಗ! ವಂಚಕರ ನಂಬಿ ಹಣ ದುಪ್ಪಟ್ಟು ಆಸೆಗೆ ಬಿದ್ದ ಮಹಿಳೆ ಕೋಟಿ ರೂ. ಕಳೆದುಕೊಂಡರು!! ಮೊಮ್ಮಗನ ಹಗರಣ ತಾತನಿಗೆ ಮುಳುವಾಯಿತೇ!! ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಬೆನ್ನೆಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ ಪ್ರಜ್ವಲ್ ರೇವಣ್ಣ ಸರಣಿ ಅತ್ಯಾಚಾರ ಪ್ರಕರಣದ ನೊಂದ ಮಹಿಳೆಯರ ಬೆಂಬಲಕ್ಕೆ ನಿಂತ ಆಮ್ ಆದ್ಮಿ ಪಾರ್ಟಿ ಬಿಜೆಪಿ ಗೆದ್ದರೆ ಸರ್ವಾಧಿಕಾರ ಆಡಳಿತ ಬರುವುದರಲ್ಲಿ ಯಾವುದೇ ಸಂಶಯವಿಲ್ಲ: ಮುಖ್ಯಮಂತ್ರಿ ಚಂದ್ರು ಬಿಸಿಲ ಝಳಕ್ಕೆ ಬಿಎಂಟಿಸಿ ನಿರ್ವಾಹಕ ಸೇರಿ ಇಬ್ಬರು ಮೃತ ಬೇಸಿಗೆಯ ಬಿರು ಬಿಸಿಲು- ತಂಪೆರೆದ ಭರಣಿ ಮಳೆ: ರೈತರ ಮುಖದಲ್ಲಿ ಮಂದಹಾಸ ಬೇಟಿ ಬಚಾವೋ ಬೇಟಿ ಪಢಾವೋ ಎಂದರೆ ಅತ್ಯಾಚಾರಿಗಳಿಗೆ ಟಿಕೆಟ್‌ ನೀಡುವುದೇ?:  ಮುಖ್ಯಮಂತ್ರಿ ಚಂದ್ರು ಪ್ರಶ್ನೆ