NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮುಖ್ಯಮಂತ್ರಿ, ಸಾರಿಗೆ ಸಚಿವರ ಮುಂದೆ ಬೇಡಿಕೆ ಮಂಡಿಸಿದ ಸಾರಿಗೆ ನೌಕರರು

ವಿಜಯಪಥ ಸಮಗ್ರ ಸುದ್ದಿ

ಜೈಪುರ್‌: ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಆಯೋಗದ ಮಾದರಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಅಗ್ರಿಮೆಂಟ್‌ ಮಾದರಿಯ ವೇತನ ಪಡೆಯುತ್ತಿದ್ದು, ಕಾರ್ಮಿಕ ಸಂಘಟನೆಗಳ ಬೇಜವಾಬ್ದಾರಿಯಿಂದ ಶೇ.50 ರಿಂದ ಶೇ.53 ಕಡಿಮೆ ವೇತನ ಪಡೆಯುತ್ತಿದ್ದಾರೆ.

ಇದನ್ನು ಕೆಲವರು ನಂಬಲು ಅಸಾಧ್ಯ ಎನ್ನಬಹುದು ಆದರೆ, ಇದೇ ಸತ್ಯ. ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( RSRTC)ಯ ಒಬ್ಬ ತಾಂತ್ರಿಕ ಸಿಬ್ಬಂದಿ (ಮೆಕ್ಯಾನಿಕ್) ಅವರ 16ವರ್ಷ ಸೇವಾವಧಿಯಲ್ಲಿ 56,243 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಅದೇ ಕೆಎಸ್‌ಅರ್‌ಟಿಸಿಯಲ್ಲಿ ಕೇವಲವ 27 ಸಾವಿರ ರೂಪಾಯಿ ಅಷ್ಟೇ ಬರುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮೆಕ್ಯಾನಿಕ್‌ಗಳಿಗೆ ಅಷ್ಟೇ ಇದು ಅನ್ವಯವಾಗುತ್ತಿಲ್ಲ ಚಾಲನಾ ಸಿಬ್ಬಂದಿಗೂ ಅನ್ವಯವಾಗುತ್ತದೆ. ಅದೂ ಕೂಡ 15-16 ವರ್ಷದಿಂದಲೂ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುತ್ತಿರುವ ಪ್ರಸ್ತುತ ವೇತನ. ಅಂದರೆ ಈ ಬಗ್ಗೆ ಇಲ್ಲೇ ಲೆಕ್ಕಾಚಾರ ಹಾಕಿದರೂ ಕೂಡ ಸಾಮಾನ್ಯರಿಗೂ ಇದು ಅರ್ಥವಾಗುತ್ತದೆ. ಬೇರೆ ರಾಜ್ಯದ ಸಾರಿಗೆ ಸಿಬ್ಬಂದಿಗೂ ಮತ್ತು ಕರ್ನಾಟಕ ರಾಜ್ಯದ ಸಾರಿಗೆ ಸಿಬ್ಬಂದಿಗೂ ಬರುತ್ತಿರುವ ವೇತನದಲ್ಲಿ ಎಷ್ಟು ವ್ಯತ್ಯಾಸ ಇದೇ ಎಂಬುವುದು.

ಇನ್ನು ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಇದ್ದಾರೆ ಎಂದರೆ ಅದು ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಸಿಬ್ಬಂದಿ ಎಂದು ಪ್ರಸ್ತುತ ವೇತನ ಚೀಟಿ (Pay slip or Salary slip) ಸಹಿತ ಸಾಬೀತು ಮಾಡಬಹುದು.

ಇನ್ನು ನಮ್ಮ ರಾಜ್ಯದಲ್ಲೂ ಸಿಎಂ, ಸಚಿವರು, ಸರ್ಕಾರಿ ಅಧಿಕಾರಿಗಳ ಕಾರು ಚಾಲಕರು ತಿಂಗಳಿಗೆ 50ರಿಂದ 80 ಸಾವಿರ ರೂ.ವರೆಗೂ (ಅವರ 15-16 ವರ್ಷದ ಸೇವಾವಧಿಗೆ ) ವೇತನ ಪಡೆಯುತ್ತಿದ್ದಾರೆ. ಅದರೆ, ಸಾರಿಗೆ ನಿಗಮದಿಂದ ಕಳಿಸಿರುವ ಚಾಲಕರಿಗೆ ನಿಗಮದಲ್ಲಿ ನೀಡುತ್ತಿರುವ ವೇತನವೇ ಬರುತ್ತಿದೆ. ಇಲ್ಲಿಯೂ ಕೂಡ ವೇತನ ವ್ಯತ್ಯಾಸ ಅಥವಾ ತಾರತಮ್ಯತೆಯನ್ನು ನಾವು ನೋಡಬಹುದು.

ಅಂದರೆ, ಸರ್ಕಾರ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಗೆ ಒಳ್ಳೆ ವೇತನ ಸಿಗುತ್ತಿದೆ. ಜತೆಗೆ ಅವರು ಭಾರಿ ವಾಹನ ಓಡಿಸುವುದಿಲ್ಲ ಲಘು ವಾಹನಗಳನ್ನಷ್ಟೇ ಓಡಿಸುತ್ತಾರೆ. ಅಲ್ಲದೆ ಅವರಿಗೆ ನಿರಂತವಾಗಿ 8 ರಿಂದ 12 ಗಂಟೆಗಳ ಕಾಲ ಚಾಲನೆ ಮಾಡುವುದಿಲ್ಲ. ಆದರೆ, ಭಾರಿ ವಾಹನ ಓಡಿಸುವ ಅದರಲ್ಲೂ ನಿರಂತರವಾಗಿ 8ರಿಂದ12 ಗಂಟೆಗಳ ಕಾಲ ಚಾಲನೆ ಮಾಡುವ ಸಾರಿಗೆ ನೌಕರರಿಗೆ ವೇತನ ಕೊಡುವುದು ಮಾತ್ರ ತೀರ ಕಡಿಮೆ.

ಇನ್ನು ಈ ಎಲ್ಲದರ ಬಗ್ಗೆ ಪ್ರಸ್ತುತ ತಮಗೂ ತಿಳಿಸಿದ್ದರೂ ಕೂಡ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೌಕರರಿಗೆ ಭರವಸೆ ಮಾತ್ರ ಈಗಲೂ ಕೊಡುತ್ತಲೇ ಕಾಲಕಳೆಯುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಮೀನಮೇಷ ಎಣಿಸುತ್ತಿದ್ದಾರೆ.

ಹೀಗಾಗಿ ನೌಕರರು ನಮಗೆ ಸರ್ಕಾರಿಗೆ ನೌಕರರಿಗೆ ಇರುವಂತೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು. ಈ ಮೂಲಕ ನಾಲ್ಕೂ ವರ್ಷಕ್ಕೊಮ್ಮೆ ನಾವು ಅನುಭವಿಸುತ್ತಿರುವ ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಕೇಸ್‌ ಹೀಗೆ ಹತ್ತಾರು ಕಿರುಕುಳಗಳಿಗೆ ಶಾಶ್ವತ ಪರಿಹಾರ ಬೇಕು ಎಂದು ನೂತನ ಸರ್ಕಾರದ ಮುಂದೆ ತಮ್ಮ ಬೇಡಿಕೆ ಮಂಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು