CrimeNEWSನಮ್ಮರಾಜ್ಯ

ಸಚಿವರು ಸ್ಥಳಕ್ಕೆ ಬರಲೇ ಬೇಕು- ಬಿಎಂಟಿಸಿ ಡಿಪೋದಲ್ಲಿ ಶವವಿಟ್ಟುಕೊಂಡು ಅಹೋರಾತ್ರಿ ಧರಣಿ : ಘೋಷಣೆ ಮಾಡಿದ ಎಎಪಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಾರಿಗೆ ಸಚಿವರು ಮತ್ತು ಸರ್ಕಾರದ ವಿರುದ್ಧ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆಯಿಂದ ಬಿಎಂಟಿಸಿ ಚನ್ನಸಂದ್ರ ಡಿಪೋ 21ರಲ್ಲಿ ಚಾಲನಕನ ಪಾರ್ಥಿವ ಶರೀರ ವಿಟ್ಟುಕೊಂಡು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೆ ಸಚಿವರಾಗಲಿ ಇಲ್ಲ ಸಂಸ್ಥೆಯ ಎಂಡಿಯಾಗಲಿ ಸ್ಥಳಕ್ಕೆ ರಾತ್ರಿ 7ಗಂಟೆಯಾದರೂ ಬಂದಿಲ್ಲ.

ಅಂದರೆ ಇವರು ಡಿಪೋ ವ್ಯವಸ್ಥಾ ಪಕರಿಗೇ ಹೆದರಿಕೊಂಡು ಕುಳಿತಿದ್ದಾರೆ. ಈ ಎಲ್ಲವನ್ನು ಬಿಟ್ಟು ಡಿಪೋ ಮ್ಯಾನೇಜರ್ ಅಮಾನತು ಮಾಡಿ, ಬಂಧನ ಮಾಡಬೇಕು ಹಾಗೂ ಸರ್ಕಾರ ತಕ್ಷಣವೇ ಐವತ್ತು ಲಕ್ಷ ರೂ. ಪರಿಹಾರ ಧನವನ್ನು ಮೃತರ ಕುಟುಂಬಕ್ಕೆ ಘೋಷಿಸಬೇಕೆಂದು ಒತ್ತಾಯಿಸಿದರು.

ಇನ್ನು ಸಚಿವರು ಧರಣಿ ನಿರತ ಡಿಪೋಗೆ ಬರುವವರಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಘೋಷಿಸಿದರು.

ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾರು ಕಾರಣ ಸಾರಿಗೆ ಸಚಿವರಲ್ಲವೇ, ಸಿಎಂ ಬೊಮ್ಮಾಯಿ ಅವರು ಕಾರಣವಲ್ಲವೇ. ನೌಕರರು ಕೇಳುತ್ತಿರುವುದು ಮೂಲಭೂತ ಸೌಲಭ್ಯಗಳನ್ನು. ಆದರೆ ಅದನ್ನು ಮಾಡಲಾಗದೆ ನೀವು ಭ್ರಷ್ಟರಾಗುತ್ತಿದ್ದೀರಾ ಎಂದು ಕಿಡಿಕಾರಿದರು.

ಇನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಅಷ್ಟೊಂದು ಹೆದರಿಕೊಂಡಿದ್ದೀರಾ ನೀವು ಡಿಪೋ ವ್ಯವಸ್ಥಾಪಕರಿಗೆ, ಡಿಪೋ ಮ್ಯಾನೇಜರ್‌ ಒಬ್ಬ ಭ್ರಷ್ಟ ಕಿರುಕುಳ ಕೊಡುತ್ತಾನೆ, ಒಂದು ಡ್ಯೂಟಿಗೆ ಸಾವಿರ ಸಾವಿರ ದುಡ್ಡು ತೆಗೆದುಕೊಳ್ಳುತ್ತಾನೆ, ರಜಕ್ಕೆ ಹಣ ತೆಗೆದುಕೊಳ್ಳುತ್ತಾನೆ. ಅಂಥವರ ಪರವಾಗಿ ನೀವು ನಿಂತಿದ್ದೀರ ಎಂದರೆ ನಿಮ್ಮ ಒಂದು ಅಧಿಕಾರಕ್ಕೆ ನಾಚಿಕೆಯಾಗಬೇಕು.

ಒಂದು ಅಮಾನತು ಆದೇಶವನ್ನು ನಿಮಗೆ ಮಾಡಲಾಗುತ್ತಿಲ್ಲ ಎಂದರೆ ನೀವು ಯಾಕ್ರಿ ಕೂತಿದ್ದೀರಾ ಬಿಎಂಟಿಸಿ ಎಂಡಿಯಾಗಿ ವಿಆರ್‌ಎಸ್‌ ತೆಗೆದುಕೊಂಡು ಬನ್ನಿ ನಮ್ಮೊಂದಿಗೆ ಹೋರಾಟ ಮಾಡಿ. ಇನ್ನು ಸಾರಿಗೆ ಸಚಿವರು ಬಳ್ಳಾರಿಯಲ್ಲಿ ಹಬ್ಬ ಮಾಡುತ್ತಿದ್ದೀರಲ್ಲ ಬೆಂಗಳೂರಿಗೆ ಬಂದ್ರಿ ಇಲ್ಲಿ, ಘಟಕ 21ರಲ್ಲಿ ಸೂತಕ ನಡೆಯುತ್ತಿದೆ. ನಿಮ್ಮದೇ ಸಿಬ್ಬಂದಿ ಕಿರಿಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಮ್ಮ ಅಧಿಕಾರಿಗಳು ಮತ್ತು ನೀವುಗಳೇ ಇವತ್ತು ಕೊಲೆ ಮಾಡಿದ್ದೀರಾ, ಮುಖ್ಯಮಂತ್ರಿಗಳಿಗಂತು ರಾಜ್ಯದ ಜನರ ಮೇಲೆ ಕಾಳಜಿನೆ ಇಲ್ಲವಾಗಿದೆ. ಬೆಳಗ್ಗೆ 10 ಗಂಟೆಯಿಂದ ಇದೇ ಘಟಕದಲ್ಲಿ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಇನ್ನು ಒಬ್ಬ ಅಧಿಕಾರಿಯೂ ಬಂದಿಲ್ಲ ಎಂದರೆ ನಿಮ್ಮ ಆಡಳಿತಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕ್ಯಾಂಡಲ್ ಲೈಟ್ ಹಚ್ಚುವ ಮೂಲಕ ಸಾರಿಗೆ ನೌಕರರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ