ಬೆಂಗಳೂರು: 20 ಲಕ್ಷ ಕೋಟಿ ಪರಿಹಾರದ ಹೆಸರಿನಲ್ಲಿ ಜನರ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡಲು ಹೊರಟಿದೆ ಇದು, ಹೀಗೆ ನಡೆದುಕೊಳ್ಳುವುದರಿಂದ ಐಾರಿಗೆ ಏನು ಲಾಭ ಎಂದು ಕೇಂದ್ರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪರಿಹಾರ ಹೆಸರಿನಲ್ಲಿ ಜನರ ಜತೆ ಚೆಲ್ಲಾಟ ಆಡಬಾರದು. ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪೊಳ್ಳು ಘೋಷಣೆ ಬದಲಾಗಿ ಸರಿಯಾದ ರೀತಿ ಪರಿಹಾರ ನೀಡಿ. ಬಡವರ ಜೀವ ಉಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕೊರೊನಾದಿಂದ ತತ್ತರಿಸಿದ ಜನರ ನೆರವಿಗೆ ಬರಬೇಕಾದಂತ ಪ್ಯಾಕೇಜ್ಗಳನ್ನು ಸರ್ಕಾರ ಘೋಷಣೆ ಮಾಡಬೇಕು ಅದನ್ನು ಬಿಟ್ಟು ಸದ್ಯಕ್ಕೆ ಕಾರ್ಯ ರೂಪಕ್ಕೆ ತರಲಾಗದ ಪ್ಯಾಕೇಜ್ ಘೋಷಣೆ ಮಾಡಿದರೆ ಯಾರಿಗೆ ಲಾಭವಾಗುವುದು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಿದೆಯೇ ಎಂದು ಪ್ರಶ್ನಿಸಿದ ಅವರು ಮೊದಲನೆ ಪ್ಯಾಕೇಜ್ನಲ್ಲಿ 6.30 ಲಕ್ಷ ಕೋಟಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 2.30 ಸಾವಿರ ಕೋಟಿ ಅಷ್ಟೇ . ಈ ಪ್ಯಾಕೇಜ್ನಿಂದ ಆರ್ಥಿಕ ಚೇತರಿಕೆ ಸಾಧ್ಯವಿಲ್ಲ ಬದಲಾಗಿ ಬಡತನ ಹೆಚ್ಚಾಗುತ್ತಿದೆ. ಜನ ನಿರುದ್ಯೋಗಿಗಳಾಗುತ್ತಿದ್ದಾರೆ. ಇಂತಹ ಪ್ಯಾಕೇಜ್ಗಳು ಜನರ ನೆರವಿಗೆ ಬರುವುದಿಲ್ಲ ಎಂದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಆರ್ಥಿಕ ಪುನಶ್ವೇತನದ ಕುರಿತಾಗಿ ನಾಲ್ಕು ಶಿಫಾರಸನ್ನು ದೇಶದ ಆರ್ಥಿಕಪರಿಸ್ಥಿತಿಯ ನ್ನು ಅವಲೋಕಿಸಿದ 15 ಹಣಕಾಸು ಆಯೋಗದ ಸಲಹಾ ಸಮಿತಿ ಕೇಂದ್ರ ಸರ್ಕಾರಕ್ಕೆ ಮಾಡಿದೆ. ಕೊರೊನಾ ಹರಡುವ ಮುನ್ನವೇ ಈ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಅದರಲ್ಲಿ ಸಣ್ಣ ಪ್ರಮಾಣದ ಉದ್ಯಮಗಳು ಜಿಎಸ್ಟಿ ಆರಂಭವಾದ ಬಳಿಕ ಸಂಕಷ್ಟಕ್ಕೆ ಒಳಗಾಗಿವೆ. ಅದಕ್ಕೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಮೊದಲನೇ ಶಿಫಾರಸು ಉಲ್ಲೇಖ ಮಾಡಿದೆ ಎಂದರು.
ಬ್ಯಾಂಕ್ ಹೊರತು ಪಡಿಸಿದ ಹಣಕಾಸು ಸಂಸ್ಥೆಗಳ ಆರ್ಥಿಕ ಹಿನ್ನಡೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಎರಡನೇ ಶಿಫಾರಸು ಮಾಡಲಾಗಿದೆ. 2020 ಮಾರ್ಚ್ ಮೊದಲ ಸಂಕಷ್ಟಲ್ಲಿರುವ ಉದ್ಯಮಗಳಿಗೆ ಸಾಲದ ಖಾತ್ರಿಯನ್ನು ಯಾವ ರೀತಿಯಲ್ಲ ಕೊಡಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
1930 ರಲ್ಲಿ ಇದ್ದ ಪರಿಸ್ಥಿತಿಗಿಂತ ಇಂದು ಕೆಟ್ಟ ಆರ್ಥಿಕ ಪರಿಸ್ಥಿತಿ ಇದೆ. ವಿಶ್ವಬ್ಯಾಂಕ್ ಕೂಡಾ ಜಿಡಿಪಿ ಬೆಳವಣಿಗೆ 1.5 ರಿಂದ 2.8 ಕ್ಕೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿದೆ. ಫಿಚ್ ಎಂಬ ಸಂಸ್ಥೆ ಕೂಡಾ ಆರ್ಥಿಕ ಆಭಿವೃದ್ದಿ ತೀವ್ರ ಕುಂಠಿತ ಆಗಲಿದೆ ಎಂದು ಹೇಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಹಣಕಾಸು ಸಂಸ್ಥೆಗಳು ಹೇಳಿವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಣಕಾಸು ಪರಿಸ್ಥಿತಿಯ ಹಿನ್ನಡೆಯನ್ನು ಸಮರ್ಪಕವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೇಗೆ ನಿಭಾಯಿಸಬೇಕು ಎಂಬುವುದನ್ನು ತಿಳಿಸಿದೆ. ಸದ್ಯದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸದನ್ನು ಮೇಲೆತ್ತುವ ನಿಟ್ಟಿನಲ್ಲಿ ಸರ್ಕಾರಗಳು ಆವಲೋಚಿಸಬೇಕು ಎಂದು ಸಲಹೆ ನೀಡಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail