NEWSನಮ್ಮರಾಜ್ಯ

ಗರ್ಭಿಣಿಗೆ ಕೊರೊನಾ ಇಲ್ಲದಿದ್ದರೂ ಲ್ಯಾಬ್‌ನವರ ಎಡವಟ್ಟಿಗೆ ಏಳು ದಿನದ ಕಂದಮ್ಮ ಬಲಿ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಖಾಸಗಿ ಲ್ಯಾಬ್‌ ನಲ್ಲಿ ಆದ ಎಡವಟ್ಟಿನಿಂದ ಏಳು ದಿನದ ಹಸುಗೂಸು ತಾಯಿಯ ಹಾಲಿಲ್ಲದೆ ಮೃತಪಟ್ಟಿರುವ ಧಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕಳೆದ 15ದಿನದ ಹಿಂದೆ ಹಿಂದೆ ಗರ್ಭಿಣಿಯ ಸ್ವಾಬ್‌ ಟೆಸ್ಟ್‌  ಮಾಡಿದ ಖಾಸಗಿ ಲ್ಯಾಬ್‌ ನವರು ಆಕೆಗೆ ಕೊರೊನಾ ಇಲ್ಲದಿದ್ದರು, ಪಾಸಿಟಿವ್‌ ಇದೆ ಎಂದು ವರದಿಕೊಟ್ಟಿರು, ಇದರಿಂದ ಆಕೆಯನ್ನು ಕೋವಿಡ್‌ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ನಡುವೆ ಕಳೆದ ಏಳು ದಿನಗಳಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಈ ನವ ಜಾತಶಿಶುವಿಗೆ ಕೊರೊನಾ ಬರುತ್ತದೆ ಎಂದು ಕೋವಿಡ್‌ ಆಸ್ಪತ್ರೆಯಲ್ಲಿ ಅಮ್ಮನಿಂದ ಮಗುವನ್ನು ದೂರ ಇಟ್ಟಿದ್ದರು. ಇದರಿಂದ ಮಗುವಿಗೆ ಸರಿಯಾದ ಹಾಲು ಸಿಗದೆ ಮೃತಪಟ್ಟಿದೆ.  ಇದರಿಂದ ಕುಟುಂಬದವರು ಗೋಳಾಡುತ್ತಿದ್ದಾರೆ.

ವಿಪರ್ಯಾಸ ಎಂದರೆ ನಿಜವಾಗಲೂ ಆ ತಾಯಿಗೆ ಕೊರೊನಾ ಪಾಸಿಟಿವ್‌ ಇಲ್ಲ ಎಂದು ಸರ್ಕಾರಿ ಲ್ಯಾಬ್‌ನಲ್ಲಿ ವರದಿ ಬಂದಿದೆ. ಆದರೂ ಆಕೆಯನ್ನು ಮಗು ನೋಡಲು ಆಸ್ಪತ್ರೆಯ ಸಿಬ್ಬಂದಿ ಬಿಟ್ಟಿಲ್ಲ. ಇದರಿಂದ ಮಗು ಅಸುನೀಗಿದೆ. ಅಲ್ಲದೆ ಆ ಕಂದಮ್ಮ ಮೃತಪಟ್ಟ ಮೇಲು ಅದನ್ನು ನೋಡಲು ತಾಯಿಯನ್ನು ಬಿಡಲೇ ಇಲ್ಲ. ಇದು ಮನೆಯವರ ಆಕ್ರೋಶಕ್ಕೂ ಕಾರಣವಾಗಿದೆ.

ಇನ್ನು ಈ ಖಾಸಗಿ ಲ್ಯಾಬ್‌ ನವರು ಮಾಡಿದ ಎಡವಟ್ಟಿನಿಂದ ನವಜಾತ ಶಿಶು ತಾಯಿಯ ಅಪ್ಪುಗೆ, ಹಾಲು ಇಲ್ಲದೆ ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಎಲ್ಲರ ಕಣ್ಣಾಲೆಗಳನ್ನು ತೇವಮಾಡದೆ ಇರದು. ಇತ್ತ ಹಸುಗೂಸನ್ನು ಕಳೆದು ಕೊಂಡ ಕುಟುಂಬ ಶೋಕದಲ್ಲಿ ಮುಳುಗಿದೆ.

 

 

1 Comment

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್