CrimeNEWSನಮ್ಮಜಿಲ್ಲೆ

ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ: ಲೈಟ್‌ ವಿಷಯದಲ್ಲಿ ಗಲಾಟೆ – ಠಾಣೆಯಲ್ಲಿ ಸಂಧಾನ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: ಕೆಎಸ್‌ಆರ್‌ಟಿಸಿ ಡಿಪೋದ ಕೆಎಂಪಿಎಲ್ ಮಾಸ್ಟರ್ ಮತ್ತು ಕಿರಿಯ ಸಹಾಯಕನ ನಡುವೆ ಕಚೇರಿಯಲ್ಲಿ ಹಾಕಿದ್ದ ಲೈಟ್‌ ಆಫ್‌ ಮಾಡುವ ಬಗ್ಗೆ ಗಲಾಟೆಯಾಗಿದ್ದು ಈ ವೇಳೆ ಮಾಸ್ಟರ್ ಅವಾಚ್ಯವಾಗಿ ಕಿರಿಯ ಸಹಾಯಕನಿಗೆ ಬೈಯುತ್ತಿದ್ದಾನೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಘಟಕದ ಮಾಸ್ಟರ್ ವೈಲೇಶ್‌ ಎಂಬುವರು ಕಿರಿಯ ಸಹಾಯಕ ಮಾಕ್ಸ್‌ ಬ್ರೌನ್‌ ಎಂಬುವರಿಗೆ ಬೈದಿರುವುದು. ಈ ವೇಳೆ ಮಾಕ್ಸ್‌ ಬ್ರೌನ್‌ ಅವರಿಗೆ ಕಲ್ಲಿನಲ್ಲಿ ಹೊಡೆಯಲು ಹೋಗುತ್ತಾನೆ. ಅಲ್ಲದೆ ವಿಡಿಯೋ ಮಾಡುತ್ತಿದ್ದೀಯ ನೀನು ಏನು ಮಾಡಿಕೊಳ್ಳೊಕ್ಕಾಗುತ್ತೆ ಎಂದು ಮತ್ತೆ ಹೊಡೆಯಲು ಹೋಗುತ್ತಾನೆ.

ನೀವು ನನಗೆ ಬೈಯಬೇಡಿ ಎಂದು ಚಾಲಕ ಹೇಳಿದರೆ ಇನ್ನೇನು ಮಾಡಬೇಕು ಎಂದು ಒದೆಯಲು ಹೋಗುತ್ತಾನೆ. ನೀನು ಅಪ್ಪನಿಗೆ ಹುಟ್ಟಿದವನ ಸೂ…ಗನೆ ಎಂದೆಲ್ಲ ಬೈಯುತ್ತಿದ್ದಾನೆ. ಈ ಸಂಬಂಧ ನಿನ್ನೆ ಮಾಕ್ಸ್‌ ಬ್ರೌನ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ ಇಂದು ಠಾಣೆಗೆ ವೈಲೇಶ್‌ ಅವರನ್ನು ಕರೆಸಿಕೊಂಡ ಪೊಲೀಸರು ವಿಚಾರಣೆ ಮಾಡಿದ ಬಳಿಕ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ರಾಜೀಮಾಡಿ ಕಳುಹಿಸಿದ್ದಾರೆ.

ಈ ನಡುವೆ ವೈಲೇಶ್‌ ವಿರುದ್ಧ ಮಾಕ್ಸ್‌ ಬ್ರೌನ್‌, ಮಾಕ್ಸ್‌ ಬ್ರೌನ್‌ ವಿರುದ್ಧ ವೈಲೇಶ್‌ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು, ವೈಲೇಶ್‌ ಅವರು ನನಗೆ ಕೆಲಸದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರೆ, ಮಾಕ್ಸ್‌ ಬ್ರೌನ್‌ ಅವರು ನನ್ನ ಕೆಲಸ ಯಾವ ಬಸ್‌ಗೆ ಎಷ್ಟು ಡೀಸೆಲ್‌ ಹಾಕಿದ್ದಾರೆ ಎಂಬುವುದನ್ನು ಲಾಗ್‌ಶೀಟ್‌ನಲ್ಲಿ ಎಂಟ್ರಿ ಮಾಡಿ ನಂತರ ಗಣಕಯಂತ್ರದಲ್ಲಿ ಹಾಕುತ್ತೇನೆ ಇದು ಬಿಟ್ಟು ನಾನು ಬೇರೆ ಯಾವುದೇ ವಿಷಯದಲ್ಲಿ ತಲೆಹಾಕುತ್ತಿಲ್ಲ ಎಂದು ಹೇಳಿದ್ದಾರೆ.

ಆದರೂ, ನನಗೆ ವೈಲೇಶ್‌ ಅವರು ಲೈಟ್‌ ಹಾಕ್ಕಿದ್ದ ವಿಷಯವಾಗಿ ಜಗಳ ಮಾಡಿ ಅವಾಚ್ಯವಾಗಿ ನಿಂದಿಸಿದರು. ಇದನ್ನು ನಾನು ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆ ಎಂದು ತಿಳಿಸಿದ್ದಾರೆ.

ಇನ್ನು ವೈಲೇಶ್‌ ಮತ್ತು ಮಾಕ್ಸ್‌ ಬ್ರೌನ್‌ ಅವರ ಗಲಾಟೆ ಒಂದು ರೀತಿ ವೈಯಕ್ತಿಕವಾಗಿದ್ದು, ಸಂಸ್ಥೆಗೆ ಸಂಬಂಧಿಸಿದಲ್ಲ ಎಂದು ಅಲ್ಲಿದ್ದ ಚಾಲಕರು ಹೇಳಿದ್ದಾರೆ. ಹೀಗಾಗಿ ಇದನ್ನು ಮುಂದುವರಿಸಿಕೊಂಡು ಹೋಗದೆ ಇಲ್ಲಿಗೇ ನಿಲ್ಲಿಸಬೇಕು ಎಂದು ಅಧಿಕಾರಿಗಳು ಇಬ್ಬರಿಗೂ ತಿಳಿಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?