NEWSನಮ್ಮರಾಜ್ಯ

ನೌಕರರ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ: ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಯಶವಂತ ಗುರಿಕರ್ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ನೌಕರರ ವರ್ಗಾವಣೆ, ಅಮಾನತು, ವಜಾ ಹಾಗೂ ಪೊಲೀಸ್‌ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥ ಪಡಿಸುವಂತೆ ಇಂದು (ಅ.11) ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯಶವಂತ ಗುರಿಕರ್ ಅವರನ್ನು ಕಕರಸಾ ಕೂಟ ವಲಯದ ಗೌರವ ಅಧ್ಯಕ್ಷ ಶೌಕತ್ ಅಲಿ ಆಲೂರು ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ನೌಕರ ನಿಯೋಗ ಭೇಟಿಯಾಗಿ ಚರ್ಚೆ ನಡೆಸಿತು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕಲಬುರಗಿಯ ಕಕರಸಾ ನಿಗಮ ಕೇಂದ್ರ ಕಚೇರಿ  ಎಂಡಿ ಅವರ ಕಚೇರಿಯಲ್ಲಿ ಭೇಟಿಯಾದ ನಿಯೋಗ ಪ್ರಮುಖವಾಗಿ ಒಟ್ಟು 6 ಬೇಡಿಕೆಗಳನ್ನು ವಿವರವಾದ ಮಾಹಿತಿಯೊಂದಿಗೆ ಎಂಡಿ ಅವರ ಮುಂದೆ ಮಂಡಿಸಿತು.

ವಜಾಗೊಂಡ ನೌಕರರ ಸಮಸ್ಯೆಗೆ ಸಂಬಂಧಿಸಿದಂತೆ ತುರ್ತಾಗಿ ಸ್ಪಂದಿಸಬೇಕು ಎಂದು ನಿಯೋಗ ಮನವಿ ಮಾಡಿತು. ಅದಕ್ಕೆ ಕೂಡಲೇ ಸ್ಪಂದಿಸಿದ ಎಂಡಿ ಅವರು ಸರಕಾರದ ನಿರ್ದೇಶನದಂತೆ ಕ್ರಮ ಜರುಗಿಸುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಂಡುತ್ತೇವೆ ಎಂದರು.

ಇನ್ನು ವರ್ಗಾವಣೆ ಗೊಂಡು ಮರು ವರ್ಗಾವಣೆಯಾದ ನೌಕರರಿಗೆ ಕೌನ್ಸಿಲಿಂಗ್ ಮೂಲಕ ನಿಯೋಜನೆ ಮಾಡಬೇಕು ಎಂದು ವಿನಂತಿಸಿದರು. ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಸಹ ಸಹಮತ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಕ್ರಮ ಜರುಗಿಸುವ ಭರವಸೆ ನೀಡಿದರು.

ಪೊಲೀಸ್ ಪ್ರಕರಣದಲ್ಲಿ ಬಿ ಮತ್ತು ಸಿ ರಿಪೋರ್ಟ್‌ ಆದ ನೌಕರರಿಗೆ ತಕ್ಷಣ ವರ್ಗಾವಣೆ ಮಾಡಲು ಸೂಚಿಸಿದರು. ಅಲ್ಲದೇ, ಪೊಲೀಸ್ ಪ್ರಕರಣ ಇರುವ ಸಿಬ್ಬಂದಿಗಳ ಮಾಹಿತಿ ಪಡೆದು ಅದರಲ್ಲಿ ಗಂಭೀರವಲ್ಲದ ಪೊಲೀಸ್‌ ಪ್ರಕರಣ ಇರುವ ಸಿಬ್ಬಂದಿಗಳ ವರ್ಗಾವಣೆಯನ್ನೂ ಮಾಡುವುದಾಗಿ ತಿಳಿಸಿದರು.

ಅಲ್ಲದೆ ಈ ವಿಷಯದಲ್ಲಿ ಭದ್ರತಾ ಮತ್ತು ಜಾಗೃತಾ ಅಧಿಕಾರಿಗಳಿಗೆ ವರದಿ ಕಳುಹಿಸಲು ಸೂಚಿಸಿ ಡಿಸಿಗಳಿಗೆ ತುರ್ತಾಗಿ ಪತ್ರ ಬರೆಯಲು ತಾಕೀತು ಮಾಡಿದರು.

ಹೊಸಪೇಟೆ ಮತ್ತು ಬೀದರ್‌, ಕಲಬುರಗಿ ವಿಭಾಗಗಳಲ್ಲಿ ಮುಷ್ಕರದ ಅವಧಿಯ ಗೈರುಹಾಜರಿಗಳನ್ನು ಮುಂದೆ ಮಾಡಿ ಕಾರ್ಮಿಕರ ಸಂಬಳದಲ್ಲಿ ಶೇ.70 ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ದಂಡವಿಧಿಸುವ ಆದೇಶ ಹೊರಡಿಸಿದ್ದಾರೆ. ಇದು ಕಾರ್ಮಿಕ ವಿರೋಧಿಯಾಗಿದೆ ಎಂದು ಮುಖಂಡರು ಎಂಡಿ ಗಮನ ಸೇಳೆದಾಗ ತಕ್ಷಣ ವರದಿ ತರಿಸಿ ಕ್ರಮ ಜರುಗಿಸುತ್ತೇನೆ ಎಂದರು.

ಇನ್ನು ಅಧಿಕಾರಿಗಳು ನಡೆಸುವ ಕುಂದು ಕೊರತೆ ಸಭೆಗೆ ಕೂಟದ ಪದಾಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದರು. ನಿಯೋಗದ ಮನವಿಗೆ ಸ್ಪಂದಿಸಿದ ಎಂಡಿ ಮುಂದಿನ ಸಭೆಗೆ ಕೂಟದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವರ್ಗಾವಣೆ ಗೊಂಡ ನೌಕರರನ್ನು ಹೊಸಪೇಟೆ ವಿಭಾಗದಲ್ಲಿ ಬಿಡುಗಡೆಗೊಳಿಸಲು ಪೀಡಿಸುತ್ತಿದ್ದಾರೆ ಈ ಬಗ್ಗೆ ಶೀಘ್ರ ಕ್ರಮಜರುಗಿಸಿ ನೌಕರರ ಸಮಸ್ಯೆ ನೀಗಿಸಬೇಕು, ಜತೆಗೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು. ಮುಖಂಡರ ಮನವಿಗೆ ವ್ಯವಸ್ಥಾಪಕ ನಿರ್ದೇಶಕರು ಸ್ಪಂದಿಸಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಮುಖವಾಗಿ ಕೆಲವು ನೌಕರರ ಕುಟುಂಬ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಇರುವುದರಿಂದ ಡಿಪೋ ನಿಯೋಜನೆ ಬಗ್ಗೆ ಗಮನ ಸೇಳೆದರು. ಅದಕ್ಕೆ ತಕ್ಷಣ ಸ್ಪಂದಿಸಿದ ಎಂಡಿ ನಿಯೋಜನೆ ಮಾಡುವಂತೆ ಸ್ಥಳದಲ್ಲಿಯೇ ಇಂದ್ದ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಬಗೆ ಹರಿಸಿದರು.

ಇನ್ನೂ ಮುಂದೆ ನಿಗಮದಲ್ಲಿ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ಸಮಾನವಾದ ನೀತಿಗಳನ್ನು ಜಾರಿಗೊಳಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದರು.

ಇಂದು ಸೌಹಾರ್ದ ಮತ್ತು ಗಂಭೀರವಾಗಿ ಚರ್ಚೆ ನಡೆಯಿತು. ನಂತರ ಕೂಟದ ನಿಯೋಗ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹಾಗೂ ಮುಖ್ಯ ಉಪ ಭದ್ರತಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿತು. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು.

ನಿಯೋಗದಲ್ಲಿಕಾರ್ಮಿಕ ಮುಖಂಡರಾದ ಜಯರಾಮ ರಾಠೋಡ, ಸುಭಾಷ್ ಆಲೂರು, ಉದಯಕುಮಾರ, ನಬಿ ಸಾಬ್, ಶಿವಲಿಂಗಪ್ಪಾ ಹೂಗಾರ, ಪ್ರಕಾಶ ಚಿಂಚೋಳಿ, ಶಿವಪುತ್ರಪ್ಪಾ ಪೂಜಾರಿ, ಸಾಹೇಬ್ ಪಟೇಲ್ , ಸಿದ್ದನಗೌಡ ಪಾಟೀಲ್ ಇನ್ನಿತತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ