ಬೆಂಗಳೂರು: ಬಿಎಂಟಿಸಿ ಅಧಿಕಾರಿಗಳು ನೌಕರರ ಪರವಾಗಿದ್ದು, ವಜಾಗೊಂಡಿರುವ ಎಲ್ಲರೂ ಲೇಬರ್ ಕೋರ್ಟ್ನಲ್ಲಿ ಅರ್ಜಿ ಹಾಕಿದರೆ ವಜಾಗೊಂಡಿರುವವರೆಲ್ಲರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ತಿಳಿಸಿದ್ದಾರೆ.
ಸಾರಿಗೆ ನೌಕರರಿಗೆ ಉಂಟಾಗಿರುವ ಸಮಸ್ಯೆ ಕುರಿತು ಇಂದು ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ನೌಕರರ ಜತೆ ಮಾತನಾಡಿದ ಅವರು, ಈ ಮೊದಲೇ ಸಚಿವರು ನಿಮ್ಮ ಎಲ್ಲ ವಜಾ ಪ್ರಕರಣಗಳನ್ನು ವಾಪಸ್ ಪಡೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ನೀವೆ ಈವರೆಗೂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿಲ್ಲ.ಇದರಿಂದ ವಜಾ ಆದವರನ್ನು ಮರು ನಿಯೋಜನೆ ಮಾಡಲುವಲ್ಲಿ ವಿಳಂಬವಾಗುತ್ತಿದೆ ಎಂದರು.
ಇನ್ನು ನಾಳೆಯಿಂದಲೇ ವಜಾಗೊಂಡಿರುವ ಎಲ್ಲರೂ ಲೇಬರ್ ಕೋರ್ಟ್ನಲ್ಲಿ ಪ್ರಕರಣ ಸಂಬಂಧ ಅರ್ಜಿ ಹಾಕಿದರೆ ಒಂದು ತಿಗಳೊಳಗಾಗಿ ಒಂದೇ ಬಾರಿಗೆ ವಜಾಗೊಂಡಿರುವ ಎಲ್ಲ ನೌಕರರನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿಸಿದರು.
ಇನ್ನು ನಿಮ್ಮ ನಿಗಮಗಳಲ್ಲಿ ನೋ ವರ್ಕ್ ನೋ ಪೇ ಪದ್ಧತಿ ಇರುವುದರಿಂದ ಈಗ ಏನು ಏಳೆಂಟು ತಿಂಗಳು ನೀವು ಕೆಲಸ ಮಾಡಿಲ್ಲ ಅದಕ್ಕೆ ವೇತನ ಸಿಗುವುದಿಲ್ಲ. ಈ ಬಗ್ಗೆ ನಮಗೆ ವೇತನ ಕೊಡಿಸಿ ಎಂದು ನಮ್ಮನ್ನು ಕೇಳಬೇಡಿ ಎಂದು ಕೂಡ ತಿಳಿಸಿದರು.
ಇನ್ನು ಲೇಬರ್ ಕೋರ್ಟ್ನಲ್ಲಿ ವಜಾಗೊಂಡವರು ಪ್ರಕರಣ ಪ್ರಕರಣ ದಾಖಲಿಸಿದರೆ ನಿಗಮಗಳ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಸಂಬಂಧ ಲೋಕ ಅದಾಲತ್ನಲ್ಲಿ ಪ್ರಕರಣವನ್ನು ತಂದು ಅಲ್ಲಿ ಕೆಲ ಕಂಡಿಷನ್ಗಳನ್ನು ಹಾಕಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಮೂಲಕವೇ ಎಲ್ಲ ನೌಕರರು ಮರು ನಿಯೋಜನೆ ಆಗಲಿದ್ದಾರೆ ಎನ್ನಲಾಗುತ್ತಿದೆ.