NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಅಧಿಕಾರಿಗಳ ನಿರ್ಲಕ್ಷ್ಯದಿಂದ ಗರ್ಭಪಾತ, ಅಮಾನತಿಗೆ ಒಳಗಾದ ನಿರ್ವಾಹಕಿ ಪರನಿಂತ ಪ್ರಜ್ಞಾವಂತ- ಸಿಎಂ, ಸಾರಿಗೆ ಇಲಾಖೆಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹ

ಅಧಿಕಾರಿಗಳ ವಿರದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳ ಸಚಿವಾಲಯದಿಂದಲೂ ಸಾರಿಗೆ ಕಾರ್ಯದರ್ಶಿಗಳಿಗೆ ಇ-ಮೇಲ್‌

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ವರದಿ ನೋಡಿ ರೇಖಾಳಿಗೆ ನ್ಯಾಯ ಕೊಡಿಸಲು ಮುಂದಾದ ಪುತ್ತೂರಿನ ನಿವೃತ್ತ ಇಂಜಿನಿಯರ್‌

ಕೊಟ್ಟೂರು: ಸರ್ಕಾರಿ ಸಾರಿಗೆ ಬಸ್‌ನ ಗರ್ಭಿಣಿ ನಿರ್ವಾಹಕರೊಬ್ಬರು ಪರಿಪರಿಯಾಗಿ ಬೇಡಿಕೊಂಡರು ಲೈಟ್‌ ಡ್ಯೂಟಿ ಕೊಡದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡ ಪರಿಣಾಮ ಆಕೆಗೆ ಗರ್ಭಪಾತ (Abortion) ಆಗಿ ನರಕ ಯಾತನೆ ಅನುಭವಿಸಿದ್ದಾರೆ ಎಂಬ ಬಗ್ಗೆ ವಿಜಯಪಥದಲ್ಲಿ ವರದಿಯಾಗಿದ್ದನ್ನು ಗಮನಿಸಿರುವ ಪ್ರಜ್ಞಾವಂತ ನಾಗರಿಕರೊಬ್ಬರು ನಿರ್ವಾಹಕಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ನಿವೃತ್ತ ಇಂಜಿನಿಯರ್‌ ಡಾ. ಸದಾನಂದ ಹೆಗ್ಗಡಾಳ್ ಮಠ್ ಅವರು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಇ-ಮೇಲ್‌ ಮಾಡಿದ್ದು, ನಿರ್ವಾಹಕರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಮುಖ್ಯಮಂತ್ರಿಗಳ ಸಚಿವಾಲಯ ಕೂಡ ಈ ಸಂಬಂಧ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಾಗಲಕೋಟೆ ವಿಭಾಗದ ಇಳಕಲ್‌ ಘಟಕದ ನಿರ್ವಾಹಕಿ ರೇಖಾ ಎಸ್‌.ಶ್ಯಾವಿ ಎಂಬುವರೆ ಅನ್ಯಾಯಕ್ಕೆ ಒಳಗಾದವರಾಗಿದ್ದಾರೆ. ಗರ್ಭಿಣಿಯಾಗಿದ್ದ ಆಕೆಗೆ ಒಒಡಿಗೆ (ಲಘು ಕರ್ತವ್ಯ ನಿರ್ವಹಿಸುವುದಕ್ಕೆ) ಅನುವು ಮಾಡಿಕೊಡಬೇಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದಾರೆ.

ಇನ್ನು ಪ್ರಸ್ತುತ ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣವಿರುವುದರಿಂದ ಬಸ್‌ಗಳು ರಶ್‌ ಆಗುತ್ತಿದ್ದು, ನಾನು ನಾಲ್ಕು ತಿಂಗಳ ಗರ್ಭಿಣಿ ಇದ್ದೇನೆ ನನಗೆ ಒಒಡಿ ಮಾಡಲು ಅವಕಾಶ ಮಾಡಿಕೊಡಿ ಎಂದು ಆಕೆ ಕೇಳಿದರೂ ಅಧಿಕಾರಿಗಳಿಗೆ ಕರುಣೆ ಬರಲಿಲ್ಲ. ಪರಿಣಾಮ ಆಕೆ ಕರ್ತವ್ಯದಲ್ಲಿದ್ದಾಗಲೆ ಗರ್ಭಪಾತವಾಯಿತು.

ಇಷ್ಟಾಗಿ ಆಸ್ಪತ್ರೆ ಸೇರಿದ್ದ ಆಕೆಗೆ ಫೋನ್‌ ಕರೆ ಮಾಡಿದ ಡಿಪೋ ಮಟ್ಟದ ಅಧಿಕಾರಿಯೊಬ್ಬರು ನಿನಗೆ ಏನಾಗಿದೆಯೋ ಅದು ನಮಗೆ ಬೇಡದ ವಿಷಯ ನಾಳೆಯಿಂದ ಕೆಲಸಕ್ಕೆ ಬರಬೇಕು ಅಷ್ಟೆ ಎಂದು ಜೋರು ಮಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ವೈದ್ಯರು ಆಕೆಯಿಂದ ಪೋನ್‌ ತೆಗೆದುಕೊಂಡು ಆ ಅಧಿಕಾರಿಗೆ ಬೆವರಿಳಿಸಿದ್ದರು. ಆದರೂ ರೇಖಾ ಅವರನ್ನು ಬೇರೊಂದು ಕಾರಣ ನೀಡಿ ಪ್ರಸ್ತುತ ಅಮಾನತು ಮಾಡಿ ಕಿರುಕುಳ ನೀಡುತ್ತಿದ್ದಾರೆ.

ಈ ಎಲ್ಲದರ ಬಗ್ಗೆ ವಿಜಯಪಥ ಜೂನ್‌ 29-2024ರಂದು ವರದಿ ಮಾಡಿತ್ತು. ಇದಕ್ಕೆ ಈವರೆಗೂ ಅಧಿಕಾರಿಗಳು ಸ್ಪಂದಿಸಿಲ್ಲ. ಆದರೆ ನಾಡಿನ ಪ್ರಜ್ಞಾವಂತರು ಆಕೆಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡಲು ಸಿದ್ದರಿರುವುದಾಗಿ ತಿಳಿಸಿದ್ದು ಅಲ್ಲದೆ ಈ ಸಂಬಂಧ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ ಪುತ್ತೂರಿನ ಡಾ.ಸಂದಾನಂದ ಅವರು ಇ-ಮೇಲ್‌ ಮಾಡಿದ್ದಾರೆ.

ಅಲ್ಲದೆ ವಿಜಯಪಥ ಕಚೇರಿಗೆ ಫೋನ್‌ ಮಾಡಿ ಆಕೆಗೆ ಆಗಿರುವ ಅನ್ಯಾಯದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೂ ರೇಖಾ ಅವರ ಪರವಾಗಿ ಪತ್ರ ಬರೆದು ದೂರು ನೀಡುವ ಮೂಲಕ ಕ್ರಮ ಕೈಗೊಳ್ಳುವುದಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ ಇ-ಮೇಲ್‌ ಮಾಡಿರುವುದನ್ನು ವಿಜಯಪಥ ಕಚೇರಿಗೆ ಕಳುಹಿಸಿದ್ದಾರೆ.

ರಾಜ್ಯದ ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನೌಕರರ ಪರ ಸಂಘಟನೆಗಳು ಟೊಂಕಕಟ್ಟಿ ನಿಲ್ಲಬೇಕಿತ್ತು. ಆದರೆ, ಅವುಗಳು ನೌಕರರ ಸಮಸ್ಯೆ ಆಲಿಸುವಲ್ಲಿ ನಿಷ್ಕ್ರಿಯವಾಗಿರುವುದರಿಂದ ಪ್ರಜ್ಞಾವಂತ ನಾಗರೀಕರು ನೊಂದ ನೌಕರರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.

ಇದನ್ನೂ ಓದಿ: NWKRTC: ಡ್ಯೂಟಿ ಮೇಲೆ ಗರ್ಭಪಾತವಾಗಿ ಆಸ್ಪತ್ರೆ ಸೇರಿದ ನಿರ್ವಾಹಕಿಗೆ ಡ್ಯೂಟಿಗೆ ಬರುವಂತೆ ಕಿರುಕುಳ ನೀಡಿ ಅಮಾನತು- ಮಾನವೀಯತೆಯೇ ಇಲ್ಲದ ಡಿಸಿ, ಡಿಎಂ

ಅದರಲ್ಲೂ ಕಳೆದ 5 ವರ್ಷಗಳಿಂದ ವಿಜಯಪಥ ನಿರಂತರವಾಗಿ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗುತ್ತಿರುವ ನೌಕರರಿಗೆ ನ್ಯಾಯ ಸಿಗಲು ಶ್ರಮಿಸುತ್ತಿರುವುದಕ್ಕೂ ಪ್ರಜ್ಞಾವಂತ ನಾಗರಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿಸುತ್ತಿದೆ. ಇದು ನಮಗೂ ಕೂಡ ಹೆಮ್ಮೆಯ ವಿಷಯ.

ಅಲ್ಲದೆ ಇಂಥ ಅನ್ಯಾಯಗಳ ಬಗ್ಗೆ ಇನ್ನಷು ಆಳವಾಗಿ ಅಧ್ಯಯನ ಮಾಡಿ ವರದಿ ಮಾಡುವುದಕ್ಕೆ ಉತ್ಸಾಹ ತುಂಬುತ್ತಿರುವ ಇಂಥ ಪ್ರಜ್ಞಾವಂತ ನಾಗರಿಕರಿಗೆ ನಿಮ್ಮ ವಿಜಯಪಥ ಹರ್ಷ ವ್ಯಕ್ತಪಡಿಸುತ್ತಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು