NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: 70 ರೂ. ಬಸ್ ಟಿಕೆಟ್ಗೆ 83956.08 ರೂ. ಟಿಕೆಟ್ ಕೊಟ್ಟ ನಿರ್ವಾಹಕ…!

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಕಳಪೆ ಟಿಕೆಟ್ ಮಷಿನ್ಗಳ ಬಳಕೆಯಿಂದ ಸಂಸ್ಥೆಯ ನಿರ್ವಾಹಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಶಿವಮೊಗ್ಗ- ಸಾಗರ ನಡುವಿನ ಪ್ರಯಾಣಕ್ಕೆ ಸಾರಿಗೆ ಬಸ್ನಲ್ಲಿ 70 ರೂ. ಟಿಕೆಟ್ ದರವಿದೆ. ಆದರೆ ಇಂದು ಪ್ರಯಾಣಿಕರೊಬ್ಬರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭಟ್ಕಳ ಘಟದ ಬಸ್ ನಿರ್ವಾಹಕರು ಟಿಕೆಟ್ ಕೊಡುವ ವೇಳೆ 1X70 =70.  ಮೊತ್ತ 83956.08 ರೂ. ಎಂದು ಬಂದಿದೆ.

ಇದರ ಜತೆಗೆ ಮತ್ತೊಂದು ಟಿಕೆಟ್ನಲ್ಲಿ ಆನಂದಪುರ- ಶಿವಮೊಗ್ಗಕ್ಕೆ 50 ರೂ. ಟಿಕೆಟ್ ದರವಿದೆ. ಆದರೆ ಅದರಲ್ಲಿ ಬಂದಿರುವುದು 1X50 =50.  ಮೊತ್ತ 67166.80 ರೂ. ಎಂದು. ಇದನ್ನು ನೋಡಿದ ಪ್ರಯಾಣಿಕರು ಕಕ್ಕಿಬಿಕ್ಕಿಯಾಗಿದ್ದಾರೆ.

ಅಲ್ಲದೆ ನಿರ್ವಾಹಕರು ಕೂಡ ಭಯಗೊಂಡಿದ್ದಾರೆ. ಇಷ್ಟೊಂದು ಮೊತ್ತ ನೀವು ಕಟ್ಟಬೇಕು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದರೆ ನಾನು ಏನು ಮಾಡುವುದು ಎಂದು ಗಾಬರಿಗೊಂಡಿದ್ದಾರೆ.

ನೋಡಿ ಈ ರೀತಿ ದರ ನಿಗದಿಯಾದರೆ ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗಬಹುದು ಎಂದು ಪ್ರಯಾಣಿಕರು ಕಾಲೆಳೆದಿದ್ದಾರೆ.

ಇನ್ನು ಅಧಿಕಾರಿಗಳು ಕಳಪೆ ಟಿಕೆಟ್ ಮಷಿನುಗಳನ್ನು ಖರೀದಿ ಮಾಡಿರುವುದು. ಆ ಮಷಿನಿನ ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಹೆಚ್ಚು ಕೊಟ್ಟು ಖರೀದಿಸುವ  ಇಂಥ ಮಷಿಗಳು ಕೆಲಸಕ್ಕೆ ಬರುತ್ತವೆಯೇ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಈ ರೀತಿಯ ಮಷಿನುಗಳಿಂದ ನಿರ್ವಾಹಕರು ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವೆ. ಮೊದಲು ಭ್ರಷ್ಟ ಅಧಿಕಾರಿಗಳು ಮತ್ತು ಸಂಸ್ಥೆಗೆ ಬರುವ ಕೆಲ ಭ್ರಷ್ಟ ಜನಪ್ರತಿನಿಧಿಗಳನ್ನು ನಿಯಂತ್ರಿಸಬೇಕು.

ಹೀಗಾಗದರೆ ಸಂಸ್ಥೆಯೂ ಲಾಭದತ್ತ ಸಾಗುತ್ತದೆ. ನೌಕರರಿಗೂ ಉತ್ತಮ ವೇತನ ನೀಡಲು ಸಾದ್ಯವಾಗುತ್ತದೆ ಎಂದು   ಸಾರ್ವಜನಿಕರು  ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಲ್ಲದೆ ಇಂಥ ಮಷಿನ್ಗಳನ್ನು ಖರೀದಿಸುವ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಸಾರ್ವಜನಿಕರ ಹಣ ಪೋಲ್ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ