ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರಿಂದ ಕರಾಳ ಕಾರ್ಮಿಕ ದಿನಾಚರಣೆ- ಡ್ಯೂಟಿ ಮೇಲೆ ಮೌನ ಪ್ರತಿಭಟನೆ

ಬೆಂಗಳೂರು: ವಿಶ್ವದ ದುಡಿಯುವ ವರ್ಗದ ಹೋರಾಟಕ್ಕೆ ಮುನ್ನುಡಿ ಬರೆದ ವಿಶ್ವ ಕಾರ್ಮಿಕ ದಿನಾಚರಣೆಯು ಕರ್ನಾಟಕ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ನಾಲ್ಕೂ ನಿಗಮಗಳ ಸಮಸ್ತ ಸಾರಿಗೆ ನೌಕರರುಗಳಿಂದ ಸರ್ಕಾರದ ಧೋರಣೆಯನ್ನು ಖಂಡಿಸಿ ಕರಾಳ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಸರ್ಕಾರಕ್ಕೆ ನಮ್ಮ ಶ್ರಮದ ನೋವು ತಲುಪಿಸುತ್ತಿದ್ದೇವೆ.

ನಮ್ಮ ದುಡಿಮೆಯ ಬೆವರಿಗೆ ತಕ್ಕ ವೇತನ ನೀಡಿ. 650 ಕೋಟಿ ಟಿಕೆಟ್ ಕೊಟ್ಟಿದ್ದು ನಿರ್ವಾಹಕರು, ಬಸ್ಸುಗಳನ್ನು ಚಲಾಯಿಸಿದ್ದು ಚಾಲಕರು, ಬಸ್ಸುಗಳನ್ನು ಸುಸ್ಥಿತಿಯಲ್ಲಿಟ್ಟಿದ್ದು ತಾಂತ್ರಿಕ ಸಿಬ್ಬಂದಿ, ವಾಹನ ಸ್ವಚ್ಚವಾಗಿಟ್ಚಿದ್ದು ಸ್ವಚ್ಚತಗಾರರು, ವ್ಯವಸ್ಥಿತ ವಾಹನಗಳ ಕಾರ್ಯಾಚರಣೆ ಮಾಡಿದ್ದು ಸಂಚಾರ ಸಿಬ್ಬಂದಿ, ಶಿಸ್ತು ಬದ್ಧ ಆಚರಣೆಯ ಉಸ್ತುವಾರಿ ವಹಿಸಿದ್ದು ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿಗಳು.
ಪ್ರಶಸ್ತಿಯ ಲಾಭ ಪಡೆದದ್ದು ಸರ್ಕಾರ, ಅದು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರು ಬಟ್ಟೆಹಾಕಿದೆ. ಸರ್ಕಾರಕ್ಕೆ ಕೀರ್ತಿ ತಂದುಕೊಡುತ್ತಿರುವ ನಮ್ಮನ್ನು ಕಡೆಗಣಿಸಿ ನಮಗೆ ನ್ಯಾಯಯುತವಾಗಿ ಲೊಡಬೇಕಿರುವ ವೇತನ ಹೆಚ್ಚಳ ಮಾಡದೆ ತಾರತಮ್ಯಧೋರಣೆ ತಣಳೆದಿರುವ ಸರ್ಕಾರದ ನಡೆ ಖಂಡನೀಯ.
ಹೀಗಾಗಿ ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆಗೆ ಯಶಸ್ಸು ದೊರೆಯಲಿ ಎಂದು ಅಧಿಕಾರಿ ವರ್ಗ ಸೇರಿದಂತೆ ಸಮಸ್ತ 1.20ಲಕ್ಷ ನೌಕರರು ಇಂದು ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆ ಮಾಡುತ್ತಿದ್ದೇವೆ.
ಈಗಲೂ ನಾವು ಕಪ್ಪುಪಟ್ಟಿ ಕಟ್ಟಿಕೊಂಡು ಡ್ಯೂಟಿ ಮಾಡಿದರೆ ಎಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೋ ಎಂಬ ಕಳಕಳಿಯಿಂದ ಯಾವುದೇ ಕಪ್ಪುಪಟ್ಟಿ ಕಟ್ಟಿಕೊಳ್ಳದೆ ಮೌನವಾಗಿ ಈ ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆ ಮಾಡುತ್ತಿದ್ದೇವೆ. ಇನ್ನಾದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರುಸುವತ್ತ ಮನಸು ಮಾಡಲಿ ಎಂಬುವುದು ನಮ್ಮ ಆಶಯ. -ಸಮಸ್ತ ಸಾರಿಗೆ ನೌಕರರು.
Related









