NEWSನಮ್ಮರಾಜ್ಯಬೆಂಗಳೂರು

ಕೆಂಪೇಗೌಡ ಬಸ್‌ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಸಿಎಂ ಎನಿಸಿಕೊಂಡಿದ್ದ ಆರ್. ಗುಂಡೂರಾವ್ ಪ್ರತಿಮೆ ಅನಾವರಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಹಾಗೂ ಅತ್ಯಪೂರ್ವ ಎಂಬ ಖ್ಯಾತಿಯ ಕೆಂಪೇಗೌಡ ಸಾರಿಗೆ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಮುಖ್ಯ ಮಂತ್ರಿ ಎನಿಸಿಕೊಂಡಿದ್ದ ಪ್ರಾತ:ಸ್ಮರಣಿಯ ಆರ್. ಗುಂಡೂರಾವ್ ಅವರ ಪ್ರತಿಮೆ
ನಗರದ ಶಾಂತಲಾ ಸಿಲ್ಕ್ ಹೌಸ್ ಎದುರು ಇಂದು (ಮೇ 14) ಅನಾವರಣವಾಯಿತು.

ಈ ನಿಲ್ದಾಣ ನಿರ್ಮಾಣ ಹಾಗೂ ಗುಂಡೂರಾಯರ ಸಾಧನೆಯ ಬಗ್ಗೆ ಒಂದು ಇತಿಹಾಸವೇ ಇದೆ. ಈ ಸ್ಥಳ ಒಂದು ಕಾಲಕ್ಕೆ ಕೆಂಪಾಬುಧಿ ಕೆರೆ ಎನಿಸಿಕೊಂಡಿತ್ತು. ಈ ಕೆರೆಯನ್ನು ಎರಡು ಭಾಗ ಮಾಡುವ ರಸ್ತೆಯೊಂದು ಹಾದು ಹೋಗುತ್ತದೆ. ಎಡ ಭಾಗ ರಾಜ್ಯ ರಸ್ತೆಸಾರಿಗೆ ಮತ್ತು ಬಲ ಭಾಗ ನಗರ ಸಾರಿಗೆ ನಿಲ್ದಾಣಗಳಿವೆ.

ನಿಲ್ದಾಣ ಆಗುವ ಮೊದಲು ಬಲಭಾಗದ ಖಾಲಿ ಜಾಗದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದವು. ಅನಂತರ ಇಡೀ ಕೆರೆಯ ಜಾಗವನ್ನು ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ನೀಡ ಲಾಯಿತು.

ಒಮ್ಮೆ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಜ್ಯ ಸರ್ಕಾರದ ಸಾಧನೆಗಳನ್ನು ಪರಿಚಯಿಸುವ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಿ ಸಾರಿಗೆ ಸಂಸ್ಥೆಗೆ ಅರ್ಜಿ ಸಲ್ಲಿಸಿತು. ದೇವರಾಜ ಅರಸು ಮುಖ್ಯಮಂತ್ರಿ ಕೀ. ಶೇ. ಆರ್. ಗುಂಡೂರಾವ್ ಸಾರಿಗೆ ಸಚಿವ ಹಾಗೂ ಸಂಸ್ಥೆ ಅಧ್ಯಕ್ಷರು.
ಅವರು ಈ ಅರ್ಜಿಯನ್ನು ತಿರಸ್ಕರಿಸಿದರು.

ಆ ಸಂದರ್ಭದಲ್ಲಿ ಡಿ.ಎಂ.ಸಿದ್ದಯ್ಯ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದೇವರಾಜ ಅರಸರ ಪರಮಾಪ್ತ ವೇ.ಬ್ರ.ಶ್ರೀ ಬೆಳ್ಳೂರು ಶಂಕರ ನಾರಾಯಣ್ ಅವರ ಪುತ್ರ ಬಿ.ಎಸ್. ಸತ್ಯನಾರಾಯಣ ಅವರು ಪಕ್ಷದ ಇಂಜಿನಿಯರ್ ಮತ್ತು ಸಾರ್ವಜನಿಕ ಸಂಪರ್ಕಧಿಕಾರಿ.

ಸಿದ್ದಯ್ಯನವರು ಇವರನ್ನು ಕರೆದು ಅನುಮತಿ ದೊರಕಿಸುವ ಅಧಿಕಾರ ವಹಿಸಿದರು. ಸತ್ಯನಾರಾಯಣರ ಮನವೊಲಿಕೆಗೆ ಮಣಿದ ಗುಂಡೂರಾವ್ ಎರಡು ಷರತ್ತಿನ ಮೇಲೆ ಅನುಮತಿ ನೀಡಿದರು. ರ್ಪ್ರದರ್ಶನ ಮುಗಿದ ಮೇಲೆ ಆ ಜಾಗವನ್ನು ಸಂಸ್ಥೆಗೆ ವಾಪಸು ಮಾಡಬೇಕು ಮತ್ತು ಮಧ್ಯದಲ್ಲಿದ್ದ ಚಿಕ್ಕ ರಸ್ತೆಯನ್ನು ಅಗಲಿಕರಣ ಮಾಡಿಸಿಕೊಡಬೇಕು ಎಂಬ ಒಪ್ಪಂದಕ್ಕೆ ಪಕ್ಷದ ಪರಾಗಿ ಸತ್ಯನಾರಾಯಣರೇ ಸಹಿ ಹಾಕಬೇಕು ಎಂಬ ಷರತ್ತು ಹಾಕಿದರು.

ಅದರಂತೆಯೇ ಸಾರಿಗೆ ಸಂಸ್ಥೆಗೆ ವಾಪಸಾಗಿ ಇಂದಿನ ಈ ನಿಲ್ದಾಣಗಳು ತಲೆ ಎತ್ತಿ ನಿಂತಿವೆ. ನಗರದ ಹೃದಯಭಾಗ ಹಾಗೂ ರೈಲ್ವೆ ನಿಲ್ದಾಣಗಳೆರಡಕ್ಕೂ ಹತ್ತಿರ ಇರುವ ಬಸ್ ನಿಲ್ದಾಣ ಇನ್ನೆಲ್ಲೂ ಇಲ್ಲ.
ಮಾಹಿತಿ: ವೆಂಕಟಾನರಾಯಣ, ಹಿರಿಯ ಪತ್ರಕರ್ತರು

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ