NEWSದೇಶ-ವಿದೇಶನಮ್ಮರಾಜ್ಯ

ಅತ್ಯಂತ ಪ್ರೇಕ್ಷಣೀಯ ಸ್ಥಳಗಳಾದ ಬಾಬಾ ಬುಡನ್​ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ನಾ ಪಟ್ಟ ಶೌಚಬಾಧೆ ಹೇಳತೀರದು: ರಾಷ್ಟ್ರಪತಿಗೆ ಪತ್ರಬರೆದ ಜಡೆಮ್ಮ

ವಿಜಯಪಥ ಸಮಗ್ರ ಸುದ್ದಿ

ಕರ್ನಾಟಕ ರಾಜ್ಯದ ಅತ್ಯಂತ ಎತ್ತರ ಪ್ರದೇಶ, ಅಸಂಖ್ಯಾತ ಜನರು ಪ್ರವಾಸಕ್ಕೆ ಬಂದು ಹೋಗುವ, ಅತ್ಯಂತ ಪ್ರೇಕ್ಷಣೀಯ ಸ್ಥಳಗಳಾದ ಬಾಬಾ ಬುಡನ್​ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಭೇಟಿ ನೀಡಿ ನಾ ಪಟ್ಟ ಕಷ್ಟ ಮತ್ತೊಬ್ಬರು ಪಡದಂತೆ ನೋಡಿಕೊಳ್ಳಲು ತಾವು ಈ ಕೂಡಲೇ ಈ ಪ್ರೇಕ್ಷಣೀಯ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಈ ಕೂಡಲೇ ಆದೇಶ ನೀಡಬೇಕು ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ ಜಡೆಮ್ಮ ಎಂಬ ಸಾಮಾನ್ಯ ಮಹಿಳೆ.

ಇಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಇದರಿಂದ ಪರದಾಡಿದ್ದು, ಶೌಚಕ್ಕೆ ಹೋಗಲು ತಾವು ಪಟ್ಟ ಕಷ್ಟದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇ ಪತ್ರ ಬರೆದು ವಿವರಿಸಿದ್ದಾರೆ. ಜತೆಗೆ ಇನ್ನಾದರೂ ಇಂಥ ಸಮಸ್ಯೆಗಳು ಬಗೆಹರಿದಾವು ಎಂಬ ಆಶಯ ಹೊಂದಿರುವುದಾಗಿ ಹೇಳಿದ್ದಾರೆ.

ಜಡೆಮ್ಮ ಬರೆದ ಪತ್ರ ಹೀಗಿದೆ..
ಘನವೆತ್ತ ರಾಷ್ಟ್ರಪತಿಯವರಿಗೆ,
ರಾಷ್ಟ್ರಪತಿ ಭವನ, ನವದೆಹಲಿ, 110004

ದೇಶದ ಪ್ರಥಮ ಪ್ರಜೆಯಾದ ಘನವೆತ್ತ ರಾಷ್ಟ್ರಪತಿ ಶ್ರೀಮತಿ ದೌಪದಿ ಮುರ್ಮುರವರಿಗೆ ನನ್ನ ಸಿರಿಗನ್ನಡದ ನಮಸ್ಕಾರಗಳು, ಬುಡಕಟ್ಟು ಸಮುದಾಯದಿಂದ ಬಂದು, ದೇಶದ ಅತ್ಯುನ್ನತ ಸ್ಥಾನಕ್ಕೆ ಹೋಗಿರುವುದು ನನ್ನಂತ ಸಾಮಾನ್ಯ ಮಹಿಳೆಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕ.

ಈ ಪತ್ರದ ಮೂಲ ಮತ್ತು ಮೊದಲ ಉದ್ದೇಶ ಏನೆಂದರೆ ನನ್ನಂತ ಸಾಮಾನ್ಯ ಮಹಿಳೆಯರ ವೇದನೆಗಳನ್ನು ನಿವೇದಿಸಿಕೊಳ್ಳುವುದಾಗಿದೆ.

ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರಿನ ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಕುಟುಂಬ ಸಮೇತ ಭೇಟಿ ಕೊಟ್ಟೆವು. ಬಾಬಾ ಬುಡನ್‌ಗಿರಿಯಲ್ಲಿ ಮೂತ್ರವಿಸರ್ಜನೆಯ ಒತ್ತಡ ಆರಂಭವಾಯಿತು, ಆದರೆ ಆ ಗಿರಿಯಲ್ಲಿ ಎಲ್ಲಿಯೂ ಶೌಚಾಲಯಗಳು ಇರಲಿಲ್ಲ. ಆಗಲಿ ಎಂದು ಆ ಒತ್ತಡವನ್ನು ತಡೆದುಕೊಂಡು ಮುಳ್ಳಯ್ಯನಗಿರಿ ಹತ್ತಿದ ಮೇಲೆ ಅಲ್ಲಿ ಶೌಚಾಲಯಕ್ಕೆ ಹುಡಿಕಿದೆ, ಅಲ್ಲಿಯೂ ಇಲ್ಲ. ಸೀತಾಳಯ್ಯನ ಗಿರಿಯಲ್ಲಿ ಹುಡುಕಿದೆ, ಅಲ್ಲಿಯೂ ಇಲ್ಲ.

ಕ್ಷಣಕ್ಷಣಕ್ಕೂ ಮೂತ್ರ ವಿಸರ್ಜನೆಯ ಒತ್ತಡ ಹೆಚ್ಚಾಗುತ್ತಿತ್ತು. ಆದರೆ ಎಲ್ಲಿಯೂ ಶೌಚಾಲಯ ಇಲ್ಲ. ಕೊನೆಗೆ ನಾಚಿಕೆ ಮತ್ತು ಅವಮಾನವನ್ನು ಸಹಿಸಿಕೊಂಡು ಬಯಲಿನಲ್ಲಿ ದೇಹದ ಒತ್ತಡವನ್ನು ನಿವಾರಿಸಿಕೊಂಡೆ.

ನನ್ನದು ಆ ಧರ್ಮ, ಈ ಧರ್ಮ, ಇದು ನನ್ನ ದೇವರು, ನಿನ್ನ ದೇವರು ಎಂದು ಬಡಿದಾಡಿಕೊಳ್ಳುವ ಈ ಜನರು, ಎಲ್ಲರಿಗೂ ಬೇಕಾಗಿರುವ ಶೌಚಾಲಯದ ಕಡೆ ದಿವ್ಯನಿರ್ಲಕ್ಷ್ಯ ವಹಿಸಿರುವುದನ್ನು ನೋಡಿದರೆ ತುಂಬಾ ಖೇದವಾಗುತ್ತದೆ. ದೇಹದಲ್ಲಿ ಒತ್ತಡ ಆರಂಭವಾದಾಗ ನಾವು ಯಾವ ಧರ್ಮ ಎನ್ನುವುದನ್ನು ಮರೆತು, ಮನುಷ್ಯ ಸಹಜ ಭಾವನೆಗಳಿಗೆ ಒಳಗಾಗಿ, ಒತ್ತಡವನ್ನು ನಿವಾರಿಸಿಕೊಳ್ಳುತ್ತೇವೆ. ಪ್ರಪಂಚದ ಸಾರ್ವಕಾಲಿಕ, ದೇಶಾತೀತ ಮತ್ತು ಕಾಲಾತೀತ ಜಾತ್ಯಾತೀತ ಸ್ಥಳ ಇದ್ದರೆ, ಅದು ಶೌಚಾಲಯ, ಎಲ್ಲಾ ಧರ್ಮದವರು ಉಪಯೋಗಿಸುವುದು ಒಂದೇ ಸ್ಥಳ, ಅದು ಶೌಚಾಲಯ.

ತಾವು ನನ್ನಂತೆ ಮಹಿಳೆ, ಆದರೆ ನನಗಿರುವ ಕಷ್ಟಗಳು ನಿಮಗೆ ಇರಲಾರವು, ಯಾಕೆಂದರೆ ನೀವು ಅಧಿಕಾರದಲ್ಲಿ ಇರುವವರು, ಕೈಗೊಬ್ಬರು ಕಾಲಿಗೊಬ್ಬರು ಸೇವೆ ಮಾಡಲು ಇರುತ್ತಾರೆ. ಆದರೆ ನಮಗೆ ಶೌಚಾಲಯಗಳೇ ಸಿಗದಿರುವುದು. ಅದರಲ್ಲಿ ಪ್ರೇಕ್ಷಣೀಯ ಸ್ಥಳವಾದ ಬಾಬಾಬುಡನ್ ಗಿರಿಯಲ್ಲಿ ಶೌಚಾಲಯ ಇಲ್ಲದಿರುವುದು ನನ್ನಂತ ಅನೇಕ ಮಹಿಳೆಯರ ಖಾಸಗಿತನ ಮತ್ತು ಘನತೆಗೆ ಚ್ಯುತಿ ಬಂದಿರುತ್ತದೆ.

ನೈಸರ್ಗಿಕ ಕರೆಗಳ ಒತ್ತಡವನ್ನು, ನಿಮಗಿಂತ ಚೆನ್ನಾಗಿ ಅರಿತವರು ಬೇರೆ ಯಾರೂ ಇರುವುದಿಲ್ಲ. ಯಾಕೆಂದರೆ ಮಹಿಳೆಯರ ಕಷ್ಟ ಮಹಿಳೆಯರಿಗೆ ತಿಳಿದಿರುತ್ತದೆ.

ಒಂದೇ ಒಂದು ಶೌಚಾಲಯ ಇಲ್ಲದಿರುವುದು ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ನಾವಿನ್ನು ಶೌಚಾಲಯದ ಕುರಿತು ಮಾತನಾಡುತ್ತಿದ್ದೇವೆ, ಬೇರೆ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬ್ಲಾಕ್​ಚೈನ್ ಟೆಕ್ನಾಲಜಿ, ಇಂಡಸ್ಟ್ರಿ 4.0 ಕುರಿತು ಮಾತನಾಡುತ್ತಿವೆ.

ಘನವೆತ್ತ ರಾಷ್ಟ್ರಪತಿಗಳೇ, ಪ್ರತಿವರ್ಷ ಲಕ್ಷಾಂತರ ಜನಗಳು ಭೇಟಿ ನೀಡುವ ಈ ಮೂರು ಬೆಟ್ಟಗಳಲ್ಲಿ ಈ ಕೂಡಲೇ ಶೌಚಾಲಯಗಳನ್ನು ನಿರ್ಮಿಸುವಂತೆ ಆದೇಶ ಮಾಡಿ. ಮಂಗಳನ ಅಂಗಳವನ್ನು ತಲುಪಿರುವ ನಾವು ಮುಳ್ಳಯ್ಯನಗಿರಿಯಲ್ಲಿ ಶೌಚಾಲಯ ನಿರ್ಮಿಸದೇ ಇರುವುದು ದುರಂತ.

ಬೇಗ ಶೌಚಾಲಯ ನಿರ್ಮಾಣ ಆಗುವುದರಿಂದ ಹಲವು ಜನರ ಯಾತನೆಗೆ ಕೊನೆ ಬೀಳುತ್ತದೆ. ಸಾಮಾನ್ಯ ಜನರ ಈ ಸಂಕಷ್ಟವನ್ನು ತಾವು ತಕ್ಷಣ ಬಗೆಹರಿಸುತ್ತೀರಿ ಎಂಬ ಭರವಸೆ ಇದೆ. ಮೂರು ಬೆಟ್ಟಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ದೇವರ ಕೃಪೆಗೆ ಪಾತ್ರರಾಗಿ.

ಪ್ರಪಂಚದಲ್ಲಿ ಭಾರತ ಡಯಾಬಿಟಿಸ್‌ನ ರಾಜಧಾನಿಯಾಗಿದೆ. ಮಧುಮೇಹದ ರೋಗಿಗಳು ಸಹ ಶೌಚಾಲಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಇಲ್ಲಿ ಶೌಚಾಲಯ ನಿರ್ಮಿಸಲು ತಾವು ದೃಢ ಸಂಕಲ್ಪ ಮಾಡಿದರೆ, ಕರ್ನಾಟಕದ ಜನತೆ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ.

ಜೈ ಭುವನೇಶ್ವರಿ
ಇಂತಿ ಸಾಮಾನ್ಯ ಮಹಿಳೆ
ಜಡೆಮ್ಮ

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?