NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ!

ವಿಜಯಪಥ ಸಮಗ್ರ ಸುದ್ದಿ

ಬೀದಿಯಲ್ಲಿ ನಿಂತು ನಮ್ಮೆಲ್ಲರ ಹಕ್ಕಿಗಾಗಿ, ಸಾರಿಗೆ ಸಂಸ್ಥೆಯ ಉಳಿವಿಗಾಗಿ ಒಬ್ಬ ನಾಯಕನ ಜತೆ ಒಂದಷ್ಟು ಸಮೂಹ ಶಾಂತಿಯುತವಾಗಿ ಸುಮಾರು 230 ಕಿಲೋ ಮೀಟರ್‌ ನಡೆದು ಸಾಗುತ್ತಿರುವ ಈ ಹೊತ್ತಿನಲ್ಲಿ, ಅದೂ ಕೂಡ ಹಗಲು-ರಾತ್ರಿ ಎನ್ನದೆ ಸಂಕೋಲೆಗಳನ್ನು ಕಡಿದು ಹಾಕಲು ಹೋರಾಡುತ್ತಿರುವಾಗ… ಬದಿಯಲ್ಲಿ ನಿಂತು ತಮಾಷೆ ನೋಡುತ್ತಾ, ಕರ್ತವ್ಯದ ನೆಪದಲ್ಲಿ ಪಲಾಯನ ಮಾಡುತ್ತಿರುವ ನೀವು ನಿಜಕ್ಕೂ ಬದುಕಿದ್ದೀರಾ?

ಅನ್ಯಾಯದ ವಿರುದ್ಧ ಹೋರಾಡುವ ಸಹೋದ್ಯೋಗಿಯ ಜತೆ ನಿಲ್ಲದ ನೀವು, ಕೇವಲ ಸಮವಸ್ತ್ರ ಧರಿಸಿದ ‘ಜೀವಂತ ಶವಗಳು’. ಕೆಲವೇ ಕೆಲವು ವೀರ ನೌಕರರು ವ್ಯವಸ್ಥೆಯ ಅನ್ಯಾಯದ ವಿರುದ್ಧ ಎದೆಯೊಡ್ಡಿ ನಿಂತಾಗ, ಅವರಿಗೆ ಹೆಗಲು ಕೊಡಬೇಕಾದ ಸಾವಿರಾರು ನೌಕರರು ಬೆನ್ನು ತೋರಿಸಿ ಓಡುತ್ತಿರುವುದು ಈ ಕಾಲದ ದೊಡ್ಡ ದುರಂತ.

ನೆನಪಿಡಿ-​”ಹೋರಾಟಗಾರ ಸೋತರೆ ಕೇವಲ ಒಬ್ಬ ವ್ಯಕ್ತಿ ಸೋಲಲ್ಲ, ಇಡೀ ಸಾರಿಗೆ ನೌಕರರ ಸಂಕುಲದ ಭವಿಷ್ಯವೇ ಸಮಾಧಿಯಾಗುತ್ತದೆ.” ಹೋರಾಟಗಾರರು ಬೀದಿಗೆ ಇಳಿದಿರುವುದು ಅವರ ವೈಯಕ್ತಿಕ ಲಾಭಕ್ಕಲ್ಲ, ನಿಮ್ಮ ಮನೆಯ ಮಕ್ಕಳ ಜ್ಞಾನದ, ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮತ್ತು ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ.

ನಾವು ಸಂಸ್ಥೆಯ ಸರ್ವಾಧಿಕಾರಿಗಳು ಎಂಬಂತೆ ಕೆಲ ಅಧಿಕಾರಿಗಳು ನಮಗೂ ವೇತನ ತಾರತಮ್ಯವಿರುವುದನ್ನು ಹೋಗಲಾಡಿಸಿ ಶಾಶ್ವತ ಪರಿಹಾರಕ್ಕಾಗಿ, ಅದನ್ನು ಸರಿಪಡಿಸುವುದಕ್ಕೆ ನಾವು ಮುಂದಾಗಬೇಕು ಎಂಬ ಅರಿವಿಲ್ಲದೆ ಅಜ್ಞಾನಿಗಳಂತೆ ತೋರಿಸುವ ದಬ್ಬಾಳಿಕೆ ಮತ್ತು ಅಹಂಕಾರದ ಮುಂದೆ ತಲೆಬಾಗಿ ನಡೆಯುವುದು ಬದುಕಲ್ಲ, ಅದು ಬಣ್ಣ ಹಚ್ಚಿದ ಗುಲಾಮಗಿರಿ.

ಇಂದು ಒಬ್ಬ ಹೋರಾಟಗಾರನನ್ನು ಏಕಾಂಗಿಯನ್ನಾಗಿ ಮಾಡಿದರೆ, ನಾಳೆ ನಿಮ್ಮ ಮೇಲೆ ಅನ್ಯಾಯದ ತೂಗುಗತ್ತಿ ಬಂದಾಗ ನಿಮಗಾಗಿ ಧ್ವನಿ ಎತ್ತಲು ಯಾರೂ ಇರುವುದಿಲ್ಲ. ಈ ಬಗ್ಗೆ ಈಗಾಗಲೇ ನಿಮಗೆ ಅದು ಅರ್ಥವಾಗಿದೆ. ಆದರೂ ಕಳೆದ ಏ.8ರಿಂದ ಪಾದಯಾತ್ರೆ ಮಾಡುತ್ತಿರುವ ಒಕ್ಕೂಟಕ್ಕೆ ಬೆಂಬಲ ನೀಡಲು ಈಗಲು ಮೀನಮೇಷ ಎಣಿಸುತ್ತ ಕುಳಿತಿರುವುದರ ಲಾಭ ಯಾರಿಗಾಗುತ್ತದೆ.

ಇದರಿಂದ ನಾವು ಲಾಭ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಹಾಗಾಗಿ ಈಗಲೂ ಕಾಲ ಮಿಂಚಿಲ್ಲ ಈ ಶಾಂತಿಯುತ ಪಾದಯಾತ್ರೆಗೆ ಬೆನ್ನೆಲುಬಾಗಿ ಅವರ ಹೆಜ್ಜೆಗೆ ನಿಮ್ಮ ಹೆಜ್ಜೆಯನ್ನು ಸೇರಿಸಿ ಒಂದಾಗಿ ಹೆಜ್ಜೆಹಾಕಿ ಸರ್ಕಾರದ ಮುಂದೆ ನಿಮ್ಮ ಶಾಶ್ವತ ಪರಿಹಾರದ ಬೇಡಿಕೆ ಈಡೇರಿಸಿಕೊಳ್ಳಿ.

ಈಗಲೂ ನಾವು ಕೈಕಟ್ಟಿ ಕುಳಿತರೆ ನಮ್ಮ ಭವಿಷ್ಯವನ್ನು ನಾವೇ ಹಾಳುಮಾಡಿಕೊಂಡಂತೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ …ಹೀಗಾಗಿ ಎಚ್ಚೆತ್ತುಕೊಳ್ಳಿ!

ಸಾರಿಗೆ ಸಹೋದ್ಯೋಗಿಗಳೇ… ಎದ್ದೇಳಿ!:
​ಕೈಕಟ್ಟಿ ನಿಂತು ನೋಡುವ ‘ಹೇಡಿ’ಗಳಾಗಬೇಡಿ. ಅಧಿಕಾರದ ಮದವೇರಿದ ವ್ಯವಸ್ಥೆಗೆ ನಿಮ್ಮ ಸಂಘಟಿತ ಶಕ್ತಿಯ ದರ್ಶನ ತೋರಿಸಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಮ್ಮ ಸಹೋದರನಿಗೆ ಸಾವಿರ ಕೈಗಳ ಬಲ ತುಂಬಿ. ಪಲಾಯನ ಮಾಡುವುದು ಹೇಡಿಗಳ ಲಕ್ಷಣ, ಎದುರಿಸಿ ನಿಲ್ಲುವುದು ಸ್ವಾಭಿಮಾನಿ ನೌಕರನ ಲಕ್ಷಣ!

​ಹೋರಾಟಕ್ಕೆ ಸಾಥ್ ನೀಡದ ನೌಕರನನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.​ಎದ್ದೇಳಿ! ಗುಡುಗಿ! ಒಂದಾಗಿ! ನಮ್ಮ ಹಕ್ಕು – ನಮ್ಮ ಹೋರಾಟ! ಹೀಗೆ ಈ ಪಾದಯಾತ್ರೆಯಲ್ಲಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ತಾರತಮ್ಯದ ವಿರುದ್ಧ ಮೌನದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಅದಕ್ಕಾಗಿ ಒಗ್ಗಟ್ಟು ಪ್ರದರ್ಶಿಸಿ ಈಗ ಈ ಒಗ್ಗಟ್ಟಿನ ಅಗತ್ಯತೆ ತುಂಬಾ ಇದೆ. ಇದಕ್ಕೆ ಎಲ್ಲರೂ ತಿಂತಿಸಿ ನಿರ್ಧಾರ ತೆಗೆದುಕೊಳ್ಳಿ, ಇದು ಅತೀ ಜರೂರಾಗಿ ಆಗಬೇಕಿದೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್ ಚುನಾವಣೆವೇಳೆ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಶಾಸಕ ಶ್ರೀನಿವಾಸ್ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ