NEWSನಮ್ಮರಾಜ್ಯನಿಮ್ಮ ಪತ್ರ

KSRTC ಹಳೆಯ 1500 ಬಸ್‌ಗಳ ನವೀಕರಣ – ಈಗಾಗಲೇ 500 ಬಸ್‌ಗಳಿಗೆ ಮೇಜರ್‌ ಸರ್ಜರಿ ಮಾಡಿ ಮುಗಿಸಿರುವ ನುರಿತ ತಜ್ಞರ ತಂಡ

ಮಧುವಣಗಿತ್ತಿಯಂತೆ ಮಿನುಗುತ್ತಿರುವ ಗುಜರಿ ಸೇರಬೇಕಿದ್ದ ವಾಹನಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಸ್‌ನ ಬಾಡಿ ಸೇರಿದಂತೆ ಇತರೆ ಭಾಗಗಳು ಹಾಳಾಗಿರುವುದನ್ನು ತೆಗೆದು ಹೊಸತನ್ನು ಅಳವಡಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ ಹಳೆಯ ಬಸ್‌ಗಳನ್ನು ನವೀಕರಿ ರಸ್ತೆಗಿಳಿಸಲು ಈಗಾಗಲೇ ಕೆಲಸ ಆರಂಭಿಸಿದೆ.

ಕೊರೊನಾ ಸಂಕಷ್ಟದಿಂದ ತುಂಬ ನಷ್ಟ ಅನುಭವಿಸಿರುವ ಸಂಸ್ಥೆ, ಅದನ್ನು ಸರಿದೂಗಿಸುವ ಸಲುವಾಗಿ ಸಂಸ್ಥೆ ತನ್ನಲ್ಲಿರುವ ಸಂಪನ್ಮೂಲಗಳನ್ನೇ ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಎಲ್ಲ ವಿಭಾಗೀಯ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸುತ್ತಿದೆ.

ಈ ಮೂಲಕ ಹಳೇ ಬಸ್‌ಗಳನ್ನೇ ರಿಪೇರಿ ಮಾಡಿ ರಸ್ತೆಗಳಿಸಲು ಮುಂದಾಗಿದ್ದು, ಅದಕ್ಕಾಗಿಯೇ ಈಗ ರಿಪೇರಿ ಆಗಬೇಕಿರುವ ಒಂದೂವರೆ ಸಾವಿರ ಬಸ್‌ಗಳ ನವೀಕರಣ ಮಾಡುತ್ತಿದೆ. ಈ ಬಸ್‌ಗಳು 10ರಿಂದ 11 ವರ್ಷಗಳ ಕಾಲ ಪ್ರಯಾಣಿಕರನ್ನು ಒಂದುಕಡೆಯಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಿವೆ.

ಈ ನಡುವೆ ತಲಾ 10 ಲಕ್ಷ ಕಿಮೀ ಸಂಚರಿಸಿದ ಬಳಿಕ ದುಸ್ತಿಗೊಳ್ಳದೆ ನಿಂತಲೇ ನಿಂತಿವೆ. ಹೀಗಾಗಿ ಧೂಳು ಹಿಡಿಯುತ್ತ ನಿಂತ ಈ ಒಂದೂವರೆ ಸಾವಿರ ಬಸ್‌ಗಳನ್ನು ನವೀಕರಿಸಲಾಗುತ್ತಿದ್ದು, 2022ರ ಆಗಸ್ಟ್‌ನಿಂದಲೇ ಈ ನವೀಕರಣ ಕೆಲಸಕ್ಕೆ ಕೈಯಾಕಿದ್ದು, ಈವರೆಗೆ 500 ಬಸ್‌ಗಳ ನವೀಕರಣ ಕಾರ್ಯ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೆಂಗೇರಿಯಲ್ಲಿರುವ ಪ್ರಾದೇಶಿಕ ಕಾರ್ಯಾಗಾರದಲ್ಲಿ 180ಬಸ್‌ಗಳು ನವೀಕರನಗೊಂಡಿದ್ದು, ಅದರಂತೆ ಹಾಸನದ ಪ್ರಾದೇಶಿಕ ಕಾರ್ಯಾಗಾರದಲ್ಲಿ 180 ಬಸ್‌ಗಳು ಸೇರಿ ಇತರ ಕಾರ್ಯಾಗಾರಗಳಲ್ಲಿ ಈಗಾಗಲೇ 500 ಬಸ್‌ಗಳು ನವೀಕರಣಗೊಂಡಿವೆ.

ಒಮ್ಮೆ ನವೀಕರಿಸಿದ ಬಸ್‌ಗಳನ್ನು 3-4 ವರ್ಷಗಳ ಕಾಲ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಯಾವುದೇ ತೊಂದರೆ ಇಲ್ಲದೆ ಕಾರ್ಯಾಚರಣೆ ಮಾಡಬಹುದಾಗಿದೆ. ಇನ್ನು ಒಂದು ಬಸ್‌ ನವೀಕರಿಸಲು 12 ದಿನಗಳು ಬೇಕಾಗುತ್ತದೆ. ಅಂದರೆ ತಿಂಗಳಿಗೆ ಸುಮಾರು 50 ಬಸ್‌ಗಳಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸದಾಗಿ ಏನೆಲ್ಲ ಅಳವಡಿಕೆ: ಈಗಾಗಲೇ 10-11 ವರಷ್‌ ಓಡಿರುವ ಬಸ್‌ಗಳಾಗಿರುವುದರಿಂದ ಅವುಗಳ ಬಹುತೇಕ ಭಾಗಗಳು ಹಾಳಾಗಿರುತ್ತವೆ. ಹೀಗೆ ಹಾನಿಗೊಳಗಾದ ಭಾಗಗಳನ್ನು ತೆಗೆದುಹಾಕಿ, ಬಾಡಿಯನ್ನು ಹೊಸದಾಗಿ ನಿರ್ಮಿಸಲಾಗುವುದು. ಇನ್ನು ಕಿಟಕಿಗಳು ಮತ್ತು ವಿಂಡ್ ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತಿದೆ. ಹೊಸ ಸೀಟ್ ಕುಶನ್‌ಗಳು ಮತ್ತು ಕವರ್ ಹಾಕಲಾಗುತ್ತಿದೆ.

ಇದೆಲ್ಲ ಆದ ಮೇಲೆ ನವೀಕರಿಸಿದ ಬಸ್‌ಗಳಿಗೆ ಆರ್‌ಟಿಒನಿಂದ ಫಿಟ್‌ನೆಸ್‌ ಸರ್ಟಿಫಿಕೆಟ್‌ ಪಡೆದು ಬಳಿಕ ರಸ್ತೆಗಿಳಿಸಲಾಗುವುದು. ಅಲ್ಲಿಯ ವರೆಗೂ ನಾವು ಎಲ್ಲ ಹಾಳಾಗಿರುವ ಬಸ್‌ಗಳನ್ನು ಹೊಸ ಬಸ್‌ಗಳಿಗೆ ಸರಿ ಸಮಾನಾಗಿ ಸಿದ್ಧಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಗೆ ಲಕ್ಷ ರೂ. ಬಹುಮಾನ: ಆಗಸ್ಟ್ 1 ರಂದು ಕೆಎಸ್‌ಆರ್‌ಟಿಸಿಯ 63ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಬಸ್‌ಗಳ ನವೀಕರಣ ಮಾಡುವ ವಿಭಾಗೀಯ ಕಾರ್ಯಾಗಾರ ಮತ್ತು ಪ್ರಾದೇಶಿಕ ಕಾರ್ಯಾಗಾರದ ಸದಸ್ಯರ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಲಾಗಿದೆ. ಸಿಬ್ಬಂದಿಯ ಕೆಲಸ-ಕಾರ್ಯಗಳನ್ನು ಉತ್ತೇಜಿಸುವ ಸಲುವಾಗಿ ಈ ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ಬಸ್‌ಗಳನ್ನು ಅಂದರೆ ಈ ಹಿಂದೆ ಖರೀದಿಸಿದ ಬಸ್‌ಗಳನ್ನು ಬಿಎಂಟಿಸಿಯಲ್ಲಿ ಇತ್ತೀಚೆಗೆ ರಸ್ತೆಗಿಳಿಸಿದ್ದೂ ಬಿಟ್ಟರೆ ಕೆಎಸ್‌ಆರ್‌ಟಿಸಿ ನಿಗಮದಿಂದ ಕಳೆದ ಐದು ವರ್ಷಗಳಲ್ಲಿ ನಾವು ಯಾವುದೇ ಹೊಸ ಬಸ್‌ಗಳನ್ನು ಖರೀದಿ ಮಾಡಿಲ್ಲ. ಈಗ ನಾವು ಬಸ್ ಖರೀದಿ ಮಾಡಬೇಖು ಎಂದರೆ ಒಂದು ಬಸ್‌ಗೆ ಸುಮಾರು 40 ಲಕ್ಷ ರೂ. ಬೇಕಾಗುತ್ತದೆ. ಹೀಗಾಗಿ ಹಳೇ ಬಸ್‌ಗಳನ್ನೇ ನವೀಕರಿಸಿದರೆ ಅಂದಾಜು 3 ಲಕ್ಷ ರೂ.ವರೆಗೆ ಖರ್ಚಾಗಲಿದೆ. ಇದರಿಂದ ಸಂಸ್ಥೆಗೂ ಸುಮಾರು 37 ಸಾವಿರ ಕೋಟಿ ರೂ.ಗಳು ಉಳಿತಾಯವಾಗಲಿದೆ.

l ಅನ್ಬುಕುಮಾರ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ