CrimeNEWSಬೆಂಗಳೂರುಸಿನಿಪಥ

ಚೆಕ್‌ಬೌನ್ಸ್‌ ಪ್ರಕರಣ: ಸಿನಿಮಾ ಸಹಾಯಕ ನಿರ್ದೇಶಕ ರಾಜೇಶ್‌ಗೆ 2ನೇ ಬಾರಿ ಜಾಮೀನು ರಹಿತ ವಾರಂಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚೆಕ್ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಲನಚಿತ್ರ ಸಹಾಯಕ ನಿರ್ದೇಶಕ ಎಸ್‌.ರಾಜೇಶ್‌ ಜಾಮೀನು ರಹಿತ ವಾರಂಟ್ ನೀಡಿದ್ದರೂ ಕೋರ್ಟ್‌ಗೆ ಹಾಜರಾಗದಿರುವುದರಿಂದ ಮತ್ತೆ 2ನೇ ಬಾರಿಗೆ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಇಂದು ( ನ.10) ಜಾಮೀನು ರಹಿತ ವಾರಂಟ್(NBW) ಹೊರಡಿಸಿದೆ.

ಸಿನಿಮಾ ವಿತರಕ, ಬಿಸಿನಸ್‌ ಮ್ಯಾನ್‌, ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡು ತನ್ನ ಸ್ನೇಹಿತರ ಮೂಲಕ ದೇವರಾಜು ಎಂಬುವರಿಗೆ ಪರಿಚಯವಾದ ಆರೋಪಿ ರಾಜೇಶ್‌ ಗೃಹೋಪಯೋಗಿ ವಸ್ತುಗಳ ಮೇಲೆ ಬಂಡವಾಳ ಹೂಡಿಕೆ ಮಾಡುವುದಕ್ಕೆ ಹಣದ ಅವಶ್ಯವಿದೆ ಎಂದು ಹೇಳಿ ಸುಮಾರು 4 ವರ್ಷದ ಹಿಂದೆ 4.5 ಲಕ್ಷ ರೂಪಾಯಿ ಪಡೆದು ಬಳಿಕ ಕೊಟ್ಟ ಹಣವನ್ನು ವಾಪಸ್‌ ಮಾಡದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ.

ಆ ಬಳಿಕ 2022ರ ಮೇನಲ್ಲಿ 3.75 ಲಕ್ಷ ರೂಪಾಯಿ ಚೆಕ್‌ ನೀಡಿದ್ದ ಆರೋಪಿ. ಆ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದಾಗ ಅಕೌಂಟ್‌ನಲ್ಲಿ ಸಾಕಷ್ಟು ಹಣವಿಲ್ಲ ಎಂದು ಚೆಕ್‌ ಬೌನ್ಸ್‌ ಆಯಿತು. ಹೀಗಾಗಿ ಜೂನ್‌ 2022ರಲ್ಲಿ ದೇವರಾಜು ಕೋರ್ಟ್‌ ಮೊರೆ ಹೋದರು. ಅಂದಿನಿಂದ ಈವರೆಗೂ ತಲೆ ಮರೆಸಿಕೊಂಡು ಕೋರ್ಟ್‌ಗೂ ಹಾಜರಾಗದೆ ಇತ್ತ ಕೊಟ್ಟ ಹಣವನ್ನು ವಾಪಸ್‌ ಕೊಡದೆ ಪೊಲೀಸರ ಕೈಗೂ ಸಿಗದೆ ಕಳ್ಳಾಟವಾಡುತ್ತಿದ್ದಾನೆ.

ಹೀಗಾಗಿ ಇಂದು ಮತ್ತೆ 2ನೇ ಬಾರಿಗೆ ಜಾಮೀನು ರಹಿತ ವಾರಂಟ್‌ (A non-bailable warrant was issued) ಹೊರಡಿಸಿ ಪ್ರಕರಣವನ್ನು ಜನವರಿ 4ಕ್ಕೆ ಮುಂದೂಡಿದೆ.

ಆರೋಪಿ ರಾಜೇಶ್‌ ಭಾರೀ ವಂಚಕನಾಗಿದ್ದು, ಇದೇ ರೀತಿ ಹಲವಾರು ಜನರ ಬಳಿ ಸುಳ್ಳು ಹೇಳಿ ಸಾಲದ ರೂಪದಲ್ಲಿ ಹಣ ಪಡೆದು ಯಾರಿಗೂ ಮರಳಿಸಿಲ್ಲ ಎಂದು ಸಾಲ ಕೊಟ್ಟರು ಹೇಳುತ್ತಿದ್ದಾರೆ. ಈತ ತಮ್ಮ ಸ್ನೇಹಿತರು ಮತ್ತು ಸ್ನೇಹಿತರ ಗೆಳೆಯರ ಬಳಿಯೂ ಸಾಲ ಪಡೆದು ವಂಚಿಸಿದ್ದಾನೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ