CrimeNEWSನಮ್ಮರಾಜ್ಯ

ಪ್ರೀತಿಯ ನಾಟಕವಾಡಿ ಕಾಮತೃಷೆಗೆ ಯುವತಿ ಬಳಸಿಕೊಂಡು ನಂತರ ಕೊಲೆಗೆ ಯತ್ನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತನ್ನ ಕಾಮ ತೃಷೆ ತೀರಿಸಿಕೊಳ್ಳುವವರೆಗೂ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ಸಿಗದೆ ನಾನು ಜೀವಂತವಾಗಿ ಬದುಕಲಾರೆ ಎಂದೆಲ್ಲ ತುಂಬೆಗಿಡ ಹತ್ತಿಸಿದ ಕಾಮುಕನೊಬ್ಬ ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಆಕೆಯ ಕತ್ತು ಹಿಸುಕಿ ಸಾಯಿಸಲು ಯತ್ನಿಸಿರುವುದು ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾಮತೃಷೆ ತಿರಿದ ಬಳಿಕ ದೂರ ಹೋಗು ಎಂದ ಪಾಪಿ

ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ ಮಾರತ್ತಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆ ವೇಳೆ ಅರ್ಕಾ ಭಕ್ಷಿ ಎಂಬಾತನ ಪರಿಚಯವಾಗಿದೆ.  ಬಳಿಕ ಈ ಇಬ್ಬರ ನಡುವಿನ ಪರಿಚಯ ಸ್ನೇಹ, ಪ್ರೀತಿಗೆ ತಿರುಗಿದೆ. ಆಕೆ ತಾನು ಪ್ರೀತಿಸುತ್ತಿರುವ ವಿಚಾರವನ್ನುತನ್ನ ಪಾಲಕರಿಗೆ ತಿಳಿಸಿದ್ದಾಲೆ. ಅರ್ಕಾ ಭಕ್ಷಿ ಕೂಡ ಈ ಸಂಬಂಧ ಯುವತಿಯ ಪಾಲಕರೊಂದಿಗೆ ಮಾತನಾಡಿ, ಮದುವೆ ಆಗುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಯುವತಿಯ ಪಾಲಕರು ಇಬ್ಬರೂ ಓಡಾಡಲು ಅನುಮತಿ ನೀಡಿದ್ದರು ಎಂದು ಹೇಳಲಾಗಿದೆ.

ಈ ನಡುವೆ ಕೆಲ ತಿಂಗಳ ಹಿಂದೆ ಆರೋಪಿ ಕೆಲಸ ಮಾಡುತ್ತಿದ್ದ ಕಚೇರಿ ಸಂಜಯನಗರಕ್ಕೆ ಸ್ಥಳಾಂತರಗೊಂಡಿದೆ. ಹೀಗಾಗಿ, ತನ್ನ ವಾಸ್ತವ್ಯವನ್ನು ಸಂಜಯನಗರಕ್ಕೆ  ಬದಲಿಸಿಕೊಂಡಿದ್ದ, ಹೀಗೆ ನಿತ್ಯ ಫೋನ್‌ ಸಂಭಾಷೇಯಲ್ಲಿ ತೊಡಗಿದ್ದ ಈ ಪ್ರೇಮಿಗಳಿಗೆ ಅಂದು ಫೆ.14ರ ಪ್ರೇಮಿಗಳ ದಿನ ಬಂದಿದೆ. ಈ ಸಮಯವನ್ನೇ ಕಾಯುತ್ತಿದ್ದ ಕಾಮುಕ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಬಳಿಕ ಪಬ್‌ಗೂ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾನೆ. ಆ ಪಾರ್ಟಿಯಲ್ಲೂ ಕೂಡ ಈಕೆಯನ್ನು ಮದುವೆ ಆಗುತ್ತೇನೆ ಎಂದು ತನ್ನ ಸ್ನೇಹಿತರ ಮುಂದೆ ಹೇಳಿ, ಉಂಗುರ ತೊಡಿಸಿದ್ದಾನೆ.

ಈ ನಡುವೆ ತಿಂಗಳು ಸವೆದು ಲಾಕ್‌ಡೌನ್‌ ಘೋಷಣೆಯಾದ ಬಳಿಕ, ‘ಇಬ್ಬರೂ ಸಂಜಯನಗರದಲ್ಲೇ ಕೆಲಸ ಮಾಡೋಣ’ ಎಂದು ಪುಸಲಾಯಿಸಿ ಆಕೆಯನ್ನು ಮಾರತ್ತಹಳ್ಳಿಯಿಂದ ಸಂಜಯನಗರದ ತನ್ನ ಮನೆಗೆ ಕರೆಸಿಕೊಂಡಿದ್ದ. ಆದರೆ ಈ ವಿಷಯ ಆರೋಪಿಯ ಪೋಷಕರಿಗೆ ತಿಳಿದಿದೆ.

ಆತನ ಪಾಲಕರು ಈಕೆಗೆ ತಮ್ಮ ಮಗನಿಂದ ದೂರ ಇರುಎಂದು ಮೆಸೇಜ್‌ ಮಾಡಿ ಎಚ್ಚರಿಸಿದ್ದಾರೆ. ಅಲ್ಲದೇ ಆಯನ್ನು ಬಿಡದಿದ್ದರೆ ನಿನ್ನನ್ನು ಮನೆಯಿಂದ ಹೊರಗೆ ಹಾಕುತ್ತೇವೆ ಎಂದು ಮಗನಿಗೂ ಬೆದರಿಸಿದ್ದಾರೆ. ತನ್ನ ಪಾಲಕರ ಬೆದರಿಕೆಗೆ ಹೆದರಿದ ಆರೋಪಿ, ಯುವತಿಯನ್ನು ವಾಪಸ್‌ ಮನೆಗೆ ಹೋಗುವಂತೆ ತಿಳಿಸಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದಾಳೆ. ಆ ವಿಚಾರಕ್ಕೆ ಗಲಾಟೆ ನಡೆದು ಆರೋಪಿ ಯುವತಿಯ ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿದ್ದ ಎಂದು ಹೇಳಿ ಸದ್ಯ ಈಗ ಯುವತಿ ತನ್ನ ಜೀವನಕ್ಕೆ ನೆಲೆ ನೀಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಇನ್ನು ಮಾರತ್ತಹಳ್ಳಿಯ ಈ 30 ವರ್ಷದ ಯುವತಿ ನನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ನೀಡಿದ ದೂರಿನ ಮೇರೆಗೆ ಸಂಜಯನಗರ ನಿವಾಸಿ ಅರ್ಕಾ ಭಕ್ಷಿ ಎಂಬಾತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ