NEWSನಮ್ಮಜಿಲ್ಲೆಶಿಕ್ಷಣ-

ಪಾಲಕರ ಕಾನ್ವೆಂಟ್ ಗೀಳಿಗೆ ಮುಚ್ಚಿದ್ದ 84 ವರ್ಷಗಳ ಇತಿಹಾಸವಿದ್ದ ಸರ್ಕಾರಿ ಶಾಲೆ ಮತ್ತೇ ಆರಂಭ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಪಾಲಕರ ಕಾನ್ವೆಂಟ್ ಶಾಲೆಗಳ ಮೇಲಿನ ಪ್ರೀತಿಯಿಂದಾಗಿ ವಿದ್ಯಾರ್ಥಿಗಳಿಲ್ಲದೆ 84 ವರ್ಷಗಳ ಇತಿಹಾಸವಿದ್ದ ಸರ್ಕಾರಿ ಶಾಲೆ ಮಕ್ಕಳಿಲ್ಲದೆ ಮುಚ್ಚಿತ್ತು. ಇನ್ನೇನು ಸರ್ಕಾರಿ ಶಾಲೆ ನಮ್ಮೂರಿನಿಂದ ಮಾಯವಾಯ್ತೆನೋ ಅಂದುಕೊಳ್ಳುತ್ತಿದ್ದ ವೇಳೆಯಲ್ಲಿ ಅದೊಂದು ಮ್ಯಾಜಿಕ್ ನಡೆದಿದೆ.

ಕಳೆದ ನಾಲ್ಕು ವರ್ಷಗಳಿಂದ ಬಾಗಿಲು ಮುಚ್ಚಿ ಮೌನ ಆವರಿಸಿದ್ದ ಸರ್ಕಾರಿ ಶಾಲೆಯಲ್ಲಿ ಇದೀಗ ಮಕ್ಕಳ ಕಲರವ ಮತ್ತೆ ಕೇಳಿಬಂದಿದೆ. ರಂಗು ರಂಗಾಗಿರೋ ನಮ್ಮ ಶಾಲೆಯನ್ನು ಬಿಟ್ಟು ನಾವು ಕಾನ್ವೆಂಟ್​ಗೆ ಹೋಗಲ್ಲ ಎಂದಿರುವ ಚಿಣ್ಣರು ಎಂಟು ದಶಕಕ್ಕೂ ಹೆಚ್ಚು ಹಳೆಯದಾದ ಶಾಲೆಗೆ ಜೀವಕಳೆ ತುಂಬಿದ್ದಾರೆ.

ಮುಚ್ಚಿಹೋಗಿದ್ದ ಈ ಸರ್ಕಾರಿ ಶಾಲೆ ಇದೀಗ ಬಣ್ಣ ಬಣ್ಣಗಳಿಂದ ಕಂಗೊಳಿಸ್ತಿದೆ. ತರಗತಿಯಲ್ಲಿ ಕುಳಿತುಕೊಂಡು ಮಕ್ಕಳು ಖುಷಿ ಖುಷಿಯಿಂದ ಪಾಠ ಕೇಳ್ತಿದ್ದಾರೆ. ನಮ್ಮೂರ ಶಾಲೆಯೇ ನಮಗೆ ಹೆಮ್ಮೆ ಅಂತಿದ್ದಾರೆ ಪುಟಾಣಿಗಳು.

ತಮ್ಮ ಗ್ರಾಮದಲ್ಲಿ ಮತ್ತೆ ಶಾಲೆ ಪುನಾರಂಭ ಆಗಿದ್ದನ್ನು ನೋಡಿ ಊರಿನ ಹಿರಿಯರು ಸಂತಸಗೊಂಡಿದ್ದಾರೆ. ಅಂದಹಾಗೆ ಇಂತಹ ಅಪರೂಪದ ಕ್ಷಣಗಳು ಮತ್ತೆ ಮರಕಳಿಸಿರುವುದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಎಂ ಚೋಮನಹಳ್ಳಿ ಗ್ರಾಮದಲ್ಲಿ.

ಪಾಲಕರ ಇಂಗ್ಲಿಷ್ ಮೇಲಿನ ಪ್ರೀತಿಯಿಂದ ಕಾನ್ವೆಂಟ್​ಗಳ ಮೇಲೆ ಮೋಹ ಮೂಡಿತ್ತು. ಕ್ರಮೇಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ರು. ಹೀಗಾಗಿ 84 ವರ್ಷಗಳ ಇತಿಹಾಸವಿದ್ದ ಈ ಶಾಲೆಗೆ ನಾಲ್ಕು ವರ್ಷಗಳಿಂದ ಶಾಶ್ವತವಾಗಿ ಬೀಗ ಬಿದ್ದಿತ್ತು. ವಿದ್ಯಾರ್ಥಿಗಳ ಕೊರತೆ ಉಂಟಾದ ಹಿನ್ನೆಲೆ ಏನೂ ಮಾಡಲಾಗದೇ, ವಿಧಿಯಿಲ್ಲದೇ ಈ ಶಾಲೆಯನ್ನು ಮುಚ್ಚಲೇಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಆ ಬಳಿಕ ಎಂ.ಚೋಮನಹಳ್ಳಿ ಶಾಲೆ ವಿದ್ಯಾರ್ಥಿಗಳಿಲ್ಲದೇ ಪಾಳು ಬಿದ್ದು ಹೋಗಿತ್ತು. ಆಸರೆ ಇಂದು ಯಾವ ಕಾನ್ವೆಂಟ್ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗಿದ್ರೋ ಅದೇ ಶಾಲೆಗಳಿಂದ ಪುಟಾಣಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಕಾನ್ವೆಂಟ್​ಗಿಂತ ಚೆನ್ನಾಗಿ ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತು ಪುಟಾಣಿಗಳು ಪಾಠ ಕೇಳುತ್ತಿದ್ದಾರೆ. ತರಲೆ-ತುಂಟಾಟ ಮಾಡಿಕೊಂಡು ತಮ್ಮ ಸ್ನೇಹಿತರೊಂದಿಗೆ ನಲಿಯುತ್ತಿದ್ದಾರೆ. ಮಕ್ಕಳಿಲ್ಲದೇ ಮುಚ್ಚಿದ್ದ ಶಾಲೆ ಮತ್ತೆ ತೆರೆಯಲು ಎಂ ಚೋಮನಹಳ್ಳಿ ಗ್ರಾಮಸ್ಥರು, ಬಸವೇಶ್ವರ ಯುವಕ ಸಂಘ, ಸ್ನೇಹ ಸಿಂಚನ ಟ್ರಸ್ಟ್ ಎಲ್ಲರ ಸಾಂಘಿಕ ಶ್ರಮವಿದೆ ಎಂದು ಮುಖ್ಯಶಿಕ್ಷಕ ಶುಭಕರ್ ತಿಳಿಸಿದ್ದಾರೆ.

ಮಾಯವಾಗಿದ್ದ ಮಕ್ಕಳ ಕಲರವ, ತುಂಟಾಟ, ಆಟಾಟೋಪ, ಎಲ್ಲವೂ ಎಂ ಚೋಮನಹಳ್ಳಿ ಶಾಲೆಯಲ್ಲಿ ಮತ್ತೆ ಕೇಳುತ್ತಿರುವುದರಿಂದ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ವಿಶೇಷ ಅಂದ್ರೆ ಸಿಬಿಎಸ್ಇ ಸಿಲಬಸ್​ನಲ್ಲಿ ಕಲಿಯುತ್ತಿದ್ದ ಪುಟಾಣಿಗಳು ಕೂಡ ಇದೀಗ ಸರ್ಕಾರಿ ಶಾಲೆಗೆ ಸೇರಿ ನಾವು ಇಲ್ಲೇ ವಿದ್ಯಾಭ್ಯಾಸ ಮುಂದುವರಿಸ್ತೀವಿ ಅಂತಾ ಹೇಳುತ್ತಿದ್ದಾರೆ.

ಈಗಿನ ಕಾಲದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯನ್ನು ಊರಿಗೆ ಮಾಡಿಸಿಕೊಳ್ಳಬೇಕು ಅಂದ್ರೆ ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ. ಅಂಥದ್ದರಲ್ಲಿ 8 ದಶಕಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಲೆ ಮುಚ್ಚುತ್ತೆ ಅಂದ್ರೆ ನಮ್ಮಂತಹ ಅವಿವೇಕಿಗಳು ಯಾರು ಇರಲಾರರು ಎಂದು ಎಚ್ಚೆತ್ತು ಗ್ರಾಮಸ್ಥರೇ ಮತ್ತೆ ಶಾಲೆ ಪುನಾರಂಭಕ್ಕೂ ಕಾರಣರಾಗಿದ್ದಾರೆ.

ಈ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಸದ್ಯ 15 ಮಕ್ಕಳು ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸೇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಪುಟಾಣಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ.

ಪುಟಾಣಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ ಶಾಲೆ ಗೋಡೆಗಳ ಮೇಲೆ ರಾಷ್ಟ್ರ ನಾಯಕರ ಚಿತ್ರ, ಪ್ರಾಣಿ-ಪಕ್ಷಿಗಳ ಚಿತ್ರ, ಅಕ್ಷರ ಮಾಲೆ, ಜ್ಞಾನಪೀಠ ಪುರಸ್ಕಾರ ಸಾಹಿತಿಗಳ ಚಿತ್ರ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬರೆಯಲಾಗಿದೆ.

ರಾಜ್ಯದ ಬೇರೆ ಬೇರೆ ಕಡೆ ಇದೇ ರೀತಿ ಕಾನ್ವೆಂಟ್ ಮೋಹದಿಂದ ಮಕ್ಕಳ ಕೊರತೆ ಉಂಟಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕಣ್ಣ ಮುಂದೆಯೇ ಸರ್ಕಾರಿ ಶಾಲೆಗಳು ಬಾಗಿಲು ಹಾಕಿಕೊಳ್ಳುತ್ತಾ ಇದ್ದರೂ ಪೋಷಕರು, ಗ್ರಾಮಸ್ಥರು ಉಳಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತಿಲ್ಲ. ಈ ಮಧ್ಯೆ ಮರೆಯಾಗುತ್ತಿರುವ ಕನ್ನಡ ಶಾಲೆಗಳ ನಡುವೆ ಮುಚ್ಚಿದ್ದ ಎಂ ಚೋಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಪುನಾರಂಭಗೊಂಡು ರಾಜ್ಯಕ್ಕೆ ಮಾದರಿಯಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ