NEWSನಮ್ಮಜಿಲ್ಲೆಸಂಸ್ಕೃತಿ

ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಸೇರಿದಂತೆ ನಾಡಿನಾದ್ಯಂತ ಬೆಳಕಿನ ಹಬ್ಬದ ಮೆರುಗು ಭರ್ಜರಿಯಾಗಿ ನಡೆದಿದೆ. ಈ ನಡುವೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ದೀಪಾವಳಿಯ ರಂಗು ಹೆಚ್ಚಿಸುವಂತ ಹಣತೆ, ಹೂವು, ತರಕಾರಿ, ಹಣ್ಣುಗಳು, ಇತರ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ.

ಯಾವುದೇ ಹಬ್ಬ ಬಂದರೂ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಫುಲ್ ಬ್ಯುಸಿ ಆಗುವುದು ಸಾಮಾನ್ಯ. ಆದರೆ, ದೀಪಾವಳಿ ಹಬ್ಬಕ್ಕೆ ಉಳಿದ ಎಲ್ಲ ಹಬ್ಬಕ್ಕಿಂತ ಹೆಚ್ಚು ಜನ ದಟ್ಟಣೆ ಆಗುತ್ತದೆ. ವಸ್ತುಗಳನ್ನು ಕೊಂಡುಕೊಳ್ಳಲು ನಾನು ಮುಂದು, ನೀ ಮುಂದು ಎಂದು ಮುಗಿ ಬೀಳುತ್ತಾರೆ. ಹೀಗಾಗಿ ಮಾರ್ಕೆಟ್​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಇದರಿಂದ ಹಲವು ಕಡೆ ಟ್ರಾಫಿಕ್​ ಉಂಟಾಗಿತ್ತು.

ಗ್ರಾಹಕರು ಮಾರ್ಕೆಟ್​​ನಲ್ಲಿ ನವಿಲು ದೀಪ, ಪಂಚಮುಖಿ ದೀಪ, ಲಕ್ಷ್ಮಿ ದೇವಿ ದೀಪ ಸೇರಿ ಇತರೆ ಕೆಲ ವಿಧಧಲ್ಲಿರುವ ಮಣ್ಣಿನ ಹಣತೆಗಳನ್ನು ಖರೀದಿಗೆ ಮುಗಿಬೀಳುತ್ತಿದ್ದಾರೆ. ಪಟಾಕಿಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದು ರಾಕೆಟ್, ಭೂಚಕ್ರ, ಹೂ-ಕುಂಡ, ಸರ್‌ಸುರ್ ಬತ್ತಿ ಇತ್ಯಾದಿಗಳನ್ನ ತೆಗೆದುಕೊಳ್ಳುತ್ತಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳು, ತರಕಾರಿ, ದಿನಸಿಗಳು ಹೆಚ್ಚಿನ ಬೆಲೆ ಕುದುರಿಸಿಕೊಂಡಿವೆ. ನಿತ್ಯದ ಮಾರಾಟದ ಬೆಲೆಗಿಂತ ಇಂದು ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ. ಬೆಲೆ ಹೆಚ್ಚಾದರೂ ಹಬ್ಬಕ್ಕೆಂದು ಜನ ಖರೀದಿ ಮಾಡುತ್ತಿದ್ದಾರೆ. ಹೂವುಗಳು ಮಾತ್ರ ಭಾರೀ ಬೆಲೆಗೆ ಮಾರಾಟ ಆಗುತ್ತಿವೆ. ಇದರಿಂದ ಗ್ರಾಹಕರು ಫುಲ್ ಶಾಕ್ ಆಗಿದ್ದಾರೆ.

ಮಾರ್ಕೆಟ್​ನಲ್ಲಿ ಪ್ರತಿ ಕೆ.ಜಿ ಹೂವುಗಳ ಬೆಲೆ ಸುಮಾರು ಹೇಗಿದೆ..?: ಕನಕಾಂಬರ- ₹2,000. ಮಲ್ಲಿಗೆ- ₹1,500. ಗುಲಾಬಿ- ₹260. ಸೇವಂತಿಗೆ- ₹160. ಸುಗಂಧರಾಜ- ₹200. ಅಣಗಲು ಹೂ- ₹700. ಚೆಂಡೂ ಹೂ- ₹120. ಕಾಕಾಡ- ₹800. ದುಂಡು ಮಲ್ಲಿಗೆ- ₹1,500- ₹1800. ಜೋಡಿ ಕಲಮ- ₹100 ಆಗಿತ್ತು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು