NEWSದೇಶ-ವಿದೇಶ

ಮೈತುಂಬ ಚಿನ್ನವನ್ನೇ ತೊಡುತ್ತಿದ್ದ ಗೋಲ್ಡ್‌ಮ್ಯಾನ್‌ ಇನ್ನಿಲ್ಲ

ವಿಜಯಪಥ ಸಮಗ್ರ ಸುದ್ದಿ

ಪುಣೆ: ನಿತ್ಯ 9-10 ಕೆಜಿ ಬಂಗಾವರವನ್ನು ಮೈಮೇಲೆ ಹಾಕಿಕೊಂಡು ತಿರುಗಾಡುತ್ತಿದ್ದ ಗೋಲ್ಡ್‌ಮ್ಯಾನ್‌ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ.

ಕತ್ತು, ಕೈ ಹೀಗೆ ದೇಹದ ನಾನಾ ಭಾಗದಲ್ಲಿ ಬರೋಬ್ಬರಿ 10 ಕೆಜಿ ಚಿನ್ನ ಧರಿಸುತ್ತಿದ್ದ ಈ ಕಾರಣಕ್ಕೆ ಗೋಲ್ಡ್‌ಮ್ಯಾನ್‌ ಎಂದೇ ಖ್ಯಾತಿ ಪಡೆದಿದ್ದ ಸಾಮ್ರಾಟ್‌ ಮೊಜೆ (39) ಪುಣೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ .

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ನಿನ್ನೆ ಹಠಾತ್‌ ಹೃದಯಘಾತವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.  ಇನ್ನು ಲಾಕ್‌ಡೌನ್‌ ಜಾರಿಯಲ್ಲಿದ್ದಿದ್ದರಿಂದ ಸಾಮ್ರಾಟ್‌ ಅವರ ಅಂತ್ಯಕ್ರಿಯೆ ಪುಣೆಯ ಯರವಾಡದಲ್ಲಿ ನೆರೆವೇರಿತು. .

ಗೋಲ್ಡ್‌ಮ್ಯಾನ್‌ ಎಂದ ಖ್ಯಾತಿ ಪಡೆದಿದ್ದ ಸಾಮ್ರಾಟ್‌ ದಪ್ಪದಾದ ಸರಗಳು , ಕೈಯಲ್ಲಿ ದಪ್ಪದ ಬ್ರಾಸ್‌ಲೈಟ್‌ಗಳನ್ನ ಧರಿಸಿಯೇ ಪುಣೆ ನಗರದಲ್ಲಿ ತಿರುಗಾಡುತ್ತಿದ್ದರು. ಈ ಹಿನ್ನೆಲೆ ಮೊಜೆ ಅವರನ್ನ ಜನರು ಗೋಲ್ಡ್ ಮ್ಯಾನ್‌ ಎಂದೇ ಕರೆಯುತ್ತಿದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಇನ್ನಿಬ್ಬರು ಗೋಲ್ಡ್‌ಮ್ಯಾನ್‌ಗಳು ಇಲ್ಲ..!
ಮಹಾರಾಷ್ಟ್ರದಲ್ಲಿ ಸಾಮ್ರಾಟ್‌ ಮೊಜೆ ಅವರಂತೆ ಇನ್ನು ಹಲವರು 9 ರಿಂದ 10 ಕೆಜಿಯಷ್ಟು ಚಿನ್ನ ಧರಿಸಿ ಓಡಾಡುವ ಉದ್ಯಮಿಗಳಿದ್ದಾರೆ. ಆ ಪೈಕಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಎಂಎನ್‌ಎಸ್‌ ಶಾಸಕ ರಮೇಶ್‌ ಎಂಬುವವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. ಅವರೂ 2011ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇನ್ನು ಚಿನ್ನದ ಅಂಗಿ(ಶರ್ಟ್‌) ಧರಿಸುತ್ತಿದ್ದ ಉದ್ಯಮಿ ದತ್ತಾತ್ರೇಯ ಪುಂಗೆ ಎಂಬವರನ್ನು ದುಷ್ಕರ್ಮಿಗಳು 2016ರಲ್ಲಿ ಹತ್ಯೆಮಾಡಿದ್ದರು. ಇಂದು ಮೊಜೆ ನಿಧನರಾಗಿದ್ದು ಒಟ್ಟಾರೆ ಮೂವರು ಗೋಲ್ಡ್ ಮ್ಯಾನ್‌ಗಳನ್ನು ದೇಶ ಕಳೆದುಕೊಂಡಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

1 Comment

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು