NEWSಬೆಂಗಳೂರು

ಆಳಂದಕ್ಕೆ ಹೋಗುತ್ತಿದ್ದ ಬಸ್‌ ವಾಪಸ್‌ ಕರೆಸಿಕೊಂಡ ಡಿಸಿ – ಟಿಕೆಟ್‌ ಪಡೆದೂ 3ಗಂಟೆಗಳ ಕಾಲ ಪರದಾಡಿದ ಪ್ರಯಾಣಿಕರು

ಬಸ್‌ ಟಿಕೆಟ್‌ ಪಡೆದರೂ 3 ಗಂಟೆ ಪರದಾಡಿದ ಪ್ರಯಾಣಿಕರು.
ವಿಜಯಪಥ ಸಮಗ್ರ ಸುದ್ದಿ

ಆಳಂದ (ಕಲಬುರಗಿ): ದೇವಲಗಾಣಗಾಪುರದಿಂದ ಆಳಂದಕ್ಕೆ ಸುಮಾರು 60 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ಅನ್ನು ಗಾಣಗಾಪುರ ರೈಲ್ವೇ ಗೇಟ್‌ ಬಸ್‌ನಿಲ್ದಾಣದಿಂದ ವಾಪಸ್‌ ಕರೆಸಿಕೊಂಡಿದ್ದು, ಇದರಿಂದ ಆಳಂದಕ್ಕೆ ಹೋಗಬೇಕಿದ್ದ ಸುಮಾರು 20 ಪ್ರಯಾಣಿಕರು 3 ಗಂಟೆಗೂ ಹೆಚ್ಚುಕಾಲ ಪರದಾಡಿದ ಘಟನೆ ನಡೆದಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಳಂದ ಘಟಕದ ಬಸ್‌ (KA 34 F 894 ) ಇಂದು (ಗುರುವಾರ) ಬೆಳಗ್ಗೆ ಸುಮಾರು 10.30ರಲ್ಲಿ ದೇವಲಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿತ್ತು. ಬಸ್‌ ಸುಮಾರು 15 ಕಿಲೋ ಮೀಟರ್‌ ದೂರ ಹೋಗುತಿದ್ದಂತೆ ಗಾಣಗಾಪುರದ ರೈಲ್ವೇ ಗೇಟ್‌ ಬಳಿ ಇರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮತ್ತೆ ವಾಪಸ್‌ ಅದು ಕೂಡ ಖಾಲಿಯಾಗಿ 15 ಕಿಮೀ ದೇವಲಗಾಣಗಾಪುರಕ್ಕೆ ವಾಪಸ್‌ ಹೋಗಿದೆ.

ಇನ್ನು ಇತ್ತ ದೇವಲಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿದ್ದ ಸುಮಾರು 20 ಜನ ಪ್ರಯಾಣಿಕರು ಟಿಕೆಟ್‌ ಕೂಡ ತೆಗೆದುಕೊಂಡಿದ್ದರು. ಆದರೆ, ಅವರನ್ನು ಗಾಣಗಾಪುರ ಬಸ್‌ನಿಲ್ದಾಣದಲ್ಲಿ ಏಕಾಏಕಿ ಇಳಿಸಿದ್ದು, ಇದರಿಂದ ಆಳಂದಕ್ಕೆ ಕೆಲಸದ ನಿಮಿತ್ತ ಮತ್ತು ಆಸ್ಪತ್ರೆ ಹಾಗೂ ನ್ಯಾಯಾಲಯಕ್ಕೆ ಹೋಗುತ್ತಿದ್ದ ಮಂದಿ ಪರದಾಡುವಂತಾಯಿತು.

ಬಸ್‌ ಟಿಕೆಟ್‌ ಪಡೆದರೂ 3 ಗಂಟೆ ಪರದಾಡಿದ ಪ್ರಯಾಣಿಕರು.

ಪ್ರಯಾಣಿಕರು ಪರದಾಡುತ್ತಿದ್ದರೆ ಇದಾವುದನ್ನು ಲೆಕ್ಕಿಸದ ಸಂಚಾರ ನಿಯಂತ್ರಕ (TC) ಅವರು ನನಗೆ ಕಲಬುರಗಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ವಾಪಸ್‌ ಕಳಿಸುವಂತೆ ಹೇಳಿದ್ದಾರೆ. ಹೀಗಾಗಿ ಮತ್ತೆ 1-2ಗಂಟೆಯಲ್ಲೇ ಈ ಬಸ್‌ ವಾಪಸ್‌ ಬರುತ್ತದೆ ಆಗ ನಾವು ಈ ಪ್ರಯಾಣಿಕರನ್ನು ಮತ್ತೆ ಇದೇ ಬಸ್‌ನಲ್ಲೇ ಕಳಿಹಿಸುತ್ತೇವೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಇದರಿಂದ ಬೇಸತ್ತ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ನಾವು ಬಿಟ್ಟಿ ಏನು ಬಂದಿಲ್ಲ. ದೇವಲಗಾಣಗಾಪುರದಿಂದ ಆಳಂದಕ್ಕೆ ಟಿಕೆಟ್‌ ತೆಗೆದುಕೊಂಡು ಬಂದಿದ್ದೇವೆ. ನೀವೆ ನಮ್ಮ ಟಿಕೆಟ್‌ಗಳನ್ನು ನೋಡಿ ಎಂದು ಟಿಸಿ ಅವರ ವಿರುದ್ಧ ಕಿಡಿಕಾರಿದ್ದು, ನಮಗೆ ಬೇರೆ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದ್ದ ಟಿಸಿ ಗಾಣಗಾಪುರದಿಂದ ಆಳಂದಕ್ಕೆ ಹೋಗುತ್ತಿದ್ದ ಮತ್ತೊಂದು ಬಸ್‌ಗೂ ನಮ್ಮನ್ನು ಹತ್ತಲು ಬಿಡಲಿಲ್ಲ ಎಂದು ಸಿಟ್ಟುಹೊರಹಾಕಿದರು.

ಅಲ್ಲದೆ ಈ ಸುಮಾರು 20 ಪ್ರಯಾಣಿಕರನ್ನು ದೇವಲಗಾಣಗಾಪುರಕ್ಕೆ ವಾಪಸ್‌ ಹೋಗಿದ್ದ ಬಸ್‌ (KA 34 F 894 ) ಗಾಣಗಾಪುರಕ್ಕೆ ಮತ್ತೇ ಬರುವವರೆಗೂ ಅಂದರೆ ಸುಮಾರು 3 ಗಂಟೆಗಳ ಕಾಲ ಬಸ್‌ ನಿಲ್ದಾಣದಲ್ಲೇ ಕಾಯುವಂತೆ ಮಾಡಿ ಬಳಿಕ ಅದೇ ಬಸ್‌ನಲ್ಲಿ ಆಳಂದಕ್ಕೆ ಕಳುಹಿಸಿದ್ದಾರೆ.

ಇದನ್ನು ಗಮನಿಸಿದರೆ, ಇಲ್ಲಿ ಪ್ರಯಾಣಿಕರಿಗೆ ಸೇವೆ ಕಲ್ಪಿಸುವ ಬದಲಿಗೆ ಅಧಿಕಾರಿಗಳು ಸರ್ವಾಧಿಕಾರಿಯಂತೆ ನಡೆದುಕೊಂಡಿರುವುದು ತಿಳಿಯುತ್ತದೆ. ಈ ರೀತಿ ಮಾಡಿರುವುದರಿಂದ ತಮ್ಮ ಕೆಲಸ ಕಾರ್ಯಗಳೆಲ್ಲ ಹಾಳಾದವು ಎಂದು ಅಸಮಾಧಾನ ಹೊರಹಾಕಿ ಮತ್ತು ಮೇಲಧಿಕಾರಿಗಳಿಗೆ ಶಾಪಹಾಕುತ್ತ ಆಳಂದಕ್ಕೆ ಪ್ರಯಾಣಿಕರು ಹೊರಟರು.

ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳ ಅಂಧದರ್ಬಾರ್‌ ಹೆಚ್ಚಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ. ಈ ರೀತಿ ಡಿಸಿ ನಡೆದುಕೊಂಡಿದ್ದರೆ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲ ಟಿಸಿ ಸುಳ್ಳು ಹೇಳಿದ್ದರೆ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ಟಿಸಿಯನ್ನು ಅಮಾನತು ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ