NEWSದೇಶ-ವಿದೇಶರಾಜಕೀಯ

ಉಗ್ರರ ಸಂಚಿಗೆ ಸಿಲುಕಿ ಜೀವ ಕಳೆದುಕೊಂಡ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೆನಪುಗಳಿಗೆ 32ವರ್ಷ

ವಿಜಯಪಥ ಸಮಗ್ರ ಸುದ್ದಿ

ನೂಡೆಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ನೆನಪುಗಳಿಗೆ ಇಂದು 32 ವರ್ಷ. ರಾಜೀವ್ ಗಾಂಧಿ ಆಧುನಿಕ ಭಾರತದ ಪ್ರಮುಖ ಹೆಜ್ಜೆಗಳ ಬಿಟ್ಟುಹೋದ ಅಮೂಲ್ಯ ರತ್ನ. ಅವರು ತಮ್ಮ ಪ್ರಗತಿಪರ ನೀತಿಗಳ ಮೂಲಕ ದೇಶದಲ್ಲಿ ಆತ್ಮವಿಶ್ವಾಸ ತುಂಬಿದವರು.

ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ, ದೇಶದ ಐಕ್ಯತೆ – ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ, ಮಾಜಿ ಪ್ರಧಾನಿ, ಭಾರತ ರತ್ನ ‘ರಾಜೀವ್ ಗಾಂಧಿ’ ಅವರ ಪುಣ್ಯ ಸ್ಮರಣೆ ಇಂದು. ಅವರು ಇಂದು ನಮ್ಮೊಂದಿಗೆ ಶಾರೀರಿಕವಾಗಿ ಇಲ್ಲ ಎಂಬುದನ್ನು ಬಿಟ್ಟರೆ ಅವರು ದೂರದೃಷ್ಟಿಯ ನಡೆಯಿಂದ ದೇಶದ ಜನರಿಗೆ ಅಷ್ಟೇ ಏಕೆ ವಿಶ್ವಕ್ಕೆ ದೃವತಾರೆಯಾಗಿ ಸದಾ ಮಿನುಗುತ್ತಿದ್ದಾರೆ. ಈ ಮೂಲಕ ಜೀವಂತವಾಗಿಯೇ ಎಲ್ಲರಲ್ಲೂ ಇದ್ದಾರೆ.

ಹೌದು! 1991 ರ ಸಾರ್ವತ್ರಿಕ ಚುನಾವಣಾ ಪ್ರಚಾರದ ಸಮಯದಲ್ಲಿ ತಮಿಳುನಾಡಿನ ಶ್ರೀಪೆರುಂಪುತ್ತೂರಿನಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳಿಂದ ಹತ್ಯೆಯಾದಾಗ ರಾಜೀವ್ ಗಾಂಧಿ ಅವರಿಗೆ ಆಗ ಕೇವಲ 47 ವರ್ಷ. ಭಾರತಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಬೇಕಾಗಿದ್ದ ದೂರದೃಷ್ಟಿಯ ಆಡಳಿತಗಾರನ ಉಗ್ರರ ಕೈಗೆ ಸಿಲುಕಿ ಅಕಾಲಿಕ ಮರಣ ಹೊಂದಿದ್ದು ಅವರ ಕುಟುಂಬಕ್ಕೆ ಮಾತ್ರವಲ್ಲ ಇಡೇ ದೇಶಕ್ಕೆ ತುಂಬಲಾರದ ನಷ್ಟವಾಯಿತು.

80ರ ದಶಕದಲ್ಲಿ ಭಾರತೀಯ ಯುವಕರು ಎದುರು ನೋಡುತ್ತಿದ್ದ ಮಹಾನ್‌ ಚೇತನ ಅವರು. ನವ ಭಾರತದ ಕನಸ್ಸಿಗೆ ನೀರೆರೆದು ಪೋಷಿಸಲು ಪಣತೊಟ್ಟವರವರು. 21ನೇ ಶತಮಾನಕ್ಕೆ ಭಾರತವನ್ನು ಮುನ್ನಡೆಸಿದ ರಾಜೀವ್ ಗಾಂಧಿ ಅವರು ತಾಂತ್ರಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆ ತಂದು ದೇಶದತ್ತ ವಿಶ್ವದ ಅಣ್ಯಾತಿಗಣ್ಯರು ತಮ್ಮ ನೋಟ ಬೀರುವಂತೆ ಮಾಡಿದರು.

ರಾಜೀವ್ ಗಾಂಧಿಯವರ ರಾಜಕೀಯ ಪ್ರವೇಶ ಅನಿರೀಕ್ಷಿತವಾಗಿತ್ತು. ಇಂದಿರಾ ಗಾಂಧಿ ಹತ್ಯೆಯಾದಾಗ ನಲವತ್ತನೇ ವಯಸ್ಸಿನಲ್ಲಿ ರಾಜೀವ್ ಭಾರತದ ಪ್ರಧಾನಿಯಾದರು. 1984ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜೀವ್ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿತ್ತು. ರಾಜೀವ್ ಗಾಂಧಿಯವರ ನೀತಿಗಳು ಮುಂದಾಲೋಚನೆಯಿಂದ ಕೂಡಿದ್ದವು.

ಟೆಲಿಕಾಂ ಕ್ರಾಂತಿ, ಮೂಲ ವಲಯಗಳಲ್ಲಿ ಪ್ರಾರಂಭವಾದ ಆರು ತಂತ್ರಜ್ಞಾನ ಮಿಷನ್‌ಗಳು, ವ್ಯಾಪಕ ಗಣಕೀಕರಣ, ಯಾಂತ್ರೀಕರಣ, ಕೈಗಾರಿಕಾ ಆಧುನೀಕರಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಒತ್ತು ನೀಡುವುದು ಭಾರತದ ಮುಖವನ್ನು ಬದಲಾಯಿಸಿತು. ಇದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಂಪೂರ್ಣ ಬದಲಾವಣೆಯ ಸಮಯವಾಗಿತ್ತು. ರಾಜೀವ್ ಆಧುನಿಕ ಪರಿಕಲ್ಪನೆಗಳಿಂದ ಮಾರ್ಗದರ್ಶಿಸಲ್ಪಟ್ಟರು.

ದೂರದೃಷ್ಟಿಯುಳ್ಳ ರಾಜೀವ್ ಗಾಂಧಿಯವರ ಕಾರ್ಯಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಜಿಗಿತಕ್ಕೆ ಕಾರಣವಾಯಿತು. ರಾಜೀವ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಆಧುನಿಕ ಶಾಲೆಗಳನ್ನು ಪ್ರಾರಂಭಿಸಲಾಯಿತು, ಸಾರ್ವಜನಿಕ ಕರೆ ಕಚೇರಿಗಳನ್ನು ಪ್ರಾರಂಭಿಸಲಾಯಿತು ಮತ್ತು ಲೈಸೆನ್‌ರಾಜ್ ವ್ಯವಸ್ಥೆಯನ್ನು ಕಿತ್ತುಹಾಕಲಾಯಿತು. ಪಂಜಾಬ್, ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಶಾಂತಿ ಮರುಸ್ಥಾಪನೆ ರಾಜೀವ್ ಅವರದ್ದು ಮತ್ತೊಂದು ಪ್ರಮುಖ ಕೊಡುಗೆಯಾಗಿದೆ.

ರಾಜೀವ್ ಗಾಂಧಿ ಅವರು ಅಮೆರಿಕ ಮತ್ತು ಚೀನಾದಂತಹ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸಿದರು. ರಾಜೀವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಾಲ್ಡೀವ್ಸ್ ಮತ್ತು ಶ್ರೀಲಂಕಾದಲ್ಲಿನ ಆಂತರಿಕ ಸಮಸ್ಯೆಗಳಲ್ಲಿ ಭಾರತವು ಮಿಲಿಟರಿ ಮಧ್ಯಪ್ರವೇಶಿಸಿತು.

ರಾಜೀವ್ ಅವರಿಗೆ ಮರಣೋತ್ತರವಾಗಿ ದೇಶವು ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಿ ಗೌರವಿಸಿತು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ