CrimeNEWSಕೃಷಿ

ಒಂದೂವರೆ ಲಕ್ಷ ರೂ.ಗೂ ಅಧಿಕ ಮೌಲ್ಯದ ಟೊಮೇಟೊ ಕದ್ದು ಖದೀಮರು ಪರಾರಿ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಜಿಲ್ಲೆ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೇಟೊ ಕಳ್ಳತನವಾಗಿದೆ. ಐವತ್ತರಿಂದ ಅರವತ್ತು ಬ್ಯಾಗ್‌ನಷ್ಟು ಟೊಮೇಟೊವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ನೂರು ರೂಪಾಯಿಯ ಗಡಿ ದಾಟಿದ ಕೆಂಪುಸುದರಿಯನ್ನು ಎತ್ತಿಕೊಂಡು ಹೋಗುವುದಕ್ಕೆ ಕಳ್ಳರು ಹೊಂಚುಹಾಕಿ ಕದಿಯುವಲ್ಲಿಯೂ ಸಫಲರಾಗಿದ್ದಾರೆ. ಹೌದು! ಟೊಮೇಟೊ ಬೆಲೆ ಗಗನಕ್ಕೇರಿದ್ದು, ಯಾವ ಜಿಲ್ಲೆಗೆ ಹೋದರೂ 100 ರೂಪಾಯಿಗಿಂತ ಕಡಿಮೆ ಇಲ್ಲ. ಹೀಗಾಗಿ ಖದೀಮರು ಟೊಮೇಟೊ ಕಳ್ಳತನಕ್ಕೆ ಮುಂದಾಗಿದ್ದಾರೆ.

ಗೋಣಿ ಸೋಮನಹಳ್ಳಿ ಗ್ರಾಮದ ಧರಣಿ ಎಂಬ ರೈತರೊಬ್ಬರು ತಮ್ಮ ಜಮೀನಿನಲ್ಲಿ ಟೊಮೇಟೊ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದುರಿಂದ ಒಳ್ಳೆಯ ಲಾಭ ಬರುತ್ತೆ ಎಂಬ ಆಸೆಯಲ್ಲಿದ್ದರು. ಆದರೆ, ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕೆಲ ಕಳ್ಳರು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೇಟೊ ಕಳ್ಳತನ ಮಾಡಿದ್ದಾರೆ.

ಅದು ಇಂದು ಬೆಳಗ್ಗೆ ಧರಣಿ ಅವರು ತಮ್ಮ ಜಮೀನಿಗೆ ಹೋದಾಗ ಟೊಮೇಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷಾಂತರ ಮೌಲ್ಯದ ಟೊಮೇಟೊ ಕಳೆದುಕೊಂಡು ರೈತ ಧರಣಿ ಕಂಗಾಲಾಗಿದ್ದು ಇತ್ತ ಅಳುವುದಕ್ಕೂ ಆಗದೆ ಅತ್ತ ಕಳ್ಳತವಾಗಿರುವುದನ್ನು ಸಹಿಸಿಕೊಳ್ಳುವುದಕ್ಕೂ ಆಗದೆ ತೊಳಲಾಡುತ್ತಿದ್ದಾರೆ. ಹೀಗಾಗಿ ಕಳ್ಳರನ್ನು ಕೂಡಲೇ ಹಿಡಿದು ರೈತ ಧರಣಿ ಅವರಿಗೆ ನೆರವಾಗಬೇಕು ಎಂದು ಪೊಲೀಸರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈರುಳ್ಳಿ ಕದ್ದು ಹಣ ಮಾಡಿದ್ದರು: ಕೆಲ ವರ್ಷದ ಹಿಂದೆ ಈರುಳ್ಳಿ ಬೆಲೆ ಕೂಡ ಇದೇ ರೀತಿ ಏರಿಕೆಯಾಗಿತ್ತು. ಆಗ ಕೂಡ ಖದೀಮರು ಈರುಳ್ಳಿ ಕದ್ದು ಹಣ ಮಾಡಿದ್ದರು. ಅಲ್ಲದೆ ಮದುವೆಗೆ ಬಂದವರು ವರ-ವಧುವಿಗೆ ಈರುಳ್ಳಿ ಗಿಫ್ಟ್ ನೀಡೋದು ಟ್ರೆಂಟ್ ಆಗಿತ್ತು. ರೈತರು ತಾವು ಬೆಳೆದ ಈರುಳ್ಳಿ ಕಾಪಾಡಲು ನಿದ್ದೆ ಇಲ್ಲದೆ ಹಗಲು-ರಾತ್ರಿ ಕಾಯುತ್ತಿದ್ದರು. ಸದ್ಯ ಈಗ ಇದೇ ಪರಿಸ್ಥಿತಿ ಟೊಮೇಟೊಗೆ ಬಂದಿದೆ. 10ರೂ, 20ರೂಪಾಯಿಗೆ ಬರುತ್ತಿದ್ದ ಟೊಮೇಟೊ ಈಗ ನೂರರ ಗಡಿದಾಟಿದೆ. ಹೀಗಾಗಿ ಟೊಮೇಟೊ ರೈತರು ಕಳ್ಳರಿಂದ ತಮ್ಮ ಬೆಳೆ ಕಾಪಾಡಿಕೊಳ್ಳುವಂತಾಗಿದೆ.

ಹಾವೇರಿಯಲ್ಲಿ ಕೆಂಪುಸುಂದರಿಗೆ ಸಿಸಿಟಿವಿ ಕಣ್ಗಾವಲು: ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಮಾರುಕಟ್ಟೆಯಲ್ಲಿ ಕೃಷ್ಣಪ್ಪ ಎಂಬ ವ್ಯಾಪಾರಿಯೊಬ್ಬರು ಮಾರಾಟಕ್ಕೆ ತಂದ ಟೊಮೇಟೊ ಕಳ್ಳತನವಾಗಬಾರದೆಂದು ಸಿಸಿಟಿವಿ ಅಳವಡಿಸಿದ್ದಾರೆ. ತರಕಾರಿ ಖರೀದಿಸಲು ಬರುವ ಗ್ರಾಹಕರು ಕಣ್ತಪ್ಪಿಸಿ ಮೂರು-ನಾಲ್ಕು ಟೊಮೇಟೊಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಸಿಸಿಟಿವಿ ಅಳವಡಿಸಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು