ಟೀ ಕುಡಿದು ಹೋಗುವಿರಂತೆ ಮನೆಗೆ ಬನ್ನಿ ಎಂದು ಕರೆದ ಸುಂದರಿಯ ಮಾತು ನಂಬಿ ಹನಿ ಟ್ರ್ಯಾಪ್ಗೆ ಬಿದ್ದ ಕಂಟ್ರ್ಯಾಕ್ಟರ್
ಬೆಂಗಳೂರು: ಕಂಟ್ರ್ಯಾಕ್ಟರ್ಗೆ ಬಲೆ ಬೀಸಿ ಹನಿ ಟ್ರ್ಯಾಪ್ ಮಾಡಿರೋ ಸುಂದರಿಯ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಂಟ್ರ್ಯಾಕ್ಟರ್ ರಂಗನಾಥ್ ಎಂಬುವರು ಯುವತಿ ನಯನಾ ಹಾಗೂ ಹನಿ ಟ್ರ್ಯಾಪ್ ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕಂಟ್ರ್ಯಾಕ್ಟರ್ ರಂಗನಾಥ್ ಅವರನ್ನು ನಯನಾ ಮತ್ತು ತಂಡ ಸಿನಿಮಾ ಶೈಲಿಯಲ್ಲಿ ಬಲೆಗೆ ಬೀಳಿಸಿದೆ. ಅದು ಹೇಗೆ ಎಂದರೆ, ಬೈಕ್ ಹತ್ತಿ ಕುಳಿತು ಇಳಿಯುವಾಗ ಬನ್ನಿ ನಮ್ಮ ಮನೆಗೆ ಟೀ ಕುಡಿದು ಹೋಗಿ ಎಂದು ಕರೆದಿದ್ದಾಳೆ ನಯನ ಆಕೆಯ ಮಾತು ನಂಬಿ ಹೋದ ಕಂಟ್ರ್ಯಾಕ್ಟರ್ ಹನಿ ಗ್ಯಾಂಗ್ ಬಲೆಗೆ ಬಿದ್ದು ಈಗ ವಿಲವಿಲನ ಒದ್ದಾಡಿದ್ದಾರೆ.
ಕಂಟ್ರಾಕ್ಟರ್ಗೆ ಬಲೆ ಬೀಸಿತ್ತು?: ಆರೋಪಿ ನಯನಾಳಿಗೆ ಸ್ನೇಹಿತನ ಮೂಲಕ ಕಂಟ್ರ್ಯಾಕ್ಟರ್ ರಂಗನಾಥ್ ಪರಿಚಯವಾಗಿದೆ. ಹಾಗೆ ಮಾತನಾಡುತ್ತಾ ನಯನಾ ತನ್ನ ಮಗುವಿಗೆ ಹುಷಾರಿಲ್ಲ ಅಂತ 5, 10 ಸಾವಿರ ರೂಪಾಯಿ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದರಂತೆ.
ಡಿಸೆಂಬರ್ 9ರಂದು ಬೆಳಗ್ಗೆ ರಂಗನಾಥ್ ಅವರು ಬೈಕ್ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆ ಸ್ಕೂಟರ್ನಲ್ಲಿ ಬಂದು ನಯನಾ ರಂಗನಾಥ್ ಅವರನ್ನು ಮಾತನಾಡಿಸಿದ್ದಾರೆ. ಆಗ ಬನ್ನಿ ನಮ್ಮ ಮನೆ ಇಲ್ಲೇ ಇರೋದು ಒಂದು ಕಪ್ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ನಯನಾ ಅವರ ಮಾತು ನಂಬಿ ಮನೆಗೆ ಹೋದ ಕಂಟ್ರ್ಯಾಕ್ಟರ್ ಜೊತೆ ಆಕೆ ಮಾತನಾಡುತ್ತಾ ಇದ್ದ ವೇಳೆ ನಯನಾ ಮನೆಗೆ ಅಪರಿಚಿತ ವ್ಯಕ್ತಿಗಳು ಏಕಾಏಕಿ ಎಂಟ್ರಿ ಕೊಟ್ಟಿದ್ದಾರೆ. ನಾವು ಕ್ರೈಂ ಪೊಲೀಸರು ಎಂದು ಬೆದರಿಸಿ ಕಂಟ್ರ್ಯಾಕ್ಟರ್ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡುವುದರ ಜತೆಗೆ ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡು 2 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ. ಗೋಲ್ಡ್ ಚೈನ್, 29 ಸಾವಿರ ರೂ. ಕ್ಯಾಶ್ ಹಾಗೂ 26 ಸಾವಿರ ಫೋನ್ ಪೇ ಮಾಡಿಸಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.
ನಯನಾ ಡ್ರಾಮಾ ಶುರುವಾಗಿದ್ದು?: ಇದೆಲ್ಲ ಸತ್ಯ ಎಂದು ನಂಬಿದ್ದ ಕಂಟ್ರ್ಯಾಕ್ಟರ್ ರಂಗನಾಥ್, ನಯನಾಳನ್ನು ಬಾ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡೋಣ ಎಂದು ಕರೆದಿದ್ದಾರೆ. ಆಗ ಡ್ರಾಮಾ ಶುರು ಮಾಡಿದ್ದ ಆರೋಪಿ ನಯನಾ ರಂಗನಾಥ್ಗೆ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಳಂತೆ.
ಹೋ ಇದು ಪಕ್ಕ ಪ್ಲಾನ್ ಎಂದು ತಿಳಿದ ರಂಗನಾಥ್ ಕೊನೆಗೆ ವಕೀಲರ ಜತೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ನಯನಾ, ಮೋಹನ್, ಸಂತೋಷ್, ಮತ್ತಿಬ್ಬರ ಕೃತ್ಯ ಬಯಲಾಗಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಆದ್ರೆ ನಯನಾ ಇನ್ನು ಸಿಕ್ಕಿಲ್ಲ. ಹೀಗಾಗಿ ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.