ನೋಡಿ ಇದು ಚನ್ನಾಗಿರೊಲ್ಲ – ಸಾರಿಗೆ ನೌಕರರು ರೊಚ್ಚಿಗೆದ್ದರೆ ನಿಮ್ಮನ್ನು ಬಿಡೊಲ್ಲಾ : ಖಾಸಗಿ ಕಂಪನಿ ನಿವೃತ್ತ ನೌಕರ ಎಚ್ಚರಿಕೆ
ಬೆಂಗಳೂರು: ಸಾರಿಗೆ ನೌಕರರ ದಾರಿ ತಪ್ಪಿಸುವುದಕ್ಕೆ ಹೋಗಬೇಡಿ. ನಿಮ್ಮ ಹೆಂಡತಿ ಮಕ್ಕಳ ಸಾಕುವುದಕ್ಕೆ ನಿಮಗೆ ಶಕ್ತಿ ಇಲ್ವಾ? ಅದಕ್ಕಾಗಿ ಸಾರಿಗೆ ನೌಕರರ ಬಲಿಪಶು ಮಾಡುತ್ತಿದ್ದೀರಾ? ಇದನ್ನು ಬಿಟ್ಟು ಚಂದ್ರು ಜತೆ ಕೈ ಜೋಡಿಸಿ ನೌಕರರಿಗೆ ಅನುಕೂಲ ಮಾಡಿಕೊಡಿ ಎಂದು ಎಐಟಿಯುಸಿ ಸದಸ್ಯ ಮತ್ತು ಖಾಸಗಿ ಕಂಪನಿಯ ನಿವೃತ್ತ ನೌಕರರೊಬ್ಬರು ಎಐಟಿಯುಸಿ ಸೇರಿದಂತೆ ಕೆಲ ಸಂಘಟನೆಗಳ ನಡೆಯನ್ನು ಖಂಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.
1985ರಿಂದ ನಾನು ಎಐಟಿಯುಸಿಯಲ್ಲಿ ಇದ್ದೇನೆ, ನಾನು ನಿವೃತ್ತ ನೌಕರ. ನಮ್ಮ ಮಕ್ಕಳು ಕೆಎಸ್ಆರ್ಟಿಸಿಯಲ್ಲಿ ಇದ್ದಾರೆ. ಆದರೆ ಈಗ ಸಾರಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಸೈಕಲ್ ಜಾಥಾದ ಮೂಲಕ ಹೋರಾಟ ಮಾಡುತ್ತಿರುವವರ ಕಾಲನ್ನು ಏಕೆ ಎಳೆಯುತ್ತಿದ್ದೀರಿ?
ಎಐಟಿಯುಸಿಯ ಅನಂತಸುಬ್ಬರಾವ್ ಆಗಲಿ ಇಲ್ಲ ಬೇರೆ ಸಂಘಟನೆಗಳವರಾಗಲಿ, ಯಾರೆ ಆಗಲಿ ಯಾಕೆ ಅವರ ಕಾಲೆಳೆಯುತ್ತೀರಾ? ಚಂದ್ರು ಚಂದ್ರು ಯಾಕೆ ಚಂದ್ರು ಮೇಲೆ ವೈಶಮ್ಯ ಸಾಧಿಸಬೇಕು ನೀವು? ಚಂದ್ರು ಏನು ಅವರ ಮನಗೋಸ್ಕರ ಇಲ್ಲ ಅವರ ಹೆಂಡತಿ ಮಕ್ಕಳಿಗೋಸ್ಕರ ಹೋರಾಟ ಮಾಡುತ್ತಿದ್ದಾರಾ?
ಇಲ್ಲ ನೀವು ಸಾಧ್ಯವಾದರೆ ಅವರ ಜತೆ ಸೇರಿಕೊಳ್ಳಿ, ಆಗಲಿಲ್ಲ ಬ್ಯಾಡ ಬಿಟ್ಟುಬಿಡಿ. ನೀವು ಅಗ್ರಿಮೆಂಟ್ ಟಗ್ರಿಮೆಂಟ್ ಬಹಳ ಅನುಕೂಲವಾಗುತ್ತೆ, ಸರ್ಕಾರಿ ನೌಕರರಿಗಿಂತ ಜಾಸ್ತಿ ಬರುತ್ತೆ ಅಂತ ಸುಳ್ಳು ಸುಳ್ಳು ಯಾಕೆ ಎಲ್ಲರಿಗೂ ಹೇಳಿ ಆಶ್ವಾಸನೆ ಕೊಡುತ್ತಿದ್ದೀರಾ ನೀವು?
ಅಗ್ರಿಮೆಂಟ್ ಜಾಸ್ತಿ ಆಗುವುದಾದರೆ, ರ್ರೀ ಆರೂವರೆ – ಏಳು ಲಕ್ಷ ಜನ ಸರ್ಕಾರಿ ನೌಕರರು ಇದ್ದಾರೆ. ಅವರೆಲ್ಲ ಏನು ದಡ್ಡರಾ? ಈಗ ಅವರು ಕೂಡ 6ನೇ ವೇತನ ಆಯೋಗ ಬಿಟ್ಟು ಅಗ್ರಿಮೆಂಟ್ಗೆ ಬರಬಹುದಿತ್ತಲ್ಲ. ಅವರು ಬಂದಿಲ್ಲ ಅಂದರೆ ಅವರು ಬುದ್ಧಿ ವಂತರು ಈಗ ನೀವು ಇವರನ್ನೆಲ್ಲ (ಸಾರಿಗೆ ನೌಕರರ) ದಡ್ಡರು ಮಾಡೋಕೆ ಹೊರಟಿದ್ದೀರಿ. ಅತರ ಮಾಡೋಕೆ ಹೋಗಬೇಡಿ. ನೀವು ಸೇರಿಕೊಳ್ಳಿ, ಬನ್ನಿ ಚಂದ್ರು ನಾವು ಬರುತ್ತೀವಿ, ಎಲ್ಲರೂ ಸೇರಿಕೊಂಡು ಒಂದೇ ರೀತಿ ಮಾಡೋಣ ಬನ್ನಿ ಎಂದು ಹೇಳಿ.
ಯಾಕೆ ಸರ್ಕಾರಿ ನೌಕರರ ಮಾಡೋದು ಬಿಟ್ಟು ಅಮಾಯಕ ನೌಕರರ ಎಲ್ಲರನ್ನು ಯಾಕೆ ಬಲಿಕೊಡುತ್ತಿದ್ದೀರಾ ನೀವು? ನಿಮ್ಮ ಜೀವನ ಸಾಗಿಸುವುದಕ್ಕೆ ಸಲುವಾಗಿ ನಿಮ್ಮ ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಸಲುವಾಗಿ ಇವರನ್ನೆಲ್ಲ ಯಾಕೆ ಬಲಿಕೊಡುತ್ತಿದ್ದೀರಾ ನೀವು?
ನಿಮಗೆ ದುಡಿದು ತಿನ್ನಲಿಕ್ಕೆ ಶಕ್ತಿ ಇಲ್ಲವಾ, ಇಲ್ಲ ನಿಮ್ಮ ಹಂಡತಿ ಮಕ್ಕಳನ್ನು ದುಡಿದು ಸಾಕಲು ಶಕ್ತಿಯಿಲ್ಲವಾ? ಈ ರೀತಿ ನೌಕರರ ದಾರಿ ತಪ್ಪಿಸುವ ಕೆಲಸವನ್ನು ಮಾಡಲು ಹೋಗಬೇಡಿ. ಇದು ಚೆನ್ನಾಗಿರಲ್ಲ. ಎಲ್ಲಾರೂ ರೊಚ್ಚಿಗೆದ್ದರೆ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಈ ನಿವೃತ್ತ ನೌಕರ.
![](https://vijayapatha.in/wp-content/uploads/2024/02/QR-Code-VP-1-1-300x62.png)
Related
You Might Also Like
ನಾನು ಕಾದು ಕುಳಿತಿದ್ದರೂ ಬಸ್ ನಿಲ್ಲಿಸಿಲ್ಲ – ಚಾಲಕ, ಕಂಡಕ್ಟರ್ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತಾಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಹೋಗಿದೆ. ಹೀಗಾಗಿ ನನಗೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ ಒಂದು ತಿಂಗಳ...
ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಡಿಕೆಗೆ ಮಣಿದಿರುವ ಸಹಕಾರ ಇಲಾಖೆಯು ಏಳನೇ ವೇತನ ಆಯೋಗದ ವರದಿ ಪ್ರಕಾರ...
KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್
ನ್ಯೂಡೆಲ್ಲಿ: ಬಸ್ ಕಾರ್ಯಾಚರಣೆಗಳ ಮೇಲಿನ KSRTCಯ ಏಕಸ್ವಾಮ್ಯವನ್ನು ಕಿತ್ತು ಹಾಕಿ, ಕರ್ನಾಟಕ ಸರ್ಕಾರ 2003ರಲ್ಲಿ ಜಾರಿಗೆ ತಂದಿದ್ದ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಸಂಬಂಧ...
ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ
ಬೆಂಗಳೂರು: 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ “ಸ್ಮಶಾನಕ್ಕೆಂದು ಮೀಸಲಿಟ್ಟಿರುವ ಸರ್ಕಾರಿ ಸ್ವತ್ತನ್ನು ಪ್ರಭಾವೀ ವ್ಯಕ್ತಿಯೊಬ್ಬರ ಖಾಸಗಿ ಬಡಾವಣೆಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಸರ್ಕಾರಿ ಅಧಿಕಾರಿ...
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್
ಮೈಸೂರು: ಪ್ರತಿಭಾನ್ವಿತ ಆಟಗಾರರಿಗೆ ಗುರುತಿಸಿ ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುತ್ತದೆ ಅದೇ ರೀತಿ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ನಿಲ್ಲಿಸಿರುವುದನ್ನು ಮುಂದುವರಿಸಲಿ ಎಂದು ಅರ್ಜುನ್...
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್ ಬರೆ ಗ್ಯಾರಂಟಿ
ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದ ದಾರಿಯನ್ನು ಬಿಡದಿಯಿಂದ ಮುಂದೆ ಬುಧವಾರದಿಂದ ದಿಢೀರ್ ಮುಚ್ಚಿದ್ದು ಇದರಿಂದ ಸರ್ವಿಸ್ ರಸ್ತೆಗೆ ಹೋಗಬಹುದೆಂದು ಬರುವ ವಾಹನಗಳ ಸವಾರರು...
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು
ಬಿಡದಿ: ಬೆಂಗಳೂರಿನಿಂದ ರಾಮನಗರಕ್ಕೆ ಹೊತ್ತಿದ್ದ ಸ್ಕಾರ್ಪಿಯೋ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಬಿಡದಿ ಸಂಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು...
KSRTC ಕನಕಪುರ ಬಸ್ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್ ಆರೋಪ
ಕನಕಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನಕಪುರ ಬಸ್ ನಿಲ್ದಾಣದಲ್ಲಿ ಪ್ರಸ್ತುತ ಸಂಚಾರ ನಿಯಂತ್ರಕರಾಗಿರುವ ಗೋಪಾಲಯ್ಯ ನಿರ್ವಾಹಕರಿಂದ 10-10 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದು ವಿಡಿಯೋದಲ್ಲಿ...
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ
ಬೆಂ.ಗ್ರಾ: ನೊಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ...